ದೇವಿ ಗೊಂಬೆ ಮೇಲೆ ಕೋಳಿ ಎಸೆತ
Team Udayavani, Aug 9, 2018, 10:59 AM IST
ಚಿತ್ತಾಪುರ: ಪಟ್ಟಣದ ಹೋಳಿಕಟ್ಟಾ ಬಳಿ ಮರಗಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ದೇವಿ ಗೊಂಬೆಗಳ ಅದ್ಧೂರಿ ಮೆರವಣಿಗೆ ನಡೆಯಿತು. ಭಕ್ತರು ದೇವಿ ಗೊಂಬೆಗಳ ಮೇಲೆ ಕೋಳಿ ಎಸೆದು ಹರಕೆ ತಿರಿಸಿದರು. ರೋಗದಿಂದ ಮುಕ್ತಿ, ರೋಗ ರುಜಿನಗಳು ಬರದಂತೆ ಹಾಗೂ ಕಷ್ಟ, ತೊಂದರೆ ದೂರವಾಗಬೇಕು. ಕುಟುಂಬ ನೆಮ್ಮದಿಯಿಂದ ಜೀವನ ನಡೆಸಬೇಕು. ಜೀವನದಲ್ಲಿ ಎಲ್ಲವನ್ನು ಎದುರಿಸಿ ಉತ್ತಮ ಶಿಕ್ಷಣ, ಆರೋಗ್ಯ, ಕುಟುಂಬಕ್ಕೆ ಸಂತಾನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಭಕ್ತರು ಏಡಿಕೊಂಡರು.
ಭಕ್ತರು ಎಸೆದ ಕೋಳಿಗಳನ್ನು ಇತರರು ಹಿಡಿಯಲು ನಾ ಮುಂದೆ ನೀ ಮುಂದೆ ಎಂಬಂತೆ ಪ್ರಯತ್ನಿಸಿದರು.
ಇಲ್ಲಿನ ಜಾತ್ರೆಗೆ ಯಾರಿಗೂ ಸಾರ್ವಜನಿಕವಾಗಿ ಆಮಂತ್ರಣ ನೀಡುವುದಿಲ್ಲ. ಆದರೆ ಜಾತ್ರೆಗೆ ಸೇರುವುದು ಮಾತ್ರ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ.
ಗೊಂಬೆಗಳು ಹೊರಡುವ ಮುನ್ನವೇ ಜನರು ಇಲ್ಲಿ ಸೇರುತ್ತಾರೆ. ಬೆಳಗ್ಗೆ ದೇವಸ್ಥಾನದಲ್ಲಿ ಸುಮಂಗಲೆಯರು ,
ಮಕ್ಕಳು ಹೋಳಿಗೆ ಇತ್ಯಾದಿ ನೈವೈದ್ಯ ಸಲ್ಲಿಸಿದರು. ದೇಶಮುಖ ಹಾಗೂ ರೇಷ್ಮೆ ಮನೆಯಿಂದ ತುಂಬು ಆಯೇರಿ
ಬಟ್ಟೆ ಇತ್ಯಾದಿಯೊಂದಿಗೆ ಬಡಿಗೇರ ಮನೆಯಿಂದ ಗೊಂಬೆಗಳ ಮೆರವಣಿಗೆ ದೇವಸ್ಥಾನದವರೆಗೆ ನಡೆಯಿತು.
ದೇವಸ್ಥಾನಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಸಿಪಿಐ ಶಂಕರಗೌಡ ಪಾಟೀಲ, ಪಿಎಸ್ಐ ನಟರಾಜ ಲಾಡೆ
ಸೂಕ್ತ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