ಅನಾರೋಗ್ಯಕ್ಕಿಂತಲೂ ಮಾನಸಿಕ ಕುಸಿತ ಸೃಷ್ಟಿಸುವ ತೊನ್ನು


Team Udayavani, Jul 15, 2018, 6:00 AM IST

tonnu11111.gif

ಹಿಂದಿನ ವಾರದಿಂದ- ಮೊದಲಿಗೆ ಚರ್ಮದಲ್ಲಿ ಹಾಲು ಬಿಳುಪಿನ ಸಣ್ಣ ಕಲೆಗಳು ಉಂಟಾಗುತ್ತವೆ. ತೊನ್ನು ಪ್ರವರ್ಧಮಾನಕ್ಕೆ ಬರುವ ಅವಧಿ ಮತ್ತು ಅದರ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವೊಮ್ಮೆ ಸಣ್ಣ ಬಿಳಿ ಕಲೆಗಳು ಕಾಣಿಸಿಕೊಂಡು ಅಷ್ಟಕ್ಕೇ ಉಳಿದುಬಿಡುತ್ತವೆ. ಇನ್ನು ಕೆಲವೊಮ್ಮೆ ಹಲವು ಬಿಳಿ ಕಲೆಗಳು ಉಂಟಾಗಿ ತಿಂಗಳುಗಟ್ಟಲೆ ಅಥವಾ ವರ್ಷಗಳ ಕಾಲ ಹಾಗೆಯೇ ಇರುತ್ತವೆ. ಆದರೆ ಸಾಮಾನ್ಯವಾಗಿ ಸಣ್ಣದಾಗಿ ಕಾಣಿಸಿಕೊಂಡ ಕಲೆಗಳು ದೊಡ್ಡದಾಗುವುದು ಮತ್ತು ದೇಹದ ಇತರ ಭಾಗಗಳಲ್ಲಿಯೂ ಉಂಟಾಗುತ್ತವೆ.  ಚರ್ಮದ ದೊಡ್ಡ ಪ್ರದೇಶದಲ್ಲಿ ಕ್ರಮೇಣ ಈ ಕಲೆಗಳು ಉಂಟಾಗಬಹುದು. ಕೆಲವೊಮ್ಮೆ ಈ ಕಲೆಗಳು ದೇಹದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಬಹುದು- ಇದನ್ನು ಪಾರ್ಶ್ವ ತೊನ್ನು ಎಂದು ಕರೆಯುತ್ತಾರೆ. 

ಮೊದಲ ಬಿಳಿ ಕಲೆಗಳು ಪತ್ತೆಯಾದಾಗಲೇ ಮುಂದೆ ದೇಹದ ಎಷ್ಟು ಭಾಗ ತೊನ್ನು ಪೀಡಿತವಾಗಬಹುದು ಎಂಬುದನ್ನು ತಿಳಿಯುವುದಕ್ಕೆ ಯಾವುದೇ ಮಾರ್ಗೋಪಾಯ ಇಲ್ಲ. ಒಮ್ಮೆ ಉಂಟಾದ ಬಿಳಿ ಕಲೆಗಳು ಮುಂದೆ ಯಥಾಸ್ಥಿತಿಯಲ್ಲಿ ಉಳಿಯುತ್ತವೆ; ಅಪರೂಪವಾಗಿ ಕೆಲವು ಬಿಳಿ ಕಲೆಗಳು ಚರ್ಮದ ತಮ್ಮ ಮೂಲಬಣ್ಣವನ್ನು ಮರಳಿ ಪಡೆದುಕೊಂಡು ಸಹಜ ಬಣ್ಣಕ್ಕೆ ಮರಳುತ್ತವೆ (ರೀ ಪಿಗೆ¾ಂಟ್‌).

ಬಿಳಿ ಕಲೆಗಳು ತೊನ್ನು ಹೌದೇ ಅಲ್ಲವೇ ಎಂಬುದಾಗಿ ತಿಳಿಯುವುದು ಹೇಗೆ?
ದೇಹದಲ್ಲಿ ಮೂಡುವ ಎಲ್ಲ ಬಿಳಿಯ ಕಲೆಗಳೂ ತೊನ್ನು ಅಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ತೊನ್ನನ್ನೇ ಹೋಲುವ ಅನೇಕ ಅನಾರೋಗ್ಯ ಸ್ಥಿತಿಗಳಿವೆ. ಆದ್ದರಿಂದ ಬಾಧಿತ ರೋಗಿಗಳು ಮಹತ್ವದ ಕ್ರಮಗಳಿಗೆ ಮುಂದಾಗುವ ಮುನ್ನ ಚರ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಬಹುತೇಕ ಪ್ರಕರಣಗಳಲ್ಲಿ ತೊನ್ನಿನ ರೋಗ ನಿರ್ಧಾರವು ವೈದ್ಯಕೀಯ ತಪಾಸಣೆಯನ್ನು ಆಧರಿಸಿರುತ್ತದೆ, ಸಾಮಾನ್ಯವಾಗಿ ಯಾವುದೇ ಪರೀಕ್ಷೆಗಳಿಗೆ ಒಳಗಾಗಬೇಕಾಗುವುದಿಲ್ಲ. ಬಹುತೇಕ ಬಿಳಿ ಕಲೆಗಳನ್ನು ಚಿಕಿತ್ಸೆಗೊಳಪಡಿಸಬಹುದು ಮತ್ತು ಗುಣಪಡಿಸಬಹುದು.

ಏನಾದರೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೇ?
ಚರ್ಮಕ್ಕೆ ಗಾಯವಾದ ಸ್ಥಳದಲ್ಲಿ ಬಿಳಿ ಕಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಚರ್ಮಕ್ಕೆ ಗಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಮುಖ ಮತ್ತು ಸೂರ್ಯನ ಕಿರಣಗಳಿಗೆ ತೆರೆದುಕೊಳ್ಳುವ ದೇಹ ಭಾಗದಲ್ಲಿ ಕಲೆ ಉಂಟಾಗಿದ್ದು, ಬಿಸಿಲು ಬಿದ್ದಾಗ ಅವು ಕೆಂಪಗಾಗಿ ಉರಿ ಕಾಣಿಸಿಕೊಳ್ಳುತ್ತಿದ್ದರೆ ಉತ್ತಮ ಸೂರ್ಯ ರಕ್ಷಣಾಂಶ (ಸನ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌ – ಎಸ್‌ಪಿಎಫ್) ಇರುವ ಸನ್‌ಸ್ಕ್ರೀನ್‌ ಉಪಯೋಗಿಸುವುದು ಉತ್ತಮ. ಆಹಾರಾಭ್ಯಾಸದ ಪಾತ್ರ ಚರ್ಚಾಸ್ಪದವಾಗಿದ್ದು, ಸಾಮಾನ್ಯವಾಗಿ ಆಹಾರಾಭ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯ ಇಲ್ಲ. 

ತೊನ್ನಿಗೆ ಚಿಕಿತ್ಸೆ ಇದೆಯೇ?
ತೊನ್ನು ಪ್ರಧಾನವಾಗಿ ಒಂದು ಸೌಂದರ್ಯಾತ್ಮಕ ಸಮಸ್ಯೆಯಾಗಿರುವುದರಿಂದ ಬಾಧಿತ ವ್ಯಕ್ತಿ ತೊನ್ನಿನಿಂದ ಉಂಟಾಗುವ ಸೌಂದರ್ಯ ನಷ್ಟದ ಬಗ್ಗೆ ಸಮಸ್ಯೆ ಹೊಂದಿಲ್ಲದೇ ಇದ್ದರೆ ಚಿಕಿತ್ಸೆ ಪಡೆಯಬೇಕಾದ ಅಗತ್ಯ ಇಲ್ಲ. ಪ್ರಸ್ತುತ ತೊನ್ನು ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಆಯ್ಕೆಗಳು ಇವೆ; ರೋಗ ಸ್ಥಿತಿಯನ್ನು ಗುಣಪಡಿಸುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಬಹುದಾಗಿದೆ. ಅನೇಕ ತೊನ್ನು ಪೀಡಿತ ವ್ಯಕ್ತಿಗಳಲ್ಲಿ ಬಿಳಿ ಕಲೆಗಳು ಹೆಚ್ಚುವುದನ್ನು ತಡೆಯಬಹುದಾಗಿದೆ ಹಾಗೂ ಚರ್ಮ ಸಹಜ ಬಣ್ಣವನ್ನು ಪಡೆಯುವಂತೆ ಮಾಡಬಹುದಾಗಿದೆ. “ಎಲ್ಲದಕ್ಕೂ ಒಂದೇ ಮದ್ದು’ ಎಂಬಂತಹ ಚಿಕಿತ್ಸೆ ತೊನ್ನು ರೋಗಕ್ಕಿಲ್ಲ. ಯಾವ ವಿಧವಾದ ತೊನ್ನು ಎಂಬುದನ್ನು ಆಧರಿಸಿ ಒದಗಿಸಲಾದ ಚಿಕಿತ್ಸೆಗೆ ಪ್ರತಿಸ್ಪಂದನೆಯೂ ಭಿನ್ನವಾಗಿರುತ್ತದೆ. 

ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಇಲ್ಲಿ  ಸಂಕ್ಷಿಪ್ತ ವಿವರಗಳಿವೆ
ಫೊಟೊಥೆರಪಿ
ತೊನ್ನಿಗೆ ಫೊಟೊಥೆರಪಿಯು ಒಂದು ಮುಖ್ಯ ಚಿಕಿತ್ಸಾ ವಿಧಾನವಾಗಿದೆ. ಫೊಟೊಥೆರಪಿಯನ್ನು ಒದಗಿಸುವ ಅನೇಕ ರೂಪಗಳಿವೆ – ಇವುಗಳಲ್ಲಿ ಮೂರು ಮುಖ್ಯ ವಿಧಗಳೆಂದರೆ ನ್ಯಾರೊಬ್ಯಾಂಡ್‌ ಅಲ್ಟ್ರಾವಯಲೆಟ್‌ ಥೆರಪಿ (ಎನ್‌ಬಿಯುವಿಬಿ),ಟಾರ್ಗೆಟೆಡ್‌ ಫೊಟೊಥೆರಪಿ ಮತ್ತು ಪಿಯುವಿಎ ಥೆರಪಿ. ಇವುಗಳನ್ನು ಸಾಮಾನ್ಯವಾಗಿ ವಿಶೇಷ ಛೇಂಬರ್‌ನಲ್ಲಿ ತಜ್ಞರ ಮೇಲ್ವಿಚಾರಣೆಯಲ್ಲಿ ಒದಗಿಸಲಾಗುತ್ತದೆ ಮತ್ತು ಬಹುತೇಕವಾಗಿ ಇವು ಸುರಕ್ಷಿತವಾಗಿವೆ. ಪಿಯುವಿಎ ಥೆರಪಿಯು ಚರ್ಮವನ್ನು ಬೆಳಕಿಗೆ ಸೂಕ್ಷ್ಮ ಸಂವೇದಿಯನ್ನಾಗಿಸುವ ವಿಶೇಷ ಔಷಧಿ (ಸೊರಾಲಿನ್‌) ಬಳಕೆಯನ್ನು ಒಳಗೊಂಡಿದೆ. ಈ ಔಷಧವು ಕ್ರೀಮ್‌ ಅಥವಾ ಮಾತ್ರೆಯ ರೂಪದಲ್ಲಿ ಇರಬಹುದು. ಆ ಬಳಿಕ ಆಸ್ಪತ್ರೆಯಲ್ಲಿ ಚರ್ಮವನ್ನು ಯುವಿಎ ಬೆಳಕಿನ ಮೂಲಕ ಚಿಕಿತ್ಸೆಗೊಳಪಡಿಸಲಾಗುತ್ತದೆ. ಈ ಚಿಕಿತ್ಸೆಯನ್ನು ಕೆಲವು ತಿಂಗಳುಗಳಿಂದ ಹಿಡಿದು ವರ್ಷದವರೆಗೆ ವಾರಕ್ಕೆ ಎರಡು-ಮೂರು ಬಾರಿ ಪುನರಾವರ್ತಿಸಬೇಕಾಗುತ್ತದೆ. ಎನ್‌ಬಿ-ಯುವಿಬಿಯಲ್ಲಿ ಯಾವುದೇ ಬಾಹ್ಯ ಔಷಧವನ್ನು ತೆಗೆದುಕೊಳ್ಳಬೇಕಾದ ಆವಶ್ಯಕತೆ ಇಲ್ಲ. ದೇಹದ ಶೇ.20ಕ್ಕಿಂತಲೂ ಅಧಿಕ ಭಾಗದಲ್ಲಿ ವ್ಯಾಪಿಸಿರುವ ತೊನ್ನಿಗೆ ಚಿಕಿತ್ಸೆ ನೀಡಲು ನ್ಯಾರೊಬ್ಯಾಂಡ್‌ ಯುವಿಬಿ ಫೊಟೊಥೆರಪಿ (ಎನ್‌ಬಿಯುವಿಬಿ) ಒಂದು ಅತ್ಯುತ್ತಮ ಚಿಕಿತ್ಸಾ ವಿಧಾನ ಎಂದು ಪರಿಗಣಿತವಾಗಿದೆ. ಇಲ್ಲಿ 311-312 ಎನ್‌ಎಂನ ಯುವಿಬಿ ಕಿರಣ ತರಂಗಾಂತರ ಭಾಗವನ್ನು ಬಳಸಲಾಗುತ್ತದೆ. 

