ಸ್ಮಾರಕವಾಗುವಂತೆ ಬದುಕು ಸಾಗಿಸಿ


Team Udayavani, Sep 3, 2018, 4:43 PM IST

3-september-21.jpg

ಹಾನಗಲ್ಲ: ದೇಶಕ್ಕೆ ಮಾರಕವಾಗಿ ಬದುಕುವ ಬದಲು ಸ್ಮಾರಕವಾಗುವಂತೆ ಬದುಕುವುದೇ ಜೀವನ. ಅಂತಹ ಜೀವನ ಎಲ್ಲರ ಪ್ರೀತಿಗೆ ಪಾತ್ರವಾಗುತ್ತದೆ ಎಂದು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಕರೆ ನೀಡಿದರು.

ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘ ಹುತಾತ್ಮ ಯೋಧರ
ಕುಟುಂಬಕ್ಕೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ, ಜಿಲ್ಲೆಯ ಮುಗಳಿ ಗ್ರಾಮದ ಹುತಾತ್ಮ ವೀರಯೋಧ ಚಂದ್ರಶೇಖರ
ಡವಗಿ ಅವರ ಕುಟುಂಬಕ್ಕೆ ಸೈನಿಕ ನಿಧಿ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರನ್ನು ಅವಮಾನಿಸುವವರು ನೂರು ಬಾರಿ ಯೋಚಿಸಬೇಕು. ಸೈನಿಕರನ್ನು ಗೌರಿವಿಸುವ ದೇಶ ಮಾತ್ರ ಸುಭದ್ರವಾಗಿ ನೆಮ್ಮದಿಯಾಗಿ ಇರಬಲ್ಲದು. ದಯೆ ಧರ್ಮಕ್ಕೆ ಹೆಸರಾದ ಭಾರತ, ಸಂತ ಮಹಂತರ ನಾಡು. ಇಂಥ ನಾಡಿನಲ್ಲಿ ಮಾರಕವಾಗಿ ಬದುಕುವ ಬದಲು, ಸ್ಮಾರಕವಾಗುವಂತೆ ಬದುಕುವಂತೆ ಮನವಿ ಮಾಡಿದರು.

ಹೋತನಹಳ್ಳಿಯ ಸದ್ಗುರು ಶಂಕರಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶದ ಹಿತಕ್ಕೆ ಮಠ ಮಂದಿರಗಳು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಧೈರ್ಯ, ತ್ಯಾಗದ ಮೂಲಕ ನಮ್ಮನ್ನು ಕಾಯುತ್ತಿರುವ ಸೈನಿಕರು ನಮಗೆ ಪ್ರೇರಣೆಯಾಗಿದ್ದಾರೆ. ಇಂಥ ದೇಶಕಟ್ಟುವ ಕಾರ್ಯಕ್ಕೆ ಮಠ ಮಂದಿರಗಳು ಬಹುಮುಖ್ಯವಾಗಿ ಪ್ರೇರಣೆಯಾಗಿ ಜಾಗೃತಿ ಮೂಡಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ| ಮಾರುತಿ ಶಿಡ್ಲಾಪೂರ, ಈ ದೇಶದ ರೈತ ಹಾಗೂ ಸçನಿಕರನ್ನು ಗೌರವಿಸದವರು ಭಾರತೀಯರೇ ಅಲ್ಲ. ಕೃತಜ್ಞತೆಯಿಂದ ಬದುಕುವುದನ್ನು ಕಲಿಸಬೇಕಾಗಿದೆ. ದೇಶದ ಗಡಿಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು ಬದುಕುವ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು. 

