ಬಳೆ ಮಾರಿ ಬೈಲಾಟ ಬದುಕಿಸಿದ ಮೇಸ್ಟ್ರೆ


Team Udayavani, Oct 18, 2018, 11:31 AM IST

gul-3.jpg

ವಾಡಿ: ಕಲೆ ಕಲೆಗಾಗಿ ಅಲ್ಲ.. ಕಲೆ ಸಮಾಜಕ್ಕಾಗಿ ಎಂದು ಪ್ರತಿಪಾದಿಸುತ್ತ ಬದುಕುವ ಕಲಾವಿದರು ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಬಲು ವಿರಳ. ಆದರೆ ಇಲ್ಲೊಬ್ಬ ಮೇಸ್ಟ್ರೆ ಬಳೆಗಳನ್ನು ಮಾರಿ ಬದುಕು ಕಟ್ಟುವ ಮೂಲಕ ಜನಮಾನಸದಿಂದ ಕಣ್ಮರೆಯಾಗುತ್ತಿದ್ದ ಜಾನಪದ ಕಲೆಯ ಭಾಗವಾದ ಬೈಲಾಟವನ್ನು ಬದುಕಿಸಿ ಸ್ವತಃ ಎಲೆಮರೆ ಕಾಯಿಯಂತೆ ಬದುಕುತ್ತಿದ್ದಾರೆ.

ಅ.20 ರಂದು ಅಳ್ಳೊಳ್ಳಿ ಗ್ರಾಮದಲ್ಲಿ ವಿಶ್ವಜನ ಸೇವಾ ಸಂಸ್ಥೆ ಹಾಗೂ ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಚಿತ್ತಾಪುರ ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಲಾಡ್ಲಾಪುರ ಗ್ರಾಮದ ಬೈಲಾಟ ಮೇಸ್ಟ್ರೆ ನಿರಂಜನಪ್ಪ
ಮಲಕಂಡಿ ಅವರು ಬಡತನದ ಬದುಕು ಬೆನ್ನಿಗೆ ಕಟ್ಟಿಕೊಂಡು ಹತ್ತನೇ ತರಗತಿ ವರೆಗೆ ಅಕ್ಷರ ಕಲಿತದ್ದಾರೆ. ಅಲ್ಲದೇ ಒಟ್ಟು 75 ದೊಡ್ಡಾಟದ ಕಥೆಗಳನ್ನು ರಂಗದ ಮೇಲೆ ತಂದು ನೂರಾರು ಜನ ರೈತರನ್ನು ಬೈಲಾಟದ ಕಲಾವಿದರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

12 ವರ್ಷದ ಬಾಲಕನಿದ್ದಾಗ ಅಂದರೆ, 42 ವರ್ಷಗಳ ಹಿಂದೆ ಲಾಡ್ಲಾಪುರದಲ್ಲಿ ಏರ್ಪಡಿಸಲಾಗಿದ್ದ ವೀರ ಅಭಿಮನ್ಯು ಎನ್ನುವ ಬೈಲಾಟದಲ್ಲಿ ತಂದೆ ಶರಣಪ್ಪ ಮಲಕಂಡಿ ಅವರ ಅನುಮತಿ ಮೇರೆಗೆ ಗಣಪತಿ ಪಾತ್ರಕ್ಕೆ ಬಣ್ಣ ಹಚ್ಚಿದ ಮೇಸ್ಟ್ರೆ ಮಲಕಂಡಿ ಜನಮೆಚ್ಚುವಂತಹ ಅಭಿನಯ ನೀಡಿ ಗಮನ ಸೆಳೆದಿದ್ದರು. ಅಂದಿನಿಂದ ಬೈಲಾಟದ ಹುಚ್ಚು ಬೆಳೆಸಿಕೊಂಡ ನಿರಂಜನಪ್ಪ, ನಾಟಕಗಳಲ್ಲಿ ಪಾತ್ರಗಳನ್ನು ಬಯಸದೆ ಸ್ವತಃ ನಿರ್ದೇಶನಕ್ಕೆ ಮುಂದಾದರು. ನಾಲವಾರ ವಲಯ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಬೈಲಾಟಗಳ ಬೈಠಕ್‌ ನಡೆಸಿ ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ. ಕುರುಕ್ಷೇತ್ರ ಕಾಳಗ ಅರ್ಥಾತ್‌ ಶ್ರೀಕೃಷ್ಣ ಸಂಧಾನ, ರತಿ ಕಲ್ಯಾಣ, ಶ್ರೀದೇವಿ ಮಹಾತ್ಮೆ, ಮಹಿಷಾಸುರ ಮರ್ಧನಿ, ಸೇತುರಾಜ, ಬಬ್ರುವಾಹನ, ಯುದ್ಧ ವನಕಾಂಡ, ವೀರ ಅಭಿಮನ್ಯು, ಕರ್ಣ ಅರ್ಜುನ ಕಾಳಗ, ಇಂದ್ರಜೀತ ಕಾಳಗ ಹಾಗೂ ದುಶ್ಯಾಸನ ಅರ್ಥಾತ್‌ ಕೀಚಕನ ವಧೆ ಹೀಗೆ ಒಟ್ಟು 75 ಬೈಲಾಟಗಳನ್ನು ಕಲಿಸುವ ಮೂಲಕ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥದಿಂದ ಕಲಾ ಸೇವೆ ಮಾಡಿರುವುದು ಸಾಮಾನ್ಯ ಸಾಧನೆಯಲ್ಲ.

ಗ್ರಾಮದ ಧರ್ಮ ಶಾಲೆಗಳಲ್ಲಿ ನಡೆಯುತ್ತಿದ್ದ ಬೈಲಾಟದ ಬೈಠಕ್‌ಗಳನ್ನು ನೋಡಲು ಹೋಗುತ್ತಿದ್ದ ಬಾಲಕ ನಿರಂಜನಪ್ಪ, ದೊಡ್ಡಾಟದ ಹಲವು ಕಥೆಗಳನ್ನು ಹಳ್ಳಿಗಾಡಿನ ಅನಕ್ಷರಸ್ಥ ರೈತರಿಗೆ ಕಳೆದ 35 ವರ್ಷಗಳಿಂದ ಅಭಿನಯ ಹೇಳಿಕೊಡುವ ಜತೆಗೆ ಕಥಾ ಸಾರಾಂಶವನ್ನು ಹೇಳಿಕೊಟ್ಟು ಬೈಲಾಟದ ಮೇಸ್ಟ್ರು ಆಗಿ ಬೆಳೆದಿದ್ದಾರೆ.

ನಾಟಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಅಧಿ ಕಾರಿಗಳ ಕಣ್ಣಿಗೆ ಬೀಳದ ನಿರಂಜನಪ್ಪ ಮಲಕಂಡಿ ಅವರ ಕಲಾ ಸೇವೆಯು ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನದ ಪದಾಧಿಕಾರಿಗಳ ಕಣ್ಣಿಗೆ ಬಿದ್ದು, ತಾಲೂಕು ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ದಕ್ಕಿಸಿಕೊಂಡಿರುವುದು ಗುಡ್ಡದ ಊರು ಲಾಡ್ಲಾಪುರದ ಜನರಲ್ಲಿ ಹರ್ಷ ಮೂಡಿಸಿದೆ.

„ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.