ಶ್ರೀಗಂಧ ಕಳವು ತಡೆಗೆ ಬಂದಿದೆ ಮೈಕ್ರೋಚಿಪ್‌!


Team Udayavani, Aug 9, 2018, 6:00 AM IST

sandalwood-tree.jpg

ಧಾರವಾಡ: ಕರುನಾಡಿನ ಹೆಸರಿನೊಂದಿಗೆ ಥಳಕು ಹಾಕಿಕೊಂಡಿರುವ ಗಂಧದ ಘಮ (ಶ್ರೀಗಂಧದ ಗಿಡ,ಮರ) ಈಗ ರಾಜ್ಯದ ಯಾವ ಜಿಲ್ಲೆಯಲ್ಲೂ ಉಳಿ ದುಕೊಂಡಿಲ್ಲ. ಹೀಗಾಗಿ ಮತ್ತೆ ಗಂಧದ ಉತ್ಪಾದನೆ ಹೆಚ್ಚಿಸಲು ನೂತನ ಸಮ್ಮಿಶ್ರ ಸರ್ಕಾರ ಸಜ್ಜಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ರೈತರು ಗಂಧ ಬೆಳೆಯುವಂತೆ ಮಾಡಲು ಹೊಸ ಯೋಜನೆ ರೂಪಿಸುತ್ತಿದೆ.

ಹಾಡಹಗಲೇ ಮನೆಯಂಗಳದ ಗಂಧದ ಮರವನ್ನೇ ಕದ್ದುಕೊಂಡು ಹೋಗುವ ಈ ದಿನಗಳಲ್ಲಿ ರೈತರ ಹೊಲದಲ್ಲಿ ಗಂಧ ಬೆಳೆಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕಾಗಿ ಪ್ರತಿ ಗಂಧದ ಗಿಡಗಳಲ್ಲಿಯೂ ಮೈಕ್ರೋಚಿಪ್‌ ಮತ್ತು ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದನ್ನು ಬೆಳೆದವರಿಗೆ ಸಿಗ್ನಲ್‌ ರವಾನಿಸುವ ತಂತ್ರಜ್ಞಾನವನ್ನು ಇನ್‌ ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆ ಸಲಹೆ ಮೇರೆಗೆ ಶೀಘ್ರವೇ ರೈತರ ಹೊಲಕ್ಕೆ ಪೂರೈಸಲು ಸಜ್ಜಾಗಿದೆ.

1950ರಲ್ಲಿ ಪ್ರತಿ ಚದರ ಕಿ.ಮೀ.ಕಾಡಿನಲ್ಲಿ ಕನಿಷ್ಠ 300-400 ಗಂಧದ ಗಿಡಗಳಿದ್ದವು. ಕಳ್ಳರ ಕಾಟದಿಂದಾಗಿ ಇಂದು ಪ್ರತಿ 4 ಚ.ಕಿ.ಮೀ. ಕಾಡಿನಲ್ಲಿ ಒಂದು ಶ್ರೀಗಂಧದ ಗಿಡವಿದೆಯಷ್ಟೇ. ಹೀಗಾಗಿ ಸರ್ಕಾರ ಶ್ರೀಗಂಧವನ್ನು ಬೆಳೆಸಲು ಉತ್ತೇಜನ ನೀಡುತ್ತಿದೆ. ರೈತರಿಗೆ ಮೈಕ್ರೋಚಿಪ್‌, ಸಿಗ್ನಲ್‌ ಚಿಪ್‌, ಡಬಲ್‌ಬಾರಲ್‌ ಗನ್‌ ಮತ್ತು ಅಗತ್ಯ ಬಿದ್ದರೆ ಹತ್ತು ವರ್ಷದ ನಂತರ ಸಿ.ಸಿ. ಕ್ಯಾಮರಾಗಳನ್ನು ಪೂರೈಸುವ ಚಿಂತನೆ ನಡೆಸಿದೆ.

ಮೈಕ್ರೋಚಿಪ್‌ ಅಳವಡಿಕೆ: ಧಾರವಾಡ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಪ್ರಸಕ್ತ ವರ್ಷ 1.3 ಲಕ್ಷ ಗಂಧದ ಸಸಿಗಳನ್ನು ಬೆಳೆಸಲಾಗಿತ್ತು. ಆದರೆ ಈ ಪೈಕಿ ಅರ್ಧದಷ್ಟು ಸಸಿಗಳು ಕೂಡ ರೈತರ ಹೊಲ ಸೇರಿಲ್ಲ. ಇದನ್ನು ಅರಿತ ಅರಣ್ಯ ಇಲಾ ಖೆಯು ಆಯಾ ಜಿಲ್ಲಾ ಕೇಂದ್ರಗಳಿಗೆ
ರೈತರನ್ನು ಕರೆಯಿಸಿಕೊಂಡು ಅವರಿಗೆ ಗಂಧ ಬೆಳೆದರೆ ಆಗುವ ಉಪಯೋಗದ ಕುರಿತು ಮನವರಿಕೆ ಮಾಡುತ್ತಿದೆ. ಗಂಧದ ಬೆಳೆಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಉಚಿತವಾಗಿ ಮೈಕ್ರೋಚಿಪ್‌ ನೀಡುವ ಕುರಿತು ಕೂಡ ಅಭಯ ನೀಡುತ್ತಿದೆ.

