ತಂಬಾಕು ಸೇವನೆ ಅಪಾಯಗಳು 


Team Udayavani, Jul 15, 2018, 6:00 AM IST

tobacco-restrictions.gif

ಹಿಂದಿನ ವಾರದಿಂದ – 4 ಮಿಲಿ ಗ್ರಾಂ ಚಿವಿಂಗ್‌ಗಮ್‌ ಬಳಸುತ್ತಿದ್ದರೆ, ಅದನ್ನು 2 ಮಿಲಿ ಗ್ರಾಂ ಮಾಡಿ ನಂತರ ಮೇಲಿನ ರೀತಿಯಲ್ಲಿ ಹಂತ-ಹಂತವಾಗಿ ಮುಂದುವರಿಸಲಾಗುವುದು
– ದಿನಕ್ಕೆ ಚಪಲವಾದಾಗ ಒಂದೆರಡು ಸಲ ಬಳಕೆಯ ಹಂತದವರೆಗೆ ತಲುಪಿದಾಗ ಇವುಗಳನ್ನು ನಿಲ್ಲಿಸಲಾಗುವುದು
– ಸಾಧಾರಣವಾಗಿ ಇವುಗಳನ್ನು ಮೂರು ತಿಂಗಳಿಗಿಂತ ಹೆಚ್ಚು ಕೊಡುವುದಿಲ್ಲ

ಚಿವಿಂಗ್‌ಗಮ್‌ ನಿಂದ ಆಗಬಹುದಾದ ಅಡ್ಡ ಪರಿಣಾಮಗಳು
ಬಾಯಿ/ಗಂಟಲು ಉರಿಯುವುದು, ವಾಂತಿ ಬರುವುದು, ಬಿಕ್ಕಳಿಕೆ ಬರುವುದು, ಹೆಚ್ಚು ಜೊಲ್ಲು ಸುರಿಯುವುದು.ಚಿವಿಂಗ್‌ಗಮ್‌ ಈ ಜನರಲ್ಲಿ ಕೊಡಲಾಗುವುದಿಲ್ಲ: ಹೊಟ್ಟೆಯಲ್ಲಿ ಹುಣ್ಣಿರುವವರು, ಕಳೆದ ಎರಡು ವಾರಗಳಲ್ಲಿ ಹೃದಯಾಘಾತ (ಹಾರ್ಟ್‌ ಅಟ್ಯಾಕ್‌), ಪಾಲ್ಸಿ (ಸ್ಟ್ರೋಕ್‌) ಆದವರು, ನಿಯಂತ್ರಣದಲ್ಲಿರದ ಹೃದಯದ ಕಾಯಿಲೆಯಿರುವವರು ಮತ್ತು ಇತರ ಗಂಭೀರ ದೈಹಿಕ ಕಾಯಿಲೆಯಿರುವವರು.

2.  ನಿಕೊಟಿನ್‌ ಕೊಡದೇ ಇರುವ ಚಿಕಿತ್ಸೆ (ನಾನ್‌- ನಿಕೊಟಿನ್‌ ರಿಪ್ಲೇಸ್‌ ಮೆಂಟ್‌ ಥೆರಪಿ)
ಈ ಚಿಕಿತ್ಸೆಯಲ್ಲಿ, ನಿಕೊಟಿನ್‌ ಪರಿಣಾಮಬೀರುವ ನರವಾಹಕಗಳ ಮೇಲೆ ಪರಿಣಾಮ ಬೀರುವ ಮಾತ್ರೆಗಳನ್ನು ಉಪಯೋಗಿಸಲಾಗುತ್ತದೆ. ಮೇಲಿನ ವಿಧಾನದಲ್ಲಿ ನಿಕೊಟಿನ್‌ ಶುರುಮಾಡಿದ ಅನಂತರ ತತ್‌ಕ್ಷಣವೇ ತಂಬಾಕು ನಿಲ್ಲಿಸಲಾಗುವುದು. ಆದರೆ ಈ ವಿಧಾನದಲ್ಲಿ ಮಾತ್ರೆ ಪ್ರಾರಂಭಿಸಿದ ಒಂದರಿಂದ ಎರಡು ವಾರದ ಅನಂತರ ತಂಬಾಕನ್ನು ನಿಲ್ಲಿಸಲಾಗುತ್ತದೆ. ಈ ಮಾತ್ರೆಗಳೆಂದರೆ: 

