ಅನ್ನ-ಸಾಂಬಾರ್‌ ಮಾತ್ರ ಲಭ್ಯ !


Team Udayavani, Oct 14, 2018, 4:11 PM IST

14-october-16.gif

ಗದಗ: ಅತ್ಯಲ್ಪ ದರದಲ್ಲಿ ಬಡವರ ಹೊಟ್ಟೆ ತುಂಬಿಸಬೇಕೆಂಬ ಮಹಾತ್ವಕಾಂಕ್ಷಿಯ ‘ಇಂದಿರಾ ಕ್ಯಾಂಟೀನ್‌’ಗೆ ಬೆಟಗೇರಿಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಆಹಾರ ಪಟ್ಟಿಯಲ್ಲಿ(ಮೆನು) ತೋರಿಸಿದ್ದಷ್ಟು ಖಾದ್ಯಗಳ ಪೂರೈಕೆಯಿಲ್ಲ. ಕ್ಯಾಂಟೀನ್‌ ಆರಂಭಗೊಂಡು ವಾರ ಕಳೆದರೂ ಅನ್ನ-ಸಾಂಬರ್‌, ಪಲಾವ್‌ಗೆ ಸೀಮಿತಗೊಂಡಿದೆ.

ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ನಗರಸಭೆ ಆಶ್ರಯದಲ್ಲಿ ಬೆಟಗೇರಿಯಲ್ಲಿ ‘ಇಂದೀರಾ ಕ್ಯಾಂಟೀನ್‌’ ಸ್ಥಾಪಿಸಿದ್ದು, ಅ. 5ರಿಂದ ಕಾರ್ಯಾರಂಭ ಮಾಡಿದೆ. ಕ್ಯಾಂಟೀನ್‌ ಉದ್ಘಾಟನೆಗೊಂಡು ಬರೋಬ್ಬರಿ ಒಂಬತ್ತು ದಿನಗಳು ಕಳೆದರೂ ಇಡ್ಲಿ ಪಾತ್ರೆ ಸೇರಿದಂತೆ ಇನ್ನಿತರೆ ಅಗತ್ಯ ಸಾಮಗ್ರಿಗಳೇ ಪೂರೈಕೆಯಾಗಿಲ್ಲ. ಹೀಗಾಗಿ ದಿನಕ್ಕೊಂದರಂತೆ ಬೆಳಗ್ಗೆ ಸಿರಾ-ಉಪ್ಪಿಟ್ಟು, ಪುರಿ-ಬೆಟಗೇರಿ ಚಟ್ನಿ, ಮಂಡಕ್ಕಿ ವಗ್ಗರಣೆ, ಅವಲಕ್ಕಿ ವಗ್ಗರಣೆ ಮಧ್ಯಾಹ್ನ ಹಾಗೂ ರಾತ್ರಿ ಪಲಾವ್‌, ಅನ್ನ ಸಂಬಾರ್‌, ಚಿತ್ರನ್ನಾವನಷ್ಟೇ ಉಣಬಡಿಸಲಾಗುತ್ತಿದೆ.

ಗುಣಮಟ್ಟ ಸರಿ, ಪ್ರಮಾಣ ಕಡಿಮೆ: ಬೆಟಗೇರಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಹಾಗೂ ಆಹಾರದ ರುಚಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಕ್ಯಾಂಟೀನ್‌ ನಿರ್ವಹಣೆ ಗುತ್ತಿಗೆ ಪಡೆದಿರುವ ಶೆಫ್‌ ಟಾಕ್‌ ಹಾಸ್ಪಿಟಾಲಿಟಿ ಸರ್ವೀಸಸ್‌ಗೆ ಸರಕಾರ ನೀಡಿರುವ ಆಹಾರ ಪಟ್ಟಿಗಿಂತ ಕಡಿಮೆ ಪ್ರಮಾಣದಲ್ಲಿ ಆಹಾರ ವಿತರಿಸಲಾಗುತ್ತಿದೆ.

