ಸಾಲ-ಸೌಲಭ್ಯ ರೈತರ ಖಾತೆಗೆ ಜಮಾ


Team Udayavani, Sep 25, 2018, 11:14 AM IST

gul-6.jpg

ಕಲಬುರಗಿ: ಶೋಷಣೆ ತಪ್ಪಿಸಲು ನೂರಕ್ಕೆ ನೂರು ಪ್ರತಿಶತ ಎಲ್ಲ ಸಾಲ ಸೌಲಭ್ಯವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ ಅಧ್ಯಕ್ಷ ಬಸವರಾಜ ಎಸ್‌. ವಾಲಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಬ್ಯಾಂಕ್‌ನ 92ನೇ ವಾರ್ಷಿಕ ಸಭೆಯಲ್ಲಿ ಕಳೆದ ಸಾಲಿನ ವಾರ್ಷಿಕ ಮಹಾಸಭೆ ನಡಾವಳಿ ಅಂಗೀಕರಿಸಲಾಯಿತು. ಅಲ್ಲದೇ ಪ್ರಸಕ್ತ 2018-19ನೇ ಸಾಲಿನ ಅಂದಾಜು ಆಯವ್ಯಯಕ್ಕೆ ಅನುಮೋದನೆ ನೀಡಲಾಯಿತು. ಅಧ್ಯಕ್ಷ ವಹಿಸಿದ್ದ ಬ್ಯಾಂಕ್‌ ಅಧ್ಯಕ್ಷ ವಾಲಿ ಮಾತನಾಡಿ, ರೈತರ ಖಾತೆಗೆ ನೇರವಾಗಿ ಸಾಲ ಸೌಲಭ್ಯ ಜಮಾ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಯಾವೊಬ್ಬ ರೈತರು ಖಾತೆ ಮೂಲಕವೇ ವ್ಯವಹಾರ ಮಾಡಬೇಕು. ಕಾರ್ಯದರ್ಶಿಗಳ ಯಾವುದೇ ಒತ್ತಡಕ್ಕೆ ಒಳಗಾಗದೇ ಖಾತೆಯಿಂದಲೇ ಎಲ್ಲವನ್ನು ನಿಭಾಯಿಸಬೇಕು. ಒಂದು ವೇಳೆ ಕಾರ್ಯದರ್ಶಿ ಸಾಲ ವಿತರಣೆ ಲೋಪ ಎಸಗಿದ್ದರೆ ಸೂಕ್ತ ದಾಖಲಾತಿಗಳೊಂದಿಗೆ ಸಹಕಾರಿ ಸಂಘಗಳ ಉಪನಿಬಂಧಕರಿಗೆ ದೂರು ನೀಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಸದ್ಯಕ್ಕಿಲ್ಲ ಹೊಸ ಸಾಲ: ಕಳೆದ ವರ್ಷದ ಅಂದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿರುವ 50 ಸಾವಿರ ರೂ. ಮನ್ನಾದ ಹಣ ಇನ್ನೂ ಬರಬೇಕಾಗಿದೆ. ಅದಲ್ಲದೇ ಪ್ರಸ್ತುತ ಸರ್ಕಾರದಲ್ಲಿ ಘೋಷಣೆಯಾಗಿರುವ 2 ಲಕ್ಷ ರೂ. ಸಾಲ ಮನ್ನಾ ಕುರಿತು ಸ್ಪಷ್ಟ ಹಾಗೂ ಅಂತಿಮ ಆದೇಶ ಬಂದಿಲ್ಲ. ಹೀಗಾಗಿ ಹೊಸ ಬೆಳೆ ಸಾಲ ವಿತರಣೆ ಸದ್ಯಕ್ಕಿಲ್ಲ ಎಂದು ಪ್ರಕಟಿಸಿದರು.

ಕೆಲವು ಸಂಕಷ್ಟಗಳ ನಡುವೆ ಬ್ಯಾಂಕ್‌ ಆಡಳಿತ ನಿಭಾಯಿಸಿ ಕಳೆದ ಮಾರ್ಚ್‌ 31ಕ್ಕೆ ಕೇವಲ 79 ಲಕ್ಷ ಕೋಟಿ ರೂ. ಲಾಭ ತರಲಾಗಿದೆ. ಮುಂದಿನ ದಿನಗಳಲ್ಲಿ ಎಟಿಎಂ, ಎಸ್‌ಎಂಎಸ್‌ ಸೇವೆ ಮತ್ತಷ್ಟು ಬಲಪಡಿಸಿ ಗ್ರಾಹಕರಿಗೆ ಎನ್‌ಇಎಫ್‌ಟಿ, ಆರ್‌ಟಿಜಿಎಸ್‌ ಸೇವೆ ಕೂಡ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ವಿವರಣೆ ನೀಡಿದರು.
 
