ಅಭ್ಯರ್ಥಿಗಳ ಬೆಂಬಲಿಗರನ್ನು ಹೊರಹಾಕಿದ ಪೊಲೀಸರು


Team Udayavani, Sep 1, 2018, 10:19 AM IST

gul-2.jpg

ಚಿಂಚೋಳಿ: ಸ್ಥಳೀಯ ಪುರಸಭೆ 23 ವಾರ್ಡ್‌ಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ. 70.44 ರಷ್ಟು ಮತದಾನವಾಗಿದೆ. ಚುನಾವಣೆಗೆ ಒಟ್ಟು 81 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 14276 ಮತದಾರರಿದ್ದಾರೆ. ಇದರಲ್ಲಿ ಪುರಷರು 7006, ಮಹಿಳೆಯರು 7269, ಇತರೆ ಒಬ್ಬರಿದ್ದಾರೆ.

ಶುಕ್ರವಾರ ಒಟ್ಟು 10056 ಜನರು ಮತ ಚಲಾಯಿಸಿದ್ದಾರೆ. ಇದರಲ್ಲಿ ಪುರುಷರು 7006, ಮಹಿಳೆಯರು 7269 ಹಾಗೂ ಇತರೆ ಒಬ್ಬರ ಮತ ಚಲಾಯಿಸಿದ್ದಾರೆ. ಬಡಿದರ್ಗಾ, ಜ್ಯೋಶಿ ಗಲ್ಲಿ, ಸುಂದರ ನಗರ, ಹರಿಜನವಾಡ, ಮೋಮಿನಪುರ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದರೂ ಯಾವುದೇ ರೀತಿಯ ಅಹಿತಕರ ಘಟನೆಗಳು ಘಟಿಸಲಿಲ್ಲ.

ಬಡಿದರ್ಗಾ, ಜ್ಯೋಶಿಗಲ್ಲಿ, ಹರಿಜನವಾಡ, ಮೋಮಿನಪುರ, ಗಡಿಏರಿಯಾ, ಚಂದಾಪುರ, ಗಂಗುನಾಯಕ ತಾಂಡಾ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾರರು ಮತ ಚಲಾಯಿಸಲು ಆಗಮಿಸಿದ್ದರು. ಚಂದಾಪುರ ಬಸವ ನಗರ ವಾರ್ಡ್‌ನಲ್ಲಿ ಹೆಚ್ಚಾಗಿ ಮಹಿಳೆಯರು ಸಾಲಾಗಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು.

ಬಡಿದರ್ಗಾ ವಾರ್ಡ್‌ 2ರಲ್ಲಿ ಬೆಳಗ್ಗೆಯಿಂದಲೇ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ ತಮಗೆ ಸಂಬಂಧಪಟವರನ್ನು ಮತದಾನ ಕೇಂದ್ರಕ್ಕೆ ವಾಹನಗಳ ಮೂಲಕ ಕರೆತಂದರು. ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಆಟೋಗಳಲ್ಲಿ ಮತದಾರರನ್ನು ಕರೆ ತಂದು ಮತದಾನ ಕೇಂದ್ರದೊಳಗೆ ಕರೆದ್ಯೊಯುತ್ತಿದ್ದರು. ಪೊಲೀಸರು ಅವರನ್ನು ತಡೆಹಿಡಿದು ಹೊರಗೆ ಕಳಿಸಿದರು.

ಚಂದಾಪುರ ವಾರ್ಡ್‌ ನಂ.16 ಬಸವ ನಗರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರನ್ನು ಕರೆ ತಂದು ಮತದಾನ ಮಾಡಿಸುತ್ತಿರುವುದರಿಂದ ಕೆಲ ಸಮಯ ಭಾರಿ ಗೊಂದಲಮಯ ವಾತಾವರಣ ಉಂಟಾಯಿತು. ಆಗಾಗ ಪೊಲೀಸರು ಆಗಮಿಸಿ ಜನರನ್ನು ಹೊರ ಹಾಕುತ್ತಿದ್ದರು. ಹರಿಜನವಾಡ ವಾರ್ಡ್‌ 7ಮತ್ತು ಸುಂದರ ನಗರ ವಾರ್ಡ್‌ ನಂ.8ರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಿದರು.

