ಮಳೆ ಬಂದ್ರೆ ಹೊಳೆಯಂತಾಗುತ್ತೆ ಅಫಜಲಪುರ
Team Udayavani, Jun 10, 2018, 10:44 AM IST
ಅಫಜಲಪುರ: ಮೊದಲೆಲ್ಲ ಜನರಲ್ಲಿ ಅರಿವಿನ ಕೊರತೆ ಇತ್ತು. ನಗರ ಪ್ರದೇಶಗಳ ಬೆಳವಣಿಗೆ, ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳು ಜನರಿಗೆ ತಡವಾಗಿ ಲಭ್ಯವಾಗುತ್ತಿದ್ದವು. ಆದರೆ ಆಧುನಿಕ ಕಾಲದಲ್ಲೂ ಇಲ್ಲೊಂದು ಪಟ್ಟಣ ಓಬಿರಾಯನ ಕಾಲದಂತೆ ಇದೆ. ಇಲ್ಲಿ ರಸ್ತೆ ಯಾವುದೋ..ಚರಂಡಿ ಯಾವುದೋ..ಎನ್ನುವುದು ತಿಳಿಯದಂತೆ ಇದೆ.
ಇದು ರಾಜ್ಯದ ಅತೀ ಹಿಂದುಳಿದ ತಾಲೂಕು ಎಂಬ ಕುಖ್ಯಾತಿ ಹೊಂದಿದ ಅಫಜಲಪುರ ಪಟ್ಟಣದ ವ್ಯಥೆ. ಈ ಪಟ್ಟಣ ಸುಮಾರು ದಶಕಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಒಂದು ಮಳೆ ಬಂದರೆ ಇಲ್ಲಿನ ಬಹುತೇಕ ರಸ್ತೆಗಳು ಹೊಳೆಯಂತೆ ಭಾಸವಾಗುತ್ತವೆ. ನೀರು ಹರಿದು ಹೋಗಲು ಗುಣಮಟ್ಟದ್ದಲ್ಲದೆ ಹೋದರೂ ಸಹ ನೀರು ಹರಿದು ಹೋಗುವ ವ್ಯವಸ್ಥೆ ಇರುವ ಚರಂಡಿ ವ್ಯವಸ್ಥೆಯೂ ಇಲ್ಲಿಲ್ಲ.
ಎಲ್ಲಿ ನೋಡಿದರೂ ಮುಚ್ಚಿ ಹೋದ ಚರಂಡಿಗಳು. ಹೀಗಾಗಿ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುತ್ತದೆ. ಈಗ ಮಳೆಗಾಲ ಶುರುವಾಗಿದ್ದರಿಂದ ಚರಂಡಿ ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ಪಟ್ಟಣದ ರಸ್ತೆಗಳು ಹೊಳೆಯಂತೆ ಕಾಣುತ್ತಿವೆ.
ಮಾಸ್ಟರ್ ಪ್ಲಾನ್ ಮರೀಚಿಕೆ: ಪಟ್ಟಣಕ್ಕೆ ಮಾಸ್ಟರ್ ಪ್ಲಾನ್ ಬರುತ್ತದೆ. ಪಟ್ಟಣದ ರಸ್ತೆಗಳು ಅಗಲವಾಗಿ ಸುಂದರ ನಗರ ನಿರ್ಮಾಣ ಆಗಲಿದೆ ಎಂದು ಇಲ್ಲಿನ ನಿವಾಸಿಗಳು ಕನಸು ಕಂಡಿದ್ದರು. ಆ ಕನಸಿಗೆ ಇನ್ನು ರೆಕ್ಕೆ ಪುಕ್ಕವು ಬಂದಿಲ್ಲ. ಈ ಮಾಸ್ಟರ್ ಪ್ಲಾನ್ ಯೋಜನೆ ಕೇಳಿ ಕೇಳಿ ನಾವೇ ಮುದುಕರಾಗಿದ್ದೇವೆ ಎಂದು ಇಲ್ಲಿನ ನಿವಾಸಿಗಳು ಅಳಲು
ತೋಡಿಕೊಳ್ಳುತ್ತಾರೆ.
