ಕಂಬನಿ ಮಿಡಿದ ಜೇವರ್ಗಿ ಜನತೆ
Team Udayavani, Aug 18, 2018, 10:49 AM IST
ಕಲಬುರಗಿ: ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ನಿಧನಕ್ಕೆ ಜೇವರ್ಗಿ ತಾಲೂಕಾ ಭಾರತೀಯ ಜನತಾ ಪಕ್ಷದ ಘಟಕ ಕಂಬನಿ ಮಿಡಿದಿದ್ದು, ಜೇವರ್ಗಿ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ವಾಜಪೇಯಿ ಅವರನ್ನು ಕಳೆದುಕೊಂಡಿದ್ದರಿಂದ ದೇಶವಲ್ಲದೇ ಜಗತ್ತೇ ಇಂದು ಶೋಕಾಸಾಗರದಲ್ಲಿ ಮುಳುಗಿದೆ ಎಂದರು.
ನಂತರ ಅಖಂಡೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮೌನ ಆಚರಿಸಲಾಯಿತು. ಬಿಜೆಪಿ ತಾಲೂಕು ಅಧ್ಯಕ್ಷ ಸಾಯಬಣ್ಣ ದೊಡ್ಮನಿ, ಹಿರಿಯ ಮುಖಂಡರಾದ ರಮೇಶ ಬಾಬು ವಕೀಲ, ಷಣ್ಮುಖಪ್ಪ ಸಾಹು ಹೋಗಿ, ಬಸವರಾಜ ಕಂದಗಲ್, ಬಸವರಾಜ ಪಾಟೀಲ ನರಿಬೋಳ, ವಿರೇಶ ಪಾಟೀಲ ನರಿಬೋಳ, ಗುರುರಾಜ ಸುಬೇದಾರ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್