ಪಿಕಾರ್ಡ್ ಬ್ಯಾಂಕ್ಗೆ 8 ಕೋಟಿ ಸಾಲದ ಹೊರೆ
Team Udayavani, Sep 24, 2018, 10:31 AM IST
ಚಿಂಚೋಳಿ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಾಸ್ಕಾರ್ಡ್ ಬ್ಯಾಂಕಿನಿಂದ ಪಡೆದುಕೊಂಡ ವಿವಿಧ ಯೋಜನೆ ಅಡಿಯಲ್ಲಿ 820.09 ಲಕ್ಷ ರೂ. ಸಾಲದ ಹೊರ ಬಾಕಿ ಇದ್ದು, ಬ್ಯಾಂಕಿಗೆ ಸಾಲಗಾರರ ಸದಸ್ಯರಿಂದ ಬರಬೇಕಾದ ಸಾಲದ ಅಸಲು 335.42 ಲಕ್ಷ ರೂ. ಇದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ ಠಾಕೂರ ತಿಳಿಸಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ನಡೆದ 2017-18ನೇ ಸಾಲಿನ 52ನೇ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ನಲ್ಲಿ 10,984 ಸದಸ್ಯರು ಇದ್ದು, ಅದರಲ್ಲಿ ಪರಿಶಿಷ್ಟ ಜಾತಿಯವರು 1240 ಇದ್ದು, ಶೇರು ಬಂಡವಾಳ 64.95ಲಕ್ಷ ರೂ.ಇದೆ. ಬ್ಯಾಂಕಿನ ವಸೂಲಿ ಮತ್ತು ಬಾಕಿ 274.33 ಲಕ್ಷ ರೂ. ಇದ್ದು ಇದರಲ್ಲಿ 108.76ಲಕ್ಷ ರೂ. ವಸೂಲಿ ಆಗಿದೆ. ಬಾಕಿ 167.57ಲಕ್ಷ ರೂ.ಗಳನ್ನು ಹೊಸ ಸದಸ್ಯರಿಗೆ ಸಾಲ ಹಂಚಿಕೆ
ಅರ್ಹತೆ ಪಡೆದುಕೊಳ್ಳುವುದಕ್ಕಾಗಿ ಮರುಪಾವತಿ ಆಗಬೇಕಾಗಿದೆ. ಸಾಲ ವಸೂಲಾತಿ ಶೇ. 38.92 ರಷ್ಟು ಆಗಿದೆ ಎಂದು ತಿಳಿಸಿದರು.
ನಿರ್ದೇಶಕ ರಮೇಶ ಯಾಕಾಪುರ ಮಾತನಾಡಿ, ತಾಲೂಕನ್ನು ಪ್ರಸಕ್ತ ಸಾಲಿನಲ್ಲಿ ಸರಕಾರ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಸಾಲ ವಸೂಲಾತಿ ಮತ್ತು ಮರು ಪಾವತಿ ಆಗಿಲ್ಲ. ರಿಯಾಯ್ತಿ ಕೊಡಬೇಕಾಗಿದೆ. ಸಾಲಗಾರರಿಗೆ ಬ್ಯಾಂಕ್ ವತಿಯಿಂದ ಸಾಲ ಮರುಪಾವತಿಗಾಗಿ ಯಾವುದೇ ನೋಟಿಸ್ ಜಾರಿ ಗೊಳಿಸಬಾರದು. ಈ ಕುರಿತು ಸರಕಾರದ ಆದೇಶವಿದೆ ಎಂದು ಹೇಳಿದರು.
ಪಿಕಾರ್ಡ್ ಬ್ಯಾಂಕ್ ಕಾರ್ಯದರ್ಶಿ ನಾಗಣ್ಣ ಎಸ್. ಯಲೆ ಮಾತನಾಡಿ, ಬ್ಯಾಂಕ್ ಕಳೆದ ಮೂರು ವರ್ಷಗಳಿಂದ ನಷ್ಟದಲ್ಲಿದೆ ಎಂದರು. ಆಗ ಮಾಜಿ ನಿರ್ದೇಶಕ ಭೀಮರಾವ್ ಮರಾಠ ಮಾತನಾಡಿ, ಹಳೆ ಪಿಕಾರ್ಡ್ ಬ್ಯಾಂಕ್ ಶಿಥಿಲಾವಸ್ಥೆಯಲ್ಲಿದೆ. ಅದನ್ನು ಮಾರಾಟ ಮಾಡಿದರೆ ಬ್ಯಾಂಕಿಗೆ ಲಾಭ ಆಗುತ್ತದೆ ಎಂದು ಸಲಹೆ ನೀಡಿದರು. ಆಗ ಸದಸ್ಯರು ಬ್ಯಾಂಕಿನ ಜಾಗವನ್ನು ಕೆಲವರು ಕಬಳಿಕೆ ಮಾಡಿದ್ದಾರೆ. ಪುರಸಭೆಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಿ ಎಂದರು.
ಕಾರ್ಯದರ್ಶಿ ನಾಗಣ್ಣ,ಎಸ್. ಯಲೆ ಮಾತನಾಡಿ, ಬ್ಯಾಂಕಿನ ಖರ್ಚು, ಲಾಭ ಮತ್ತು ಹಾನಿ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಬಸವರಾಜ ಕೆರೋಳಿ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ನಿರ್ದೇಶಕರಾದ ರಮೇಶ ಯಾಕಾಪುರ, ಜರಣಪ್ಪ ಚಿಂಚೋಳಿ, ಜಗನ್ನಾಥ ಹಲಚೇರಿ, ಕೋಮಲಾಬಾಯಿ, ಪಂಚಾಕ್ಷರಿ ಸ್ವಾಮಿ, ಬಾಬುರಾವ್ ಬೋಯಿ, ಮಹಾದೇವ ರಟಕಲ್, ಲಕ್ಷ್ಮಣ ನಾಯಕ, ಮಹಾದೇವಿ ಇದ್ದರು. ಚಂದ್ರಕಾಂತ ರಾಠೊಡ ಸ್ವಾಗತಿಸಿದರು, ರಾಜಕುಮಾರ ಕಟ್ಟಿಮನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