ಯಶಸ್ವಿಯಾಗಿ ಅನುಷ್ಠಾನವಾಗಲಿ ಆಯುಷ್ಮಾನ್‌ ಭಾರತ 


Team Udayavani, Sep 25, 2018, 1:01 AM IST

ayushman-bharath-600.jpg

ಬಡವರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ಉತ್ತಮವಾದ ಆರೋಗ್ಯ ಸೇವೆ ದೊರಕಬೇಕೆನ್ನುವ ಮಹದಾಶಯ ಹೊಂದಿರುವ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್‌ ಭಾರತಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ದಾರೆ. ಅಮೆರಿಕದ ಒಬಾಮ ಕೇರ್‌ ಮಾದರಿಯಲ್ಲೇ ಮೋದಿ ಕೇರ್‌ ಎಂದು ಬಣ್ಣಿಸಲ್ಪಟ್ಟಿರುವ ಈ ಆರೋಗ್ಯ ವಿಮೆ ಯೋಜನೆ ಜಗತ್ತಿನಲ್ಲೇ ಅತಿ ದೊಡ್ಡದು ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಸುಮಾರು 10 ಕೋಟಿ ಕುಟುಂಬಗಳು ಅಥವಾ 50 ಕೋಟಿ ಜನರಿಗೆ ಉಚಿತ ವೈದ್ಯಕೀಯ ಶುಶ್ರೂಷೆ ಕಲ್ಪಿಸುವುದು ಈ ಯೋಜನೆಯ ಗುರಿ. ಕಳೆದ ವರ್ಷ ರೂಪುಗೊಂಡ ರಾಷ್ಟ್ರೀಯ ಆರೋಗ್ಯ ನೀತಿಯಡಿಯಲ್ಲಿ ಪ್ರಸ್ತಾವಿಸಲಾಗಿದ್ದ ಈ ಯೋಜನೆಯ ಘೋಷಣೆಯನ್ನು ಮೋದಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾಡಿದ್ದರು. ಇಡೀ ಯುರೋಪಿನ ಜನಸಂಖ್ಯೆಗೂ ಹೆಚ್ಚಿನ ಜನರಿಗೆ ಉಚಿತವಾಗಿ ಆರೋಗ್ಯ ವಿಮೆ ಒದಗಿಸುವ ಯೋಜನೆ ಸಮರ್ಪಕವಾಗಿ ಜಾರಿಗೊಂಡರೆ ಸಮಾಜಕ್ಕೆ ಉಪಯೋಗಿಯಾಗುವುದರಲ್ಲಿ ಅನುಮಾನವಿಲ್ಲ. ಇದೇ ವೇಳೆ ಬಿಜೆಪಿಗೆ ರಾಜಕೀಯವಾಗಿಯೂ ಪ್ರಯೋಜನಕಾರಿಯಾದೀತು.

ಒಂದು ಕುಟುಂಬಕ್ಕೆ ಎಷ್ಟೇ ಸದಸ್ಯರಿದ್ದರೂ ವಯಸ್ಸಿನ ಬೇಧವಿಲ್ಲದೆ 5 ಲ. ರೂ. ತನಕ ಆರೋಗ್ಯ ವಿಮೆ ಒದಗಿಸುವುದೇ ಆಯುಷ್ಮಾನ್‌ ಭಾರತ ಯೋಜನೆ. ವಿಮೆ ಕಂತನ್ನು ಕೇಂದ್ರ ಮತ್ತು ರಾಜ್ಯ 60 : 40 ಅನುಪಾತದಲ್ಲಿ ಭರಿಸಲಿರುವುದರಿಂದ ಜನರಿಗೆ ಯಾವುದೇ ಹಣಕಾಸಿನ ಹೊರೆ ಬೀಳುವುದಿಲ್ಲ. ಇತ್ತೀಚೆಗೆ ನಡೆಸಿದ ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ದತ್ತಾಂಶಗಳನ್ನು ಆಧರಿಸಿ ಯೋಜನೆಯ ಫ‌ಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪ್ರಕಾರ ಹಳ್ಳಿಗಳ 8.03 ಮತ್ತು ಪಟ್ಟಣ, ನಗರಗಳ 2.33 ಕೋಟಿ ಕುಟುಂಬಗಳು ಇದರ ವ್ಯಾಪ್ತಿಗೊಳಪಡಲಿವೆ. 

