ತಂಬಾಕು ಸೇವನೆ ಅಪಾಯಗಳು 


Team Udayavani, Jul 1, 2018, 6:00 AM IST

tobacco-6665.jpg

ಹಿಂದಿನ ವಾರದಿಂದ- 2. ಅನಿಶ್ಚಿತತೆ ಹಂತ: ನಿಲ್ಲಿಸುವುದು ಖಚಿತವಾಗಿ ಹೇಳಲಾಗುವುದಿಲ್ಲ. ಈ ಹಂತದಲ್ಲಿರುವ ವ್ಯಕ್ತಿಗಳು ತಂಬಾಕು ಸೇವನೆಯನ್ನು ಬಿಡಬೇಕೆಂದು ಗಂಭೀರವಾಗಿ ಪರಿಗಣಿಸುತ್ತಿರುತ್ತಾರೆ; ಆದರೆ ಪೂರ್ತಿಯಾಗಿ ನಿರ್ಧಾರಕ್ಕೆ ಬರಲು ಹಿಂಜರಿಯುತ್ತಿರುತ್ತಾರೆ.

ಪರಿಹಾರ: ಮೇಲೆ ನಮೂದಿಸಿದ ಹಾಗೆ ವಿವರವಾಗಿ ಮಾಹಿತಿ ಕೊಡುವುದಲ್ಲದೆ, ಇದನ್ನು ಬಿಡಲು ಸಾಧ್ಯವೆಂದು ಮನವರಿಕೆ ಮಾಡಿಕೊಡಲಾಗುವುದು ಮತ್ತು ಇದಕ್ಕಾಗಿ ಕುಟುಂಬದ, ಸ್ನೇಹಿತರ, ಸಹೋದ್ಯೋಗಿಗಳ ಮತ್ತು ವೈದ್ಯರ ಸಹಾಯ ದೊರಕುವುದೆಂದು ಹೇಳಿಕೊಡಲಾಗುವುದು.

3. ಸಿದ್ಧರಾಗುವ ಹಂತ: ತಂಬಾಕು ನಿಲ್ಲಿಸಲು ಸಿದ್ಧರಾಗಿರುವುದು. ಈ ಹಂತದಲ್ಲಿರುವ ವ್ಯಕ್ತಿಯು ತಂಬಾಕು ಸೇವನೆ ನಿಲ್ಲಿಸಲು ಸಿದ್ಧನಾಗಿದ್ದು, ಕಳೆದ ಒಂದು ವರ್ಷದಲ್ಲಿ ಒಂದೆರಡು ಸಲ ಒಂದು ದಿನದ ಮಟ್ಟಿಗಾದರೂ ತಂಬಾಕು ಸೇವನೆ ನಿಲ್ಲಿಸಿರುತ್ತಾನೆ.

ಪರಿಹಾರ: ತಂಬಾಕು ಉಪಯೋಗಿ ಗಳು ಈ ಹಂತದಲ್ಲಿರುವುದು ಕಡಿಮೆ ಸಮಯಕ್ಕಾಗಿ ಮಾತ್ರ. ಈ ಹಂತವು ಚಿಕಿತ್ಸೆ ನೀಡುವುದಕ್ಕೆ ಅತ್ಯಂತ ಸೂಕ್ತ ಸಮಯವಾಗಿರುತ್ತದೆ. ಈ ಹಂತದಲ್ಲಿರುವವರು ಮೇಲೆ ನಮೂದಿಸಿದಂತೆ ತಂಬಾಕಿನ ಹಾನಿ-ಲಾಭಗಳ ಸರಿಯಾದ ಮಾಹಿತಿ ಪಡೆದು, ಇತರರ ಸಹಾಯ ಪಡೆದು, ಚಿಕಿತ್ಸೆ ಪಡೆದು ತಂಬಾಕು ಉಪಯೋಗ ನಿಲ್ಲಿಸಲು ಸಹಕರಿಸುತ್ತಾರೆ. ಇವುಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ.

4. ಕಾರ್ಯಗತಗೊಳಿಸಿದ ಹಂತ: ತಂಬಾಕು ನಿಲ್ಲಿಸಿಯಾಗಿದೆ. ಈ ಹಂತದಲ್ಲಿರುವವರು ಸಾಧಾರಣವಾಗಿ ತಂಬಾಕು ನಿಲ್ಲಿಸಿ 6 ತಿಂಗಳುಗಳಾಗಿರುತ್ತವೆ. ಆದರೆ, ಈ ಹಂತದಲ್ಲಿ ತಂಬಾಕು ಪುನಃ ಆರಂಭಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಅದೂ ಮೊದಲನೇ ವಾರದಲ್ಲಿ ತಂಬಾಕು ಪುನಃ ಆರಂಭಿಸುವ ಸಾಧ್ಯತೆ ಶೇ. 75ರಷ್ಟು ಇರುತ್ತದೆ. 
ಪರಿಹಾರ: ಈ ಹಂತದಲ್ಲಿ, ತಂಬಾಕು ನಿಲ್ಲಿಸದ ನಿರ್ಧಾರವನ್ನು ಕಾರ್ಯ ಗತಗೊಳಿಸಿ ದನ್ನು ಪ್ರೋತ್ಸಾಹಿಸಲಾಗುತ್ತದೆ . ಅದು ಮರುಕಳಿಸುವ ಸಾಧ್ಯತೆಗಳ ಬಗ್ಗೆ ಹೇಳಿ ಕೊಡಲಾಗುತ್ತದೆ. ಇದಲ್ಲದೇ, ಪುನಃ ಆರಂಭಿಸುವುದನ್ನು ತಡೆಗಟ್ಟಲು, ಆಸೆ ನಿಯಂತ್ರಿಸಲು ಕೇವಲ ವೈದ್ಯರ ದಲ್ಲದೇ, ಕುಟುಂಬದವರ, ಸ್ನೇಹಿತರ, ಸಹೋದ್ಯೋಗಿಗಳ ಸಹಾಯ ಹೇಗೆ ಪಡೆಯಬಹುದೆಂದು ತಿಳಿಸಿಕೊಡಲಾಗುತ್ತದೆ.

5. ನಿರ್ವಹಣಾ ಹಂತ: ನಿಲ್ಲಿಸಿಯಾಗಿ ಸುಮಾರು ಸಮಯವಾಗಿದೆ. ಈ ಹಂತದಲ್ಲಿರುವ ವ್ಯಕ್ತಿಯು ತಂಬಾಕು ಬಳಕೆ ನಿಲ್ಲಿಸಿ 6ಕ್ಕಿಂತ ಹೆಚ್ಚು ತಿಂಗಳು ಗಳಾಗಿರುತ್ತವೆ. ಸಮಯ ಕಳೆದಂತೆ ತಂಬಾಕು ಪುನಃ ಬಳಸುವ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಎರಡು ವರ್ಷಕ್ಕಿಂತ ಹೆಚ್ಚಿನ ಸಮಯ ತಂಬಾಕು ಉಪಯೋಗ ಬಿಟ್ಟವರಲ್ಲಿ ಕೇವಲ 4 ಪ್ರತಿಶತ ಜನ ಮಾತ್ರ ಮತ್ತೆ ತಂಬಾಕು ಸೇವನೆ ಆರಂಭಿಸುತ್ತಾರೆ.

ತಂಬಾಕು ಉಪಯೋಗ  ನಿಲ್ಲಿಸಲು ಸಹಾಯಕ  ಯೋಜನೆಗಳು
ವ್ಯಕ್ತಿಯೊಬ್ಬ ತಂಬಾಕು ನಿಲ್ಲಿಸಲು ನಿರ್ಧರಿಸಿದಾಗ/ ಸಿದ್ಧರಾಗಿರುವ ಹಂತದಲ್ಲಿ ಮನೋವೈದ್ಯರು ಈ ಕೆಳಗೆ ನಮೂದಿಸಿದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಾರೆ:
ಮನೋವೈದ್ಯರು ತಂಬಾಕು ತ್ಯಜಿಸುವ ಯೋಜನೆ ನಿರೂಪಿಸಲು ಸಹಾಯ ಮಾಡುತ್ತಾರೆ. ಇದರಲ್ಲಿ ವಿವಿಧ ಹಂತಗಳಿವೆ.  ಮೊದಲನೆಯದಾಗಿ ತಂಬಾಕು ಬಿಡುವ ಸಿದ್ಧತೆಗೆ ಸಹಾಯ ಮಾಡಲಾಗುವುದು.
 – ನಂತರ ತಂಬಾಕು ಉಪಯೋಗ ಬಿಡುವ ದಿನ ನಿರ್ಧರಿಸುವುದು. ಸಾಧಾರಣವಾಗಿ ಈ ದಿನ ನಿರ್ಧರಿಸಿದ 2 ವಾರಗಳಲ್ಲಿರಬೇಕು.
– ಕುಟುಂಬದವರಿಗೆ, ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಇದರ ಬಗ್ಗೆ ತಿಳಿಸಿ ಅವರ ಸಹಾಯ ಪಡೆಯುವುದು.
– ನಿಲ್ಲಿಸಿದ ಮೊದಲ ಕೆಲವು ವಾರಗಳಲ್ಲಿ ಉಂಟಾಗಬಹುದಾದ ತೊಡಕುಗಳನ್ನು ನಿರೀಕ್ಷಿಸಿ ಅವುಗಳನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳುವುದು.
– ಸುತ್ತ-ಮುತ್ತಲಿನ ತಂಬಾಕು ಉತ್ಪನ್ನಗಳನ್ನು ತೆಗೆಯುವುದು.
– ತಂಬಾಕು ಉಪಯೋಗಿಸುತ್ತಿದ್ದ ಸ್ಥಳಗಳಿಂದ ದೂರವಿರುವುದು ಉದಾ: ಪಾನ್‌, ಬೀಡಾ ಅಂಗಡಿಗಳು, ಹೋಟೆಲ…, ಇತ್ಯಾದಿ.
– ಒಂದು ರೀತಿಯ ತಂಬಾಕು ನಿಲ್ಲಿಸಿ ಇನ್ನೊಂದನ್ನು ಪ್ರಾರಂಭಿಸುವುದು. ಉದಾ: ಸಿಗರೇಟ… ಬಿಟ್ಟು ಗುಟಾV ಪ್ರಾರಂಭಿಸುವುದು.

