ತರಾತುರಿಯಲ್ಲಿ ಜನಸ್ಪಂದನ ಸಭೆ ಬೇಡ


Team Udayavani, Feb 3, 2019, 6:17 AM IST

dvg-6.jpg

ಚಿಂಚೋಳಿ: ಸರಕಾರದಿಂದ ಮನೆ ಮಂಜೂರಾಗಿದ್ದರೂ ಎಂಟು ತಿಂಗಳಿಂದ ಮನೆ ಬಿಲ್‌ ಪಾವತಿ ಆಗಿಲ್ಲ. ಬೇರೆಯವರ ಹತ್ತಿರ ಮನೆ ಕಟ್ಟಿಕೊಳ್ಳಲು 40 ಸಾವಿರ ರೂ. ಸಾಲ ತಂದಿದ್ದೇನೆ. ಇತ್ತ ಕಟ್ಟಿದ ಮನೆಯೂ ಹಾಳಾಗುತ್ತಿದೆ ಎಂದು ಖೊದಂಪೂರ ಗ್ರಾಮದ ಶರಣಮ್ಮ ಜಟಿಂಗ ಶಾಸಕ ಡಾ| ಉಮೇಶ ಜಾಧವ್‌ ಎದುರು ಅಳಲು ತೋಡಿಕೊಂಡರು.

ತಾಲೂಕಿನ ಖೋದಂಪೊರ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಮಹಿಳೆಯೊಬ್ಬಳು ತಮ್ಮ ಸಮಸ್ಯೆ ತೋಡಿಕೊಂಡಳು. ಈ ಬಗ್ಗೆ ತಾಪಂ ಇಒ ಮಹಮ್ಮದ ಮೈನೋದ್ದೀನ ಪಟಲಿಕರ ಮಾತನಾಡಿ, ತಾಲೂಕಿಗೆ ಅಂಬೇಡ್ಕರ ವಸತಿ ಯೋಜನೆ, ಬಸವ ವಸತಿ ಯೋಜನೆ ಮತ್ತು ರಾಜೀವಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮಂಜೂರಿಗೊಂಡಿರುವ ಮನೆಗಳ ಬಿಲ್‌ಗ‌ಳು ಪಾವತಿಯಾಗಿಲ್ಲ. ಇದಕ್ಕಾಗಿ ನಿಗಮದಿಂದ ಕಳೆದ ನಾಲ್ಕು ತಿಂಗಳಿಂದ ಅನುದಾನ ಬಂದಿಲ್ಲವೆಂದು ಶಾಸಕರ ಎದುರು ಸಮಸ್ಯೆವಿವರಿಸಿದರು.

ಶಾಸಕ ಡಾ| ಉಮೇಶ ಜಾಧವ್‌ ಮಾತನಾಡಿ, ನಾನು ಶಾಸಕನಾಗಿ ಎಂಟು ತಿಂಗಳು ಕಳೆದಿದೆ. ಜನರ ಸಮಸ್ಯೆ ಇತ್ಯರ್ಥ ಆಗುತ್ತಿಲ್ಲ, ಯಾವುದೇ ಅಭಿವೃದ್ದಿ ಕಾರ್ಯ ಆಗುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯ ಆಗದ್ದಕ್ಕೆ ನಿರಾಸೆಯಾಗಿದ್ದೇನೆ ಎಂದರು.

ಹೊಸ ಮನೆ ಕಟ್ಟಿಕೊಳ್ಳಲು ಹಳೆ ಮನೆ ಕೆಡವಿದ್ದೇನೆ. ಇರಲು ಮನೆ ಇಲ್ಲ, ಚಳಿ ಮಳೆ ಎನ್ನದೇ ಮಕ್ಕಳೊಂದಿಗೆ ಇರಬೇಕಾಗಿದೆ. ಬಡ್ಡಿಯಿಂದ ತಂದ ಹಣ ಕಟ್ಟಲು ಆಗುತ್ತಿಲ್ಲ. ಮನೆ ಮಾರಿಕೊಳ್ಳುವ ಪರಿಸ್ಥತಿ ಇದೆ ಎಂದು ಗ್ರಾಮಸ್ಥ ಘಾಳಪ್ಪ ತಿಳಿಸಿದರು.