ಬೈಪಾಸ್‌, ಮಂಡಿಚಿಪ್ಪು ಜೋಡಣೆ ಸೇರಿದಂತೆ ಕೆಲವು ದುಬಾರಿ ಚಿಕಿತ್ಸೆಗಳೂ ಈ ಯೋಜನೆಯ ವ್ಯಾಪ್ತಿಯಲ್ಲಿರುವುದು ಒಂದು ಧನಾತ್ಮಕ ಅಂಶ. ಸರಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್‌ ಭಾರತದಡಿಯಲ್ಲಿ ಚಿಕಿತ್ಸೆ ದೊರೆಯಲಿದೆ.ಆಯುಷ್ಮಾನ್‌ ಭಾರತ ವ್ಯಾಪ್ತಿಗೆ ಸೇರುವ ಆಸ್ಪತ್ರೆಗಳಲ್ಲಿ ಇದಕ್ಕಾಗಿಯೇ ಪ್ರತ್ಯೆಕ ಕೌಂಟರ್‌ ಸ್ಥಾಪಿಸುವ ಉತ್ತಮ ಪ್ರಸ್ತಾವವೂ ಇದೆ. ಜನರಿಗೆ ಕಾಗದಪತ್ರಗಳ ಕಿರಿಕಿರಿಯಿಲ್ಲದೆ ಆದಷ್ಟು ಸುಲಭವಾಗಿ ಚಿಕಿತ್ಸೆ ದೊರಕಬೇಕೆನ್ನುವ ಕಾಳಜಿ ಮೆಚ್ಚುವಂತದ್ದು. ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಿಕಿತ್ಸೆಗೆ ಈಗಾಗಲೇ ಈ ಮಾದರಿಯ ಸರಕಾರಿ ನೆರವು ಇದ್ದರೂ ಅದಕ್ಕೆ ದಾಖಲೆಪತ್ರಗಳನ್ನು ಹೊಂದಿಸುವುದೇ ದೊಡ್ಡ ಹೊರೆಯಾಗುತ್ತಿತ್ತು. ಈ ಕಷ್ಟವನ್ನು ನೋಡಿಯೇ ಹೆಚ್ಚಿನವರು ಇದರ ಉಸಾಬರಿ ಬೇಡ ಎಂದು ದೂರವುಳಿಯುತ್ತಿದ್ದರು. ಈ ಅಂಶಕ್ಕೆ ಕೇಂದ್ರ ಗಮನ ಹರಿಸಿರುವುದು ಉತ್ತಮ ಅಂಶ. 