ಪ್ರಾಯೋಗಿಕ ಸಲಹೆಗಳನ್ನು (ಸಮಸ್ಯೆ ಬಗೆಹರಿಸಲು) ನೀಡಲಾಗುವುದು
– ಮುಂಚಿನ ಅನುಭವಗಳು: ಮುಂಚೆ ತಂಬಾಕು ಬಿಡಲು ಸಹಾಯಕವಾದ ಮತ್ತು ವಿಫ‌ಲವಾದ ಯೋಜನೆಗಳನ್ನು ಗುರುತಿಸುವುದು.
– ತಂಬಾಕು ಪುನಃ ಪ್ರಾರಂಭಿಸಲು ಪ್ರಚೋದಕಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಎದುರಿಸುವ/ನಿವಾರಿಸುವ ಬಗ್ಗೆ ತರಬೇತಿ/ಸಲಹೆ ನೀಡಲಾಗುವುದು.
– ಮದ್ಯಪಾನ: ತಂಬಾಕು ನಿಲ್ಲಿಸಲು ನಿರ್ಧರಿಸಿದವರು ಮದ್ಯಪಾನ ಸಂಪೂರ್ಣವಾಗಿ ನಿಲ್ಲಿಸಬೇಕು ಅಥವಾ ಕಡಿಮೆ ಮಾಡಬೇಕು. ಇಲ್ಲವಾದರೆ, ಮದ್ಯಪಾನ ಮಾಡುವಾಗ ಮತ್ತೆ ತಂಬಾಕು ಉಪಯೋಗಿಸುವ ತವಕ ಶುರುವಾಗುತ್ತದೆ.
– ಇತರ ತಂಬಾಕು ಬಳಕೆದಾರರು: ಮನೆಯಲ್ಲಿ, ಸ್ನೇಹಿತರಲ್ಲಿ, ಸಹೋದ್ಯೋಗಿಗಳಲ್ಲಿ ತಂಬಾಕು ಬಳಕೆದಾರರಿ¨ªಾಗ ತಂಬಾಕು ಸೇವನೆ ನಿಲ್ಲಿಸುವುದು ಕಷ್ಟಕರವಾಗುತ್ತದೆ. ಹೀಗಾಗಿ ಅವರನ್ನು ಕೂಡ ನಿಲ್ಲಿಸಲು ಹೇಳಬಹುದು ಅಥವಾ ವ್ಯಕ್ತಿಯ ಎದುರು ಉಪಯೋಗಿಸಬಾರದು ಮತ್ತು ವ್ಯಕ್ತಿಗೆ ತಂಬಾಕು ಉಪಯೋಗಿಸುವಂತೆ ಆಹ್ವಾನ ನೀಡುವುದಾಗಲಿ/ಪ್ರಚೋದಿಸುವುದಾಗಲಿ ಮಾಡಬಾರದು. ಈ ಬಗ್ಗೆ ವ್ಯಕ್ತಿಯೇ ಆ ಎಲ್ಲ ಜನರಿಗೆ ಮುಂಚೆಯೇ ಹೇಳಿಟ್ಟಿರಬೇಕು.

– ಮುಂದಿನ ವಾರಕ್ಕೆ  

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.