30 ಜನರಿಂದ ದಾಳಿ ; ಓರ್ವ ಸಾವು, ಐವರು ಗಂಭೀರ
Team Udayavani, Nov 12, 2017, 11:07 AM IST
ಶಿರಹಟ್ಟಿ: ಇಲ್ಲಿನ ಬೆಳಗಟ್ಟಿ ಗ್ರಾಮದಲ್ಲಿ ಶನಿವಾರರಾತ್ರಿ ಮನೆಯಲ್ಲಿ ಮಲಗಿದ್ದಕುಟುಂಬದ ಮೇಲೆ ಗುಂಪು ದಾಳಿ ನಡೆಸಿ ಓರ್ವನನ್ನುಭೀಕರವಾಗಿ ಕೊಚ್ಚಿ ಕೊಲೆಗೈಯಲಾಗಿದ್ದು, ದಾಳಿಯಲ್ಲಿ ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೌಟುಂಬಿಕ ಕಲಹಕ್ಕಾಗಿ ದಾಳಿ ನಡೆದಿದ್ದು ಸುಭಾಷ್ ಬಂಡಿ ಎಂಬಾತ ತನ್ನ ಪತ್ನಿಯೊಂದಿಗಿನ ಕಲಹದಿಂದಾಗಿ ಆಕೆಯ ಸಹೋದರ ಸಣ್ಣಪ್ಪ ಹೊನ್ನಣ್ಣನವರ್ (32) ಮೇಲೆ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
30 ಕ್ಕೂ ಹೆಚ್ಚು ಜನರೊಂದಿಗೆ ಬಂದು ಮಲಗಿದ್ದವರ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ ಸಣ್ಣಪ್ಪ ಸಂಬಂಧಿಕರಾದ ಅಡಿವಪ್ಪ ,ಚಂದ್ರಕಾಂತ, ರಂಗವ್ವ ,ಹನುಮವ್ವ,ವೆಂಕಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿರಹಟ್ಟಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