ನೆರೆ ದುಸ್ಸಾಹಸ:ಹಾವೇರಿಯಲ್ಲಿ ಇಬ್ಬರು,ಮೈಸೂರಿನಲ್ಲಿ ಓರ್ವ ನೀರುಪಾಲು
Team Udayavani, Jul 13, 2018, 11:51 AM IST
ಹಾವೇರಿ: ತಾಲೂಕಿನ ನಾಗನೂರು ಗ್ರಾಮದಲ್ಲಿ ಹರಿಯುವ ವರದಾ ನದಿಗೆ ಅಡ್ಡಲಾಗಿರುವ ಸೇತುವೆಯಲ್ಲಿ ಲಾರಿಯೊಂದು ಕೊಚ್ಚಿ ಹೋಗಿ ಇಬ್ಬರು ನೀರಪಾಲಾಗಿರುವ ಅವಘಡ ಗುರುವಾರ ರಾತ್ರಿ ನಡೆದಿದೆ. ಲಾರಿಯಲ್ಲಿದ್ದ ಓರ್ವ ದಡ ಸೇರಿ ಪಾರಾಗಿದ್ದಾನೆ.
ಮೇಲಿಂದ ನೀರು ಹರಿಯುತ್ತಿದ್ದರೂ ಸೇತುವೆ ಮೇಲೆ ಲಾರಿ ಚಲಾಯಿಸಿದ್ದು ಈ ವೇಳೆ ಚಾಲಕ ಲಕ್ಷ್ಮಣ ದೊಡ್ಡ ತಳವಾರ (25) ಮತ್ತು ಕ್ಲೀನರ್ ಬಸವರಾಜ್ ಸೋಮಣ್ಣ ವರ(29) ನೀರುಪಾಲಾಗಿದ್ದಾರೆ. ಇನ್ನೋರ್ವ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ.
ಇಬ್ಬರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಈಜಲಿಳಿದ ಓರ್ವ ನಾಪತ್ತೆ
ಎಚ್.ಡಿ.ಕೋಟೆಯ ಮಾದಾಪುರ ಸೇತುವೆ ಬಳಿ ಈಜಲೆಂದು ಕಪಿಲಾ ನದಿಯ ನೆರೆಗೆ ಧುಮುಕಿದ ಮೂವರು ಯುವಕರ ಪೈಕಿ ಓರ್ವ ಕೊಚ್ಚಿ ಹೋಗಿದ್ದಾನೆ.
24 ವರ್ಷದ ಉಮೇಶ್ ಎನ್ನುವವ ಕೊಚ್ಚಿ ಹೋಗಿದ್ದು, ಜೊತೆಯಲ್ಲಿದ್ದ ಸ್ನೇಹಿತರಾದ ಚಿಕ್ಕನಾಯ್ಕ , ಸುರೇಶ್ ಪಾರಾಗಿದ್ದಾರೆ.
ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೀರು ಪಾಲಾಗಿರುವ ಉಮೇಶ್ಗಾಗಿ ಶೋಧ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಸ್ಟಾರ್ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ
ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ
Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA