ಸುಂದರ ನಗು ಅರಳಿಸುವ ಸುದಂತ ಯೋಜನೆ ಚಿಕಿತ್ಸೆ


Team Udayavani, Aug 12, 2018, 6:00 AM IST

aroo.jpg

ವ್ಯಕ್ತಿಯ ಹಲ್ಲು ಸಾಲುಗಳು ಅಥವಾ ದವಡೆಗಳು ಪರಸ್ಪರ ಹೊಂದಾಣಿಕೆ ಆಗದೇ ಇದ್ದರೆ ಅದನ್ನು ತಪ್ಪು ಜಗಿತ ಅಥವಾ ಮಾಲ್‌ ಒಕ್ಲೂಶನ್‌ ಎಂಬುದಾಗಿ ಕರೆಯುತ್ತಾರೆ. ಪರಸ್ಪರ ಹೊಂದಾಣಿಕೆ ಆಗದ ಕಳಪೆ ಜಗಿತವು ವಂಶವಾಹಿಯಾಗಿರಬಹುದು ಅಥವಾ ಉಂಟಾದದ್ದಾಗಿರಬಹುದು. ಇದಕ್ಕೆ ಕಾರಣಗಳಲ್ಲಿ ಹಲ್ಲು ಇಲ್ಲದಿರುವುದು ಅಥವಾ ಹೆಚ್ಚುವರಿ ಹಲ್ಲು ಇರುವುದು, ಹಲ್ಲುಗಳು ಕಿಕ್ಕಿರಿದಿರುವುದು ಅಥವಾ ದವಡೆಗಳು ತಪ್ಪು ಸ್ಥಾನದಲ್ಲಿ ಇರುವುದು ಸೇರಿವೆ. ಅಪಘಾತ ಅಥವಾ ಚಿಕ್ಕಮಕ್ಕಳು ದೀರ್ಘ‌ಕಾಲ ಬೆರಳು ಯಾ ಹೆಬ್ಬೆರಳು ಚೀಪುವ ಅಭ್ಯಾಸದಿಂದ ಕೂಡ ಮಾಲ್‌ಒಕ್ಲೂಶನ್‌ ಉಂಟಾಗಬಹುದು.

1. ಉಬ್ಬುಹಲ್ಲು
ಮೇಲ್ಭಾಗದ ದಂತಪಂಕ್ತಿಯ ಹಲ್ಲುಗಳು ತುಂಬಾ ಮುಂದಕ್ಕೆ ಚಾಚಿಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ವ್ಯಕ್ತಿಗೆ ತುಟಿಗಳನ್ನು ಮುಚ್ಚಲು ಅಸಾಧ್ಯವಾಗುತ್ತದೆಯಲ್ಲದೆ ಮುಖದ ಅಂದವೂ ಕೆಡುತ್ತದೆ. 

2. ಒಳಜಗಿತ
ಮೇಲ್ಭಾಗದ ಮುಂದಿನ ಹಲ್ಲುಗಳು ಕೆಳಗಿನ ಸಾಲಿನ ಹಲ್ಲುಗಳಿಗಿಂತ ಮುಂದಕ್ಕೆ ಕಚ್ಚಿಕೊಳ್ಳುವುದು.

3. ಅಡ್ಡಾದಿಡ್ಡಿ ಜಗಿತ
ಮೇಲ್ಭಾಗದ ಹಲ್ಲುಗಳು ಕೆಳ ಸಾಲಿನ ಹಲ್ಲುಗಳ ಒಳಗೆ ಕಚ್ಚಿಕೊಳ್ಳುವ ಪರಿಣಾಮ ಜಗಿತದ ಹೊಂದಾಣಿಕೆ ಕೆಡುತ್ತದೆ.

4. ತೆರೆದ ಜಗಿತ
ಮೇಲ್ಭಾಗದ ಹಲ್ಲು ಸಾಲು ಮತ್ತು ಕೆಳಭಾಗದ ಹಲ್ಲು ಸಾಲು ಜಗಿಯುವಾಗ ಕೂಡಿಕೊಳ್ಳುವುದಿಲ್ಲ.

5. ಹಲ್ಲುಗಳು ಕಿಕ್ಕಿರಿದಿರುವಿಕೆ ಮತ್ತು ಹಲ್ಲುಗಳ ನಡುವೆ ಹೆಚ್ಚು ಸ್ಥಳ
ಹಲ್ಲುಗಳಿಗೆ ಮೂಡಲು ಅಗತ್ಯವಿದ್ದಷ್ಟು ಸ್ಥಳಾವಕಾಶ ಇಲ್ಲವಾದಾಗ ಕಿಕ್ಕಿರಿಯುವಿಕೆ ಉಂಟಾಗುತ್ತದೆ. ಹಲ್ಲುಗಳು ತಪ್ಪಿ ಹೋಗುವುದರಿಂದ ಹೆಚ್ಚುವರಿ ಸ್ಥಳಾವಕಾಶ ಉಂಟಾಗಬಹುದು. ಕೆಲವೊಮ್ಮೆ ಹಲ್ಲುಸಾಲುಗಳು ಸರಿಯಾಗಿ ಹೊಂದದೆ ಕುರೂಪಕ್ಕೂ ಕಾರಣವಾಗಬಹುದು. ಕ್ಲಿಪ್‌ಗ್ಳು ಅಥವಾ ಬ್ರ್ಯಾಕೆಟ್‌ಗಳ ಸಹಾಯದಿಂದ ಹಲ್ಲುಗಳನ್ನು ತೆಗೆದುಹಾಕಿ ಯಾ ತೆಗೆದುಹಾಕದೆಯೂ ಹಲ್ಲುಗಳ ಹೊಂದಾಣಿಕೆಯನ್ನು ಸರಿಪಡಿಸಬಹುದು. ಯಾವುದೇ ಸಮಸ್ಯೆ ಇಲ್ಲದೆಯೇ ಮುಖದಲ್ಲಿ ಸುಂದರ ನಗುವನ್ನು ಅರಳಿಸಬಹುದು.ಸುದಂತ ಯೋಜನೆ ಚಿಕಿತ್ಸೆಯ ಮೂಲಕ ನಿಮ್ಮ ಹಲ್ಲುಗಳ ಹೊಂದಾಣಿಕೆಯನ್ನು ಸರಿಪಡಿಸಿಕೊಳ್ಳಿ; ಸುಂದರ ನಗು ನಿಮ್ಮ ಮುಖದಲ್ಲಿ ಮೂಡಲಿ.

ಡಾ| ಸಿದ್ದಾರ್ಥ ಮೆಹ್ತಾ, 
ಆಥೊìಡಾಂಟಿಕ್ಸ್‌ ಮತ್ತು ಡೆಂಟೊಫೇಶಿಯಲ್‌ ಆಥೊìಪೆಡಿಕ್ಸ್‌ ವಿಭಾಗ,
ಮಣಿಪಾಲ ದಂತವೈದ್ಯಕೀಯ ಕಾಲೇಜು, ಮಣಿಪಾಲ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.