ಗಮನ ಸೆಳೆದ ಎಮ್ಮೆ-ಕೋಣದ ಓಟ
Team Udayavani, Oct 21, 2017, 10:41 AM IST
ಆಳಂದ: ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೇರಿದಂತೆ ಬರಗಾಲದ ಹೊಡೆತ. ಹೀಗೆ ಒಂದರ ಮೇಲೊಂದು ರೈತರಿಗೆ ಆರ್ಥಿಕ ನಷ್ಟ ಸಂಭವಿಸಿದರೂ ದೀಪಾವಳಿ ಹಾಗೂ ಬಲಿಪಾಡ್ಯ ಹಬ್ಬವನ್ನು ಕಹಿಸಿಹಿಗಳ ನಡುವೆ ಅದ್ಧೂರಿಯಾಗಿ ಆಚರಿಸಿದರು.
ಬಲಿಪಾಡ್ಯದ ದಿನದಂದು ಪಟ್ಟಣದ ಹೃದಯ ಭಾಗದ ಹಳೆಯ ಪೊಲೀಸ್ ಠಾಣೆ, ಹನುಮಾನ ರಸ್ತೆ, ಮುಖ್ಯ ರಸ್ತೆ ಹೀಗೆ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ನಡೆದ ಕೋಣ, ಎಮ್ಮೆಗಳ ಮೆರವಣಿಗೆ ಹಾಗೂ ಓಟ ಗಮನ ಸೆಳೆಯಿತು. ಬುಧವಾರ ದೀಪಾವಳಿ ಹಬ್ಬ ಆಚರಿಸಿದರು. ಗುರುವಾರ ಅಪವಾಸ್ಯೆಯ ವಿಶೇಷ ಪೂಜೆ ಹಾಗೂ ಶುಕ್ರವಾರ ಬಲಿಪಾಡ್ಯದಂದು ಅಂಗಡಿ ಮುಗ್ಗಟ್ಟುಗಳಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೆಳಗಿನ ಜಾವ ವಿಶೇಷ ಪೂಜೆ ನೆರವೇರಿಸಿ, ಪ್ರಸಾದ ಹಂಚಿ, ಪಟಾಕಿ ಸಿಡಿಸಿದರು.
ಪಟ್ಟಣದಲ್ಲಿ ವ್ಯಾಪಾರಿಗಳು ತೆಂಗಿನ ಪೊರಕೆ, ಹೂವು, ಹಣ್ಣು ಸೇರಿ ಪೂಜಾ ಸಾಮಗ್ರಿಗಳ ಮಾರಾಟ ಮತ್ತು ಖರೀದಿ ಗುರುವಾರ ಭರದಿಂದ ಕೂಡಿತ್ತು. ವರ್ಷಕ್ಕಿಂತ ಈ ಭಾರಿಯೂ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದರೂ ಗ್ರಾಹಕರು ಖರೀದಿಸಿದರು.
ಸಿಹಿ ತಿಂಡಿಗಳನ್ನು ಅನೇಕರು ಹೊಟೆಲ್ಗಳಿಂದ ಖರೀದಿಸಿದರೆ, ಬಹುತೇಕರು ಮನೆಗಳಲ್ಲಿ ಸಿದ್ಧಪಡಿಸಿ ಬಂಧು ಬಾಂಧವರಿಗೆ ನೆರೆ ಹೊರೆಯವರನ್ನು ಕರೆದು ನೀಡಿದರು. ಒಟ್ಟಿನಲ್ಲಿ ಬಡವರಿಗೆ, ರೈತರಿಗೆ ದೀಪಾವಳಿ ಆಚರಣೆ ಆರ್ಥಿಕ ಹೊರೆಯಾದರೆ ಶ್ರೀಮಂತರು ಖರ್ಚಿನ ಬದಲು ಸರಳವಾಗಿಯೇ ಆಚರಿಸಿ ಹಣ ಉಳಿಸಿದ ಪ್ರಸಂಗಗಳು ನಡೆದವು.
ಆಳಂದ ಪಟ್ಟಣದಲ್ಲಿ ಪಾಡ್ಯದಂದು ಪ್ರತಿವರ್ಷ ಕೋಣಗಳ ಕುಸ್ತಿ ನಡೆಯಿತ್ತಿತ್ತಾದರೂ ಇತ್ತಿಚಿನ ವರ್ಷ ಕಳೆದಂತೆ ಬರಿ ಎಮ್ಮೆ, ಕೋಣಗಳ ಮೆರವಣಿಗೆ ಹಾಗೂ ಓಟ ನಡೆಸುತ್ತಿದ್ದಾರೆ. ಮೆರವಣಿಗೆ ಆಕರ್ಷಕವಾಗಿ ನಡೆಯುತ್ತಿದೆ. ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಇನ್ನಿತರ ಧರ್ಮಿಯರನ್ನು ಕರೆಯಿಸಿ ಭೋಜನ ಕೂಟ ಏರ್ಪಡಿಸಿದ್ದಂತೆ ಪ್ರತಿಯಾಗಿ ಹಿಂದೂಪರ ಧರ್ಮಿಯರು ಮುಸ್ಲಿಂ ಬಾಂಧವರನ್ನು ಕರೆದು ಉಪಹಾರ ಕೂಟಗಳನ್ನು ಕೆಲವೆಡೆ ಕೈಗೊಂಡಿದ್ದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್