ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪಡೆಯುವ ಅವಧಿಯಲ್ಲಿ ಉತ್ತಮ ಆಹಾರ ಸೇವನೆ


Team Udayavani, Feb 19, 2017, 3:45 AM IST

Cancer.jpg

ಕ್ಯಾನ್ಸರ್‌ ತಪಾಸಣೆ ಆಗಿರುವ ಜನರು ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪಡೆಯುವ ಅವಧಿಯಲ್ಲಿ ಮತ್ತು ಅನಂತರ ಆರೋಗ್ಯಕರ ಆಹಾರ ಸೇವಿಸುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿ ಇರುವುದು ಬಹಳ ಆವಶ್ಯಕ. ಕೀಮೋತೆೆರಪಿ, ರೇಡಿಯೇಷನ್‌ ಮತ್ತು ಇನ್ನಿತರ ಚಿಕಿತ್ಸೆಗಳು ಕ್ಯಾನ್ಸರ್‌ ರೋಗಿಯ ಶರೀರದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಬಹುದು. ಬಹಳ ಉತ್ತಮ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮಗೆ ಬೇಗನೆ ಚೇತರಿಸಿಕೊಳ್ಳಲು ಸಹಾಯ ಆಗಬಹುದು ಮತ್ತು ನಿಮಗೆ ಹಿತ ಅನ್ನಿಸಬಹುದು. ಕ್ಯಾನ್ಸರ್‌ ಕಾಯಿಲೆ ಮತ್ತು ಅದಕ್ಕಾಗಿ ಪಡೆಯುವ ಚಿಕಿತ್ಸೆಯು ನಿಮ್ಮ ಶರೀರವು ಕೆಲವು ಆಹಾರವನ್ನು ಮತ್ತು ಪೋಷಕಾಂಶಗಳನ್ನು ತೆಗೆದುಕೊಳ್ಳುವ ರೀತಿಯ ಮೇಲೆಯೂ  ಸಹ  ಪ್ರಭಾವ ಬೀರಬಹುದು. ಚಿಕಿತ್ಸೆಯ ಸಂದರ್ಭದಲ್ಲಿ ನೀವು ಆರೋಗ್ಯವಾಗಿ ಇರಲು ಕೆಲವು ಹೆಚ್ಚುವರಿ ಕ್ಯಾಲೊರಿಗಳನ್ನು ಮತ್ತು ಪ್ರೋಟೀನ್‌ಗಳನ್ನು ತೆಗೆದುಕೊಳ್ಳಬೇಕಾಗಬಹುದು. 

ತೆಗೆದುಕೊಳ್ಳಬೇಕಾದ ಆಹಾರಗಳು
ಮೈದಾ ಆಧಾರಿತ ಆಹಾರಗಳಿಗೆ ಬದಲಾಗಿ ಇಡಿಯ ಧಾನ್ಯಗಳಿಂದ ತಯಾರಿಸಿದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.

ಧಾನ್ಯಗಳು, ಕಿಚಡಿ, ಪೊಂಗಲ್‌ ಇತ್ಯಾದಿ ಬೇಳೆ ಮತ್ತು ಕಾಳುಗಳಿಂದ ತಯಾರಿಸಲಾದ ಆಹಾರಗಳನ್ನು ತೆಗೆದುಕೊಳ್ಳಬಹುದು. 

ಹೆಸರು, ಬಿಳಿ ಕಡಲೆ ಅಥವಾ ಕಡಲೆಯಂತಹ ಧಾನ್ಯಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಉತ್ತಮ. 

ಪ್ಯಾಕ್‌ ಮಾಡಲಾದ ಜ್ಯೂಸ್‌ಗಳಿಗೆ ಬದಲಾಗಿ ತಾಜಾ ಹಣ್ಣು ಮತ್ತು ತರಕಾರಿ ಜ್ಯೂಸ್‌ ಗಳನ್ನು ಸೇವಿಸಿ

ನಿಮ್ಮ ಊಟದ ಅರ್ಧ ಬಟ್ಟಲು ತಾಜಾ ಹಣ್ಣು ತರಕಾರಿಗಳಿಂದ ತುಂಬಿರಲಿ

ನಿಮ್ಮ ಪ್ರೋಟೀನ್‌ ಸೇವನೆಯನ್ನು ಹೆಚ್ಚಿಸಿಕೊಳ್ಳಲು ಹಾಲು , ಮೊಸರು, ಪನೀರ್‌ ಇತ್ಯಾದಿ ಹಾಲಿನ ಉತ್ಪನ್ನಗಳನ್ನು ಹೆಚ್ಚು ಸೇವಿಸಬೇಕು