ಇದು ಚರ್ಮವನ್ನು ಸುಡುವ ಸಮಯಕ್ಕಿಂತಲೂ ಅಲ್ಪಾವಧಿಯಲ್ಲಿ ಪಿಗೆ¾ಂಟ್‌ ಜೀವಕೋಶಗಳನ್ನು ಮೆಲನೋಸೈಟ್‌ ಉತ್ಪಾದಿಸುವಂತೆ ಪ್ರಚೋದಿಸುತ್ತದೆ. ಇದನ್ನು ವೈದ್ಯರ ಕಚೇರಿಯಲ್ಲಿ ಸಂಪೂರ್ಣ ದೇಹ ಕ್ಯಾಬಿನೆಟ್‌ನಲ್ಲಿ ಅಥವಾ ಕೈಯಲ್ಲಿ ಹಿಡಿಯುವ ಉಪಕರಣದ ಮೂಲಕ ನಡೆಸಬಹುದಾಗಿದೆ. ತೊನ್ನು ಸಣ್ಣ ಚರ್ಮ ಭಾಗಗಳನ್ನು ಬಾಧಿಸಿದ್ದಾಗ ಕೈಯಲ್ಲಿ ಹಿಡಿಯುವ ಉಪಕರಣ ಬಳಕೆ ಸಾಕಷ್ಟು ಅನುಕೂಲಕರವಾಗುತ್ತದೆ. ತೊನ್ನಿನ ಸಣ್ಣ ಕಲೆಗಳನ್ನು ಟಾರ್ಗೆಟೆಡ್‌ ಫೊಟೊಥೆರಪಿಯ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದು. ಇದರ ಮೂಲಕ ತೊನ್ನು ಬಾಧಿಸಿದ ಸಣ್ಣ ಪ್ರದೇಶಗಳನ್ನು ಮಾತ್ರ ಚಿಕಿತ್ಸೆಗೊಳಪಡಿಸಬಹುದು ಹಾಗೂ ಟಾರ್ಗೆಟೆಡ್‌ ಫೊಟೊಥೆರಪಿಯಲ್ಲಿ ಚರ್ಮದ ಪುನರ್‌ ಬಣ್ಣ ಗಳಿಕೆ ಕ್ಷಿಪ್ರವಾಗಿರುತ್ತದೆ. ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಲು ಅನನುಕೂಲವುಳ್ಳ ರೋಗಿಗಳಿಗೆ ಅತಿನೇರಳೆ ಕಿರಣಗಳ ಮೂಲವಾಗಿ ಸೂರ್ಯನ ಬೆಳಕನ್ನೇ ಉಪಯೋಗಿಸಬಹುದಾಗಿದೆ. 

– ಮುಂದಿನ ವಾರಕ್ಕೆ 

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.