ಸಿಇಟಿಯಲ್ಲಿ ಗುರುಕುಲ ಕಾಲೇಜುವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್
Team Udayavani, Jun 2, 2018, 10:24 AM IST
ಕಲಬುರಗಿ: ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲದೇ ಜೆಇಇ ಪರೀಕ್ಷೆಯಲ್ಲೂ ಅಪ್ರತಿತಮ ಸಾಧನೆ ತೋರುತ್ತಿರುವ
ನಗರದ ಜಾಜಿ ಫೌಂಡೇಷನ್ ಸಂಚಾಲಿತ ಗುರುಕುಲ ಸ್ವತಂತ್ರ ಪದವಿ-ಪೂರ್ವ ವಿಜಾnನ ಕಾಲೇಜಿಗೆ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದ್ದು, ಜಿಲ್ಲೆಗೆ ಟಾಪರ್ಸ್ ಆಗಿದ್ದಾರೆ.
ಕಾಲೇಜಿನ ಭಾರ್ಗವ ಕುಲಕರ್ಣಿ, ಪ್ರಜ್ವಲ್ ವಿ.ಸಂಗಮ ಕರ್ನಾಟಕ ಸಿಇಟಿ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದಾರೆ. ಪಿಯುಸಿಯಲ್ಲಿ ಶೇ.94.02ಅಂಕಗಳನ್ನು ಪಡೆದಿದ್ದ ಭಾರ್ಗವ ಕುಲಕರ್ಣಿ ಇಂಜಿನಿಯರಿಂಗ್ ಸಿಇಟಿಯಲ್ಲಿ ರಾಜ್ಯಕ್ಕೆ 44ನೇ ರ್ಯಾಂಕ್ ಪಡೆಯುವ ಮುಖಾಂತರ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಪಿಯುಸಿಯಲ್ಲಿ ಶೇ.93.33 ಅಂಕ ಪಡೆದಿದ್ದ ಪ್ರಜ್ವಲ್ ವಿ.ಸಂಗಮ್ ಸಿಇಟಿಯಲ್ಲಿ ರಾಜ್ಯಕ್ಕೆ 98ನೇ ರ್ಯಾಂಕ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಗುರುಕುಲ ಕಾಲೇಜಿನ ಮತ್ತೂಬ್ಬ ವಿದ್ಯಾರ್ಥಿ ಯಶ್ ಆರ್.ಕೋಳಕೂರ 141ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾನೆ ಎಂದು ಗುರುಕುಲ ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ| ಪ್ರಹ್ಲಾದ ಭುರ್ಲಿ
ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಸಿಇಟಿಯಲ್ಲಿ 500ರೊಳಗೆ ನಾಲ್ಕು ರ್ಯಾಂಕ್ಗಳು, ಒಂದು ಸಾವಿರದೊಳಗೆ ಆರು, ಎರಡು ಸಾವಿರದೊಳಗೆ ಒಂಭತ್ತು, ಐದು ಸಾವಿರದೊಳಗೆ 30 ಮತ್ತು 10 ಸಾವಿರದೊಳಗೆ 77 ರ್ಯಾಂಕ್ಗಳು ಬಂದಿವೆ. ಕಳೆದ ಎಂಟು ವರ್ಷಗಳಿಂದ ಅತ್ಯುತ್ತಮ ಸಾಧನೆ ಮಾಡುತ್ತಲೇ ಬೆಳೆಯುತ್ತಿರುವ ಗುರುಕುಲ ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನ ಸಾಧನೆಗೆ ಆಡಳಿತ ಮಂಡಳಿ ಪ್ರೋತ್ಸಾಹ, ಸಿಬ್ಬಂದಿ ಸಹಕಾರ, ಸತತ ಪರಿಶ್ರಮವೇ ಕಾರಣವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಂಡು ಪಾಲಕರು ಸಂತೋಷವಾಗಿದ್ದಾರೆ ಎಂದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರವಿಕುಮಾರ ವಲ್ಲಮಶೆಟ್ಟಿ, ಪಾಲಕರಾದ ಪದ್ಮಾಕರ ಕುಲಕರ್ಣಿ, ವೀರಣ್ಣ ವಿ.ಕೆ. ಹಾಗೂ ಪಾಲಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