ಮಲಪ್ರಭಾ ತಟದಲ್ಲಿ ಗಂಗಾ-ಪರಮೇಶ್ವರ ಪೂಜೆ


Team Udayavani, Jan 15, 2019, 10:04 AM IST

15-january-17.jpg

ನರಗುಂದ: ಮಕರ ಸಂಕ್ರಮಣ ಅಂಗವಾಗಿ ಕೊಣ್ಣೂರ ಹಾಗೂ ಸುತ್ತ ಗ್ರಾಮಗಳ ಗಂಗಾಮತಸ್ಥ ಸಮಾಜದಿಂದ ಗ್ರಾಮದ ಬಳಿ ಮಲಪ್ರಭಾ ನದಿ ತೀರದಲ್ಲಿ ಸೋಮವಾರ ಮರಳಿನಿಂದ ವಿಶೇಷವಾಗಿ ತಯಾರಿಸಿದ ಗಂಗಾ-ಪರಮೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕ್ರಮಣವನ್ನು ಸಡಗರದಿಂದ ಆಚರಿಸಲಾಯಿತು.

ಪ್ರಾಚೀನ ರಾಮೇಶ್ವರ ದೇವಸ್ಥಾನ ಬಳಿ ಮಲಪ್ರಭಾ ದಂಡೆಯಲ್ಲಿ ಕಲಾವಿದನ ಕೈಚಳಕದಲ್ಲಿ ಸುಂದರವಾಗಿ ತಯಾರಿಸಿದ ಗಂಗಾ ಪರಮೇಶ್ವರಿ ಮೂರ್ತಿಗೆ ಪೂಜಾ ಕೈಂಕರ್ಯದಲ್ಲಿ ಬೆಳಗ್ಗೆಯಿಂದ ಕೊಣ್ಣೂರು, ವಾಸನ,ಬೆಳ್ಳೇರಿ, ಲಖಮಾಪುರ ಗ್ರಾಮಗಳ ಎಲ್ಲ ಸಮಾಜ ಬಾಂಧವರು, ಯುವಕ-ಯುವತಿಯರು ಪಾಲ್ಗೊಂಡು ಗಂಗಾ ಪರಮೇಶ್ವರಗೆ ಪೂಜೆ ಸಲ್ಲಿಸಿ ಸೂರ್ಯ ನಮಸ್ಕಾರ ಹಾಕಿದರು.

ಬೆಳ್ಳೇರಿ ಶಿವಾನಂದ ಮಠದ ಸಚ್ಚಿದಾನಂದ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಅಥಣಿ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿತು. ಗಂಗಾಮತಸ್ಥ ಸಮಾಜ ಅಧ್ಯಕ್ಷ ಬಸಪ್ಪ ಶಿರಹಟ್ಟಿ, ತಾಪಂ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ, ಎಪಿಎಂಸಿ ಸದಸ್ಯ ಶಂಕರಗೌಡ ಯಲ್ಲಪ್ಪಗೌಡ್ರ, ವಾಸನ ಗ್ರಾಪಂ ಅಧ್ಯಕ್ಷ ಶ್ರೀಕಾಂತಯ್ಯ ಹಿರೇಮಠ, ಮುರಗಯ್ಯ ಹಿರೇಮಠ, ತುಳಸೀಗೇರಿ ಸೋಮಾಪುರ, ಮಲ್ಲಪ್ಪ ಕರಿಯಪ್ಪನವರ, ಈರಣ್ಣ ಶಿರಸಂಗಿ, ಅರವಿಂದ ದೀಕ್ಷಿತ, ಭರಮ್ಮ ಬಾರಕೇರ, ಯಲ್ಲಪ್ಪ ಕಾಣಿಕರ, ಹನಮಂತ ಕಟ್ಟಿಮನಿ, ಬಸಪ್ಪ ಕಟ್ಟಿಮನಿ, ಫಕೀರಪ್ಪ ಸುಣಗಾರ, ಬಸವರಾಜ ಅಂಬಿಗೇರ, ಚನ್ನಪ್ಪ ಶಿರಹಟ್ಟಿ, ನಿಂಗಪ್ಪ ಹಿರೇಹೊಳಿ, ಬಸವರಾಜ ಬಾರಕೇರ, ಹನಮಂತ ಅಂಬಿಗೇರ, ತಾಪಂ ಮಾಜಿ ಅಧ್ಯಕ್ಷೆ ಭೀಮವ್ವ ಶಿರಹಟ್ಟಿ ಮುಂತಾದವರು ಪಾಲ್ಗೊಂಡಿದ್ದರು. ಅಚ್ಚುಕಟ್ಟು ಪ್ರದೇಶದ ಜೀವನಾಡಿ ಮಲಪ್ರಭೆಗೆ ಪೂಜೆ ಸಲ್ಲಿಸಿದ ಬಳಿಕವೇ ನಾವಿಕ ವೃತ್ತಿ ನಡೆಸುತ್ತಿದ್ದ ವಿಶಿಷ್ಟ ಹಿನ್ನೆಲೆ ಇಲ್ಲಿನ ಗಂಗಾಮತಸ್ಥ ಸಮಾಜಕ್ಕಿದೆ. ಹೀಗಾಗಿ ತಾಲೂಕಿನ ಕೊಣ್ಣೂರ ಗ್ರಾಮದ ಬಳಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜೀವನದಿ ಮಲಪ್ರಭೆ ತಟದಲ್ಲಿ ಗಂಗಾ ಪರಮೇಶ್ವರ ಪೂಜೆಗೆ ದಶಕಗಳ ಇತಿಹಾಸವಿದೆ.

ಮೂಲತಃ ನಾವಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಸಮಾಜ ಬಾಂಧವರು ಪ್ರತಿವರ್ಷ ಸಂಕ್ರಮಣ ದಿನ ಗಂಗಾ ಪರಮೇಶ್ವರಗೆ ಪೂಜಿಸಿದ ಬಳಿಕ ನದಿಯಲ್ಲಿ ನಾವಿಕ ವೃತ್ತಿ ಪ್ರಾರಂಭಿಸುತ್ತಿದ್ದರು ಎನ್ನಲಾಗಿದೆ. ಕಳೆದ 14 ವರ್ಷದಿಂದ ಈ ಕಾರ್ಯಕ್ರಮ ಸಂಭ್ರಮದಿಂದ ಆಚರಿಸುತ್ತಿದ್ದು, ಎಲ್ಲ ಸಮಾಜ ಬಾಂಧವರು ಒಗ್ಗಟ್ಟಿನಿಂದ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕಳಸಾ-ಬಂಡೂರಿಗೆ ಹರಕೆ
ಗಂಗಾಮತಸ್ಥ ಸಮಾಜದಿಂದ ಈ ಬಾರಿ ವಿಶೇಷವಾಗಿ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಗೊಂಡು ಮಲಪ್ರಭೆ ಒಡಲು ತುಂಬಲಿ, ಇದರಿಂದ ಈ ಭಾಗದ ಸಮಸ್ತ ರೈತ ಬಾಂಧವರ ಬದುಕು ಹಸನಾಗಲಿ ಎಂದು ಮಲಪ್ರಭೆಯ ಗಂಗಾ ಮಾತೆಗೆ ಹರಕೆ ಸಲ್ಲಿಸಲಾಯಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.