2ಜಿ, ಮಾಯಾವತಿ ಪ್ರಕರಣ: ಗಮನಾರ್ಹ ತೀರ್ಪುಗಳು 


Team Udayavani, Feb 11, 2019, 12:30 AM IST

mayawati-case.jpg

ನ್ಯಾಯಾಲಯಗಳು ಕೆಲ ದಿನಗಳ ಹಿಂದೆ ನೀಡಿರುವ ಎರಡು ತೀರ್ಪುಗಳು ಗಮನ ಸೆಳೆದಿವೆ.ಒಂದು 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ತೀರ್ಪಾಗಿದ್ದರೆ ಇನ್ನೊಂದು ಬಹುಜನ ಸಮಾಜ ಪಕ್ಷದ ಪರಮೋತ್ಛ ನಾಯಕಿ ಮಾಯಾವತಿ ತಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ತನ್ನದೇ ಪ್ರತಿಮೆಗಳನ್ನು ಮತ್ತು ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆಗಳನ್ನು ಸ್ಥಾಪಿಸಿದ ಹಗರಣಕ್ಕೆ ಸಂಬಂಧಿಸಿದ್ದು. ಪ್ರಚಲಿತ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯಲ್ಲಿ ಈ ಎರಡು ತೀರ್ಪುಗಳಿಗೆ ಬಹಳ ಮಹತ್ವವಿದೆ. 

2ಜಿ ಹಗರಣದಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪಿನಲ್ಲಿ ದಿಲ್ಲಿ ಹೈಕೋರ್ಟ್‌ ಇಬ್ಬರು ಆರೋಪಿಗಳು ಮತ್ತು ಮೂರು ಕಂಪನಿಗಳಿಗೆ 15 ಸಾವಿರ ಗಿಡ ನೆಡಲು ಆದೇಶಿಸಿದೆ. ಅರ್ಜಿಗೆ ಪ್ರತಿಕ್ರಿಯಿಸಲು ವಿಳಂಬಿಸಿದ್ದಕ್ಕೆ ನ್ಯಾಯಾಲಯ ನೀಡಿರುವ ಶಿಕ್ಷೆಯಿದು. ಪರಿಸರದ ದೃಷ್ಟಿಯಿಂದ ಮಾತ್ರವಲ್ಲದೆ ನ್ಯಾಯಾಂಗ ಕಲಾಪಗಳನ್ನು ವಿಳಂಬ ಮಾಡುವ ಚಾಳಿಯನ್ನು ತಪ್ಪಿಸುವ ದೃಷ್ಟಿಯಿಂದಲೂ ಈ ತೀರ್ಪು ಸ್ವಾಗತಾರ್ಹವಾಗಿದೆ. ತೀರ್ಪು ನೀಡಿರುವ ನ್ಯಾಯಮೂರ್ತಿ ನಜಿಮಿ ವಜಿರಿ ಅವರು ಈ ನೆಲೆಯಲ್ಲಿ ಅಭಿನಂದನಾರ್ಹರಾಗುತ್ತಾರೆ. 

ಆರೋಪಿಗಳಾದ ಡಿಎಂಕೆಯ ಕನಿಮೋಳಿ ಮತ್ತು ಎ.ರಾಜಾ ತಲಾ ಮೂರು ಸಾವಿರ ಗಿಡಗಳನ್ನು ಅಂತೆಯೇ ಮೂರು ಕಂಪೆನಿಗಳು ತಲಾ ಮೂರು ಸಾವಿರ ಗಿಡಗಳನ್ನು ನೆಡಬೇಕು. 15 ಸಾವಿರ ಗಿಡಗಳನ್ನು ನೆಟ್ಟು ನ್ಯಾಯಾಲಯದ ಕಟ್ಟುನಿಟ್ಟಿನ ನಿರ್ದೇಶನದಂತೆ ಪೋಷಿಸಿದರೆ ಅದೊಂದು ಚಿಕ್ಕ ಕಾಡೇ ಆಗುತ್ತದೆ. ಇದು ಪರಿಸರ ಸಂರಕ್ಷಣೆಗೆ ನೀಡುವ ದೊಡ್ಡ ಕೊಡುಗೆಯೂ ಹೌದು. ಎಲ್ಲವನ್ನೂ ಸರಕಾರವೇ ಮಾಡಬೇಕೆಂಬ ಸಾರ್ವತ್ರಿಕ ಧೋರಣೆಯಿರುವ ಸಂದರ್ಭದಲ್ಲಿ ನ್ಯಾಯಾಲಯವೂ ಈ ಮೂಲಕ ಪರಿಸರದ ಉಳಿವಿಗೆ ಕೈಜೋಡಿಸಿರುವುದು ಉತ್ತಮ ನಡೆ. 