ವಾರದಲ್ಲಿ ಕನಿಷ್ಠ ಮೂರು ಬಾರಿ ನಿಮ್ಮ ಊಟದಲ್ಲಿ ದಟ್ಟ ಹಸುರು ಬಣ್ಣದ ತಾಜಾ ತರಕಾರಿಗಳು ಸೂಪ್‌ ಅಥವಾ ಪಲ್ಯವನ್ನು ಸೇವಿಸಿ

ಸಿಹಿ ತಿನಿಸುಗಳನ್ನು ಹೆಚ್ಚು ಸೇವಿಸಬಾರದು. ಅವುಗಳಲ್ಲಿ ಹೆಚ್ಚು ಸಕ್ಕರೆ ಅಂಶ ಇದ್ದು ಪೋಷಕಾಂಶಗಳು ಇರುವುದು ಬಹಳ ಕಡಿಮೆ

ರೆಡ್‌ ಮೀಟ್‌ ಅಥವಾ ಸಂಸ್ಕರಿಸಿದ ಮಾಂಸಾಹಾರಕ್ಕೆ ಬದಲಾಗಿ ಮೀನು, ಮೊಟ್ಟೆ ಅಥವಾ ಕೋಳಿಯ ಮಾಂಸವನ್ನು ಆಗಾಗ ಸೇವಿಸಬಹುದು. 

ಬೀಜಗಳು, ಒಣ ಹಣ್ಣುಗಳು, ಪುಡ್ಡಿಂಗ್‌, ಗಂಜಿ ಮತ್ತು ಬೇಯಿಸಿದ ಧಾನ್ಯಗಳಂತಹ ಅಧಿಕ ಕ್ಯಾಲೊರಿ ಮತ್ತು ಪೋಷಣೆ ಭರಿತ ಆಹಾರಗಳನ್ನು ಸೇವಿಸಿ. 

ದಿನದ ಉದ್ದಕ್ಕೂ ಸಣ್ಣ ಸಣ್ಣ ಊಟ ಸೇವಿಸಿ. ಹಸಿವಾದ ಅನಂತರವೇ ಊಟ ಮಾಡೋಣ ಎಂದು ಕಾಯಬೇಡಿ. ದಿನದಲ್ಲಿ ಆಗಾಗ ಊಟ ಮಾಡುತ್ತಾ ಇರಿ. 

ಒಂದೇ ಆಹಾರವನ್ನು ಒಂದೇ  ಸಮಯದಲ್ಲಿ ಸೇವಿಸಬೇಡಿ. ನಿಮ್ಮ ಊಟದಲ್ಲಿ ವೈವಿಧ್ಯತೆ ಇರಲಿ, ನಿಂಬೆ ಹೋಳುಗಳು, ಕೊತ್ತಂಬರಿ ಸೊಪ್ಪು, ಟೊಮ್ಯಾಟೋ ಮತ್ತು ಇನ್ನಿತರ ಪೋಷಣಾ ಭರಿತ ಸೊಪ್ಪು$ ತರಕಾರಿಗಳು ನಿಮ್ಮ ಊಟದ ಬಟ್ಟಲಲ್ಲಿ ಇರಲಿ. 