ಇರುವ ಚರಂಡಿಗಳನ್ನು ಮುಚ್ಚಿದರು: ಪಟ್ಟಣದ ನೈರ್ಮಲ್ಯ, ಮೂಲಭೂತ ಸೌಕರ್ಯ ಕಲ್ಪಿಸುವ ಜವಾಬ್ದಾರಿ ಹೊತ್ತ ಪುರಸಭೆ ಹಳೆಯ ಕಾಲದ ಚರಂಡಿಗಳನ್ನು ಅಗೆದರು, ಮುಚ್ಚಿದರು, ಹೊಸ ಚರಂಡಿಗಳನ್ನು ನಿರ್ಮಿಸಿದರು. ಅನುದಾನದ ದುರ್ಬಳಕೆ, ಅವೈಜ್ಞಾನಿಕ ಕಾಮಗಾರಿಗಳು ಅಂತ ಹೇಳಿ ಪಟ್ಟಣದ ಜನರು ಬೀದಿಗೂ ಇಳಿದಿದ್ದರು. ಆದರೆ ಜನರ ಸಿಟ್ಟು ಮಳೆಗಾಲ ಮುಕ್ತಾಯದ ವರೆಗೆ ಮಾತ್ರ ಇತ್ತು. ಪುನಃ ಪುರಸಭೆವರು ಅದೇ ಕಾಯಕ ಮುಂದುವರಿಸಿದರು. ಒಟ್ಟಿನಲ್ಲಿ ಪಟ್ಟಣದಲ್ಲಿ ಯಾವ ಕಾಮಗಾರಿಗೂ ಶಾಶ್ವತ ಮುಕ್ತಿ ಎನ್ನುವುದಿಲ್ಲ. ಹಾಗೆ ಯಾವುದೇ ಸಮಸ್ಯೆಗೂ ಶಾಶ್ವತ ಪರಿಹಾರವೂ ಇಲ್ಲದಂತಾಗಿದೆ.
ಅನುದಾನ ದುರ್ಬಳಕೆಯೊಂದೆ ಗೊತ್ತು: ಅಫಜಲಪುರ ಪಟ್ಟಣಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಸಾಕಷ್ಟು ಪ್ರತಿಭಟನೆ, ಮನವಿ, ಧರಣಿಗಳನ್ನು ಮಾಡಿದರೂ ಸಂಬಂಧಪಟ್ಟವರ ಕಣ್ಣು ತೆರೆದಿಲ್ಲ. ಜನಪ್ರತಿನಿಧಿ ಗಳಿಗೆ ಮತ್ತು ಅಧಿಕಾರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅನುದಾನದ ದುರ್ಬಳಕೆ ಮಾಡುವುದು ಮಾತ್ರ ಚೆನ್ನಾಗಿ ಗೊತ್ತಿದೆ ಎಂದು ಸುರೇಶ ಅವಟೆ ಹಾಗೂ ಇನ್ನಿತರ ಪಟ್ಟಣದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಚರಂಡಿಗಳ ಸ್ವತ್ಛತೆ ಮತ್ತು ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಸುವಂತೆ ಪುರಸಭೆ ಮುಖ್ಯಾಧಿ ಕಾರಿಗೆ ಸೂಚಿಸಿದ್ದೇನೆ. ಪಟ್ಟಣದ ನೈರ್ಮಲ್ಯ ಸಮಸ್ಯೆ ನಿವಾರಣೆಗೆ ಬೇಕಾದ ಎಲ ಕ್ರಮಗಳನ್ನು ಈ ಬಾರಿ
ಕೈಗೊಳ್ಳಲಾಗುತ್ತಿದೆ. ಮಾಸ್ಟರ್ ಪ್ಲಾನ್ ಆದಷ್ಟು ಶೀಘ್ರವೇ ಆಗಲಿದೆ.
ಎಂ.ವೈ. ಪಾಟೀಲ, ಶಾಸಕರು
ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಮೊದಲಿದ್ದವರ ವೇತನವನ್ನು ಪಾವತಿ ಮಾಡಲು ಆಗಿಲ್ಲ. 12 ಮಹಿಳೆಯರು,
ಇಬ್ಬರು ಪುರುಷ ಕಾರ್ಮಿಕರಿದ್ದಾರೆ. ಹೊರಗುತ್ತಿಗೆ ಕಾರ್ಮಿಕರಿದ್ದರು. ಅವರ ಟೆಂಡರ್ ಏಪ್ರಿಲ್ 10ಕ್ಕೆ ಮುಗಿದಿದೆ.
ಹೀಗಾಗಿ ಪಟ್ಟಣದ ನೈರ್ಮಲ್ಯ ಸಮಸ್ಯೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಚರಂಡಿಗಳನ್ನು ಸ್ವತ್ಛಗೊಳಿಸಲಾಗುತ್ತದೆ.
ನಾಗಪ್ಪ ಆರೇಕರ, ಪುರಸಭೆ ಅದ್ಯಕ್ಷ ವಿಠ್ಠಲ ಹಾದಿಮನಿ, ಮುಖ್ಯಾಧಿಕಾರಿ ಪುರಸಭೆ
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