ಹತ್ತು ವರ್ಷಗಳಲ್ಲಿ ಭಾರತದ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದಲ್ಲಿ ಶೇ. 300ರಷ್ಟು ಹೆಚ್ಚಳವಾಗಿದೆ.ಶೇ.80ಕ್ಕೂ ಅಧಿಕ ವೆಚ್ಚವನ್ನು ಜನರು ತಮ್ಮ ಉಳಿತಾಯದಿಂದಲೇ ಭರಿಸುತ್ತಿದ್ದಾರೆ. ತೀರಾ ಬಡವರಾದರೆ ಒಂದೋ ಏನೇನೂ ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗೆ ಹೋಗಬೇಕು ಇಲ್ಲವೇ ಸಾಲ ಪಡೆದು ಆಸ್ಪತ್ರೆ ಶುಲ್ಕ ಕಟ್ಟಬೇಕು. ಅನೇಕ ಕುಟುಂಬಗಳಿಗೆ ಆರೋಗ್ಯ ಸಂಬಂಧಿ ಖರ್ಚುವೆಚ್ಚಗಳೇ ದೊಡ್ಡ ಹೊರೆಯಾಗಿದ್ದು, ಸುಮಾರು 6 ಕೋಟಿ ಕುಟುಂಬಗಳು ಇದರಿಂದಾಗಿ ಬಡತನ ರೇಖೆಗಿಂತ ಕೆಳಗಿವೆ ಎನ್ನುವ ವರದಿಯನ್ನು ಭಾರತ್‌ ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ ಎಂಬ ಸಂಸ್ಥೆ ಇತ್ತೀಚೆಗೆ ಬಹಿರಂಗಪಡಿಸಿದೆ. ಬಡತನಕ್ಕೂ ಜನರ ಆರೋಗ್ಯಕ್ಕೂ ನೇರ ಸಂಬಂಧವಿದೆ ಎನ್ನುವುದು ಈ ವರದಿಯಿಂದ ಸ್ಪಷ್ಟವಾಗಿದೆ. ಇವರಿಗೆಲ್ಲ ನೆರವಾಗುವುದೇ ಆಯುಷ್ಮಾನ್‌ ಭಾರತದ ಉದ್ದೇಶ. ಹೀಗಾಗಿ ಇದು ದೊಡ್ಡ ಮಟ್ಟದ ಸಾಮಾಜಿಕ ಪರಿವರ್ತನೆಗೂ ಕಾರಣವಾದೀತು ಎಂಬ ನಿರೀಕ್ಷೆಯಿದೆ. ಉತ್ತಮ ಚಿಕಿತ್ಸೆ ಉಚಿತವಾಗಿ ಸಿಕ್ಕಿದರೆ ಜನರ ಆರೋಗ್ಯ ಉತ್ತಮವಾಗುವುದು ಮಾತ್ರವಲ್ಲದೆ ಉತ್ಪಾದಕತೆಯೂ ಹೆಚ್ಚುತ್ತದೆ. ಈ ಮೂಲಕ ಜನರ ಆರ್ಥಿಕ ಮಟ್ಟವೂ ಸುಧಾರಣೆಯಾಗಲಿದೆ ಎನ್ನುವ ನಿರೀಕ್ಷೆ ಕೇಂದ್ರದ್ದು. 

ಆಯುಷ್ಮಾನ್‌ ಭಾರತದ ಅನುಷ್ಠಾನ ಯಶಸ್ವಿಯಾಗಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯ ಇರುವುದು ಅಗತ್ಯ. 30 ರಾಜ್ಯಗಳು ಈ ಯೋಜನೆಯಲ್ಲಿ ಸಹಭಾಗಿಯಾಗಲು ಒಪ್ಪಿಕೊಂಡಿರುವುದರಿಂದ ಅನುಷ್ಠಾನಕ್ಕೆ ಹೆಚ್ಚಿನ ಅಡ್ಡಿ ಉಂಟಾಗದು. ತೆಲಂಗಾಣ, ಒಡಿಶಾ, ದಿಲ್ಲಿ, ಕೇರಳ ಮತ್ತು ಪಂಜಾಬ್‌ ರಾಜ್ಯಗಳು ಮಾತ್ರ ಇನ್ನೂ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳು ಆಡಳಿತ ನಡೆಸುತ್ತಿವೆ ಎನ್ನುವುದು ಗಮನಾರ್ಹ ಅಂಶ. ಆಯುಷ್ಮಾನ್‌ ಭಾರತದಂಥ ಉತ್ತಮ ಯೋಜನೆಗೆ ರಾಜಕೀಯ ಬೇಧಗಳು ಯಾವುದೇ ರೀತಿಯಲ್ಲಿ ಅಡಚಣೆಯಾಗಬಾರದು. ಅಂತಿಮವಾಗಿ ಇದು ಜನರ ಒಳಿತನ್ನು ಗುರಿಯಾಗಿಸಿಕೊಂಡಿರುವ ಯೋಜನೆ. ಹೀಗಾಗಿ ಎಲ್ಲ ರಾಜ್ಯಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳುವುದು ಸರಕಾರಗಳ ಹೊಣೆ.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

OTT; ಅಸಭ್ಯ ಒಟಿಟಿ ನಿಯಂತ್ರಣ: ಶಾಶ್ವತ ಕಡಿವಾಣ ಅಗತ್ಯ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.