ಶುದ್ಧ ಕುಡಿವ ನೀರಿನ ಘಟಕಕ್ಕೆ ಬೀಗ
Team Udayavani, Jan 2, 2019, 11:23 AM IST
ಗಜೇಂದ್ರಗಡ: ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಪಟ್ಟಣದಲ್ಲಿ ಪುರಸಭೆಯಿಂದ ಆರಂಭಿಸಿದ್ದ ಪ್ರಥಮ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇದೀಗ ಬೀಗ ಬಿದ್ದಿದೆ. ಆದರೆ ಹಳೆಯ ಘಟಕಗಳನ್ನೇ ನಿರ್ವಹಿಸಲಾಗದ ಪುರಸಭೆ ಹೊಸ ಶುದ್ಧ ನೀರಿನ ಘಟಕವನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಪಟ್ಟಣದ 9ನೇ ವಾರ್ಡ್ನಲ್ಲಿ ಪುರಸಭೆಯಿಂದ 2013ರಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ 4 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ರೀತಿಯಲ್ಲಿ ದುರಸ್ತಿಗೊಳಪಡುತ್ತಾ ಬಂದಿದೆ. ಸಾರ್ವಜನಿಕರಿಗೆ ಸಮರ್ಪಕವಾದ ಸೇವೆಯನ್ನು ಘಟಕ ನೀಡಿಲ್ಲ. ಈ ಘಟಕವನ್ನೇ ನಂಬಿ ಸುತ್ತಲಿನ ಐದಾರು ವಾರ್ಡ್ಗಳ ಜನತೆ ಶುದ್ಧ ನೀರಿಗಾಗಿ ಆಗಮಿಸುತ್ತಾರೆ. ಆದರೆ ಘಟಕಕ್ಕೆ ಬೀಗ ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಜನತೆಗೆ ಶುದ್ಧ ನೀರು ಒದಗಿಸಬೇಕು ಎನ್ನುವ ಉದ್ದೇಶದಿಂದ ಈಚೆಗೆ ಪುರಸಭೆಯಿಂದ 3, 15, 17, 23ನೇ ವಾರ್ಡ್ಗಳಲ್ಲಿ ಹೊಸ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟನೆ ಮಾಡಲಾಗಿದೆ. ಆದರೆ 9ನೇ ವಾರ್ಡ್ನಲ್ಲಿರುವ ಹಳೆಯ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಹಲವು ತಿಂಗಳಿಂದ ಜನಸೇವೆಗೆ ದೊರೆಯದೇ ಬೀಗ ಹಾಕಲಾಗಿದೆ.
ಮುಚ್ಚಿದ ಘಟಕ: ಪಟ್ಟಣದಲ್ಲಿ ಪ್ರಥಮ ಬಾರಿಗೆ ಪುರಸಭೆಯಿಂದ ಶುರುವಾಗಿದ್ದು ಶುದ್ಧ ನೀರಿನ ಘಟಕವು 10 ಪೈಸೆಗೆ ಒಂದು ಲೀಟರ್ ಶುದ್ಧ ನೀರು ಪೂರೈಕೆ ಮಾಡುತ್ತಿತ್ತು. ಕಡು ಬಡವರಿಗೂ ಶುದ್ಧ ನೀರು ದೊರೆಯಲಿ ಎನ್ನುವ ಉದ್ದೇಶದಿಂದ ತೆರೆಯಲಾದ ಈ ಶುದ್ಧ ನೀರು ಘಟಕ ಇದೀಗ ಜನರ ಪಾಲಿಗೆ ನಿಲುಕದ ನಕ್ಷತ್ರವಾಗಿ ಮುಚ್ಚಲ್ಪಟ್ಟಿದೆ.
