ತ್ಯಾಜ್ಯ ವಿಲೇವಾರಿ ವಾಹನಕ್ಕೆ  ಹಿಡಿಯುತ್ತಿದೆ ತುಕ್ಕು


Team Udayavani, Oct 7, 2018, 4:32 PM IST

7-october-19.gif

ಗದಗ: ಅವಳಿ ನಗರದಲ್ಲಿ ಕಸ ವಿಲೇವಾರಿಗಾಗಿ ನಗರಸಭೆ ಲಕ್ಷಾಂತರ ರೂ. ಮೌಲ್ಯದ ಕಂಪ್ಯಾಕ್ಟ್ ಗಾರ್ಬೇಜ್‌ ಡಿನ್ಪೋಸಲ್‌ ವಾಹನವನ್ನು ಖರೀದಿಸಿದೆ. ಆದರೆ ಇದು ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆಯದ ಕಾರಣ ಸುಮಾರು ಆರು ತಿಂಗಳಿಂದ ನಗರಸಭೆ ಮೋಟರ್‌ ಶೆಡ್‌ನ‌ಲ್ಲೇ ತುಕ್ಕು ಹಿಡಿಯುತ್ತಿದೆ!

ಹೌದು. ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆಯಿಂದ ತ್ಯಾಜ್ಯವನ್ನು ಡಂಪಿಂಗ್‌ ಯಾರ್ಡ್‌ಗೆ ಸಾಗಿಸಲು ಸುಮಾರು 31 ಲಕ್ಷ ರೂ. ಮೊತ್ತದಲ್ಲಿ ತ್ಯಾಜ್ಯ ವಿಲೇವಾರಿಗೆ ಅತ್ಯಾಧುನಿಕ ಶೈಲಿಯ ಕಂಪ್ಯಾಕ್ಟ್ ಗಾರ್ಬೇಜ್‌ ಡಿನ್ಪೋಸಲ್‌(ತ್ಯಾಜ್ಯ ವಿಲೇವಾರಿ ವಾಹನ)
ಖರೀದಿಸಿದೆ. ಆದರೆ, ನಗರಸಭೆ ವಾಹನ ಪೂರೈಸಿರುವ ಗುತ್ತಿಗೆ ಸಂಸ್ಥೆ ಕೆಲವೊಂದು ದಾಖಲೆಗಳನ್ನೇ ಒದಗಿಸಿಲ್ಲ. ಇದನ್ನರಿಯದ ನಗರಸಭೆ ಸಿಬ್ಬಂದಿ ವಾಹನದ ಪಾಸಿಂಗ್‌ಗಾಗಿ
ಆರ್‌ಟಿಒ ಕಚೇರಿಗೆ ಹೋದಾಗಲೇ ಗಮನಕ್ಕೆ ಬಂದಿದೆ. ಅಂದಿನಿಂದ ಈವರೆಗೆ ಸಮರ್ಪಕ
ದಾಖಲೆಗಳ ಕ್ರೋಢೀಕರಣವಾಗಿಲ್ಲ. ಹೀಗಾಗಿ ಅತ್ಯಾಧುನಿಕ ಹಾಗೂ ಹೊಸ ವಾಹನವಾಗಿದ್ದರೂ ರಸ್ತೆಗಿಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಮೂಲಗಳ ಹೇಳಿಕೆ. 

ತ್ಯಾಜ್ಯ ಸಾಗಿಸಲು ಕಂಪ್ಯಾಕ್ಟ್ ಅಗತ್ಯ:
ತ್ಯಾಜ್ಯ ಸಾಗಾಟದ ವೇಳೆ ಹರುಡುವ ದುವಾರ್ಸನೆ ಮತ್ತು ಒಣ ಕಸ ಗಾಳಿಗೆ ಹಾರುವುದನ್ನು ತಡೆಯಬೇಕು. ಅದಕ್ಕಾಗಿ ತ್ಯಾಜ್ಯವನ್ನು ಮುಚ್ಚಿದ ವಾಹನಗಳಲ್ಲೇ ಕಸ ಸಾಗಿಸಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಎರಡ್ಮೂರು ವರ್ಷಗಳ ಹಿಂದೆಯೇ ನಗರಸಭೆ ಕಂಪ್ಯಾಕ್ಟ್ ವಾಹನವೊಂದನ್ನು ಖರೀದಿಸಿತ್ತು. ಇದೀಗ ಮತ್ತೊಂದು ವಾಹನವನ್ನು ಖರೀದಿಸಿದೆ. ಆದರೆ, ದಾಖಲೆಗಳ ಕೊರತೆಯಿಂದ ನೂತನ ಕಂಪ್ಯಾಕ್ಟ್ ವಾಹನಕ್ಕೆ ಪಾಸಿಂಗ್‌ ಸಿಕ್ಕಿಲ್ಲ. ಒಂದೆರಡು ಬಾರಿ ಆರ್‌ಟಿಒ ಕಚೇರಿ ಹಾಗೂ ಪ್ರಾಯೋಗಿಕ ಚಾಲನೆ ಹೊರತಾಗಿ ನಿಂತ ಜಾಗದಿಂದ ಅಲುಗಾಡಿಲ್ಲ.

