ಬೆಳೆಹಾನಿಯಿಂದ ಕಂಗೆಟ್ಟ ರೈತರು
Team Udayavani, Dec 15, 2018, 12:19 PM IST
ಕಾಳಗಿ: ಪಟ್ಟಣದಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಅಲ್ಪಸ್ವಲ್ಪ ಬೆಳೆದು ನಿಂತ ಜೋಳದ ಬೆಳೆ ನೆಲಚ್ಚಿದ್ದು, ಕಟಾವು ಮಾಡಿ ರಾಶಿ ಮಾಡಲು ಒಂದೆಡೆ ಶೇಖರಿಸಿಟ್ಟಿದ್ದ ತೊಗರಿ ಬೆಳೆ ಹಾಳಾಗಿ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಬಿತ್ತನೆಗಾಗಿ ಸಾಲ ಮಾಡಿರುವ ರೈತರು ಭೀಕರ ಬರಗಾಲದಿಂದ ಕಂಗೆಟ್ಟಿದ್ದಾರೆ.
ಕಳೆದ ಮೂರು ತಿಂಗಳಿಂದ ಬಾರದೆ ಇರುವ ಮಳೆ ಅಲ್ಪ ಸ್ವಲ್ಪ ಬೆಳೆದ ತೊಗರಿ ಬೆಳೆಯನ್ನು ರಾಶಿ ಮಾಡುವಾಗ ಬಂದಿದ್ದರಿಂದ ಅದು ರೈತರ ಕೈಗೆ ಸೇರದಂತಾಗಿದೆ. ತಾಲೂಕಿನಾದ್ಯಂತ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದ
ಜೋಳದ ಬೆಳೆ ನೆಲ ಕಚ್ಚಿದೆ.
ತೊಗರಿ ಬೆಳೆ ನಷ್ಟವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ರೈತ ವಿಜಯಕುಮಾರ ಸುಂಠಾಣ ಸಂಕಷ್ಟ ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು