ಸಮೃದ್ಧ ಮೆಣಸಿನಕಾಯಿ ಬೆಳೆದ ರೈತ
Team Udayavani, Feb 18, 2019, 7:00 AM IST
ಯಡ್ರಾಮಿ: ಗುತ್ತಿಗೆ ಕರಾರಿನ ಮೇಲೆ ಭೂಮಿ ಪಡೆದ ಆಂಧ್ರ ಮೂಲದ ರೈತನೊಬ್ಬ ಉತ್ತಮ ಬೆಳೆ ಬೆಳೆದು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾನೆ. ಕೆ. ವೀರಯ್ಯ ಎನ್ನುವರೆ ಪಟ್ಟಣದಿಂದ 3ಕಿ.ಮೀ ದೂರದಲ್ಲಿರುವ 20 ಎಕರೆ ಜಮೀನನ್ನು ಗುತ್ತಿಗೆ ಕರಾರಿನ ಮೇಲೆ ಪಡೆದ
ರೈತ. ಈ ರೈತ ಮೂರು ವರ್ಷ ಕಾಲ ಗುತ್ತಿಗೆ ಕರಾರಿನ ಮೇಲೆ ಭೂಮಿ ಪಡೆದಿದ್ದು, ಪ್ರತಿ ವರ್ಷ 3ಲಕ್ಷ ರೂ. ಮುಂಗಡ ನೀಡಿ 16 ಎಕರೆ ಭೂಮಿಯಲ್ಲಿ ಮೆಣಸಿನಕಾಯಿ ಬೆಳೆ ತೆಗೆದಿದ್ದಾನೆ. ವರ್ಷಪೂರ್ತಿ ಸಮಯಕ್ಕೆ ಸರಿಯಾಗಿ ಔಷಧೋಪಚಾರ ಮಾಡಿ, ಸರಿ ಪ್ರಮಾಣದ ಗೊಬ್ಬರ ಉಣಿಸಿ ಸಮೃದ್ಧ ಬೆಳೆ ಬೆಳೆದು ಮಾದರಿಯಾಗಿದ್ದಾನೆ ಈ ರೈತ. ಅಲ್ಲದೇ ಹಸಿ ಮೆಣಸಿನಕಾಯಿ ಮಾರಾಟದಿಂದ ತಾನು ನೀಡಿದ ಕರಾರಿನ ಹಣವನ್ನು ಮರಳಿ ಪಡೆದಿದ್ದಾನೆ. ಮುಂದೆ ಬರುವ ಕೆಂಪು ಮೆಣಸಿನಕಾಯಿ ಪೂರ್ಣ ಲಾಭ ತಂದು ಕೊಡುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಾನೆ.
ಹೊಲದೊಳಗೆ ಜೋಪಡಿ ಹಾಕಿಕೊಂಡು ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸುತ್ತೇವೆ. ಭೂಮಿಗೆ ತಕ್ಕಂತೆ ಗೊಬ್ಬರ ಹಾಕುತ್ತೇವೆ. ಔಷಧ ಮತ್ತು ನೀರು ಬಿಡುವ ಕೆಲಸವನ್ನು ನಾನೇ ಮಾಡ್ತಿನಿ. ಇಲ್ಲಿನ ರೈತರು ಭೂಮಿಗೆ ಖರ್ಚು ಮಾಡಲು ಹಿಂಜರಿಯುತ್ತಾರೆ. ಹಸಿ ಮೆಣಸಿನಕಾಯಿ ಮಾರಿ ಎರಡೂಮೂರು ಲಕ್ಷ ರೂ. ಬಂದಿವೆ. ಕೆಂಪುಕಾಯಿಗೆ ಸದ್ಯದ ಬೆಲೆ ಸಿಕ್ಕರೆ 25 ಲಕ್ಷ ರೂ. ವರೆಗೂ ಲಾಭ ಆಗುತ್ತದೆ.
ಕೆ. ವೀರಯ್ಯ, ಆಂಧ್ರ ಮೂಲದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