ಬುಪ್ರೋಪಿಯೊನ್‌ ವೆರಿನಿಕ್ಲೈನ್‌
ನಡವಳಿಕೆ ಚಿಕಿತ್ಸೆ ಮತ್ತು ಔಷಧಿ ಚಿಕಿತ್ಸೆಯನ್ನು ಒಟ್ಟಿಗೆ ಕೊಡುವುದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ಬೇರೆ-ಬೇರೆ ಚಿಕಿತ್ಸಾ ವಿಧಾನಗಳು ಬೇರೆ-ಬೇರೆ ರೀತಿಯಲ್ಲಿ ಕೆಲಸ ಮಾಡುವುದರಿಂದ, ಈ ಚಿಕಿತ್ಸೆಗಳು ಒಟ್ಟಾಗಿ ಕೊಟ್ಟಾಗ ಒಂದಕ್ಕೊಂದು ಪೂರಕವಾಗುವುದಲ್ಲದೇ ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಸ್ವಸಹಾಯ ಪದ್ಧತಿಗಳು ಸ್ವಲ್ಪ$ಮಟ್ಟದಲ್ಲಿ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಆದರೆ ಮೇಲೆ ನಮೂದಿಸಿದ ಚಿಕಿತ್ಸಾ ವಿಧಾನಗಳು ಒಂದೇ ತರಹದ ಅಥವಾ ಒಟ್ಟಾಗಿ ಕೊಟ್ಟಾಗ ಪರಿಣಾಮವು ಹೆಚ್ಚಿಗಿರುತ್ತದೆ.

ತಂಬಾಕು ನಿಲ್ಲಿಸಿದ ನಂತರ  ಕಂಡುಬರುವ ತೊಂದರೆಗಳು  ಮತ್ತು ಅವುಗಳ ನಿರ್ವಹಣೆ
ತಂಬಾಕಿನ ಅವಲಂಬಿತ ವ್ಯಕ್ತಿ ತಂಬಾಕು ಸೇವನೆ ನಿಲ್ಲಿಸಿದ ಅನಂತರ ವಿವಿಧ ದೈಹಿಕ/ಮಾನಸಿಕ ತೊಂದರೆಗಳು ಸ್ವಲ್ಪ ಸಮಯದವರೆಗೆ ಅಂದರೆ 2 ದಿನದಿಂದ 2 ವಾರಗಳವರೆಗೆ ಕಂಡುಬರಬಹುದು. ಇವುಗಳ ನಿರ್ವಹಣೆಗೆ ಮೇಲೆ ನಮೂದಿಸಿದ ಚಿಕಿತ್ಸೆಗಳು ಫ‌ಲಕಾರಿಯಾಗಿರುವುವು. ಅದಲ್ಲದೇ ಕೆಲವು ನಡವಳಿಕಾ ವಿಧಾನಗಳನ್ನು ಈ ಕೆಳಗಿನಂತೆ ಕೂಡ ಕಲಿಸಿಕೊಡಲಾಗುವುದು.

ಕಿರಿ-ಕಿರಿಯಾಗುವುದು: ವಾಕಿಂಗ್‌ ಹೋಗುವುದು, ಸ್ನಾನಕ್ಕೆ ಹೋಗುವುದು, ಇಷ್ಟವಾಗುವ ಸಂಗೀತ ಕೇಳುವುದು, ಸ್ನೇಹಿತರೊಂದಿಗೆ ಮಾತಾಡುವುದು, ಯೋಗ ಮಾಡುವುದು, ನಿಧಾನವಾಗಿ ಮತ್ತು ಆಳವಾಗಿ ಉಸಿರಾಡುವುದು.

