ಬಿಜೆಪಿ ಸುಳ್ಳು ಘೋಷಣೆಗೆ ಸೀಮಿತ
Team Udayavani, Feb 23, 2019, 4:50 AM IST
ಚಿತ್ತಾಪುರ: ಬಿಜೆಪಿಗೆ ದೇಶದ ಜನರು 5 ವರ್ಷಗಳ ಕಾಲ ಅಧಿಕಾರ ನೀಡಿತ್ತು. ಆದರೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಬರೀ ಸುಳ್ಳು ಹೇಳುವ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ
ಹೇಳಿದರು.
ತಾಲೂಕಿನ ನಿಪ್ಪಾಣಿ, ಸಾವತಖೇಡ್, ಅಶೋಕ ನಗರ, ಬೆಣ್ಣೂರ ಕೆ, ಮಲಘಾಣ, ಕಲಗುರ್ತಿ, ವಚ್ಚಾ, ಮತ್ತಿಮೂಡ, ಇಂಗನಕಲ್, ಮಾಡಬೂಳ, ಹದನೂರ ಗ್ರಾಮಗಳಲ್ಲಿ 10.75 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಮೋದಿ ಸರ್ಕಾರದಲ್ಲಿ ಯಾವುದೇ ಹೇಳಿಕೊಳ್ಳುವಂತಹ ಯೋಜನೆಗಳು ಜಾರಿಗೆ ಬಂದಿಲ್ಲ. ಬರೀ ದೇಶದ ಜನರಿಗೆ ಸುಳ್ಳಿನ ಘೋಷಣೆಗಳನ್ನೇ ನೀಡಿದ್ದಾರೆ. ಬಿಜೆಪಿ ಸರ್ಕಾರ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಹೇಳುತ್ತದೆ. ಆದರೆ ಈ ದೇಶಕ್ಕಾಗಿ ಕಾಂಗ್ರೆಸ್ ಸರ್ಕಾರದ ಗಾಂಧಿ
ಪರಿವಾರ ತ್ಯಾಗ, ಬಲಿದಾನ ನೀಡಿದೆ. ಬಿಜೆಪಿ ಸರ್ಕಾರದ ಯಾರಾದರು ಒಬ್ಬರು ತ್ಯಾಗ, ಬಲಿದಾನ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ದೇಶದಲ್ಲಿ ಪಾಕಿಸ್ತಾನ ಉಗ್ರರಿಂದ 50ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾದರು. ಆದರೆ ಮೋದಿ ಅವರು 56 ಇಂಚಿನ ದೇಹ ತೋರಿಸಲು ಫೋಟೋ ಶೋಟ್ಗೆ ಹೋಗಿದ್ದರು. ಅವರಿಗೆ ಸೈನಿಕರ ಬಗ್ಗೆ ಕಾಳಜಿ ಇಲ್ಲ. ಚುನಾವಣೆ ಸಮೀಪಿಸುತ್ತಿದೆ. ಅದಕ್ಕೆ ಮತ್ತೇ ಸುಳ್ಳಿನ ಪ್ರಚಾರಕ್ಕಾಗಿ ಫೋಟೋ ತೆಗೆಸಿಕೊಳ್ಳಲು ಹೋಗಿದ್ದರು ಎಂದು ವ್ಯಂಗ್ಯವಾಡಿದರು. ಮುಖಂಡರಾದ ನಿಂಬೆಣಪ್ಪ ಪಾಟೀಲ, ಮಸ್ತಾನ್ಸಾಬ್ ಕೊರವಿ, ಮಾಣಿಕ್ ಸಂಗನ್, ಶಿವಯೋಗಿ, ಶಿವಕುಮಾರ ಸಂಗನ್, ಕೃಷಾ ಕಟ್ಟಿಮನಿ ಮಾತನಾಡಿದರು. ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ರಾಜೇಶ ಗುತ್ತೇದಾರ, ಸುರೇಖಾ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಎಪಿಎಂಸಿ ಸದಸ್ಯ ಮನ್ಸೂರ್ ಪಟೇಲ್, ಜಿಪಂ ಮಾಜಿ ಸದಸ್ಯ ಮಾಪಣ್ಣ ಗಂಜಗೇರಿ ಮುಖಂಡರಾದ ಸುನೀಲ ದೊಡ್ಮನಿ, ಹಣಮಂತ ಸಂಕನೂರ, ಪ್ರಕಾಶ ಕಮಕನೂರ, ರಾಜಶೇಖರ ತಿಮ್ಮನಾಕ, ಶರಣು ಡೋಣಗಾಂವ, ನಾಗರಾಜ ಸಜ್ಜನ, ಮಲ್ಲಿಕಾರ್ಜುನ ಮುಡಬೂಳಕರ್, ವಿನ್ನುಕುಮಾರ ಜೆ.ಡಿ., ತಿಮ್ಮು ಭೋವಿ, ಅಧಿಕಾರಿಗಳಾದ ನೀಲಪ್ರಭಾ, ನಟರಾಜ ಲಾಡೆ, ಶಂಕ್ರಮ್ಮ ಡವಳಗಿ, ವಾಜೀದ್ ಪಟೇಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್