ಅಭ್ಯರ್ಥಿಗಳ ಬೆಂಬಲಿಗರನ್ನು ಹೊರಹಾಕಿದ ಪೊಲೀಸರು


Team Udayavani, Sep 1, 2018, 10:19 AM IST

gul-2.jpg

ಚಿಂಚೋಳಿ: ಸ್ಥಳೀಯ ಪುರಸಭೆ 23 ವಾರ್ಡ್‌ಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ. 70.44 ರಷ್ಟು ಮತದಾನವಾಗಿದೆ. ಚುನಾವಣೆಗೆ ಒಟ್ಟು 81 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 14276 ಮತದಾರರಿದ್ದಾರೆ. ಇದರಲ್ಲಿ ಪುರಷರು 7006, ಮಹಿಳೆಯರು 7269, ಇತರೆ ಒಬ್ಬರಿದ್ದಾರೆ.

ಶುಕ್ರವಾರ ಒಟ್ಟು 10056 ಜನರು ಮತ ಚಲಾಯಿಸಿದ್ದಾರೆ. ಇದರಲ್ಲಿ ಪುರುಷರು 7006, ಮಹಿಳೆಯರು 7269 ಹಾಗೂ ಇತರೆ ಒಬ್ಬರ ಮತ ಚಲಾಯಿಸಿದ್ದಾರೆ. ಬಡಿದರ್ಗಾ, ಜ್ಯೋಶಿ ಗಲ್ಲಿ, ಸುಂದರ ನಗರ, ಹರಿಜನವಾಡ, ಮೋಮಿನಪುರ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದರೂ ಯಾವುದೇ ರೀತಿಯ ಅಹಿತಕರ ಘಟನೆಗಳು ಘಟಿಸಲಿಲ್ಲ.

ಬಡಿದರ್ಗಾ, ಜ್ಯೋಶಿಗಲ್ಲಿ, ಹರಿಜನವಾಡ, ಮೋಮಿನಪುರ, ಗಡಿಏರಿಯಾ, ಚಂದಾಪುರ, ಗಂಗುನಾಯಕ ತಾಂಡಾ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾರರು ಮತ ಚಲಾಯಿಸಲು ಆಗಮಿಸಿದ್ದರು. ಚಂದಾಪುರ ಬಸವ ನಗರ ವಾರ್ಡ್‌ನಲ್ಲಿ ಹೆಚ್ಚಾಗಿ ಮಹಿಳೆಯರು ಸಾಲಾಗಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು.

ಬಡಿದರ್ಗಾ ವಾರ್ಡ್‌ 2ರಲ್ಲಿ ಬೆಳಗ್ಗೆಯಿಂದಲೇ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ ತಮಗೆ ಸಂಬಂಧಪಟವರನ್ನು ಮತದಾನ ಕೇಂದ್ರಕ್ಕೆ ವಾಹನಗಳ ಮೂಲಕ ಕರೆತಂದರು. ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಆಟೋಗಳಲ್ಲಿ ಮತದಾರರನ್ನು ಕರೆ ತಂದು ಮತದಾನ ಕೇಂದ್ರದೊಳಗೆ ಕರೆದ್ಯೊಯುತ್ತಿದ್ದರು. ಪೊಲೀಸರು ಅವರನ್ನು ತಡೆಹಿಡಿದು ಹೊರಗೆ ಕಳಿಸಿದರು.

ಚಂದಾಪುರ ವಾರ್ಡ್‌ ನಂ.16 ಬಸವ ನಗರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರನ್ನು ಕರೆ ತಂದು ಮತದಾನ ಮಾಡಿಸುತ್ತಿರುವುದರಿಂದ ಕೆಲ ಸಮಯ ಭಾರಿ ಗೊಂದಲಮಯ ವಾತಾವರಣ ಉಂಟಾಯಿತು. ಆಗಾಗ ಪೊಲೀಸರು ಆಗಮಿಸಿ ಜನರನ್ನು ಹೊರ ಹಾಕುತ್ತಿದ್ದರು. ಹರಿಜನವಾಡ ವಾರ್ಡ್‌ 7ಮತ್ತು ಸುಂದರ ನಗರ ವಾರ್ಡ್‌ ನಂ.8ರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಿದರು.