ಮತ್ತೊಂದೆಡೆ  ಅವಳಿ ನಗರದಲ್ಲಿ ಸಮರ್ಪಕವಾಗಿಟ್ರ್ಯಾಕ್ಟರ್‌ಗಳಿಲ್ಲ. ಬಡಾವಣೆಗಳಲ್ಲಿ ರಾಶಿ ರಾಶಿ ಕಸ ಬಿದ್ದರೂ ವಾಹನ ಕಳಿಸುವುದಿಲ್ಲ. ವಾಹನ ಕಳುಹಿಸಿದರೆ, ಅಗತ್ಯ ಸಿಬ್ಬಂದಿ ಇರುವುದಿಲ್ಲ ಎಂದು ನಗರಸಭೆಯ ಬಹುತೇಕ ಸಾಮಾನ್ಯ ಸಭೆಗಳಲ್ಲಿ ಪಕ್ಷಾತೀತವಾಗಿ ಸದಸ್ಯರು ಗೋಳು ತೋಡಿಕೊಂಡಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಆನೆ ಬಲ:
ತ್ಯಾಜ್ಯ ವಿಲೇವಾರಿಯಲ್ಲಿ ಕಂಪ್ಯಾಕ್ಟ್ ವಾಹನಗಳು ನಗರಸಭೆಗೆ ಆನೆ ಬಲ ತುಂಬುತ್ತವೆ. ಹೊಸ ವಾಹನ ಒಂದು ಟ್ರಿಪ್‌ಗೆ ಸುಮಾರು 8 ರಿಂದ 10 ಟನ್‌ ತ್ಯಾಜ್ಯವನ್ನು ಹೊತ್ತೂಯ್ಯುವ ಸಾಮರ್ಥ ಹೊಂದಿದೆ. 3-4 ಟ್ರ್ಯಾಕ್ಟರ್‌ಗೆ ಸಮವಾಗಿರುವ ಈ ಕಂಪ್ಯಾಕ್ಟ್ ವಾಹನ, ಹೈಡ್ರೋಲಿಕ್‌ ವ್ಯವಸ್ಥೆಯನ್ನೂ ಹೊಂದಿದೆ. ತನ್ನ ಹೈಡ್ರೋಲಿಕ್‌ ಬಾವುಗಳಿಂದ ಯಾಂತ್ರಿಕವಾಗಿ ಕಸದ ಡಬ್ಬಿಗಳಿಂದ ತನ್ನೊಳಗೆ ಕಸ ಸುರಿದುಕೊಳ್ಳುತ್ತದೆ. ಅದೇ ರೀತಿ ಡಂಪಿಂಗ್‌ ಯಾರ್ಡ್‌ಗಳಲ್ಲಿ ವಿಲೇವಾರಿ ಮಾಡುತ್ತದೆ. ಈ ಪ್ರಕ್ರಿಯೆಗೆ ವಾಹನ ಚಾಲಕ ಸೇರಿದಂತೆ ಮೂವರು ಸಿಬ್ಬಂದಿ ಸಾಕಾಗುತ್ತದೆ. ಆದರೆ, ಒಂದು ಟ್ರ್ಯಾಕ್ಟರ್‌ಗೆ ಕಸ ತುಂಬಲು 5-6 ಜನ ಪೌರ ಕಾರ್ಮಿಕರು ಬೇಕಾಗುತ್ತದೆ. ಹೀಗಾಗಿ ಪೌರ ಕಾರ್ಮಿಕರ ಶ್ರಮ ಹಾಗೂ ಇಂಧನವನ್ನು ಗಣನೀಯವಾಗಿ ಉಳಿಸುವುದರೊಂದಿಗೆ ತ್ವರಿತಗತಿಯಲ್ಲಿ ತ್ಯಾಜ್ಯ ವಿಲೇವಾರಿಯಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ನಗರಸಭೆ ಅಧಿಕಾರಿಗಳ ನಿಷ್ಕಾಜಿಯೋ ಅಥವಾ ವಾಹನ ಪೂರೈಕೆ ಮಾಡಿರುವ ಗುತ್ತಿಗೆ ಏಜೆನ್ಸಿಯ ಲೋಪವೋ ಗೊತ್ತಿಲ್ಲ. ಒಟ್ಟಾರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿರುವ ಲಕ್ಷಾಂತರ ರೂ. ಮೌಲ್ಯದ ವಾಹನದ ಸೇವೆ ಅವಳಿ ನಗರಕ್ಕೆ ಲಭಿಸುತ್ತಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಲಿ ರಾಯನ ಕಾಟ!
ನಗರಸಭೆ ಮೋಟರ್‌ ಶೆಡ್‌ಗೆ ಹೊಂದಿಕೊಂಡಿರುವ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿರಿಸಿರುವ ಕಂಪ್ಯಾಕ್ಟ್ ವಾಹನಕ್ಕೆ ಇಲಿ ಕಾಟ ಶುರುವಾಗಿದೆ. ವಾಹನ ನಿಂತಲ್ಲೇ ನಿಂತಿರುವುದರಿಂದ ವಿವಿಧ ವೈಯರ್‌ಗಳನ್ನು ಕತ್ತರಿಸುತ್ತಿದ್ದು, ಈಗಾಗಲೇ ಎರಡು ಬಾರಿ ರಿಪೇರಿ ಕಂಡಿದೆ ಎಂಬುದು ಮೋಟರ್‌ ಶೆಡ್‌ ಸಿಬ್ಬಂದಿಯ ಅಂಬೋಣ.

