ಎಟಿಎಂ ಹೊರೆ: ಸೌಲಭ್ಯ ಹಿಂದೆಗೆತ ಸರಿಯಲ್ಲ


Team Udayavani, Nov 23, 2018, 6:00 AM IST

37.jpg

ದೇಶಾದ್ಯಂತ ಮುಂಬರುವ ಮಾರ್ಚ್‌ ವೇಳೆ ಒಂದು ಲಕ್ಷಕ್ಕೂ ಅಧಿಕ ಎಟಿಎಂಗಳು ಮುಚ್ಚುವ ಸಾಧ್ಯತೆಯಿದೆ ಎನ್ನುವುದು ಜನಸಾಮಾನ್ಯರಿಗೆ ಖುಷಿ ಕೊಡುವ ಸುದ್ದಿಯಲ್ಲ. ಆರ್‌ಬಿಐ ಇತ್ತೀಚೆಗೆ ಎಟಿಎಂಗಳ ಸಾಫ್ಟ್ವೇರ್‌ ಮತ್ತು ಹಾರ್ಡ್‌ವೇರ್‌ ಮೇಲ್ದರ್ಜೆಗೇರಿಸಲು ಹಾಗೂ ಎಟಿಎಂ ಸುರಕ್ಷತೆಯನ್ನು ಸುಧಾರಿಸಲು ಕ್ರಮಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು, ಇದನ್ನು ಯಥಾವತ್ತು ಅನುಷ್ಠಾನಿಸಲು ಭಾರೀ ಪ್ರಮಾಣದ ಖರ್ಚು ತಗಲುತ್ತದೆ. ಅಲ್ಲದೆ ಎಟಿಎಂಗಳ ನಿರ್ವಹಣಾ ವೆಚ್ಚವೂ ಏರಲಿದೆ. ಈಗಾಗಲೇ ವಸೂಲಾಗದ ಸಾಲ ಮತ್ತು ವ್ಯವಹಾರ ಕುಸಿತದಿಂದ ಲಾಭಾಂಶ ಕಡಿಮೆಯಾಗಿ ತತ್ತರಿಸುತ್ತಿರುವ ಬ್ಯಾಂಕ್‌ಗಳಿಗೆ ಈ ಹೊಸ ಖರ್ಚು ಇನ್ನೊಂದು ಹೊರೆಯಿಂದಾಗಿ ಕಂಡಿದ್ದು, ಇದರಿಂದ ಪಾರಾಗಲು ಅವುಗಳು ಈಗಿರುವ ಅರ್ಧದಷ್ಟು ಎಟಿಎಂಗಳನ್ನೇ ಮುಚ್ಚಲು ಮುಂದಾಗುವ ಸಾಧ್ಯತೆಯಿದೆ ಎಂದು ಎಟಿಎಂ ಉದ್ಯಮದ ಮಹಾ ಒಕ್ಕೂಟವಾಗಿರುವ ಕ್ಯಾಟ್ಮಿ ಹೇಳಿದೆ. 

ರಸ್ತೆ ಬದಿಯಲ್ಲೇ ಹಣದ ಪೆಟ್ಟಿಗೆ ಎಂಬ ಅಚ್ಚರಿಯೊಂದಿಗೆ ಪ್ರಾರಂಭವಾದ ಎಟಿಎಂ ಸೌಲಭ್ಯಕ್ಕೆ ಜನರು ಬಹಳ ಬೇಗ ಒಗ್ಗಿಕೊಂಡಿದ್ದರು. ತುರ್ತು ಸಂದರ್ಭದಲ್ಲಿ ನಗದು ಹಣ ಪಡೆದುಕೊಳ್ಳಲು ಇರುವ ಸೌಲಭ್ಯ ಎಂದು ಆರಂಭದಲ್ಲಿ ಭಾವಿಸಲಾಗಿದ್ದರೂ ಅನಂತರ ಎಟಿಎಂ ದೈನಂದಿನ ವ್ಯವಹಾರದ ಅವಿಭಾಜ್ಯ ಅಂಗವೇ ಆಗಿತ್ತು. ಬ್ಯಾಂಕ್‌ಗಳಿಗೆ ನಾಲ್ಕೈದು ಸರಣಿ ರಜೆ ಬರುವ ಸಂದರ್ಭದಲ್ಲಂತೂ ಎಟಿಎಂಗಳೇ ಆಪತಾºಂಧವ. 500-1000 ರೂ.ಯಂಥ ಚಿಕ್ಕ ಮೊತ್ತಕ್ಕಾಗಿಯೂ ಬ್ಯಾಂಕಿಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಫಾರ್ಮ್ ತುಂಬಿಸಿ ಹಣ ಪಡೆಯುವ ಕಷ್ಟವನ್ನು ನಿವಾರಿಸುವ ಎಟಿಎಂ ಯಂತ್ರಗಳು ನಗರಗಳಲ್ಲೂ ಹಳ್ಳಿಗಳಲ್ಲೂ ಏಕಪ್ರಕಾರವಾಗಿ ಜನಪ್ರಿಯವಾಗಿದ್ದವು. ಹೀಗೆ ಜನರಿಗೆ ಹಲವು ಅನುಕೂಲತೆಗಳನ್ನು ಒದಗಿಸಿದ್ದ ಎಟಿಎಂಗಳ ಸಂಖ್ಯೆಯನ್ನು ಏಕಾಏಕಿ ಅರ್ಧಕ್ಕಿಳಿಸಿದರೆ ಖಂಡಿತ ಅದು ಪ್ರತಿಕೂಲ ಪರಿಣಾಮ ಬೀರಲಿದೆ. ಇದರಿಂದ ನೋಟು ಅಪನಗದೀಕರಣದಂಥ ಪರಿಸ್ಥಿತಿ ಮತ್ತೂಮ್ಮೆ ಸೃಷ್ಟಿಯಾದೀತು ಎಂಬ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಂಭೀರವಾಗಿ ಪರಿಗಣಿಸಬೇಕು. 

