ಶಿಕ್ಷಣ ಖಾತೆ ಸಚಿವ ಸರಾ ಮಹೇಶ-ಬೀದರ ಸಂಸದ ಭಗತ್ಸಿಂಗ್ ಖೂಬಾ!
Team Udayavani, Sep 15, 2018, 9:49 AM IST
ಮಾದನ ಹಿಪ್ಪರಗಿ: ರಾಜ್ಯದ ಶಿಕ್ಷಣ ಖಾತೆ ಸಚಿವ ಸ.ರಾ. ಮಹೇಶ ಮತ್ತು ಬೀದರ ಸಂಸದ ಭಗತ್ಸಿಂಗ್ ಖೂಬಾ!
ಹೌದು, ಮಾದನ ಹಿಪ್ಪರಗಿ ಹೊಸಬಡಾವಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣೆಯೊಂದಲ್ಲಿರುವ ಫಲಕದಲ್ಲಿರುವ ಮಾಹಿತಿ ಇದು.
ಮಕ್ಕಳ ಜ್ಞಾನಕ್ಕಾಗಿ ಶಾಲೆ ಕೋಣೆಯೊಂದರ ಫಲಕದಲ್ಲಿ ಜನಪ್ರತಿನಿಧಿಗಳು ಮತ್ತು ಅವರ ಹುದ್ದೆ ಬರೆಸಲಾಗಿದೆ.
ಆದರೆ ಅದರಲ್ಲಿ ಎರಡೂಮೂರು ತಪ್ಪುಗಳು ಇದ್ದರು ಸಹ ಶಿಕ್ಷಕರು ಗಮನಿಸಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಪ್ರಧಾಮಂತ್ರಿಗಳು ನರೇಂದ್ರ ಮೋದಿ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಮಾನವ ಸಂಪನ್ಮೂಲ ಮಂತ್ರಿಗಳು ಎಂದು ಬರೆಯಲಾಗಿದೆ. ಆದರೆ ಸಚಿವರ ಹೆಸರನ್ನು ಮಾತ್ರ ಬರೆಯದೆ ಖಾಲಿ ಬಿಡಲಾಗಿದೆ. ರಾಜ್ಯಪಾಲರ ಎಂಬಲ್ಲಿ ವಿ.ಆರ್. ವಾಲಾ, ಮುಖ್ಯಮಂತ್ರಿಗಳು ಎಂಬಲ್ಲಿ ಕುಮಾರಸ್ವಾಮಿ, ಶಿಕ್ಷಣ ಸಚಿವರು ಎಂಬಲ್ಲಿ ಸ.ರಾ. ಮಹೇಶ ಮತ್ತು ಲೋಕಸಭಾ ಸದಸ್ಯರು ಎಂಬಲ್ಲಿ ಭಗತ್ಸಿಂಗ್ ಖೂಬಾ ಎಂದು ಬರೆಯಲಾಗಿದೆ.
ಶಾಸಕರ ಹೆಸರನ್ನು ಸುಭಾಷ ಗುತ್ತೇದಾರ ಮತ್ತು ಜಿಪಂ ಸದಸ್ಯರ ಹೆಸರನ್ನು ಗುರುಶಾಂತ ಪಾಟೀಲ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಜಿಪಂ ಅಧ್ಯಕ್ಷರ ಹೆಸರನ್ನು ಸುವರ್ಣಾ ಮಾಲಾಜಿ ಎಂದು ಬರೆಯುವ ಬದಲು ಸೂವರ್ಣಾ ಮಾಲಾಜಿ ಎಂದು ಬರೆಯಲಾಗಿದೆ.
ರಾಜ್ಯದ ಶಿಕ್ಷಣ ಖಾತೆ ಸಚಿವರ ಹೆಸರು ಎನ್. ಮಹೇಶ ಮತ್ತು ಬೀದರ ಲೋಕಸಭಾ ಸದಸ್ಯರ ಹೆಸರು ಭಗವಂತ ಖೂಬಾ ಬರೆಯಬೇಕಾಗಿತ್ತು. ಆದರೆ ನೂರಾರು ಮಕ್ಕಳ ಮನಸ್ಸಿನಲ್ಲಿ ಸ.ರಾ. ಮಹೇಶ ಮತ್ತು ಭಗತ್ಸಿಂಗ್ ಖೂಬಾ ಎಂದೇ ಅಚ್ಚೊತ್ತಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