ಈ ವಾಹನಕ್ಕೆ ವಿಮೆ ಹಣ ಪಾವತಿಸಿಲ್ಲ ಎಂದು ಕೇಳಿಬಂದಿತ್ತು. ದಾಖಲೆಗಳ ಕೊರತೆಯಿರುವ ಬಗ್ಗೆ ನನ್ನ ಗಮನಕ್ಕಿಲ್ಲ. ಆದರೆ, ಸಾರ್ವಜನಿಕರ ಹಣದಲ್ಲಿ ಖರೀದಿಸಿದ ವಾಹನವನ್ನು ಬಳಸಿಕೊಳ್ಳದೇ ಬೇಜವಾಬ್ದಾರಿ ತೋರಿದ ನಗರಸಭೆ ಪೌರಾಯುಕ್ತರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಒಂದು ವಾರದಲ್ಲಿ ಎಲ್ಲವನ್ನೂ ಸರಿಪಡಿಸಿ, ವಾಹನವನ್ನು ಸೇವೆಗೆ ಬಳಸಿಕೊಳ್ಳುವಂತೆ ಮಾಡಬೇಕು.
ಸದಾನಂದ ಪಿಳ್ಳಿ, ನಗರಸಭೆ ವಿಪಕ್ಷ ನಾಯಕ

ಹೊಸ ವಾಹನದ ಪಾಸಿಂಗ್‌ ಆಗದಿರುವುದು ನನ್ನ ಗಮನಕ್ಕೂ ಬಂದಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇನೆ.
. ಸುರೇಶ್‌ ಕಟ್ಟಿಮನಿ,
  ನಗರಸಭೆ ಅಧ್ಯಕ್ಷ 

ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

Gadag; ಮನೆ ಮಗನಿಂದಲೇ ಸುಪಾರಿ; ನಾಲ್ವರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು; 8 ಜನರ ಬಂಧನ

Gadag; ಮನೆ ಮಗನಿಂದಲೇ ಸುಪಾರಿ; ನಾಲ್ವರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು; 8 ಜನರ ಬಂಧನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.