ಬ್ರಾಂಕಯಲ್‌ ಆಸ್ತಮಾ


Team Udayavani, Jun 11, 2017, 3:16 PM IST

Asthma-Inhaler-vs.jpg

– ಹಿಂದಿನ ವಾರದಿಂದ 18. ಇನ್‌ಹೇಲರ್‌ ಉಪಯೋಗಿಸುವ ವಿವಿಧ ಹಂತಗಳು ಯಾವುವು?
ಎಂಡಿಐ:
ಉಪಯೋಗಿಸುವುದು ಹೀಗೆ:
– ಇನ್‌ಹೇಲರ್‌ನ ಮುಚ್ಚಳ ತೆರೆದು ಚೆನ್ನಾಗಿ ಕುಲುಕಿ. 
– ಎದ್ದು ನಿಂತು ಉಸಿರು ಹೊರಗೆ ಬಿಡಿ. 
– ಇನ್‌ಹೇಲರ್‌ನ ಬಾಯ್ತುದಿಯನ್ನು ನಿಮ್ಮ ಬಾಯಿಯೊಳಗೆ ಇರಿಸಿಕೊಳ್ಳಿ. 
– ನಿಧಾನವಾಗಿ ಉಸಿರು ಎಳೆದುಕೊಳ್ಳಿ. 
– ಉಸಿರು ಒಳತೆಗೆದುಕೊಳ್ಳಲು ಆರಂಭಿಸಿದಾಗ ಇನ್‌ಹೇಲರ್‌ನ ಮೇಲ್ಭಾಗವನ್ನು ಅದುಮಿ ಉಸಿರು ಹಿಡಿದು ತೆಗೆದುಕೊಳ್ಳುವುದನ್ನು ಮುಂದುವರಿಸಿ.
– ಬಾಯಿಯನ್ನು ಮುಚ್ಚಿ 10 ಸೆಕೆಂಡುಗಳ ಕಾಲ ಉಸಿರು ತಡೆ ಹಿಡಿಯಿರಿ 
– ಈಗ ಉಸಿರು ಹೊರಬಿಡಿ. ಈ ಹಂತಗಳನ್ನು ಸರಿಯಾಗಿ ಸಂಯೋಜಿಸಿ ಅನುಸರಿಸಲಾರದವರಿಗಾಗಿ ಸ್ಪೇಸರ್‌ ಉಪಯೋಗಿಸಲಾಗುತ್ತದೆ. 

ಡಿಪಿಐ: 
ಈ ಇನ್‌ಹೇಲರ್‌ ಬಳಸುವಾಗ ನೀವು ನಿಮ್ಮ ಉಸಿರಾಟವನ್ನು ಮತ್ತು ಇನ್‌ಹೇಲರ್‌ನ ಮೇಲ್ಭಾಗ ಒತ್ತಿ ಹಿಡಿಯುವುದನ್ನು ಸಂಯೋಜಿಸಿ ಅನುಸರಿಸಬೇಕಾಗಿಲ್ಲ. ಏಕೆಂದರೆ, ಇದರಲ್ಲಿ ನೀವು ಆಳವಾಗಿ, ವೇಗವಾಗಿ ಉಸಿರು ತೆಗೆದುಕೊಂಡಾಗ ಇದರಲ್ಲಿ ಔಷಧಿ ಬಿಡುಗಡೆಯಾಗುತ್ತದೆ. ಇದು ಕೆಲವರಿಗೆ ಸುಲಭವಾಗುತ್ತದೆಯಾದರೂ ಇನ್ನು ಕೆಲವರಿಗೆ ಕಷ್ಟವಾಗಿ ಕಾಣಬಹುದು. ಮೀಟರ್‌ಡ್‌ -ಡೋಸ್‌ ಇನ್‌ಹೇಲರ್‌ಗಳಲ್ಲಿಯಾದರೆ, ನೀವು ಮೊದಲು ಉಸಿರನ್ನು ಪೂರ್ಣವಾಗಿ ಹೊರಬಿಟ್ಟು ಇನ್‌ಹೇಲರನ್ನು ಬಾಯೊಳಗಿಟ್ಟು ಆಮೇಲೆ ಉಸಿರು ಹೊರಬಿಡಬೇಕಾಗುತ್ತದೆ. 

