ಅವಕಾಶ ಸದುಪಯೋಗ ಮಾಡಿಕೊಳ್ಳಿ
Team Udayavani, Aug 31, 2018, 11:39 AM IST
ದಾವಣಗೆರೆ: ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಲಭ್ಯವಿರುವ ಸಂಪನ್ಮೂಲದಿಂದ ವಿಶ್ವವಿದ್ಯಾಲಯದ
ಅಭಿವೃದ್ಧಿ ಕಾರ್ಯದಲ್ಲಿ ಸರ್ವರೂ ಕೊಡುಗೆ ನೀಡಬೇಕು ಎಂದು ವೆಸ್ಟ್ಇಂಡೀಸ್ನ ಕಿಂಗ್ ಸ್ಟನ್ಜಮೈಕಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪಾಧ್ಯಕ್ಷ ಪ್ರೊ| ಎ.ಬಿ. ಕುಲಕರ್ಣಿ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ಜ್ಞಾನ ಸೌಧ ಸಭಾ ವೇದಿಕೆಯಲ್ಲಿ ಗುರುವಾರ ವಿಶ್ವವಿದ್ಯಾಲಯದ
ಹತ್ತನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ದಶಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಾವಣಗೆರೆ ವಿವಿ ಅಭಿವೃದ್ಧಿ ನಿಜಕ್ಕೂ ಗಮನಾರ್ಹವಾಗಿದೆ. ಈ ವಿವಿ ಇದುವರೆಗಿನ ಪ್ರಗತಿಗೆ ಕಾರಣೀ ಭೂತರಾದವರನ್ನು ಸ್ಮರಿಸಲೇಬೇಕು. ಭವಿಷ್ಯದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯ ದೇಶದ ಮೊದಲ ಹತ್ತು ವಿಶ್ವವಿದ್ಯಾಲಯಗಳಲ್ಲಿ ಒಂದಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾಲಯ ಸಾಗಿಬಂದ ದಾರಿ ಕುರಿತು ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ. ವಿವಿ ಸ್ಥಾಪನೆಗೆ
ಕಾರಣರಾದವರಿಂದ ಹಿಡಿದು ಸಂಪನ್ಮೂಲ, ಸ್ಥಳ ಹಾಗೂ ಹಣದ ನೆರವು ನೀಡಿದವರು ಸೇರಿ ಎಲ್ಲರ ಕೊಡುಗೆ ಗಣನೀಯವಾಗಿದೆ. ಹೀಗಾಗಿಯೇ ಈ ವಿವಿ ಕಡಿಮೆ ಅವಧಿಯಲ್ಲಿಯೇ ಇಷ್ಟೊಂದು ಪ್ರಗತಿ ಸಾಧಿಸಿದೆ. ಯಾವುದೇ ವಿವಿಯ ಅಭಿವೃದ್ಧಿ ಕುಲಪತಿ ಒಬ್ಬರಿಂದಲೇ ಅಸಾಧ್ಯ. ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು, ದಾನಿಗಳು, ಸರ್ಕಾರ ಹೀಗೆ ಸರ್ವರ ಕೊಡುಗೆಯಿಂದ ಬೆಳವಣಿಗೆ ಆಗಲಿದೆ ಎಂದು ಹೇಳಿದರು.
ಯಾವುದೇ ವ್ಯಕ್ತಿ ಹೊಸ ಹುದ್ದೆ ಇಲ್ಲವೇ, ಸ್ಥಾನ ಅಲಂಕರಿಸಿದಾಗ ತಾನು ಏನಾದರೂ ಸಮಾಜಕ್ಕೆ ಕೊಡುಗೆ ನೀಡುವ ಬಗ್ಗೆ ಆಲೋಚಿಸಬೇಕು. ಸಿಕ್ಕ ಅವಕಾಶದಿಂದ ಲಭ್ಯವಿರುವ ಸೌಲಭ್ಯ ಬಳಸಿಕೊಂಡು ಪ್ರಗತಿಗೆ ಸಿದ್ಧರಾಗಬೇಕು. ಬೇಕಿರುವ ಸೌಲಭ್ಯ ಹೇಗೆ ಪಡೆಯಬೇಕು ಎಂಬುದಾಗಿ ಯೋಚಿಸಬೇಕು. ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುವಂತಾಗಬಾರದು. ಅಭಿವೃದ್ಧಿ ನಮ್ಮ ಕೆಲಸದ ಭಾಗ ಎಂಬುದಾಗಿ ಪರಿಗಣಿಸಿ, ಜವಾಬ್ದಾರಿ, ಬದ್ಧತೆಯಿಂದ
ಕಾರ್ಯೋನ್ಮುಖರಾಗಬೇಕು. ಏಕೆಂದರೆ ವಿವಿ ಕುಲಪತಿಗಳಿಂದ ಸಮಾಜ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಉಪಯೋಗ ವಾಗುವಂತಹ ಸಂಗತಿ ಬಗ್ಗೆ ನಿರಂತರವಾಗಿ ಆಲೋಚಿಸಿ, ಅದನ್ನು ಕಾರ್ಯಗತಗೊಳಿಸಬೇಕು ಎಂದರಲ್ಲದೇ, ತಾವು ಈ ಹಿಂದೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರೋಫೆಸರ್ ಹಾಗೂ
ಡೀನ್ ಆಗಿದ್ದಾಗಿನಿಂದ ಹಿಡಿದು ವಿದೇಶಕ್ಕೆ ತೆರಳಿ ಅಲ್ಲಿ ಯಶಸ್ಸು ಗಳಿಸಿದ ಅನುಭವವನ್ನು ಹಂಚಿಕೊಂಡರು. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುವ ಜತೆಗೆ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯಲ್ಲಿ ಪರಿಣಿತರಾಗಬೇಕು.
ಆಗ ಪದವಿ ಜತೆಗೆ ಪಡೆಯುವ ಮತ್ತೂಂದು ಕೋರ್ಸ್ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ದಾವಣಗೆರೆಯಲ್ಲಿರುವ ದೃಶ್ಯಕಲಾ ಕಾಲೇಜಿನ ಆವರಣದಲ್ಲಿ ಸಾಕಷ್ಟು ಜಾಗವಿದ್ದು, ವಿದ್ಯಾರ್ಥಿಗಳು ಯುಪಿಎಸ್ಸಿ, ಕೆಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳ್ಳಲು ತರಬೇತಿ ಕೇಂದ್ರ ತೆರೆಯಲು
ಕ್ರಮ ವಹಿಸುವಂತೆ ವಿವಿ ಕುಲಪತಿಗೆ ಸಲಹೆ ನೀಡಿದರು. ದಾವಣಗೆರೆ ವಿಶ್ವ ವಿದ್ಯಾಲಯ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ದಾವಿವಿ ಹಣಕಾಸು ಅಧಿಕಾರಿ ಜೆ.ಕೆ. ರಾಜು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್