ವಿವೇಕಾನಂದರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿ
Team Udayavani, Sep 13, 2018, 3:46 PM IST
ಗಜೇಂದ್ರಗಡ: ಭಾರತೀಯರು ವಿಶ್ವ ಭಾತೃತ್ವ ಭಾವನೆ ಹೊಂದಿದ್ದಾರೆ ಎಂದು ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟು ವಿದೇಶಿಗರು ಪ್ರಶಂಸಿಸುವಂತೆ ಮಾಡಿದ ಸ್ವಾಮಿ ವಿವೇಕಾನಂದರು ಭಾರತದ ಧ್ರುವತಾರೆಯಾಗಿ ಎಲ್ಲರ ಮನದಾಳದಲ್ಲಿ ಶಾಶ್ವತ ನೆಲೆಯೂರಿದ್ದಾರೆ ಎಂದು ಪ್ರಾಧ್ಯಾಪಕ ಕೆ. ಸಿದ್ದೇಶ ಹೇಳಿದರು. ಪಟ್ಟಣದ ಬಿ.ಎಸ್ ಸಿಂಹಾಸನದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ವಿದ್ವತ್ ನಿಂದ ಲೋಕ ಪ್ರಸಿದ್ಧಿಯಾದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿಯಾಗಿವೆ. ಭಾರತ ಯುವ ಶಕ್ತಿಯಿಂದ ಕೂಡಿದ ದೊಡ್ಡ ರಾಷ್ಟ್ರವಾಗಿದೆ. ಇತರೆ ರಾಷ್ಟ್ರಗಳು ನಮ್ಮ ದೇಶದ ಕಡೆ ನೋಡುತ್ತಿವೆ. ನಮ್ಮಲ್ಲಿರುವ ಯುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿ ಭಾರತವನ್ನು ನೋಡಬಹುದು ಎಂದರು. ಉದಾತ್ತ ಸಂಸ್ಕೃತಿಯನ್ನೇ ಜೀವಾಳವಾಗಿರಿಸಿ ವೈಭವ ಶಾಲಿಯಾಗಿರುವ ಈ ಪುಣ್ಯಭೂಮಿಯಲ್ಲಿ ಜ್ಞಾನಕ್ಕೆ ಪೂಜ್ಯ ಹಾಗೂ ಪವಿತ್ರ ಸ್ಥಾನವಿದೆ. ನಹೀ ಜ್ಞಾನೇನ ಸದೃಶ್ಯಂ ಪವಿತ್ರವಿಹ ವಿದ್ಯತೇ ಎಂಬ ವಾಕ್ಯ ಜ್ಞಾನದ ಮಹತ್ವವನ್ನು ಸಾರುತ್ತಿವೆ. ಇಂತಹ ಸಂದೇಶ ಬೆಳಗಲು ಶಿಕ್ಷಣದ ಅವಶ್ಯಕತೆ ಸಮುದಾಯಕ್ಕಿದೆ. ಈ ನಿಟ್ಟಿನಲ್ಲಿ ಸಮಾಜದ ಏಳ್ಗೆಗೆ ಅಡ್ಡಲಾಗಿರುವ ತೊಡಕುಗಳ ನಿವಾರಣೆಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ದಾರಿದೀಪವಾಗಿವೆ ಎಂದರು.
ಪ್ರಾಚಾರ್ಯ ಎಸ್.ಎಸ್ ಕೆಂಚನಗೌಡರ ಮಾತನಾಡಿ, ಆರ್ಥಿಕತ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳ ಇಂದಿನ ಸಮಸ್ಯಗಳಿಗೆ ಅಂದೇ ಅವರು ಪರಿಹಾರ ಸೂಚಿಸಿದ್ದರು. ನರೇಂದ್ರನೆಂಬ ಹೆಸರಿನ ಕಂದ ಮುಂದೊಂದು ದಿನ ಇಡೀ ವಿಶ್ವಕ್ಕೆ ಚಿರ ಪರಿಚಿತನಾಗಿ ನಿರಂತರ ಜನಮಾನಸದಲ್ಲಿ ಉಳಿಯುವ ವ್ಯಕ್ತಿಯಾಗುತ್ತಾನೆ ಎನ್ನುವ ವಿಶ್ವಾಸ ಹೆತ್ತ ಕರುಳಿಗಾಗಲಿ ಅಥವಾ ಸಾಕ್ಷಾತ ಬ್ರಹ್ಮನೂ ಊಹಿಸದಷ್ಟು ಸಾಧನೆಯನ್ನು ಕೇವಲ ಆಧ್ಯಾತ್ಮ ಶಾಂತಿ ಮಂತ್ರದ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ಇದೇವೇಳೆ ಪ್ರಬಂಧ, ಚರ್ಚಾ ಸ್ಪರ್ಧೆಗಳು ನಡೆದವು. ಬಿ.ವಿ. ಮುನವಳ್ಳಿ, ಮಹೇಂದ್ರ ಜಿ, ಡಾ| ಪಿ.ಎಚ್. ಕ್ಯಾರೇಕೊಪ್ಪ, ಐ.ಎನ್. ಡಾವಣಗೇರಿ, ಲಕ್ಷ್ಮೀ, ಸರಸ್ವತಿ ಕೆ, ಲಕ್ಷ್ಮಣ ಎಂ, ಹಿತೇಶ ಬಿ, ಐ.ಎಂ. ರಾಠೊಡ, ಮಹಾಂತೇಶ ಜೀವಣ್ಣವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