ಬೆಳಗಿನ ಉಪಾಹಾರದಲ್ಲಿ ನಾಲ್ಕು ಪುರಿ, ಊಟಕ್ಕೆ ಅನ್ನ-ತರಕಾರಿ ಸಾಂಬರ್‌- ಮೊಸರನ್ನ ಅಥವಾ ಬಿಸಿಬೇಳೆ ಬಾತ್‌ ನೀಡಬೇಕು. ಇಲ್ಲವೇ ಎರಡು ರೊಟ್ಟಿ(ಬಿಸಿ, ಖಡಕ್‌) ಯೊಂದಿಗೆ ಅನ್ನ- ಸಂಬಾರ್‌, ಅನ್ನಸಾಂಬರ್‌-ಮೊಸರನ್ನ, ಅನ್ನ ಸಂಬಾರ್‌- ಪಲಾವ್‌, ಪಾಯಸ(ಹೆಸರು ಬೇಳೆ, ಕಡ್ಲೆ ಬೇಳೆ, ಗೋಧಿ  ಹುಗ್ಗಿ) ಮತ್ತು ಅನ್ನ ಸಾಂಬರ್‌ ನೀಡಬೇಕು. ಆದರೆ, ಕ್ಯಾಂಟೀನ್‌ನಲ್ಲಿ ಬೆಳಗ್ಗೆ ಒಂದು ಖಾದ್ಯ, ಊಟಕ್ಕೆ ಅನ್ನ ಸಾಂಬರ್‌ ನೀಡಲಾಗುತ್ತಿದ್ದು, ರೊಟ್ಟಿ, ಮೊಸರನ್ನ, ಬಿಸಿಬೇಳೆ ಬಾತ್‌ ಹಾಗೂ ಪಾಯಸದ ಬಗ್ಗೆ ಮಾತೇ ಇಲ್ಲ. ಉಪಾಹಾರಕ್ಕೆ ನೀಡಬೇಕಿದ್ದ ನಾಲ್ಕು ಪುರಿಗಳಲ್ಲಿ ಎರಡೇ ವಿತರಿಸಲಾಗುತ್ತಿದೆ.

ಇನ್ನು, ರಾಜ್ಯ ವಲಯಕ್ಕಿಂತ ಬೆಟಗೇರಿ ಮೆನು ಭಿನ್ನವಾಗಿದ್ದರೂ, ರಾಜ್ಯ ವಲಯದ ಆಹಾರ ಪಟ್ಟಿಯನ್ನೇ ಅಂಟಿಸಲಾಗಿದೆ. ಹೀಗಾಗಿ ಸ್ಥಳೀಯ ಕ್ಯಾಂಟೀನ್‌ನಲ್ಲಿ ಯಾವ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗುತ್ತದೆ ಎಂಬುದರ ಗೊತ್ತಾಗುವುದೇ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.

ಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ, ರೊಟ್ಟಿ, ಚಪಾತಿ ನೀಡಬೇಕು. ಆದರೆ, ಅವುಗಳನ್ನು ತಯಾರಿಸುವ ಅಗತ್ಯವಾದ ಪಾತ್ರೆಗಳು ಈವರೆಗೂ ಪೂರೈಕೆಯಾಗಿಲ್ಲ. ಈ ಬಗ್ಗೆ ಕೇಳಿದರೆ ಅವೆಲ್ಲ ಬೆಂಗಳೂರಿನಿಂದ ಬರಬೇಕು ಎನ್ನುತ್ತಾರೆ. ಮಧ್ಯಾಹ್ನ 250-300 ಜನರು ಊಟ ಸೇವಿಸುತ್ತಾರೆ. ಉಪಹಾರ ಮತ್ತು ರಾತ್ರಿ ಊಟಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ. ದಿನದ ಮೂರೂ ಹೊತ್ತು ಸೇರಿಸಿದರೆ ಸುಮಾರು 500 ಜನರು ಆಗಬಹುದು.
 ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ

ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಉಪಾಹಾರ ಸಿಗುತ್ತದೆ. ಆದರೆ, ಬೆಳಗ್ಗೆ ನಾಲ್ಕು ಪುರಿ ಬದಲಾಗಿ ಕೇವಲ ಎರಡು ಪುರಿ ಮಾತ್ರ ನೀಡುತ್ತಿದ್ದಾರೆ. ಬೋರ್ಡ್‌ ಹಾಕಿರೋದು ಒಂದು, ಇಲ್ಲಿ ಕೊಡುವುದು ಒಂದು.
ಬಸವರಾಜ ಬನ್ನಿಗಿಡದ, 
ಸಾರ್ವಜನಿಕ

ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.