ನಿಮಗೆ ಹಸಿವು ಇಲ್ಲದಿದ್ದರೂ 
ಆಹಾರ ಸೇವಿಸಲು ಪ್ರಯತ್ನಿಸಿ 

ಕ್ಯಾನ್ಸರ್‌ ಚಿಕಿತ್ಸೆಯ ಸಂದರ್ಭದಲ್ಲಿ ಹಸಿವೆ ಆಗದೆ ಇರುವುದು ಬಹಳ ಸಾಮಾನ್ಯ. ಕೆಲವು ಚಿಕಿತ್ಸೆಗಳ ಕಾರಣದಿಂದ ಆಹಾರದ ರುಚಿಯೇ ಹಿತವೆನಿಸದೆ ಇರಬಹುದು, ಹಾಗಿದ್ದರೂ ಸಹ ನೀವು ಆಹಾರವನ್ನು ಬಿಟ್ಟು ಬಿಡುವಂತಿಲ್ಲ , ಯಾಕೆಂದರೆ ಚಿಕಿತ್ಸೆಯ ಈ ಸಂದರ್ಭದಲ್ಲಿ ನೀವು ಸಾಕಷ್ಟು ಪೋಷಣೆಯನ್ನು ಪಡೆಯುವುದು ಬಹಳ ಆವಶ್ಯಕ. 

ಕ್ಯಾನ್ಸರ್‌ ಚಿಕಿತ್ಸೆಯ ಅಡ್ಡ ಪರಿಣಾಮಗಳು
ಕೆಲವು ಆಹಾರಗಳು ಕ್ಯಾನ್ಸರ್‌ ಚಿಕಿತ್ಸೆಯ ಕೆಲವು ಸಾಮಾನ್ಯ ಕಿರಿಕಿರಿಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ.   
1.ಮಲಬದ್ಧತೆ: ಸಾಕಷ್ಟು ನೀರು ಕುಡಿಯಿರಿ (ದಿನಕ್ಕೆ ಕನಿಷ್ಠ 8 ಗ್ಲಾಸ್‌)  ಮತ್ತು ಸಾಕಷ್ಟು ನಾರಿನ ಅಂಶ ಇರುವ ಆಹಾರಗಳಾದ ಸೊಪ್ಪು$ ತರಕಾರಿಗಳು, ಬೇಯಿಸಿದ ಆಹಾರಗಳು, ಸೂಪ್‌ ಮತ್ತು ನಿಂಬೆ ಜಾತಿಯ ಹಣ್ಣುಗಳನ್ನು ಸೇವಿಸಿ. 

2. ಭೇದಿ: ಡಿಹೈಡ್ರೇಷನ್‌ ಆಗುವುದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ. ಅತಿಸಾರ ಅಥವಾ ಭೇದಿ, ಸೆಡೆತ, ಜೀರ್ಣಿಸಲು ಆಗದೆ ಇರುವ ತೊಂದರೆ ಅಥವಾ ಕೆಲವು ವಿಧದ ಶಸ್ತ್ರ ಚಿಕಿತ್ಸೆಯಾದ ಅನಂತರ ಕಡಿಮೆ ನಾರಿನ ಅಂಶವುಳ್ಳ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ.  ಇಂತಹ ಸಂದರ್ಭದಲ್ಲಿ ಕಾಳು ಮತ್ತು ಬೀಜಗಳು, ಹಸಿ ತರಕಾರಿಗಳು ಮತ್ತು ಹಣ್ಣುಗಳು ಮತ್ತು ಇಡಿಯ ಧಾನ್ಯದ ಬ್ರೆಡ್‌ ಮತ್ತು ಧಾನ್ಯಗಳನ್ನು ಸೇವಿಸಬಾರದು. 
  
3. ಬಾಯಿ ಹುಣ್ಣು ಮತ್ತು ಬಾಯಿ ಒಣಗುವುದು: ಆಹಾರಗಳನ್ನು ನುಂಗಲು ಸುಲಭ ಆಗುವಂತೆ ಆಹಾರಗಳನ್ನು ನುಣ್ಣಗೆ ಮಾಡಿ ಸೇವಿಸಿ. ಸೂಪ್‌ ಮತ್ತು ದ್ರವಾಹಾರದ ರೂಪದಲ್ಲಿರುವ ಆಹಾರಗಳನ್ನು ಸೇವಿಸಿ ಅಂದರೆ ಹಾಲು ಅಥವಾ ಮೊಸರು ಮಜ್ಜಿಗೆ, ಮಿಲ್ಕ್ ಶೇಕ್‌, ದಪ್ಪ ಹಣ್ಣಿನ ರಸ, ಓಟ್ಸ್‌ ಗಂಜಿ , ರಾಗಿ ಗಂಜಿ, ಜೋಳದ ಗಂಜಿ, ಇತ್ಯಾದಿ

