ತಿಪ್ಪೆ ಹೆಕ್ಕಿ ದೇಗುಲ ಪತ್ತೆ ಹಚ್ಚಿದ ಯುವಕರು
Team Udayavani, Sep 25, 2018, 11:35 AM IST
ವಾಡಿ: ತಿಪ್ಪೆ ಕಸದಲ್ಲಿ ಮುಚ್ಚಿಹೋಗಿದ್ದ ಪ್ರಾಚೀನ ಕಾಲದ ದೇಗುಲವೊಂದು ಯುವಕರ ಪತ್ತೆ ಕಾರ್ಯದಿಂದ ಬೆಳಕಿಗೆ ಬಂದಿದೆ. ಕಸದಲ್ಲಿ ಹುದುಗಿದ್ದ ಶಿಲೆಯೊಂದರ ಜಾಡು ಹಿಡುದು ಉತ್ಖನನಕ್ಕೆ ಮುಂದಾದ ಯುವಕರ ತಂಡಕ್ಕೆ 12 ಕಂಬದ ದೇವಾಲಯ ಗೋಚರಿಸಿದ್ದು, ಜಿಲ್ಲೆಯ ಇತಿಹಾಸ ತಜ್ಞರ ಗಮನ ಸೆಳೆದಿದೆ.
ಚಿತ್ತಾಪುರ ತಾಲೂಕು ರಾವೂರಿನಲ್ಲಿ ದೇಗುಲ ಕಾಣಿಸಿಕೊಂಡಿದ್ದು, ಚಿತ್ತಾಪುರದ ನಾಗಾವಿ ಪರಿಸರದಲ್ಲಿ ಪತ್ತೆಯಾದ 62 ಕಂಬದ ದೇಗುಲದಂತೆ ರಾವೂರಿನ ದೇಗುಲ 48 ಕಂಬಗಳಿಂದ ಕೂಡಿದೆ ಎನ್ನಲಾಗಿದೆ. ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ. ತಿಪ್ಪೆ ಗುಂಡಿ ಸುರಂಗ ಮಾರ್ಗದಿಂದ ಒಳಹೊಕ್ಕ ಗ್ರಾಮದ ಕನಕ ನಗರದ ಯುವಕರು, ಕಲ್ಲು ಮಣ್ಣು ತೆಗೆದು ಮುಚ್ಚಿದ್ದ ಪ್ರಾಚೀನ ದೇವಸ್ಥಾನವನ್ನು ಪತ್ತೆ ಹಚ್ಚಿದರು.
ಹಾಳು ಹಂಪೆಯಂತೆ ರಾವೂರಿನ ನೆಲ ಇತಿಹಾಸ ಹೊತ್ತು ನಿಂತಿದೆ. ಈ ಹಿಂದೆ ಇದೇ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ದೇವಾಲಯಗಳು ಪತ್ತೆಯಾಗಿದ ಉದಾಹರಣೆಗಳಿವೆ. ಇನ್ನೂ ಅನೇಕ ಕಟ್ಟಡಗಳು ನೆಲದಡಿಯಲ್ಲಿ ಮುಚ್ಚಿಕೊಂಡಿವೆ. ಇಲ್ಲಿ ಮನೆಗೊಂದು ಪುರಾತನ ಬಾವಿಗಳಿದ್ದು, ನೀರಿನ ಸೆಲೆ ಹೊಂದಿ ಇಂದಿಗೂ ಅವು ಬಳಕೆಯಾಗುತ್ತಿವೆ. ಪತ್ತೆಯಾದ ದೇಗುಲಗಳ ಸಂರಕ್ಷಣೆಯಾಗದ ಕಾರಣ ಅವು ಮತ್ತೆ ತಿಪ್ಪೆಯತ್ತ ಮುಖಮಾಡಿಕೊಳ್ಳುತ್ತಿವೆ. ಇಂತಹ ಎಷ್ಟೇ ದೇಗುಲಗಳು ಬೆಳಕಿಗೆ ಬಂದರೂ ಪ್ರಾಚ್ಯವಸ್ತು ಇಲಾಖೆ ಮಾತ್ರ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಮಣ್ಣಿನಲ್ಲಿ ಸಿಕ್ಕ ಐತಿಹಾಸಿಕ ಕುರುಹುಗಳು ಪುನಃ ಮಣ್ಣಿಗೆ ಸೇರುತ್ತಿವೆ ವಿನಃ ಅವು ಅಭಿವೃದ್ಧಿ ಹೊಂದುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ರಾವೂರಿನ ನೆಲದಲ್ಲಿ ಗೋಚರಿಸುವ ದೇವಾಲಯಗಳು ಯಾವ ಕಾಲದ್ದು, ಇದರ ಚರಿತ್ರೆ ಏನು? ರಾಜರ ಕಾಲದಲ್ಲಿ ಈ ರಾವೂರ ಏನಾಗಿತ್ತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದ್ದು, ಸಂಶೋಧನೆ ಮಾಡಿ ಸತ್ಯ ಹೊರಹಾಕಬೇಕಾದ ಪುರಾತತ್ವ ಇಲಾಖೆ ಜಾಣ ಅಂಧತ್ವ ಪ್ರದರ್ಶಿಸಿದೆ. ಸದ್ಯ ಪತ್ತೆಯಾಗಿರುವ ದೇಗುಲದಲ್ಲಿ ಹಲವು ಕಂಬಗಳಿವೆ. ಇನ್ನೂ ಆಳಕ್ಕೆ ಉತನನ ನಡೆದರೆ ಇನ್ನಷ್ಟು ಕುರುಹುಗಳು ಪತ್ತೆಯಾಗಲಿವೆ ಎಂದು ಕನಕ ನಗರದ ಯುವ ಮುಖಂಡ ಜಗದೀಶ ಪೂಜಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದೆಡೆ ಕಾಂಗ್ರೆಸ್ ಗೆದ್ದಿದೆ: ಡಾ. ಶರಣಪ್ರಕಾಶ
HKE ಚುನಾವಣೆ: ಅಧ್ಯಕ್ಷರಾಗಿ ಶಶೀಲ್ ಜಿ. ನಮೋಶಿ ಆಯ್ಕೆ
PM ಮೋದಿ ಸಮನಾದ ನಾಯಕ ಕಾಂಗ್ರೆಸ್ನಲ್ಲಿಲ್ಲ: ಬಿಎಸ್ವೈ
Kalaburagi; ಅರ್ಧ ಗಂಟೆ ಭಾಷಣದಲ್ಲಿ ಖರ್ಗೆ ಹೆಸರನ್ನೇ ಉಲ್ಲೇಖಿಸದ ಮೋದಿ
Kalaburagi; ಕರ್ನಾಟಕದ ಜನತೆ ಕೋಪಗೊಂಡಿದ್ದಾರೆ, ಎಚ್ಚೆತ್ತುಕೊಂಡಿದ್ದಾರೆ:ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