ಅಕ್ಕಿಆಲೂರಿನ ಜಿಡಿಜಿ ಗುರುಕುಲದ ನಾಗರಾಜ ಪಾವಲಿ ಮಾತನಾಡಿ, ಯುವಕರ ದಾರಿ ಈಗ ಆತ್ಮಾವಲೋಕನಕ್ಕೆ ಒಳಗಾಗಬೇಕಾಗಿದೆ. ಸಮಾಜಮುಖಿ ಜೀವನ ನಮ್ಮದಾಗಬೇಕು. ಈಗ ದೇಶಭಕ್ತಿಯ ಕೊರತೆ ಎಲ್ಲೆಡೆ ಕಾಣುತ್ತಿರುವುದು ವಿಷಾದದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಹುತಾತ್ಮ ವೀರಯೋಧ ಚಂದ್ರಶೇಖರಡವಗಿ ಅವರ ಪತ್ನಿ ಶೀಲಾ ಅವರಿಗೆ ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘ ಸಂಗ್ರಹಿಸಿದ ನಿಧಿಯನ್ನು ಸಮರ್ಪಿಸಲಾಯಿತು. ಕಿರಣ ಹೂಗಾರ, ಅಶೋಕ ಕೊಂಡ್ಲಿ ಉಪನ್ಯಾಸಕರಾಗಿ ಪಾಲ್ಗೊಂಡಿದ್ದರು. ಸ್ವಾಮಿ ವಿವೇಕಾನಂದ ಜನಸ್ನೇಹಿ ಸಂಘದ ಅಧ್ಯಕ್ಷ ಈರಪ್ಪ ದುಂಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಮುಗಳಿ ಗ್ರಾಮದ ಹುತಾತ್ಮ ವೀರಯೋಧ ಚಂದ್ರಶೇಖರ ಡವಗಿ ಅವರ ಪತ್ನಿ ಶಿಲ್ಪಾ, ಗ್ರಾಪಂ ಅಧ್ಯಕ್ಷ ಪ್ರಕಾಶ ದುಂಡಣ್ಣನವರ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶಿಸನಳ್ಳಿ, ಕಾರ್ಯದರ್ಶಿ ಟಿ.ಎಸ್‌.ಪಾಟೀಲ, ಮಾಜಿ ಸೈನಿಕರಾದ ಪಿ.ಎಲ್‌. ರಣದೇವಿ, ಜೆ.ಬಿ.ಪೊಲೀಸಗೌಡರ, ವೀರಭದ್ರಗೌಡ ಪಾಟೀಲ, ಕೃಷ್ಣಪ್ಪ ಕರಭೀಮಣ್ಣನವರ, ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಡಿಂಪಲ್‌ ಡಿಸೋಜಾ, ಪ್ರಾಚಾರ್ಯರಾದ ಎಂ.ಎಂ.ಕಡ್ಡಿಪುಡಿ, ಮಹಮ್ಮದ್‌ಶರೀಫ್‌ ಹಾನಗಲ್ಲ ಅತಿಥಿಗಳಾಗಿದ್ದರು.

ದೇಶಕ್ಕಾಗಿ ಪ್ರಾಣ ನೀಡಿದ ನನ್ನ ಪತಿ ಚಂದ್ರಶೇಖರ ಡವಗಿ ಅವರ ಬಗ್ಗೆ ಈ ದೇಶದ ಜನ ತೋರುತ್ತಿರುವ ಅಭಿಮಾನಕ್ಕೆ ನಾನು ಚಿರಋಣಿ. ಬಾಳಂಬೀಡದ ದೇಶ ಭಕ್ತರು ನನಗೆ ತವರಿನ ಪ್ರೀತಿ ತೋರಿಸಿದ್ದಾರೆ. ದೇಶಕ್ಕಾಗಿ ನನ್ನ ಪತಿ ಪ್ರಾಣಾರ್ಪಣೆ ಮಾಡಿರುವುದು ಹಾಗೂ ದೇಶ ಭಕ್ತರು ನನಗೆ ತೋರುತ್ತಿರುವ ಗೌರವದ ಮುಂದೆ ನಾನು ಜನರ ಅಭಿಮಾನವನ್ನು ಮನಸಾರೆ ಒಪ್ಪಿಕೊಂಡಿದ್ದೇನೆ.
 ಶೀಲಾ ಡವಗಿ,
 ಹುತಾತ್ಮ ಚಂದ್ರಶೇಖರ ಪತ್ನಿ

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.