ನಿರ್ವಹಣೆಯಲ್ಲಿ ಎಡವಿದ ಪುರಸಭೆ: ಸರ್ಕಾರದ ಲಕ್ಷಾಂತರ ಅನುದಾನದಿಂದ ಘಟಕವನ್ನೇನು ಆರಂಭಿಸಲಾಗುತ್ತದೆ. ಆದರೆ ಕೆಲ ತಿಂಗಳು ಕಳೆಯುವಷ್ಟರಲ್ಲಿಯೇ ಘಟಕಕ್ಕೆ ಬೀಗ ಹಾಕಲಾಗುತ್ತಿದೆ. ಪುರಸಭೆ ಸಮರ್ಪಕ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾದ ಪರಿಣಾಮ ಯೋಜನೆಯ ಮೂಲ ಉದ್ದೇಶ ಇಲ್ಲಿ ಬುಡಮೇಲಾಗಿದೆ. ಪಟ್ಟಣದ ಜನತೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಜನತೆಗೆ ಕುಡಿಯಲಾದರೂ ಕೊಂಚ ಅನುಕೂಲವಿದ್ದ ಶುದ್ಧ ನೀರಿನ ಘಟಕಕ್ಕೆ ಬೀಗ ಜಡಿಯಲಾಗಿದೆ. ಒಂದೆಡೆ ಹಳೆಯ ಶುದ್ಧ ನೀರಿನ ಘಟಕಕ್ಕೆ ಬೀಗ ಹಾಕುತ್ತಿರುವ ಪುರಸಭೆ ಇನ್ನೊಂದೆಡೆ ಹೊಸ ಘಟಕಗಳನ್ನು ತೆರೆಯುತ್ತಿದೆ. ಇದು ಪುರಸಭೆ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸುತ್ತಲಿನ ಐದು ವಾರ್ಡ್ಗಳ ಜನತೆಗೆ ಅನುಕೂಲವಾಗಿದ್ದ ಶುದ್ಧ ನೀರಿನ ಘಟಕ ಕಳೆದ ಎರಡು ತಿಂಗಳಿಂದ ಬಂದ್ ಮಾಡಿದ್ದಾರೆ. ಘಟಕ ನಿರ್ವಹಣೆಯಲ್ಲಿ ಖಾಸಗಿ ಸಂಸ್ಥೆ ಜೊತೆಗೆ ಪುರಸಭೆಯು ವಿಫಲವಾಗಿದೆ. ಇದನ್ನು ಖಾಸಗಿ ಶುದ್ಧ ನೀರಿನ ಘಟಕಗಳು ಬಂಡವಾಳವನ್ನಾಗಿಸಿಕೊಂಡಿದ್ದಾರೆ. ಕೂಡಲೇ ಶುದ್ಧ ನೀರಿನ ಘಟಕ ಆರಂಭಕ್ಕೆ ಪುರಸಭೆ ಮುಂದಾಗಬೇಕು.
ಎಂ.ಬಿ. ಸೋಂಪುರ, ಡಿವೈಎಫ್ಐ ಮುಖಂಡ
ಪಟ್ಟಣದ 9ನೇ ವಾರ್ಡ್ ನಲ್ಲಿರುವ ಶುದ್ಧ ನೀರಿನ ಘಟಕವನ್ನು ಹೈದರಾಬಾದನ ಸ್ಮಾರ್ಟ್ ಅಕ್ವಾಲಾಜಿಸ್ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಆದರೆ ಸಮರ್ಪಕ ಕಾರಣಗಳನ್ನು ನೀಡದೇ ಏಕಾಏಕಿ ಘಟಕವನ್ನು ಬಂದ್ ಮಾಡಿದ್ದಾರೆ. ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ನೂತನ ಶುದ್ಧ ನೀರಿನ ಜೊತೆಗೆ ಈ ಘಟಕದ ನಿರ್ವಹಣೆಯನ್ನು ಶೀಘ್ರದಲ್ಲೇ ಖಾಸಗಿ ವ್ಯಕ್ತಿಗಳಿಗೆ ನೀಡಿ ಜನತೆಗೆ ಶುದ್ಧ ನೀರು ಒದಗಿಸಲಾಗುವುದು.
ಹನಮಂತಮ್ಮ ನಾಯಕ್,
ಪುರಸಭೆ ಮುಖ್ಯಾಧಿಕಾರಿ
ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