ದಾಂಧಲೆ ನಡೆಸುತ್ತಿದ್ದಒಂಟಿ ಸಲಗ ಸೆರೆ
Team Udayavani, Dec 21, 2018, 2:49 PM IST
ಸಕಲೇಶಪುರ: ಬಲಗಾಲಿಗೆ ತೀವ್ರ ಪೆಟ್ಟು ಬಿದ್ದು ದಾಂಧಲೆ ನಡೆಸುತ್ತಿದ್ದ ಒಂಟಿಸಲಗವೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಯಸಳೂರು ಹೋಬಳಿ ದೊಡ್ಡ ಕುಂದೂರು ಅರಣ್ಯದ
ಸಮೀಪ 5 ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.
ಮುಂಜಾನೆ 8 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಸಿಬ್ಬಂದಿ ಮಧ್ಯಾಹ್ನ 3 ಗಂಟೆ ವೇಳೆಗೆ ಒಂಟಿಸಲಗವೊಂದನ್ನು ದೊಡ್ಡ ಕುಂದೂರು ಅರಣ್ಯ ಸಮೀಪ ಹುಡುಕವಲ್ಲಿ ಯಶಸ್ವಿಯಾದರು. ತಕ್ಷಣ ನಾಗರಹೊಳೆಯಿಂದ ಆಗಮಿಸಿದ್ದ ತಜ್ಞರ ತಂಡ ಒಂಟಿಸಲಗಕ್ಕೆ ಅರಿವಳಿಕೆ ನೀಡುವುದರಲ್ಲಿ ಯಶಸ್ವಿಯಾಯಿತು.
ಅರಿವಳಿಕೆ ಮದ್ದಿನ ಪರಿಣಾಮ ಸ್ಥಳದಲ್ಲೇ ಕುಸಿದ ಕಾಡಾನೆಯನ್ನು ಅಭಿಮನ್ಯು, ಕೃಷ್ಣ, ಅಜಯ್, ಧನಂಜಯ, ಹರ್ಷ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ಸಕ್ರೆಬೈಲು ಆನೆಧಾಮಕ್ಕೆ ಕಳುಹಿಸಲಾಯಿತು. ಸೆರೆಹಿಡಿದ ಒಂಟಿಸಲಗದ ಬಲಗಾಲಿಗೆ ಗುಂಡೇಟು ತಗುಲಿ ಯಸಳೂರು ಭಾಗದ ತೋಟ, ಗದ್ದೆಗಳಲ್ಲಿ ದಾಂಧಲೆ ನಡೆಸುತ್ತಿತ್ತು. ಕಾರ್ಯಾಚರಣೆಯಲ್ಲಿ ಸಿಸಿಎಫ್ ಎ.ಕೆ.ಸಿಂಹ, ನಾಗರಹೊಳೆ ಅರಿವಳಿಕೆ ತಜ್ಞ ಮುಜೀಬುರ್ ರೆಹಮಾನ್, ವೈದ್ಯಾಧಿಕಾರಿ
ಗಳಾದ ವಿನಯ್, ಮುರಳಿ ತಾಲೂಕು ಉಪವಲಯ ಅರಣ್ಯಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಮೋಹನ್, ಯಸಳೂರು ವಲಯ ಅರಣ್ಯಾಧಿಕಾರಿ ಅಭಿಷೇಕ್, ಅಲೂರು ಅರಣ್ಯಾಧಿಕಾರಿ ರಾಜಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