ಹಾಸನ:ಸ್ಕೂಲ್ ವ್ಯಾನ್ ಚಕ್ರಕ್ಕೆ ಸಿಲುಕಿ 2 ವರ್ಷದ ಮಗು ದಾರುಣ ಸಾವು
Team Udayavani, Aug 10, 2018, 12:27 PM IST
ಬೇಲೂರು: ತಾಲೂಕಿನ ಯಕ ಶೆಟ್ಟಿಹಳ್ಳಿ ಎಂಬಲ್ಲಿ ಸ್ಕೂಲ್ ವ್ಯಾನ್ನ ಚಕ್ರಕ್ಕೆ ಸಿಲುಕಿ 2 ವರ್ಷದ ಹೆಣ್ಣು ಮಗು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತ ಮಗು ರಮೇಶ್-ನಂದಿನಿ ದಂಪತಿಯ ಪುತ್ರಿ ಚರಣ್ಯ ಎಂದು ತಿಳಿದು ಬಂದಿದೆ.ಅಣ್ಣ ಸ್ಕೂಲ್ ವ್ಯಾನ್ ಹತ್ತಿದ ಬಳಿಕ ಚಾಲಕ ಗಮನಿಸದೆ ಮುಂದಕ್ಕೆ ಚಲಿಸಿದ ಪರಿಣಾಮ ಎದುರಿಗೆ ತೆರಳಿದ್ದ ಚರಣ್ಯ ಚಕ್ರಕ್ಕೆ ಸಿಲುಕಿದ್ದಾಳೆ ಎಂದು ತಿಳಿದು ಬಂದಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.
ಬೇಲೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.