ವಾರ್ಡ್‌ ನಂ.5 ಮತ್ತು 6ಕ್ಕೆ ಸ್ಪರ್ಧಿಸಿದ ಕಾಂಗ್ರೆಸ್‌, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿಯಿಂದ ತಮ್ಮ ಬೆಂಬಲಿಗರನ್ನು ಆಟೋ ಮತ್ತು ಜೀಪುಗಳಲ್ಲಿ ಕರೆ ತರುತ್ತಿದ್ದುದರಿಂದ ಗೊಂದಲಮಯ ವಾತಾವರಣ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಕೇಂದ್ರದಿಂದ ಹೊರ ಹಾಕಿದರು. ಪುರಸಭೆ ಚುನಾವಣೆಯಲ್ಲಿ ಸಣ್ಣಪುಟ್ಟ ಜಗಳ ನಡೆದರೂ ಎಲ್ಲ ವಾರ್ಡ್‌ಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಪಂಡಿತ ಬಿರಾದಾರ ತಿಳಿಸಿದ್ದಾರೆ.

23 ವಾರ್ಡ್‌ಗಳ ಮತದಾನ ವಿವರ: ವಾರ್ಡ್‌ ನಂ.1 ಭೋಗಾಲಿಂಗದಳ್ಳಿ ಆಶ್ರಯ ಕಾಲೋನಿ ಶೇ. 79.07, ವಾರ್ಡ್‌ ನಂ.2 ಬಡಿದರ್ಗಾ ಶೇ. 69.85, ವಾರ್ಡ್‌ ನಂ. 3 ಶೇ. 72.13, ವಾರ್ಡ್‌ ನಂ. 4 ಕೋಮಟಿಗಲ್ಲಿ ಶೇ. 64.25, ವಾರ್ಡ್‌ ನಂ. 5 ಶೇ. 64.97, ವಾರ್ಡ್‌ ನಂ.6 ಗಡಿ ಏರಿಯಾ ಶೇ. 70.69, ವಾರ್ಡ್‌ ನಂ. 7 ಹರಿಜನವಾಡ 77.85, ವಾರ್ಡ್‌ ನಂ. 8 ಸುಂದರ ನಗರ ಶೇ. 80.64, ವಾರ್ಡ್‌ ನಂ.9 ಮೋಮಿನಪುರ ಶೇ. 66.95, ವಾರ್ಡ್‌ ನಂ.10 ಕಲ್ಯಾಣಗಡ್ಡಿ ಶೇ. 70.73, ವಾರ್ಡ್‌ ನಂ.11 ಧನಗರ ಗಲ್ಲಿ ಶೇ. 73.05, ವಾರ್ಡ್‌ ನಂ.12 ಜ್ಯೋಶಿಗಲ್ಲಿ ಶೇ. 69.19, ವಾರ್ಡ್‌ ನಂ.13 ಬೈವಾಡ ಶೇ. 72.70, ವಾರ್ಡ್‌ ನಂ. 14 ಹಿರೇಅಗಸಿ ಶೇ. 71.29, ವಾರ್ಡ್‌ ನಂ.15 ಪಟೇಲ್‌ ಕಾಲೋನಿ ಚಂದಾಪುರ ಶೇ. 64.66, ವಾರ್ಡ್‌ ನಂ.16 ಬಸವನಗರ ಚಂದಾಪುರ ಶೇ. 63.65, ವಾರ್ಡ್‌ ನಂ.17ಆಶ್ರಯ ಕಾಲೋನಿ ಚಂದಾಪುರ ಶೇ. 67.77, ವಾರ್ಡ್‌ ನಂ.18 ದರ್ಗಾ ಏರಿಯಾ ಚಂದಾಪುರ ಶೇ. 68.12, ವಾರ್ಡ್‌ ನಂ. 19 ಮದೀನಾ ಮಸೀದ ಏರಿಯಾ ಚಂದಾಪುರ ಶೇ. 72.50, ವಾರ್ಡ್‌ ನಂ. 20 ಭವಾನಿ ಮಂದಿರ ಚಂದಾಪುರ ಶೇ. 75.99, ವಾರ್ಡ್‌ ನಂ.21 ಗಂಗು ನಾಯಕ ತಾಂಡಾ ಚಂದಾಪುರ ಶೇ. 81.85, ವಾರ್ಡ್‌ ನಂ.22 ಗಣೇಶ ಮಂದಿರ ಚಂದಾಪುರ ಶೇ. 67.49, ವಾರ್ಡ್‌ ನಂ.23 ಶ್ರೀರಾಮ ನಗರ ಚಂದಾಪುರ ಶೇ. 63.43 ಮತದಾನವಾಗಿದೆ. 

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.