ಆಂಬ್ಯುಲೆನ್ಸ್ ಸೇವೆಗೆ ಸಿಕ್ತು ಕಾಯಕಲ್ಪ 


Team Udayavani, Dec 16, 2018, 3:52 PM IST

16-december-17.gif

ಹಾವೇರಿ: ನೂರೆಂಟು ಸಮಸ್ಯೆಗಳ ನಡುವೆ ತೊಳಲಾಡುತ್ತಿದ್ದ ಜಿಲ್ಲೆಯ ‘108’ ಆಂಬ್ಯುಲೆನ್ಸ್‌ ವಾಹನಗಳಿಗೆ ಬಹುದಿನಗಳ ಬಳಿಕ ಕಾಯಕಲ್ಪ ದೊರಕಿದ್ದು, ಈಗ ಆಂಬ್ಯುಲೆನ್ಸ್‌ ವಾಹನಗಳು ಆರೋಗ್ಯಸೇವೆ ಮುಂದುವರಿಸಿವೆ. ಕಳೆದ ಆರೇಳು ತಿಂಗಳುಗಳಿಂದ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್‌ಗಳು ಸೇವೆಗೆ ಸಿಗುತ್ತಿಲ್ಲ. ವಾಹನಗಳು ಸೇವೆ ನೀಡುವುದಕ್ಕಿಂತ ಹೆಚ್ಚು ದಿನ ದುರಸ್ತಿಗಾಗಿ ಗ್ಯಾರೇಜ್‌ಗಳಲ್ಲಿಯೇ ನಿಲ್ಲುತ್ತಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು. ಅನೇಕ ಕಡೆಗಳಲ್ಲಿ ಸಕಾಲಕ್ಕೆ ಆಂಬ್ಯುಲೆನ್ಸ್‌ ಬಾರದೆ ಇರುವುದನ್ನು ಖಂಡಿಸಿ ಪ್ರತಿಭಟನೆಯೂ ನಡೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಆ್ಯಂಬುಲೆನ್ಸ್‌ ನಿರ್ವಹಣಾ ಕಂಪನಿ, ಕಳೆದ ತಿಂಗಳಷ್ಟೇ ಜಿಲ್ಲೆಗೆ ಆರು ಹೊಸ ಆಂಬ್ಯುಲೆನ್ಸ್‌ಗಳನ್ನು ನೀಡಿದೆ.

ಆಂಬ್ಯುಲೆನ್ಸ್‌ ನಿರ್ವಹಣಾ ವಿಭಾಗದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 20 ಆಂಬ್ಯುಲೆನ್ಸ್‌ ವಾಹನಗಳ ಜತೆಗೆ ಎರಡು ಹೆಚ್ಚುವರಿ ಆಂಬ್ಯುಲೆನ್ಸ್‌ ವಾಹನ ವ್ಯವಸ್ಥೆ ಹೊಂದಲಾಗಿದೆ. ಹಾವೇರಿಯಲ್ಲಿ ನಾಲ್ಕು, ರಾಣಿಬೆನ್ನೂರಿನಲ್ಲಿ ಮೂರು, ಬ್ಯಾಡಗಿಯಲ್ಲಿ ಒಂದು, ಸವಣೂರಿನಲ್ಲಿ ಎರಡು, ಶಿಗ್ಗಾವಿಯಲ್ಲಿ ಮೂರು, ಹಿರೇಕೆರೂರಿನಲ್ಲಿ ನಾಲ್ಕು, ಹಾನಗಲ್ಲನಲ್ಲಿ ಮೂರು ವಾಹನಗಳು ಕಾರ್ಯನಿರ್ವಹಿಸುತ್ತಿವೆ.