ಎಟಿಎಂ ಕಡಿಮೆಯಾದರೆ ಜನರು ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಹೆಚ್ಚು ಅವಲಂಬಿಸುತ್ತಾರೆ ಎನ್ನುವ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಈಗಲೂ ಬಹುತೇಕ ವ್ಯವಹಾರ ನಡೆಯುವುದು ನಗದಿನಲ್ಲೇ. ಅಲ್ಲದೆ, ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಇನ್ನೂ ಜನರು ಪೂರ್ತಿಯಾಗಿ ಒಗ್ಗಿಕೊಂಡಿಲ್ಲ. ಅದಕ್ಕಿನ್ನೂ ಬಹಳ ಸಮಯ ಬೇಕು. ಡಿಜಿಟಲ್‌ ಇಂಡಿಯಾದ ಮೂಲಸೌಲಭ್ಯಗಳೂ ಇನ್ನೂ ಪೂರ್ತಿಯಾಗಿ ಅನುಷ್ಠಾನಗೊಂಡಿಲ್ಲ. ಹೀಗಿರುವಾಗ ದಿಢೀರ್‌ ಎಂದು ಎಟಿಎಂಗಳನ್ನು ಮುಚ್ಚಿದರೆ ಎಲ್ಲವೂ ಗೊಂದಲಮಯವಾಗಬಹುದು. ಮಾತ್ರವಲ್ಲದೆ, ಎಟಿಎಂ ನಿರ್ವಹಣೆಯಲ್ಲಿರುವ ಲಕ್ಷಾಂತರ ಮಂದಿಯ ನೌಕರಿಯೂ ನಷ್ಟವಾಗಲಿದೆ. 

ಎಟಿಎಂಗಳಿಂದ ಬ್ಯಾಂಕ್‌ಗಳಿಗೆ ಲಾಭವಿಲ್ಲ ಎನ್ನುವುದು ನಿಜ. ಆದರೆ ಇದೇ ವೇಳೆ ಇದು ಬ್ಯಾಂಕ್‌ಗಳ ನಗದು ವಿದ್‌ಡ್ರಾ ಹೊರೆಯನ್ನೂ ಕಡಿಮೆಗೊಳಿಸಿದೆ. ಎಟಿಎಂ ಬರುವ ಪೂರ್ವದಲ್ಲಿ ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವುದು ಎಲ್ಲ ಬ್ಯಾಂಕ್‌ಗಳಲ್ಲಿ ಕಾಣಸಿಗುವ ಸಾಮಾನ್ಯ ನೋಟವಾಗಿತ್ತು. ಅಲ್ಲದೆ, ಬ್ಯಾಂಕ್‌ಗಳ ಸ್ಟೇಷನರಿ ಖರ್ಚುವೆಚ್ಚಗಳೂ ಎಟಿಎಂನಿಂದಾಗಿ ಕಡಿಮೆಯಾಗಿತ್ತು. ಹೀಗೆ ಒಂದು ದೃಷ್ಟಿಯಿಂದ ನೋಡಿದರೆ ಎಟಿಎಂ ಜನರಿಗೆ ಮಾತ್ರವಲ್ಲದೆ ಬ್ಯಾಂಕ್‌ಗಳಿಗೂ ಅನುಕೂಲಕರವಾಗಿದ್ದವು. ಆದರೆ ಎಟಿಎಂಗಳಿಗೆ ಸಂಬಂಧಿಸಿದ ನಿಯಮಗಳು ಬಿಗುವಾಗುವಾಗ ಬ್ಯಾಂಕ್‌ಗಳಿಗೆ ಅವುಗಳು ಬಿಳಿಯಾನೆಗಳಂತೆ ಕಾಣಲಾರಂಭಿಸಿರುವುದು ವಿಪರ್ಯಾಸ. 