ನಿಮ್ಮ ಲಕ್ಷಣಗಳನ್ನು ಆಧರಿಸಿ ವೈದ್ಯರು ಯಾವುದೇ ಒಂದು ವಿಧದ ಇನ್‌ಹೇಲರನ್ನು ನಿಮಗೆ ಶಿಫಾರಸು ಮಾಡುತ್ತಾರೆ ಮತ್ತು ಯಾವುದು ನಿಮಗೆ ಹೆಚ್ಚು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಇನ್‌ಹೇಲರನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ವೈದ್ಯರು ಅಥವಾ ಕರ್ತವ್ಯದಲ್ಲಿರುವ ದಾದಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಚೆಕ್‌- ಅಪ್‌ ಸಂದರ್ಭದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ನಿಮ್ಮ ಆಸ್ತಮಾ ನಿಯಂತ್ರಣಕ್ಕೆ ಬಾರದೆ ಇರುವ ಸಂದರ್ಭದಲ್ಲಿ ನೀವು ಇನ್‌ಹೇಲರನ್ನು ಸರಿಯಾಗಿ ಉಪಯೋಗಿಸುವಿರೋ ಎಂಬುದನ್ನು ಅವರು ಪರೀಕ್ಷಿಸಬಹುದು. 

19. ನೆಬ್ಯುಲೈಸರ್‌ ಉಪಯೋಗಿಸ ಬೇಕಾಗುತ್ತದೆಯೇ?
ಸಮರ್ಪಕವಾಗಿ ಸಂಯೋಜನೆಗೊಂಡ ಇನ್‌ಹೇಲರ್‌ ಚಿಕಿತ್ಸೆಯು ನೆಬ್ಯುಲೈಸೇಶನ್‌ ಚಿಕಿತ್ಸೆಯಷ್ಟೇ ಪರಿಣಾಮಕಾರಿಯಾಗುವುದನ್ನು ಅಧ್ಯಯನಗಳು ಶ್ರುತಪಡಿಸಿವೆ. ಅಲ್ಲದೆ, ನೆಬ್ಯುಲೈಸರ್‌ಗಳು ಎಲ್ಲ ಕಾಲದಲ್ಲೂ ಜತೆಗಿರಿಸಿಕೊಳ್ಳಬಹುದಾದ, ಎಲ್ಲೆಡೆಗೂ ಒಯ್ಯಬಹುದಾದ ಸಣ್ಣ ಉಪಕರಣಗಳಲ್ಲ; ಅವುಗಳಿಗೆ ಸತತ ವಿದ್ಯುತ್‌ ಸಂಪರ್ಕ ಬೇಕು, ಆರ್ಥಿಕವಾಗಿಯೂ ಮಿತವ್ಯಯಿಯಲ್ಲ. ಎಂಡಿಐ ಮತ್ತು ಡಿಪಿಐಗಳು ಉಪಯೋಗಿಸಲು ಸುಲಭ, ಸಣ್ಣ ಸಾಧನಗಳು ಮತ್ತು ಶುದ್ಧತೆಯನ್ನು ಕಾಪಾಡಿಕೊಳ್ಳಲು ಸುಲಭ. 

20. ನಿಮ್ಮಷ್ಟಕ್ಕೆ ನೀವೇ ಮಾಡಿಕೊಳ್ಳಬಹುದಾದದ್ದು
– ನಿಮ್ಮ ಆಸ್ತಮಾ ಸಮಸ್ಯೆಯ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ತಿಳಿದುಕೊಂಡಿರುವುದು
– ನಿಮ್ಮಲ್ಲಿ ಆಸ್ತಮಾ ಲಕ್ಷಣಗಳನ್ನು ಪ್ರಚೋದಿಸುವ ಅಂಶಗಳ ಬಗ್ಗೆ ತಿಳಿದಿರುವುದು
– ನಿಮ್ಮ ಔಷಧಿಗಳನ್ನು ನಿಯ ಮಿತವಾಗಿ ತೆಗೆದುಕೊಳ್ಳುವುದು ಮತ್ತು ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದು.
– ನಿಮ್ಮ ಆಸ್ತಮಾ ಲಕ್ಷಣಗಳ ಮೇಲೆ ನಿಯಂತ್ರಣ ಸಾಧಿಸಲು ಆದಷ್ಟು ಕ್ಷಿಪ್ರವಾಗಿ ಕಾರ್ಯತತ್ಪರರಾಗುವುದು. 

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.