ಎಳ್ಳಮಾವಾಸ್ಯೆ ಖರೀದಿ ಬಲು ಜೋರು
Team Udayavani, Jan 5, 2019, 5:51 AM IST
ಅಫಜಲಪುರ: ಬಗೆ ಬಗೆಯ ತರಕಾರಿ ತಂದು ಬಜ್ಜಿ, ಕಡುಬು ಮಾಡಿ ಜೋಳದ ಹೊಲಕ್ಕೆ ಹೋಗಿ ಭೂಮಿ ತಾಯಿಗೆ ಚರಗ ಚೆಲ್ಲುವ ಹಬ್ಬ ಎಳ್ಳಮವಾಸ್ಯೆ. ಎಳ್ಳಮವಾಸ್ಯೆ ಬಜ್ಜಿಗಾಗಿ ಗ್ರಾಹಕರು ಸಂತೆಯಲ್ಲಿ ತರಕಾರಿ ಖರೀದಿಸುವುದು ಬಲು ಜೋರಾಗಿತ್ತು.
ಕೈ ಸುಡುತ್ತಿದೆ ತರಕಾರಿ ಬೆಲೆ: ಕಳೆದ ವರ್ಷ ಮಳೆ ಬಾರದೆ ಭೀಕರ ಬರಗಾಲ ಆವರಿಸಿದೆ. ಬರದಿಂದ ಯಾವ ಬೆಳೆಯೂ ರೈತರ ಕೈಗೆಟುಕಿಲ್ಲ. ಅಲ್ಲದೇ ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ಹೀಗಾಗಿ ಯಾವ ರೈತರು ಹೆಚ್ಚು ತರಕಾರಿ ಬೆಳೆದಿಲ್ಲ. ಹೀಗಾಗಿ ಕೈಗೆಟುಕುವ ದರದಲ್ಲಿ ತರಕಾರಿ ಸಿಗುತ್ತಿಲ್ಲ. ಆದರೂ ಎಳ್ಳಮವಾಸ್ಯೆಗಾಗಿ ಬಜ್ಜಿ ಮಾಡಲು ತರಕಾರಿ ಬೇಕೆ ಬೇಕು. ಹೀಗಾಗಿ ದೂರದ ಊರುಗಳಿಂದ ದುಬಾರಿ ದರದಲ್ಲಿ ತಂದ ತರಕಾರಿಯನ್ನು ಜನಸಾಮಾನ್ಯರು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು.
ಬರದ ಮಧ್ಯೆ ಹಬ್ಬದ ಕಳೆ ಜೋರು: ಬರಗಾಲವಿರಲಿ, ಸುಖದ ಕಾಲ ಇರಲಿ ಸಂಪ್ರದಾಯ, ಹಬ್ಬ ಆಚರಣೆಗಳನ್ನು ಜನ ಬಿಡುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಎಳ್ಳಮವಾಸ್ಯೆ. ಭೀಕರ ಬರ ಆವರಿಸಿ ಎಲ್ಲೆಡೆ ಹನಿ ನೀರು ಸಿಗುತ್ತಿಲ್ಲ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದರೂ ದುಬಾರಿ ದರ ನೀಡಿ ತರಕಾರಿ ಖರೀದಿಸಿ ಹಬ್ಬ ಆಚರಿಸುತ್ತಿದ್ದಾರೆ.
ತರಕಾರಿ ತಂದು ಬಜ್ಜಿ ಕಡುಬು, ರೊಟ್ಟಿ, ಹೋಳಿಗೆ ಮಾಡಿ ಬಂಧು ಬಳಗದವರನ್ನು ಕರೆದು ಹೊಲಕ್ಕೆ ಹೋಗಿ ಜೋಳದಲ್ಲಿ ಚರಗ ಚೆಲ್ಲಿ ಎಲ್ಲರೂ ಒಂದಾಗಿ ಕುಳಿತು ಊಟ ಮಾಡುತ್ತಾರೆ. ಇಂತಹ ವಿಶಿಷ್ಟ ಹಬ್ಬವನ್ನು ಎಲ್ಲ ಜಾತಿ ಜನಾಂಗದವರು ಸೇರಿ ಭಾವೈಕ್ಯತೆಯಿಂದ ಆಚರಣೆ ಮಾಡುವುದು ವಿಶೇಷವಾಗಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!