ಆಯಾಸ: ವಿಶ್ರಮಿಸುವುದು, ನಿದ್ದೆ ಮಾಡುವುದು, ನೀರು/ಜ್ಯೂಸ್‌ ಕುಡಿಯುವುದು.
ನಿದ್ರಾಹೀನತೆ: 6 ಗಂಟೆಯ ಅನಂತರ ಟೀ, ಕಾಫಿ, ಕೋಲ್ಡ… ಡ್ರಿಂಕ್ಸ್‌ ಕುಡಿಯಬಾರದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು
ಕೆಮ್ಮು: ಬಿಸಿ ಆವಿ/ಹೊಗೆ ತೆಗೆದುಕೊಳ್ಳುವುದು
ಏಕಾಗ್ರತೆಗೆ ಕಷ್ಟವಾಗುವುದು: ಕೆಲಸ ಮಾಡುವ ಬಗ್ಗೆ ಮುಂಚೆಯೇ ಯೋಜನೆ ಮಾಡಿಕೊಳ್ಳುವುದು, ಸಮಯ ಪಾಲನೆ ಮಾಡುವುದು, ಕೆಲಸವನ್ನು ವಿಭಜಿಸುವುದು
ಮಲಬದ್ಧತೆ: ಹೆಚ್ಚು ನಾರಿರುವ ಆಹಾರ ತೆಗೆದುಕೊಳ್ಳುವುದು ಉದಾ: ಹಣ್ಣು, ತರಕಾರಿ, ಇತ್ಯಾದಿ; ಹೆಚ್ಚಿನ ದ್ರವ್ಯ ತೆಗೆದುಕೊಳ್ಳುವುದು
ತಲೆನೋವು: ಸರಿಯಾಗಿ ದ್ರವ್ಯ ಸ್ವೀಕರಿಸುವುದು, ಸ್ವಲ್ಪ-ಸ್ವಲ್ಪ ತಿನ್ನುತ್ತಾ ಇರುವುದು, ವಿಶ್ರಮಿಸುವುದು
ಹಸಿವು ಹೆಚ್ಚಾಗುವುದು: ಸ್ವಲ್ಪ ಸ್ವಲ್ಪ ಆಹಾರ ಪದೇ-ಪದೇ ತೆಗೆದುಕೊಳ್ಳುವುದು 
ತಂಬಾಕಿನ ಆಸೆಯಾಗುವುದು/ಚಪಲ: ಗಮನ ಬೇರೆ ಕಡೆ ಹರಿಸುವುದು- ಸಂಗೀತ ಕೇಳುವುದು, ಓದುವುದು, ಮಾತನಾಡುವುದು, ವಾಕಿಂಗ್‌ ಮಾಡುವುದು, ನೀರು ಕುಡಿಯುವುದು. ತನ್ನಷ್ಟಕ್ಕೆ ತಾನೆ ಹೇಳಿಕೊಳ್ಳುವುದು: ಈ ಚಪಲ ತಾತ್ಕಾಲಿಕ ಮತ್ತು ಕೆಲವು ಕ್ಷಣಗಳಿಗಾಗಿ ಮಾತ್ರ ಇರುವುದು; ನಾನಿದನ್ನು ನಿಯಂತ್ರಿಸಬಲ್ಲೆ.

ಕೊನೆಯದಾಗಿ ಹೆಳುವುದಾದರೆ, ತಂಬಾಕು ಒಂದು ಜೀವನಶೈಲಿಯ ಅಂಗವಾಗಿ ಕೆಲವರಲ್ಲಿ ಜೀವನದ ಭಾಗವಾಗಿ ಹೋಗಿ ತನ್ನದಲ್ಲದೇ ಕುಟುಂಬ, ಸಮಾಜದ ಆರೋಗ್ಯಕ್ಕೆ ಶಬ್ದವಿಲ್ಲದೇ ಗಂಭೀರವಾಗಿ ಹಾನಿಮಾಡುತ್ತಿದೆ. ಇವುಗಳಿಗಾಗಿ ಚಿಕಿತ್ಸೆ ಲಭ್ಯವಿದ್ದು, ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ವೈದ್ಯರೊಟ್ಟಿಗೆ ಈ ನಿಟ್ಟಿನಲ್ಲಿ ತಂಬಾಕು ಸೇವಿಸುವ ವ್ಯಕ್ತಿಗೆ ಸಹಾಯ ನೀಡಿದರೆ ಈ ತಂಬಾಕಿನ ಪಿಡುಗನ್ನು ಆತನಿಂದ ಶಾಶ್ವತವಾಗಿ ದೂರವಿಡಬಹುದು. ಇವುಗಳಿಗಾಗಿ ಮಾನಸಿಕ ರೋಗ ಚಿಕಿತ್ಸಾ ವಿಭಾಗದಲ್ಲಿ ಸೂಕ್ತ ಚಿಕಿತ್ಸೆಯನ್ನು ಕೊಡಲಾಗುವುದು.
(ಆಧಾರ: ವಿಶ್ವ ಆರೋಗ್ಯ ಸಂಸ್ಥೆ ಕೈಪಿಡಿ 2012, ತಂಬಾಕು ಅವಲಂಬನೆ ಚಿಕಿತ್ಸಾ ಮಾರ್ಗದರ್ಶಿ, ಭಾರತ ಸರಕಾರ, 2011)
Mob: 9972028881; 
Email: 
ravindra.nmhotmail.com

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.