ಭಕ್ತಿಯಿದ್ದಡೆ ಭಗವಂತ: ಕಾಶಿ ಜಗದ್ಗುರು


Team Udayavani, Mar 20, 2018, 11:02 AM IST

gul-1.jpg

ವಾಡಿ: ಶ್ರದ್ಧಾ ಭಕ್ತಿಯಿಂದ ಪೂಜಿಸುವ ಸ್ಥಳದಲ್ಲಿ ದೇವರಿದ್ದಾನೆ. ಪಾಪ ಕರ್ಮಗಳ ಪ್ರಾಯಾಶ್ಚಿತಕ್ಕೆ ಗುರುಕೃಪೆಯೇ ಮದ್ದು ಎಂದು ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಕೊಲ್ಲೂರ ಗ್ರಾಮದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ 12 ಜ್ಯೋತೀರ್ಲಿಂಗಗಳ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಬೆಳಗಿನ ಪೂಜೆ ಶಿವನ ಸಾನ್ನಿಧ್ಯಕ್ಕೆ ಅರ್ಪಿಸುವುದು ನಿತ್ಯದ ಕಾಯಕವಾಗಬೇಕು. ಶಿವಲಿಂಗದ ದರ್ಶನ ಶಿವನ ಒಲಿಕೆಗೆ ಮಾರ್ಗವಾಗಿದೆ. ನಿಶ್ಚಲವಾದ ಪಾವಿತ್ರ್ಯದ ಮನಸ್ಸು ಶಿವನಿಗೆ ನೈವೇದ್ಯ. ಧರ್ಮ ಸಂಸ್ಕಾರ ಜಾಗೃತಿಯಿಂದ ಸಮಾಜದ ಪ್ರಗತಿ ಸಾಧ್ಯವಿದೆ. ಬದುಕಿನಲ್ಲಿ ಆಧ್ಯಾತ್ಮದ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮನಸ್ಸುವ ಕಟ್ಟುವ ಕಾರ್ಯ ಮಾಡಬೇಕಾದವರು ಒಡೆಯಲು ನಿಲ್ಲಬಾರದು. ಧರ್ಮದ ವಿಚಾರಗಳನ್ನು ಎತ್ತಿ ಹಿಡಿದು ಮನುಷ್ಯ ಪ್ರೀತಿಗೆ ಪಾತ್ರರಾಗಬೇಕು. ದೇವಾಲಯಗಳು ಭಕ್ತಿಯ ಪ್ರತೀಕ. ದೇವರ ಮಹಾಶಕ್ತಿಯನ್ನೇ ನಂಬಿ ಬದುಕುವ ಕಟ್ಟುತ್ತಿರುವ ಕೋಟ್ಯಂತರ ಜನಕ್ಕೆ ಜೀವಪರ ಸಂಸ್ಕಾರ ನೀಡುವುದು ಧರ್ಮ ಸಿದ್ಧಾಂತವಾಗಿದೆ. 

ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವುದು ಮಾನವ ಧರ್ಮವಾಗಿದೆ. ಚಿಂತನೆಗಳ ಹೆಸರಿನಲ್ಲಿ ಧರ್ಮ ಒಡೆಯುವ ಹುನ್ನಾರ ನಡೆದಿದ್ದು, ಎಚ್ಚರವಾಗಿರಬೇಕು ಎಂದು ನುಡಿದರು. ಗ್ರಾಮದಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. 

ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಐದು ದಿನಗಳಿಂದ ಕಾಶಿ ಸ್ವಾಮೀಜಿಗಳ ತಂಡದಿಂದ ಹೋಮ, ಹವನ, ಯಾಗಗಳು ನಡೆಸಿ 12 ಜ್ಯೋತೀರ್ಲಿಂಗ ಹಾಗೂ ನವಗೃಹಗಳ ಪ್ರತಿಷ್ಠಾಪನೆ ನಡೆಯಿತು. ಮುಸ್ಲಿಂ ಸಮುದಾಯಕ್ಕೆ ಸೇರಿದ ಕೊಲ್ಲೂರ ಗ್ರಾಮದ ಭಾಷುಮಿಯ್ನಾ ದಿಡ್ಡಿಮನಿ ಎಂಬ ಭಕ್ತ ಕಾಶಿಯಿಂದ ಶಿವಲಿಂಗ ಹೊತ್ತು ತಂದು ಭಕ್ತಿ ಮೆರೆದರು. ಕಾಶಿ ಜಗದ್ಗುರುಗಳ ಪಾದ ಪೂಜೆ ಮಾಡಿ ಗಮನ ಸೆಳೆದರು. 

ಮುಖಂಡರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶರಣಗೌಡ ಹಿರೆಡ್ಡಿ, ಶರಣು ಸಾಹುಕಾರ ಬಿರಾಳ, ಸಂಗಾರೆಡ್ಡಿ ಹೋತಪೇಟೆ, ಲಿಂಗಾರೆಡ್ಡಿಗೌಡ ಪೊಲೀಸ್‌ಪಾಟೀಲ, ಸಾಹೇಬಗೌಡ ಪೊಲೀಸ್‌ ಪಾಟೀಲ, ಶಿವುಕುಮಾರ ಪೂಜಾರಿ, ಶಾಂತಿನಾಥ ಹಿರೇಗೌಡ, ರಾಚಯ್ಯಸ್ವಾಮಿ ನಪುರಿ, ಕುಬೇಂದ್ರರೆಡ್ಡಿ ಕರೆಡ್ಡಿ, ಸಿದ್ದಣ್ಣ ಕುಲಕುಂದಿ, ಶರಣಗೌಡ ಕರೆಡ್ಡಿ, ಮಲ್ಲಿನಾಥ ಪೂಜಾರಿ, ಪ್ರವೀಣರೆಡ್ಡಿ ತಿಪ್ಪರೆಡ್ಡಿ, ಕೃಷ್ಣಾರೆಡ್ಡಿ ಈರೆಡ್ಡಿ, ಭಾಷುಮಿಯ್ನಾ ದಿಡ್ಡಿಮನಿ, ರುದ್ರುಗೌಡ ಯಾಳಗಿ, ಅರುಣಕುಮಾರ ಕುಡುಗುಂಟಿ, ಪ್ರವೀಣಕುಮಾರ
ಜೀರ್‌, ಶಂಕ್ರು ದೇಸಾಯಿ ಸೇರಿದಂತೆ ಸಾವಿರಾರು ಜನ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.