ಹಾಗೆಂದು ದೇಶದಲ್ಲಿ ಎಟಿಎಂ ಜಾಲ ಪರಿಪೂರ್ಣವಾಗಿದೆ ಎಂದು ಹೇಳುವಂತಿಲ್ಲ. ವರ್ಷದ ಯಾವುದೇ ದಿನದಲ್ಲಿ ಶೇ. 10ರಷ್ಟು ಎಟಿಎಂಗಳು ನಿಷ್ಕ್ರಿಯವಾಗಿರುತ್ತವೆ ಎನ್ನುತ್ತದೆ ಒಂದು ವರದಿ. ಇದೊಂದೆಡೆಯಾದರೆ ಎಟಿಎಂಗಳ ಹಂಚಿಕೆಯೂ ಅವ್ಯವಸ್ಥಿತವಾಗಿದೆ. ಎಟಿಎಂಗಳು ಹೆಚ್ಚು ಕೇಂದ್ರೀಕೃತವಾಗಿರುವುದು ನಗರ ಪ್ರದೇಶಗಳಲ್ಲಿ. ಶೇ.80ರಷ್ಟು ಎಟಿಎಂಗಳು ನಗರದ ನಾಗರಿಕರ ಸೇವೆಗಾಗಿಯೇ ಇವೆ. ಇನ್ನುಳಿದ ಶೇ. 20 ಎಟಿಎಂಗಳು ಹಳ್ಳಿ ಭಾಗಗಳಲ್ಲಿ ಹಂಚಿಹೋಗಿವೆ. ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳಲ್ಲಿ ಈಗಲೂ ಜನರು ಎಟಿಎಂಗಾಗಿ 40 ಕಿ. ಮೀ ದೂರ ಹೋಗಬೇಕು ಎನ್ನುವುದು ಎಟಿಎಂಗಳ ಅವ್ಯವಸ್ಥಿತ ಹಂಚಿಕೆಗೊಂದು ಉದಾಹರಣೆ. 

ಎಟಿಎಂಗಳ ಸೌಲಭ್ಯವನ್ನು ಸಮರ್ಪಕವಾಗಿ ಮಾಡಿದರೆ ಈಗ ಎದುರಾಗಿರುವ ಸಮಸ್ಯೆ ಅರ್ಧ ಪರಿಹಾರವಾಗಬಹುದು. ನಗರಗಳಲ್ಲಿ ಸಾಲಾಗಿ ಒಂದರ ಪಕ್ಕ ಇನ್ನೊಂದು ಎಟಿಎಂ ಇದೆ. ಅದೇ ನಗರ ವ್ಯಾಪ್ತಿಯಿಂದ ಹೊರಗೆ ಹೋದರೆ ಕೆಲವೊಮ್ಮೆ ನಾಲ್ಕೈದು ಕಿ.ಮೀ. ದೂರ ಹೋದರೂ ಎಟಿಎಂಗಳು ಸಿಗುವುದಿಲ್ಲ. ಈ ಅವ್ಯವಸ್ಥೆಯನ್ನು ತಪ್ಪಿಸಲು ಜನಸಂಖ್ಯೆ ಆಧಾರದಲ್ಲಿ ಇಂತಿಷ್ಟು ದೂರಕ್ಕೊಂದು ಎಟಿಎಂ ಇರಬೇಕೆಂಬ ನಿಯಮ ರೂಪಿಸಿದರೆ ಉತ್ತಮ. ಆದರೆ ಹೀಗೆ ಮಾಡಿದ ಬಳಿಕ ಎಟಿಎಂಗಳು ದಿನದ 24 ತಾಸು ಯಾವುದೇ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಾದದ್ದು ಬ್ಯಾಂಕ್‌ಗಳ ಹೊಣೆ. ಲಾಭವಿಲ್ಲ ಅಥವಾ ಖರ್ಚು ಹೆಚ್ಚಾಗುತ್ತದೆ ಎಂದು ಸೌಲಭ್ಯವನ್ನು ಹಿಂದೆಗೆದುಕೊಳ್ಳುವುದು ವ್ಯಾವಹಾರಿಕ ಚಿಂತನೆಯಾಗಿದ್ದು, ಅಭಿವೃದ್ಧಿಪರವಲ್ಲ. ಸೌಲಭ್ಯವನ್ನು ಲಾಭದ ದೃಷ್ಟಿಯಿಂದಲೂ ನೋಡಬಾರದು. 

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.