ತಿಪ್ಪೆ ಹೆಕ್ಕಿ ದೇಗುಲ ಪತ್ತೆ ಹಚ್ಚಿದ ಯುವಕರು


Team Udayavani, Sep 25, 2018, 11:35 AM IST

gul-7.jpg

ವಾಡಿ: ತಿಪ್ಪೆ ಕಸದಲ್ಲಿ ಮುಚ್ಚಿಹೋಗಿದ್ದ ಪ್ರಾಚೀನ ಕಾಲದ ದೇಗುಲವೊಂದು ಯುವಕರ ಪತ್ತೆ ಕಾರ್ಯದಿಂದ ಬೆಳಕಿಗೆ ಬಂದಿದೆ. ಕಸದಲ್ಲಿ ಹುದುಗಿದ್ದ ಶಿಲೆಯೊಂದರ ಜಾಡು ಹಿಡುದು ಉತ್ಖನನಕ್ಕೆ ಮುಂದಾದ ಯುವಕರ ತಂಡಕ್ಕೆ 12 ಕಂಬದ ದೇವಾಲಯ ಗೋಚರಿಸಿದ್ದು, ಜಿಲ್ಲೆಯ ಇತಿಹಾಸ ತಜ್ಞರ ಗಮನ ಸೆಳೆದಿದೆ.

ಚಿತ್ತಾಪುರ ತಾಲೂಕು ರಾವೂರಿನಲ್ಲಿ ದೇಗುಲ ಕಾಣಿಸಿಕೊಂಡಿದ್ದು, ಚಿತ್ತಾಪುರದ ನಾಗಾವಿ ಪರಿಸರದಲ್ಲಿ ಪತ್ತೆಯಾದ 62 ಕಂಬದ ದೇಗುಲದಂತೆ ರಾವೂರಿನ ದೇಗುಲ 48 ಕಂಬಗಳಿಂದ ಕೂಡಿದೆ ಎನ್ನಲಾಗಿದೆ. ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ. ತಿಪ್ಪೆ ಗುಂಡಿ ಸುರಂಗ ಮಾರ್ಗದಿಂದ ಒಳಹೊಕ್ಕ ಗ್ರಾಮದ ಕನಕ ನಗರದ ಯುವಕರು, ಕಲ್ಲು ಮಣ್ಣು ತೆಗೆದು ಮುಚ್ಚಿದ್ದ ಪ್ರಾಚೀನ ದೇವಸ್ಥಾನವನ್ನು ಪತ್ತೆ ಹಚ್ಚಿದರು.

ಹಾಳು ಹಂಪೆಯಂತೆ ರಾವೂರಿನ ನೆಲ ಇತಿಹಾಸ ಹೊತ್ತು ನಿಂತಿದೆ. ಈ ಹಿಂದೆ ಇದೇ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ದೇವಾಲಯಗಳು ಪತ್ತೆಯಾಗಿದ ಉದಾಹರಣೆಗಳಿವೆ. ಇನ್ನೂ ಅನೇಕ ಕಟ್ಟಡಗಳು ನೆಲದಡಿಯಲ್ಲಿ ಮುಚ್ಚಿಕೊಂಡಿವೆ. ಇಲ್ಲಿ ಮನೆಗೊಂದು ಪುರಾತನ ಬಾವಿಗಳಿದ್ದು, ನೀರಿನ ಸೆಲೆ ಹೊಂದಿ ಇಂದಿಗೂ ಅವು ಬಳಕೆಯಾಗುತ್ತಿವೆ. ಪತ್ತೆಯಾದ ದೇಗುಲಗಳ ಸಂರಕ್ಷಣೆಯಾಗದ ಕಾರಣ ಅವು ಮತ್ತೆ ತಿಪ್ಪೆಯತ್ತ ಮುಖಮಾಡಿಕೊಳ್ಳುತ್ತಿವೆ. ಇಂತಹ ಎಷ್ಟೇ ದೇಗುಲಗಳು ಬೆಳಕಿಗೆ ಬಂದರೂ ಪ್ರಾಚ್ಯವಸ್ತು ಇಲಾಖೆ ಮಾತ್ರ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಮಣ್ಣಿನಲ್ಲಿ ಸಿಕ್ಕ ಐತಿಹಾಸಿಕ ಕುರುಹುಗಳು ಪುನಃ ಮಣ್ಣಿಗೆ ಸೇರುತ್ತಿವೆ ವಿನಃ ಅವು ಅಭಿವೃದ್ಧಿ ಹೊಂದುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ರಾವೂರಿನ ನೆಲದಲ್ಲಿ ಗೋಚರಿಸುವ ದೇವಾಲಯಗಳು ಯಾವ ಕಾಲದ್ದು, ಇದರ ಚರಿತ್ರೆ ಏನು? ರಾಜರ ಕಾಲದಲ್ಲಿ ಈ ರಾವೂರ ಏನಾಗಿತ್ತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದ್ದು, ಸಂಶೋಧನೆ ಮಾಡಿ ಸತ್ಯ ಹೊರಹಾಕಬೇಕಾದ ಪುರಾತತ್ವ ಇಲಾಖೆ ಜಾಣ ಅಂಧತ್ವ ಪ್ರದರ್ಶಿಸಿದೆ. ಸದ್ಯ ಪತ್ತೆಯಾಗಿರುವ ದೇಗುಲದಲ್ಲಿ ಹಲವು ಕಂಬಗಳಿವೆ. ಇನ್ನೂ ಆಳಕ್ಕೆ ಉತನನ ನಡೆದರೆ ಇನ್ನಷ್ಟು ಕುರುಹುಗಳು ಪತ್ತೆಯಾಗಲಿವೆ ಎಂದು ಕನಕ ನಗರದ ಯುವ ಮುಖಂಡ ಜಗದೀಶ ಪೂಜಾರಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.