ಜನಸ್ಪಂದನಾ ಸಭೆ ಕಾಟಾಚಾರಕ್ಕಾಗಿ ನಡೆಯಬಾರದು. ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ಈ ಕುರಿತು ಡಂಗೂರ ಸಾರಬೇಕು ಎಂದು ಸೂಚನೆ ನೀಡಿದರು.

ಖೋದಂಪೂರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಒಂಭತ್ತು ಬೋರವೆಲ್‌ ಗಳಿದ್ದರೂ ಒಂದೂ ಬೋರವೆಲ್‌ಗ‌ಳಲ್ಲಿ ನೀರು ಬರುತ್ತಿಲ್ಲ ಎಂದು ಗ್ರಾಪಂ ಸದಸ್ಯೆ ಬಂಡಯ್ಯ ಸ್ವಾಮಿ ಶಾಸಕರ ಗಮನಕ್ಕೆ ತಂದರು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಗಾಗಿ ಎಚ್.ಕೆ.ಆರ್‌.ಡಿ ಬಿ.ಯಿಂದ ಅನುದಾನ ನೀಡಿ ಟ್ಯಾಂಕ್‌ ನಿರ್ಮಿಸಿ ಜನರಿಗೆ ಸವಲತ್ತು ನೀಡುತ್ತೇನೆಂದು ಶಾಸಕರು ಭರವಸೆ ನೀಡಿದರು.

ಕೋಡ್ಲಿ ಹೋಬಳಿಯಲ್ಲಿ ಬರುವ ಖೋದಂಪೂರ ಗ್ರಾಮ ಕಂದಾಯ ಇಲಾಖೆ ಸಾಫ್ಟವೇರ್‌ನಲ್ಲಿ ಬರುತ್ತಿಲ್ಲ. ಇದರಿಂದ ಪ್ರಮಾಣ ಪತ್ರ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಪಡಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕಳೆದ ವರ್ಷ ಚಿಮ್ಮನಚೋಡ ತೊಗರಿ ಖರೀದಿ ಕೇಂದ್ರಕ್ಕೆ 40 ಕ್ಟಿಂಟಾಲ್‌ ತೊಗರಿ ಮಾರಾಟ ಮಾಡಿದ್ದೇನೆ. ಕೇವಲ 30ಕ್ವಿಂಟಾಲ್‌ ತೊಗರಿ ಹಣ ಬಂದಿದೆ ಇನ್ನು 10 ಕ್ವಿಂಟಾಲ್‌ ತೊಗರಿ ಹಣ ವರ್ಷವಾದರೂ ಬಂದಿಲ್ಲ ಎಂದು ರೈತ ಶಿವಪುತ್ರಪ್ಪ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಶಾಸಕರು, ಇಂತಹ ಅನೇಕ ಸಮಸ್ಯೆಗಳಿವೆ ತರಾತುರಿಯಲ್ಲಿ ಸಭೆ ನಡೆಸಬಾರದು. ಸಭೆಯನ್ನು ಮುಂದೂಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಾ| ಬಾಲರಾಜ, ಗ್ರೇಡ್‌ 2 ತಹಶೀಲ್ದಾರ್‌ ಮಾಣಿಕರಾವ್‌, ಗ್ರಾಪಂ ಅಧ್ಯಕ್ಷ ನಾಗರಾಜಶೆಟ್ಟಿಗೌಡ, ಉಪಾಧ್ಯಕ್ಷೆ ಅನ್ನಪೂರ್ಣ, ಎಇಇ ಮಹ್ಮದ ಅಹೆಮದ, ಎಇಇ ಬಸವರಾಜ ನೇಕಾರ, ಟಿಎಚ್ಒ ಡಾ| ಮಹಮ್ಮದ ಗಫಾರ, ಡಾ| ಧನರಾಜ ಬೊಮ್ಮ, ಎಇಇ ಶರಣಬಸಪ್ಪ ಕೇಶ್ವಾರ, ಅಬಕಾರಿ ಇನ್ಸಪೆಕ್ಟರ್‌ ನಾಜಿಯಾ ಬೇಗಂ, ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ, ಕೃಷಿ ಅಧಿಕಾರಿ ಶ್ರೀಮಂತ ಮೋತಕಪಳ್ಳಿ, ಕಾಶಿಮ ಪಟೇಲ ಕುಪನೂರ ಇನ್ನಿತರರಿದ್ದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.