4. ವಾಕರಿಕೆ: ಆಹಾರಗಳನ್ನು ಸಾದಾ ರೂಪದಲ್ಲಿ ಸೇವಿಸಿ. ಅಂದರೆ ಒಗ್ಗರಣೆ, ಮಸಾಲೆ, ಎಣ್ಣೆ ಮತ್ತು ಬಲವಾದ ಸುವಾಸನೆ ಇಲ್ಲದಿರುವ ಆಹಾರಗಳನ್ನು ಸೇವಿಸಿ. ದಿನ ಇಡೀ ಸಣ್ಣ ಸಣ್ಣ ಊಟ ಸೇವಿಸಿ ನಿಮ್ಮ ಹೊಟ್ಟೆಯನ್ನು ಹಗುರಗೊಳಿಸಿ. ನಿಮಗೆ ವಾಂತಿ ಬರುವಂತೆ ಆದರೂ ಸಹ ಆಗಾಗ ನೀರು ಕುಡಿಯುತ್ತಾ ಇರಿ. ಒಂದು ವೇಳೆ ವಾಂತಿ ನಿಲ್ಲದೆ ಹಾಗೆಯೇ ಮುಂದುವರಿದರೆ ಎಳನೀರು ಕುಡಿಯಿರಿ, ತಿಳಿ ಸೂಪ್‌ ಕುಡಿಯಿರಿ, ಹಣ್ಣಿನ ರಸ ಕುಡಿಯಿರಿ……ಹೀಗೆ ನಿಧಾನವಾಗಿ ನಿಮ್ಮ ಆಹಾರದ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಿ. 

ಆಹಾರ ಸುರಕ್ಷತೆಯ ಬಗ್ಗೆ ಗಮನ ಇರಲಿ
ಕೆಲವು ಕ್ಯಾನ್ಸರ್‌ ಚಿಕಿತ್ಸೆಗಳು ತಾತ್ಕಾಲಿಕವಾಗಿ ನಿಮ್ಮ ಶರೀರದ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಕುಗ್ಗಿಸುತ್ತವೆ. ಹಾಗಾಗಿ ಆಹಾರದ ಮೂಲಕ ಬರುವ ರೋಗಾಣುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಆವಶ್ಯಕ. ಕಲುಷಿತ ಆಹಾರ ಸೇವಿಸುವುದರಿಂದ ನೀವು ತ್ವರಿತವಾಗಿ ಕಾಯಿಲೆ ಬೀಳಬಹುದು. ನಿಮ್ಮನ್ನು ನೀವು ಸುರಕ್ಷಿತವಾಗಿ ಇರಿಸಿಕೊಳ್ಳಲು ಇಲ್ಲಿವೆ ಕೆಲವು ಸಲಹೆಗಳು. 

ಒಡೆದ ಅಥವಾ ರೆಫ್ರಿಜರೇಟರ್‌ನಲ್ಲಿ ಇರಿಸಿಲ್ಲದ ಮೊಟ್ಟೆ ಸೇವಿಸಬೇಡಿ.

ಆಹಾರಗಳು ಹಾಳಾಗುವುದನ್ನು ತಪ್ಪಿಸಲು ಆಹಾರದ ಪೊಟ್ಟಣದಲ್ಲಿ ನಮೂದಿಸಿರುವ ಎಕ್ಸ್‌ಪಯರಿ ದಿನಾಂಕವನ್ನು ಗಮನಿಸಿ ಖರೀದಿಸಿ. 

ಹಾಳಾಗುವಂತಹ ಎಲ್ಲಾ ಆಹಾರ ಸಾಮಗ್ರಿಗಳನ್ನು ನೀವು ಅವುಗಳ ಆಹಾರವನ್ನು ತಯಾರಿಸಲು ತಯಾರಾಗುವವರೆಗೆ ಫ್ರಿಜ್‌ನಲ್ಲಿ ಇರಿಸಿ.

ಅಡುಗೆ ಮನೆಯಲ್ಲಿ ಸಾಬೂನು ಮತ್ತು ಬಿಸಿ ನೀರಿನಿಂದ ತೊಳೆದು ಸ್ವತ್ಛ ಮಾಡಿದ ಮೇಲ್ಮೆ„ ಮೇಲೆ ನಿಮ್ಮ ಆಹಾರ ಸಾಮಗ್ರಿಗಳನ್ನು ತಯಾರಿಸಿಕೊಳ್ಳಿ.