ಸಾಲ ವಿತರಣೆ ಗುರಿ: ಕಳೆದ ಸಾಲಿನಲ್ಲಿ ವಿತರಿಸಲಾದ 332 ಕೋಟಿ ರೂ. ಬೆಳೆಸಾಲವನ್ನು ಪ್ರಸಕ್ತ ಸಾಲಿನಲ್ಲಿ ಶೇ. 3ರಷ್ಟು ಹೆಚ್ಚಿಸಲು ಉದ್ದೇಶಿಸಿ 2018-19ನೇ ಸಾಲಿನಲ್ಲಿ 400 ಕೋಟಿ ರೂ. ಹೆಚ್ಚಿಸುವುದು, ಆಡಳಿತದಲ್ಲಿ ದಕ್ಷತೆ ತರುವುದು, ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ಹೊಸ ಶಾಖೆ ತೆರೆಯುವುದು ಸೇರಿದಂತೆ ಇತರ ವಿಷಯಗಳು ಚರ್ಚೆಗೆ ಬಂದವು.

ರೈತರ ಪ್ರಶ್ನೆ: ರೈತರ ಬ್ಯಾಂಕ್‌ ಎಂದು ಹೇಳುತ್ತೀರಿ. ಆದರೆ ನಿರ್ದೇಶಕರ ಬೆಂಬಲಿಗರು ಹಾಗೂ ಹಿಂಬಾಲಕರಿಗೆ ಸಾಲ-ಸೌಲಭ್ಯ ನೀಡುವಲ್ಲಿ ಮಣೆ ಹಾಕುತ್ತೀರಿ. ಸಾಲ ಮರುಪಾವತಿ ಮಾಡಿದರೆ ಹೆಚ್ಚಿಗೆ ಸಾಲ ನೀಡುವುದಿಲ್ಲ. ಹೊಂದಾಣಿಕೆ ಮಾಡಿಕೊಂಡವರಿಗೆ ಬೇಗ ಹೆಚ್ಚಿನ ಸಾಲ ನೀಡುತ್ತೀರಿ.  ಅವ್ಯವಹಾರ ಅದರಲ್ಲೂ ಗಂಭೀರ ಅಪರಾಧ ಪ್ರಕರಣ ಎಸಗಿರುವ ಕಾರ್ಯದರ್ಶಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಏಕೆ ಎಂದು ರೈತರು ಖಾರವಾಗಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಗದ್ದಲದ ವಾತಾವರಣವೇ ನಿರ್ಮಾಣಗೊಂಡಿತು. ತದನಂತರ ಆಧ್ಯಕ್ಷರು-ನಿರ್ದೇಶಕರು ಸಮಾಧಾನದಿಂದ ಉತ್ತರ ನೀಡಿದರು.

ಬ್ಯಾಂಕ್‌ ಉಪಾಧ್ಯಕ್ಷ ಶರಣಗೌಡ ಮಾಲಿಪಾಟೀಲ, ನಿರ್ದೇಶಕರಾದ ಕೇದಾರಲಿಂಗಯ್ಯ ಹಿರೇಮಠ, ಸೋಮಶೇಖರ ಗೋನಾಯಕ, ಮಲ್ಲಿಕಾರ್ಜುನ ರೆಡ್ಡಿ ಕೌಳುರ, ಶರಣಬಸಪ್ಪ ಪಾಟೀಲ ಅಷ್ಠಗಿ, ವಿಠ್ಠಲ ಯಾದವ, ಅಶೋಕ ಸಾವಳೇಶ್ವರ, ಶಂಭುರೆಡ್ಡಿ ನರಸಬೋಳ, ಗೌತಮ ವೈಜನಾಥ ಪಾಟೀಲ, ಬಾಪುಗೌಡ ಡಿ. ಪಾಟೀಲ, ಬ್ಯಾಂಕ್‌ ಸಿಇಒ ಗೋಪಾಲ ಚವ್ಹಾಣ ಇದ್ದರು.

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದೆಡೆ ಕಾಂಗ್ರೆಸ್ ಗೆದ್ದಿದೆ: ಡಾ. ಶರಣಪ್ರಕಾಶ

ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದೆಡೆ ಕಾಂಗ್ರೆಸ್ ಗೆದ್ದಿದೆ: ಡಾ. ಶರಣಪ್ರಕಾಶ

1——-saads

HKE ಚುನಾವಣೆ: ಅಧ್ಯಕ್ಷರಾಗಿ ಶಶೀಲ್ ಜಿ. ನಮೋಶಿ ಆಯ್ಕೆ

PM ಮೋದಿ ಸಮನಾದ ನಾಯಕ ಕಾಂಗ್ರೆಸ್‌ನಲ್ಲಿಲ್ಲ: ಬಿಎಸ್‌ವೈ

PM ಮೋದಿ ಸಮನಾದ ನಾಯಕ ಕಾಂಗ್ರೆಸ್‌ನಲ್ಲಿಲ್ಲ: ಬಿಎಸ್‌ವೈ

1-wewewqe

Kalaburagi; ಅರ್ಧ ಗಂಟೆ ಭಾಷಣದಲ್ಲಿ ಖರ್ಗೆ ಹೆಸರನ್ನೇ ಉಲ್ಲೇಖಿಸದ ಮೋದಿ

1-sadsadsad

Kalaburagi; ಕರ್ನಾಟಕದ ಜನತೆ ಕೋಪಗೊಂಡಿದ್ದಾರೆ, ಎಚ್ಚೆತ್ತುಕೊಂಡಿದ್ದಾರೆ:ಪ್ರಧಾನಿ ಮೋದಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.