ಇಷ್ಟು ಮಾತ್ರವಲ್ಲದೆ ಹೀಗೆ ವಿಚಾರಣೆಗೆ ಹಾಜರಾಗದೆ, ಪ್ರತಿಕ್ರಿಯೆ ನೀಡದೆ ನ್ಯಾಯಾಂಗದ ಸಮಯವನ್ನು ವ್ಯರ್ಥಗೊಳಿಸುತ್ತಿರುವವರಿಗೂ ಇದೊಂದು ಪಾಠವಾಗಬೇಕಿದೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ನ್ಯಾಯಾಲಯ ಆರೋಪಿಗಳಿಗೆ ಛೀಮಾರಿ ಹಾಕುವುದು ಅಥವಾ ದಂಡ ಹಾಕುವಂಥ ಕ್ರಮಗಳನ್ನು ಅನುಸರಿಸುತ್ತದೆ. ಪ್ರಕರಣವನ್ನು ದೀರ್ಘ‌ ಕಾಲ ಎಳೆದುಕೊಂಡು ಹೋಗಬೇಕೆಂದು ನಿರ್ಧರಿಸಿರುವ ಆರೋಪಿಗಳಿಗೆ ಈ ದಂಡವಾಗಲಿ, ಛೀಮಾರಿಯಾಗಲಿ ನಾಟುವುದಿಲ್ಲ. ಅದರಲ್ಲೂ ಕನಿಮೋಳಿ, ರಾಜಾ ಅವರಂಥ ಕೋಟ್ಯಧಿಪತಿಗಳಿಗೆ ಜುಜುಬಿ ಮೊತ್ತದ ದಂಡ ಯಾವ ಲೆಕ್ಕಕ್ಕೂ ಸಿಗುವುದಿಲ್ಲ.ಹೀಗಿರುವಾಗ ಗಿಡ ನೆಡುವಂಥ ಪ್ರಕೃತಿ ಸಂರಕ್ಷಿಸುವ ಅಥವಾ ಸಾಮಾಜಿಕವಾಗಿ ಉಪಕಾರಿಯಾಗುವಂಥ ಸತ್ಕಾರ್ಯಗಳನ್ನು ಮಾಡಲು ಹೇಳುವುದು ನಿಜವಾದ ಅರ್ಥದಲ್ಲಿ ಪರಿಣಾಮಕಾರಿಯಾಗ ಬಲ್ಲದು. ಎಲ್ಲ ನ್ಯಾಯಾಲಯಗಳಿಗೆ ಮೇಲ್ಪಂಕ್ತಿಯಾಗುವಂಥ ಶಿಕ್ಷೆಯನ್ನು ನ್ಯಾ| ನಜಿಮಿ ವಜಿರಿ ನೀಡಿದ್ದಾರೆ.
 