ಹೊಸ ವಾಹನಗಳು: ಒಟ್ಟು 22 ವಾಹನಗಳಲ್ಲಿ ಈಗ ಆರು ವಾಹನಗಳು ಹೊಸ ವಾಹನಗಳಾಗಿದ್ದು ಈ ಹೊಸ ವಾಹನಗಳು ಗುತ್ತಲ, ಬಂಕಾಪುರ, ಹಾವೇರಿ, ಕುಪ್ಪೇಲೂರು, ಹಾನಗಲ್ಲ, ಬ್ಯಾಡಗಿ ತಾಲೂಕುಗಳಲ್ಲಿ ಸೇವೆ ನೀಡುತ್ತಿವೆ. ಉಳಿದ ಕಡೆಗಳಲ್ಲಿ 2014ನೇ ಮಾಡೆಲ್‌ನ ವಾಹನಗಳು ಆರೋಗ್ಯ ಸೇವೆ ನೀಡುತ್ತಿವೆ. ಆಂಬ್ಯುಲೆನ್ಸ್‌ ವಾಹನಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ, ಆಕ್ಸಿಜನ್‌, ಹೆರಿಗೆ ಕಿಟ್‌, ಪ್ರಥಮ ಚಿಕಿತ್ಸೆಯ ಎಲ್ಲ ಸಲಕರಣೆ ಹಾಗೂ ಔಷಧಿಗಳನ್ನು ಹೊಂದಿದ್ದು ಕೆಲವು ವಾಹನಗಳಲ್ಲಿ ಹಾಳಾಗಿದ್ದ ಸಲಕರಣೆಗಳನ್ನೆಲ್ಲ ಸರಿಪಡಿಸಿ ಈಗ ಎಲ್ಲ ವಾಹನಗಳನ್ನು ಸಮರ್ಪಕ ಆರೋಗ್ಯ ಸೇವೆಗೆ ಸಜ್ಜುಗೊಳಿಸಲಾಗಿದೆ. ಆದರೆ, ವಾಹನದ ದುರಸ್ತಿ, ಉಪಕರಣಗಳ ದುರಸ್ತಿ ವಿಚಾರ ಬಂದಾಗ ಏಜೆನ್ಸಿಯವರು ತಕ್ಷಣ ಸರಿಪಡಿಸಿ ವಾಹನವನ್ನು ಸೇವೆ ಬಿಡುವ ವ್ಯವಸ್ಥೆ ಮಾಡಬೇಕು ಎಂಬುದು ನಾಗರಿಕರ ಅಪೇಕ್ಷೆಯಾಗಿದೆ. ಒಟ್ಟಾರೆ ಕೆಲ ತಿಂಗಳು ಸರಿಯಾದ ನಿರ್ವಹಣೆ ಇಲ್ಲದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಆಂಬ್ಯುಲೆನ್ಸ್‌ ವಾಹನಗಳು ಈಗಲಾದರೂ ಜನರಿಗೆ ಸಕಾಲಕ್ಕೆ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ಸಮಾಧಾನಕರ ಸಂಗತಿ.

ಜಿಲ್ಲೆಯಲ್ಲಿ 20 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ ಎರಡು ಆಂಬ್ಯುಲೆನ್ಸ್‌ಗಳು ಇವೆ. ಇವುಗಳಲ್ಲಿ ಆರು ವಾಹನಗಳು ಹೊಸದಾಗಿದ್ದು ಒಂದು ತಿಂಗಳ ಹಿಂದಷ್ಟೇ ಬಂದಿವೆ. ಇನ್ನೂ ಎರಡು ವಾಹನಗಳು ಬರಲಿವೆ. ಹಳೆಯ ವಾಹನಗಳಿಗೆ ಕಾಲಕಾಲಕ್ಕೆ ಬೇಕಾದ ಅಗತ್ಯ ದುರಸ್ತಿ ಮಾಡಿ ಸೇವೆ ನೀಡಲಾಗುತ್ತಿದೆ.
 ಗಿರೀಶ ಆರ್‌.ಬಿ. ,
ಜಿಲ್ಲಾ ವ್ಯವಸ್ಥಾಪಕರು, ಜಿವಿಕೆ ಕಂಪನಿ

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

Lok Sabha Election; ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.