ಬಿಸಿಲೂರಿನಲ್ಲಿ ನಡೆದಾಡುವ ದೇವರಿಗೆ ನುಡಿನಮನ
Team Udayavani, Jan 23, 2019, 7:18 AM IST
ಕಲಬುರಗಿ: ಶಿವಾಧೀನರಾದ ತುಮಕೂರಿನ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಜಿಲ್ಲೆಯಾದ್ಯಂತ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವೀರಭದ್ರಯ್ಯ ಚಿಕ್ಕಮಠ ಮಾತನಾಡಿ, ಡಾ| ಶಿವಕುಮಾರ ಸ್ವಾಮೀಜಿಯವರ ಕೊಡುಗೆ ಸ್ಮರಿಸಿಕೊಂಡರು.
ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರದ ವತಿಯಿಂದ ನಗರದ ಆಳಂದ ರಸ್ತೆಯಲ್ಲಿರುವ ಪ್ರೇರಣಾ ಟ್ಯೂಟೋರಿಯಲ್ಸ್ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆ. ಬಸವರಾಜ, ಚಂದ್ರಕಾಂತ ಬಿರಾದಾರ, ಶಿವಲಿಂಗಪ್ಪ ಕೋಡ್ಲಿ, ಶಿವಲಿಂಗಪ್ಪ ಮೂಲಗೆ,
ಎಚ್.ಬಿ. ಪಾಟೀಲ, ಶಶಿಕಾಂತ ಮೇತ್ರೆ, ಸಂಜೀವಕುಮಾರ ಪಾಟೀಲ, ಚಂದ್ರಶೇಖರ ಪಾಟೀಲ, ಬಸವರಾಜ ಪುರಾಣೆ, ಶರಣು ಬಿರಾದಾರ, ರಾಜಶೇಖರ ಸಜ್ಜಿ, ಸಂತೋಷ ಪೋಸ್ತೆ, ಬಸವರಾಜ ಮೂಲಗೆ, ನಾಗಣ್ಣ ಆಲ್ಮದ್ ಸೇರಿದಂತೆ ಭಾಗವಹಿಸಿದ್ದರು.
ಭೂಮಿ ಯೋಗ ಫೌಂಡೇಷನ್: ನಗರದ ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ ಹಾಗೂ ಇಂಡಿಯನ್ ಕಲ್ಚರಲ್ ಸೆಂಟರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂದೀಪ .ಬಿ., ಯೋಗ ಉಪನ್ಯಾಸಕ ನಾಗರಾಜ ಸಾಲೋಳ್ಳಿ, ಶ್ರೀಕಾಂತ ಸಿಂಪಿ, ರಾಘವೇಂದ್ರ ಹಳಿಪೇಟ, ಡಾ| ಶಿವಶರಣಪ್ಪ ನೀಲೂರ, ರಾಜಕುಮಾರ ಠಾಕೂರ, ಕಲ್ಯಾಣಿ ಭಜಂತ್ರಿ, ಗಣೇಶ, ಸಿದ್ದರಾಮ ಪಾಟೀಲ, ಮಲ್ಲಿಕಾರ್ಜುನ ಬುಳ್ಳಾ ಹಾಗೂ ಇತರರು ಉಪಸ್ಥಿತರಿದ್ದರು.
ನಗರದ ಪ್ರಿಂಟಿಂಗ್ ಪ್ರಸ್ ಅಸೋಶಿಯೇಷನ್ ವತಿಯಿಂದ ಡಾ| ಶಿವಕುಮಾರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಭಜನೆ ಹಮ್ಮಿಕೊಳ್ಳಲಾಗಿತ್ತು. ಮಾಣಿಕಪ್ರಭು ಮಾದಮಶೆಟ್ಟಿ, ರವೀಂದ್ರ ಮುಕ್ಕಾ, ಪ್ರದೀಪ ಚೌಡಾ, ಶಿವಕುಮಾರ ಬಿರಾದಾರ, ಅರುಣ ಕೆ, ಸಿದ್ದು ಹಂಚನಾಳ, ಸುನೀಲಕುಮಾರ, ಸಂತೋಷ ಗಂಗಶ್ರೀ, ಚಂದ್ರಕಾಂತ ಹೆಬ್ಟಾಳ, ಮಹಾಂತೇಶ ಹಾಜದ್ದರು.
ನಗರದ ಜ್ಞಾನ ಸಿಂಚನ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮೀಜಿಯವರ ಶಿವಾಧೀನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಾಚಾರ್ಯರಾದ ಎಚ್.ಸಿ. ಪಾಟೀಲ, ಸಂತೋಷಿ ಹಿಪ್ಪರಗಿ, ಅರುಣಾ ಎಸ್.ಎಚ್., ಸುಕನ್ಯಾ ಪಾಟೀಲ, ಸುಮಲತಾ ಬೋರಗಿ, ರವಿಕುಮಾರ ಅಳ್ಳೋಳಿ, ಭಾಗ್ಯಶ್ರೀ ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಿವರುದ್ರ ಡಿ., ಕಾರ್ಯದರ್ಶಿ ಕಿರಣ ಜೋಗದನಕರ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್