ಚಿಪ್‌ ಮತ್ತು ಸಿಗ್ನಲ್‌ ತಂತ್ರಜ್ಞಾನ: ಎಳೆಯ ಗಂಧದ ಗಿಡದಲ್ಲಿ ಮೈಕ್ರೋಚಿಪ್‌ (ಒಂದು ಇಂಚು ಚದರಳತೆ ಯದ್ದು)ಅನ್ನು ತೊಗಟೆ ಕಿತ್ತು ಅದರಡಿ ಇರಿಸಲಾಗುತ್ತದೆ. ಕೆಲವು ತಿಂಗಳಲ್ಲಿ ಅದರ ಸುತ್ತಲು ಮತ್ತೆ ಗಿಡದ ತೊಗಟೆ ಬೆಳೆದು ಗಂಧದ ಒಡಲು ಸೇರುತ್ತದೆ. ಆ ಬಳಿಕ ಆ ಗಿಡವನ್ನು ಯಾರೇ ಕತ್ತರಿಸಿಕೊಂಡು ಹೋದರೂ ಅದು ಎಲ್ಲಿದೆ ಎನ್ನುವುದನ್ನು ಸಿಗ್ನಲ್‌ ಮೂಲಕ ಪತ್ತೆ ಹಚ್ಚಬಹುದು. ಕಳ್ಳರನ್ನು ಸುಲಭವಾಗಿ ಹಿಡಿಯಬಹುದು.

ಆದರೆ ಇಲ್ಲಿ ಗಂಧದ ಗಿಡವನ್ನು ಕಡಿಯುವಾಗಲೇ ರಕ್ಷಣೆ ಮಾಡುವುದು ಅಸಾಧ್ಯ. ಅದಕ್ಕಾಗಿ ಇನ್‌ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಂಧದ ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದರ ಮಾಲೀಕರಿಗೆ ಸಂದೇಶ ನೀಡುವ ತಂತ್ರಜ್ಞಾನ ವೃದಿಟಛಿಪಡಿಸುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಭಾರತೀಯ ವಿಜ್ಞಾನ ಸಂಸ್ಥೆ ಯೊಂದಿಗೂ ಚರ್ಚಿಸಿದ್ದು, ಕೆಲವೇ ತಿಂಗಳಲ್ಲಿ ಅತ್ಯಂತ ಅಗ್ಗದ ದರದಲ್ಲಿ ಇದನ್ನು ಗಂಧ ಬೆಳೆಯುವ ರೈತರಿಗೆ ತಲುಪಿಸಲು ಚಿಂತನೆ ನಡೆಸಿದ್ದಾರೆ.

ಗಂಧಗ್ರಾಮಕ್ಕೆ ಚಿಂತನೆ: ಇನ್ನೊಂದೆಡೆ ರೈತ ಸಮೂಹಕ್ಕೆ ಯಥೇ ಚ್ಚವಾಗಿ ಅಂದರೆ, ಇಡೀ ಗ್ರಾಮವನ್ನೇ “ಶ್ರೀಗಂಧ ಗ್ರಾಮ’ ಎಂದು ಘೋಷಣೆ ಮಾಡಿ ಎಲ್ಲರ ಹೊಲ, ಮನೆ, ಖಾಲಿ ಜಾಗದಲ್ಲಿಯೂ ಶ್ರೀಗಂಧ ಬೆಳೆಸುವ ಹೊಸ ಪ್ರಯೋಗ ಉತ್ತಮ ಎನ್ನುವ ಚಿಂತನೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳದ್ದು. ಹಿಂದೆ ಮಲೆನಾಡಿನಲ್ಲಿ ತೇಗದ ನಾಟಾ ಕಳುವು ತಡೆಯುವುದು ಕಷ್ಟವಾಗಿದ್ದಾಗ ಅರಣ್ಯ ಇಲಾಖೆ, ರೈತರ ಹೊಲದಲ್ಲಿ ಯಥೇಚ್ಚವಾಗಿ ತೇಗ ಬೆಳೆಸಿತ್ತು. ಇದೇ
ಮಾದರಿಯನ್ನು ಶ್ರೀಗಂಧಕ್ಕೆ ಅಳವಡಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯುವಷ್ಟು ಗುಣಮಟ್ಟದ ಶ್ರೀಗಂಧ ಜಗತ್ತಿನ ಯಾವ ಭಾಗದಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇವೆ.
– ಮಂಜುನಾಥ, ಸಿಸಿಎಫ್‌, ಧಾರವಾಡ ವಿಭಾಗ

ಶ್ರೀಗಂಧ ಬೆಳೆದ ನಂತರ ಅದನ್ನು ಕಾಯುವುದು ಕಷ್ಟ. ಕದ್ದರೆ ಅದಕ್ಕೆ ವಿಮೆ ಕೊಡಿಸಬೇಕು. ಇಲ್ಲವೇ ಅದನ್ನು ಸರ್ಕಾರವೇ ಕಾಯುವ ವ್ಯವಸ್ಥೆಯಾಗಬೇಕು.
– ಈರಣ್ಣ ಕಾಳೆ, ರೈತ

– ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.