ಮಾಂಸಾಹಾರ ಮತ್ತು ಮೀನನ್ನು ಕತ್ತರಿಸಲು ಪ್ರತ್ಯೇಕ ಕಟ್ಟಿಂಗ್‌ ಬೋರ್ಡ್‌ ಇರಲಿ, ಬಳಸಿ ಆದ ನಂತರ ಅವನ್ನು ಚೆನ್ನಾಗಿ ಸ್ವತ್ಛ ಮಾಡಿಕೊಳ್ಳಿ. 

ಹಣ್ಣು ಮತ್ತು ತರಕಾರಿಗಳನ್ನು ಬಿಸಿ ನೀರಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನೀವು ಸುಲಭವಾಗಿ ಸ್ವತ್ಛಗೊಳಿಸಲು ಸಾಧ್ಯ ಇಲ್ಲದ ಹಣ್ಣುಗಳನ್ನು ತಿನ್ನಬೇಡಿ. 

ಮಾಂಸಾಹಾರ, ಮೀನು ಮತ್ತು ಮೊಟ್ಟೆಯೂ ಸೇರಿದಂತೆ ಹಸಿ ಅಥವಾ ಸರಿಯಾಗಿ ಬೇಯಿಸಿಲ್ಲದ ಪ್ರಾಣಿಜನ್ಯ ಆಹಾರಗಳನ್ನು ಸೇವಿಸಬೇಡಿ. 

ಬಿಟ್ಟು ಬಿಡಬೇಕಾದ ಆಹಾರಗಳು
ಹೆಚ್ಚು ಉಪ್ಪು, ಸಕ್ಕರೆ ಮತ್ತು ಎಣ್ಣೆ ಸೇರಿಸಿದ ಆಹಾರಗಳನ್ನು ಸೇವಿಸಬಾರದು

ರೆಡ್‌ ಮೀಟ್‌ ಮತ್ತು ಸಂಸ್ಕರಿಸಿದ ಮಾಂಸಾಹಾರಗಳನ್ನು ಸೇವಿಸಬಾರದು

ಉಪ್ಪಿನಕಾಯಿ, ಜಾÂಮ್‌ ಇತ್ಯಾದಿ ರೀತಿಯ ಸಂರಕ್ಷಿಸಿದ ಆಹಾರಗಳನ್ನು ಸೇವಿಸಬಾರದು

ಮದ್ಯಪಾನ ಮಾಡಬಾರದು

ತೀಕ್ಷ್ಣ ವಾಸನೆ ಇರುವ ಆಹಾರಗಳನ್ನು ಸೇವಿಸಬಾರದು
ಕೊನೆಯದಾಗಿ ಆರೋಗ್ಯಕರ ಆಹಾರ ಶೈಲಿಯನ್ನು ಅನುಸರಿಸುವುದು, ಚೆನ್ನಾಗಿ ನೀರು ಕುಡಿಯುವುದು ಮತ್ತು ಸಾಕಷ್ಟು ಕ್ಯಾಲೊರಿ, ಪ್ರೊಟೀನ್‌ ಮತ್ತು ಪೋಷಕಾಂಶಗಳನ್ನು ಒದಗಿಸಿ ಸರಿಯಾದ ದೇಹ ತೂಕವನ್ನು ಕಾಪಾಡಿಕೊಳ್ಳುವುದು ನಿಮ್ಮ ದೇಹದ ರೋಗಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮ ಪಡಿಸುವ ಮತ್ತು ನಿಮ್ಮ ಶೀಘ್ರ ಚೇತರಿಸಿಕೊಳ್ಳುವಿಕೆಗೆ ಸಹಾಯ ಮಾಡುವ ಪೂರಕ ಅಂಶಗಳು. 

– ಸುಷ್ಮಾ ಐತಾಳ್‌, 
ಡಯಟೀಷಿಯನ್‌, 
ಪಥ್ಯಾಹಾರ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು.

ಟಾಪ್ ನ್ಯೂಸ್

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.