ರಸ್ತೆ ಬದಿ ಸಸಿ ನೆಡಲು ಸಿದ್ಧತೆ
Team Udayavani, Jun 19, 2018, 1:02 PM IST
ಭೀಮರಾಯ ಕುಡ್ಡಳ್ಳಿ ಕಾಳಗಿ
ಕಾಳಗಿ: ಗ್ರಾಮೀಣ ಭಾಗದ ರಸ್ತೆಗಳ ಎರಡು ಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಡಲಾಗುತ್ತಿದೆ.
ಗ್ರಾಮೀಣ ಭಾಗಕ್ಕೆ ಸಂಚರಿಸುವ ರಸ್ತೆಗಳಾದ ಕಾಳಗಿ-ಸೂಗುರ (ಕೆ) ಎಸ್ ಎಸ್ಪಿ ಯೋಜನೆ ಅಡಿ 3 ಕಿ.ಮೀ ರಸ್ತೆ, ಕಲಗುರ್ತಿ-ಅಶೋಕ ನಗರ 4ಕಿ.ಮೀ ರಸ್ತೆ, ಮಂಗಲಗಿ-ಕೊಡದೂರ ಆರ್ ಎಸ್ಪಿ ಯೋಜನೆ ಅಡಿಯಲ್ಲಿ 3.5 ಕಿ.ಮೀ ರಸ್ತೆ, ಕಾಳಗಿ-ಕೊಡದೂರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 3.5 ಕೀ.ಮಿ ರಸ್ತೆ, ಕೋರವಾರ-ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನದವರೆಗೆ ಎಸ್ಎಸ್ಪಿ ಯೋಜನೆಯಲ್ಲಿ 3 ಕಿ.ಮೀ ರಸ್ತೆ, ಟೆಂಗಳಿ-ಕಲಗುರ್ತಿ- ಅಶೋಕ ನಗರದ ವರೆಗೆ ಎಸ್ಎಸ್ಪಿ ಯೋಜನೆಯಲ್ಲಿ 6 ಕಿ.ಮೀ ರಸ್ತೆ, ಹೊಸ್ಸಳ್ಳಿ-ರಾಜಾಪುರ 3 ಕಿ.ಮೀ ರಸ್ತೆ, ಗುಂಡಗುರ್ತಿ-ಬಾಗೋಡಿ 3 ಕಿ.ಮೀ ರಸ್ತೆ ಸೇರಿದಂತೆ ಹಲವಾರು ರಸ್ತೆಗಳನ್ನು ಸೇರಿಸಿ ದಿನಗೂಲಿ ನೌಕರರೊಂದಿಗೆ 3 ತಿಂಗಳಲ್ಲಿ 8,500 ಸಸಿಗಳನ್ನು ಪ್ರಸಕ್ತ ಸಾಲಿನಲ್ಲಿ ನೆಡಲು ಸಾಮಾಜಿಕ ಅರಣ್ಯ ಇಲಾಖೆ ಮುಂದಾಗಿದೆ.
ಸುಮಾರು 3 ತಿಂಗಳ ಹಿಂದೆಯೇ 1 ಮೀಟರ್ ಗುಂಡಿ ಅಗೆದು ಬಿಟ್ಟಿದ್ದರಿಂದ ಬಿಸಿಲು, ಗಾಳಿ, ಮಳೆಗೆ ಫಲವತ್ತಾದ ಮಣ್ಣಾಗಿ ಮಾರ್ಪಟ್ಟಿದೆ. ಈಗ ಮುಂಗಾರು ಮಳೆ ಸುರಿಯಲಾರಂಭಿಸಿದ್ದು ಈ ಸಂದರ್ಭದಲ್ಲಿ ಸಸಿಗಳಾದ ಬೇವು, ಹುಣಸೆ, ನೇರಳೆ, ಅರಳಿ, ಹೊಂಗೆ, ಬಸರಿ, ತಪ್ಸಿ ಸೇರಿದಂತೆ ವಿವಿಧ ರೀತಿಯ ಗಿಡಗಳನ್ನು ನೆಡಲಾಗುತ್ತಿದೆ.
ವನ್ಯ ಜೀವಿಗಳಾದ ಮಂಗಗಳು ರೈತನ ಜಮೀನುಗಳಲ್ಲಿ ಸಂಚರಿಸಿ ಬೆಳೆಗಳನ್ನು ಹಾಳು ಮಾಡುವುದನ್ನು ಬಿಟ್ಟು ಈ
ಗಿಡಗಳಲ್ಲಿ ನೆಲೆಸುತ್ತವೆ. ಕೂಲಿಕಾರರು ಬೇವಿನ ಗಿಡದಿಂದ ಉದುರುವ ಬೇವಿನ ಬೀಜ ಸಂಗ್ರಹಿಸಿ ಲಾಭ ಗಳಿಸುತ್ತಾರೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ತಿಳಿಸಿದ್ದಾರೆ. ರಸ್ತೆಯ ಎರಡು ಬದಿಯಲ್ಲಿ ನೆಡುವ ಸಸಿಗಳ ಸಂರಕ್ಷಣೆ ಮಾಡಲು ಸುಮಾರು ಮೂರು ತಿಂಗಳ ವರೆಗೆ ನಡುತೋಪು ಕಾವಲುಗಾರರನ್ನು ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಳ್ಳಿನ ಕವಚ: ಗಿಡ, ಮರಗಳನ್ನು ನೆಡುವುದರ ಜೊತೆಗೆ ಅದಕ್ಕೆ 8ರಿಂದ 10 ಪೂಟ್ ಎತ್ತರದ (ತೆಕ್ಸ್) ನೀಲಗಿರಿ ಎಳೆಗಳ ಸಹಾಯದಿಂದ ಸುತ್ತಲು ಮುಳ್ಳಿನ ಕವಚ ನಿರ್ಮಿಸಿ ದನ-ಕರ, ಕುರಿಗಳ ದಾಳಿಗೆ ತುತ್ತಾಗದಂತೆ ಕಾಪಾಡಲಾಗುತ್ತಿದೆ.
ನೆಟ್ಟಿರುವ ಸಸಿಗಳಿಗೆ ನೀರುಣಿಸುವುದರ ಜತೆಗೆ ಹಾಳಾಗದಂತೆ ಕಾಪಾಡಿ ಹೆಮ್ಮರವಾಗಿ ಬೆಳೆಸುತ್ತಿದ್ದೇವೆ.
ರೈತರು ಹೊಲದಲ್ಲಿರುವ ಸಸಿಗಳನ್ನು ಹಾಳಾಗದಂತೆ ನೋಡಿಕೊಳ್ಳಬೇಕು.
ರಾಜು ಜಾಧವ, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ
ಸಸಿಗಳು ಹೆಮ್ಮರವಾಗಿ ಬೆಳೆದ ನಂತರ ರಸ್ತೆಯ ಬದಿಯ ಜಮೀನುದಾರನೇ ಅದರ ಮಾಲೀಕನಾಗುತ್ತಾನೆ. ರೈತರು ಇವುಗಳನ್ನು ಕಡಿಯದೆ ರಕ್ಷಿಸಿ ಸ್ವಚ್ಛಂದ ವಾತಾವರಣ ನಿರ್ಮಿಸಲು ಕೈಜೋಡಿಸಬೇಕು.
ಸಂಜುಕುಮಾರ ಚವ್ಹಾಣ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!