ಇನ್ನು ಮಾಯಾವತಿಯ ಪ್ರಕರಣದಲ್ಲಿ ಜನರ ತೆರಿಗೆ ಹಣವನ್ನು ಸ್ವಂತ ದುಡ್ಡು ಎಂಬಂತೆ ಅಂಧಾದುಂಧಿಯಾಗಿ ಖರ್ಚು ಮಾಡುವ ರಾಜಕಾರಣಿಗಳಿಗೊಂದು ಎಚ್ಚರಿಕೆಯ ಪಾಠವಿದೆ.ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಯಾವತಿ ಲಕ್ನೊ ಮತ್ತು ನೋಯ್ಡಾದ ಸಾರ್ವಜನಿಕ ಉದ್ಯಾನಗಳಲ್ಲಿ ತನ್ನ ಮತ್ತು ಪಕ್ಷದ ಚಿಹ್ನೆಯಾದ ಆನೆಯ ಹಲವು ಪ್ರತಿಮೆಗಳನ್ನು ಸ್ಥಾಪಿಸಿದ್ದರು. ಆಗಲೇ ಇದು ಜನರ ತೆರಿಗೆ ಹಣದ ದುರುಪಯೋಗ ಎಂಬ ಆರೋಪಕ್ಕೊಳಗಾಗಿತ್ತು. ಅನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಇದೀಗ ಸುಪ್ರೀಂ ಕೋರ್ಟ್‌ ಮೌಖೀಕವಾಗಿ, ಮಾಯಾವತಿ ಪ್ರತಿಮೆಗಳಿಗೆ ವೆಚ್ಚ ಮಾಡಿದ ಹಣವನ್ನು ಮರುಪಾವತಿಸಬೇಕಾಗಬಹುದು ಎಂದು ಹೇಳಿದೆ. 2008ರಿಂದ 2010ರ ನಡುವೆ ಮಾಯಾವತಿ ಸುಮಾರು 2000 ಕೋ. ರೂ. ಗಳನ್ನು ಬರೀ ಪ್ರತಿಮೆಗಳ ನಿರ್ಮಾಣಕ್ಕಾಗಿಯೇ ಖರ್ಚು ಮಾಡಿದ್ದಾರೆ ಎಂಬ ಆರೋಪವಿದೆ. ಅಧಿಕಾರ ಹೆಚ್ಚಿದಷ್ಟೂ ಅದರ ದುರಪಯೋಗವೂ ಹೆಚ್ಚುತ್ತದೆ ಎಂಬ ಮಾತಿನಂತೆ ತನ್ನ ಪರಮಾಧಿಕಾರ ನಡೆಯುತ್ತಿರುವಾಗ ಯಾವ ಟೀಕೆಗಳಿಗೂ ಕ್ಯಾರೇ ಎನ್ನದೆ ಮಾಯಾವತಿ ಮಾಡಿದ ಖರ್ಚು ಇದು. 
ಸ್ವ ವೈಭವೀಕರಣಕ್ಕಾಗಿ ಸರಕಾರಿ ಬೊಕ್ಕಸದ ಹಣವನ್ನು ಹೀಗೆ ನೀರಿನಂತೆ ಖರ್ಚು ಮಾಡಿದ ಬೇರೊಬ್ಬ ಮುಖ್ಯಮಂತ್ರಿಯಿರಲಿಕ್ಕಿಲ್ಲ. 

ಚುನಾವಣೆ ಕಾಲದಲ್ಲಿ ಈ ತೀರ್ಪು ಮಾಯಾವತಿಯ ರಾಜಕೀಯ ವರ್ಚಸ್ಸಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಇದಕ್ಕೂ ಮುಖ್ಯವಾಗಿ ಅಧಿಕಾರದಲ್ಲಿರುವವರು ತಮ್ಮ ಕೃತ್ಯಗಳಿಗೆ ಒಂದಲ್ಲ ಒಂದು ದಿನ ಉತ್ತರದಾಯಿಗಳಾಗಲೇ ಬೇಕೆಂಬ ಎಚ್ಚರಿಕೆ ತೀರ್ಪಿನಲ್ಲಿ ಇದೆ. ಮಾಯಾವತಿ ಎಲ್ಲ ಹಣವನ್ನು ಬೊಕ್ಕಸಕ್ಕೆ ಮರಳಿಸುತ್ತಾರೋ ಇಲ್ಲವೋ ಎನ್ನುವುದು ಬೇರೆ ಪ್ರಶ್ನೆ. ಆದರೆ ಸಾರ್ವಜನಿಕ ಹಣವನ್ನು ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಖರ್ಚು ಮಾಡುವ ರಾಜಕೀಯ ನಾಯಕರಿಗೆ ಈ ಮೂಲಕ ನ್ಯಾಯಾಲಯ ಸರಿಯಾಗಿಯೇ ಚಾಟಿ ಬೀಸಿದೆ.

ಟಾಪ್ ನ್ಯೂಸ್

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.