ವಾರ್ಡ್‌ ನಂ.5 ಮತ್ತು 6ಕ್ಕೆ ಸ್ಪರ್ಧಿಸಿದ ಕಾಂಗ್ರೆಸ್‌, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿಯಿಂದ ತಮ್ಮ ಬೆಂಬಲಿಗರನ್ನು ಆಟೋ ಮತ್ತು ಜೀಪುಗಳಲ್ಲಿ ಕರೆ ತರುತ್ತಿದ್ದುದರಿಂದ ಗೊಂದಲಮಯ ವಾತಾವರಣ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಕೇಂದ್ರದಿಂದ ಹೊರ ಹಾಕಿದರು. ಪುರಸಭೆ ಚುನಾವಣೆಯಲ್ಲಿ ಸಣ್ಣಪುಟ್ಟ ಜಗಳ ನಡೆದರೂ ಎಲ್ಲ ವಾರ್ಡ್‌ಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಪಂಡಿತ ಬಿರಾದಾರ ತಿಳಿಸಿದ್ದಾರೆ.

23 ವಾರ್ಡ್‌ಗಳ ಮತದಾನ ವಿವರ: ವಾರ್ಡ್‌ ನಂ.1 ಭೋಗಾಲಿಂಗದಳ್ಳಿ ಆಶ್ರಯ ಕಾಲೋನಿ ಶೇ. 79.07, ವಾರ್ಡ್‌ ನಂ.2 ಬಡಿದರ್ಗಾ ಶೇ. 69.85, ವಾರ್ಡ್‌ ನಂ. 3 ಶೇ. 72.13, ವಾರ್ಡ್‌ ನಂ. 4 ಕೋಮಟಿಗಲ್ಲಿ ಶೇ. 64.25, ವಾರ್ಡ್‌ ನಂ. 5 ಶೇ. 64.97, ವಾರ್ಡ್‌ ನಂ.6 ಗಡಿ ಏರಿಯಾ ಶೇ. 70.69, ವಾರ್ಡ್‌ ನಂ. 7 ಹರಿಜನವಾಡ 77.85, ವಾರ್ಡ್‌ ನಂ. 8 ಸುಂದರ ನಗರ ಶೇ. 80.64, ವಾರ್ಡ್‌ ನಂ.9 ಮೋಮಿನಪುರ ಶೇ. 66.95, ವಾರ್ಡ್‌ ನಂ.10 ಕಲ್ಯಾಣಗಡ್ಡಿ ಶೇ. 70.73, ವಾರ್ಡ್‌ ನಂ.11 ಧನಗರ ಗಲ್ಲಿ ಶೇ. 73.05, ವಾರ್ಡ್‌ ನಂ.12 ಜ್ಯೋಶಿಗಲ್ಲಿ ಶೇ. 69.19, ವಾರ್ಡ್‌ ನಂ.13 ಬೈವಾಡ ಶೇ. 72.70, ವಾರ್ಡ್‌ ನಂ. 14 ಹಿರೇಅಗಸಿ ಶೇ. 71.29, ವಾರ್ಡ್‌ ನಂ.15 ಪಟೇಲ್‌ ಕಾಲೋನಿ ಚಂದಾಪುರ ಶೇ. 64.66, ವಾರ್ಡ್‌ ನಂ.16 ಬಸವನಗರ ಚಂದಾಪುರ ಶೇ. 63.65, ವಾರ್ಡ್‌ ನಂ.17ಆಶ್ರಯ ಕಾಲೋನಿ ಚಂದಾಪುರ ಶೇ. 67.77, ವಾರ್ಡ್‌ ನಂ.18 ದರ್ಗಾ ಏರಿಯಾ ಚಂದಾಪುರ ಶೇ. 68.12, ವಾರ್ಡ್‌ ನಂ. 19 ಮದೀನಾ ಮಸೀದ ಏರಿಯಾ ಚಂದಾಪುರ ಶೇ. 72.50, ವಾರ್ಡ್‌ ನಂ. 20 ಭವಾನಿ ಮಂದಿರ ಚಂದಾಪುರ ಶೇ. 75.99, ವಾರ್ಡ್‌ ನಂ.21 ಗಂಗು ನಾಯಕ ತಾಂಡಾ ಚಂದಾಪುರ ಶೇ. 81.85, ವಾರ್ಡ್‌ ನಂ.22 ಗಣೇಶ ಮಂದಿರ ಚಂದಾಪುರ ಶೇ. 67.49, ವಾರ್ಡ್‌ ನಂ.23 ಶ್ರೀರಾಮ ನಗರ ಚಂದಾಪುರ ಶೇ. 63.43 ಮತದಾನವಾಗಿದೆ. 

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.