ಮಕ್ಕಳನ್ನು ಮಾತನಾಡಿಸಿ; ವ್ಯಸನದಿಂದ ದೂರವಿರಿಸಿ


Team Udayavani, Aug 19, 2018, 6:00 AM IST

drugs-15151515.jpg

ಜಗತ್ತು ಎದುರಿಸುತ್ತಿರುವ ನಾನಾ ಕಾಯಿಲೆ/ತೊಂದರೆಗಳನ್ನು ಪರಿಹರಿಸಲು ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಅವುಗಳಿಗೆ ಸೂಕ್ತ ನಿವಾರಣೆಗಳು ದೊರಕುತ್ತಿವೆ. ಆದರೂ, ಹೊಸ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ ಅಥವಾ ಹಳೆ ಕಾಯಿಲೆಗಳಿಂದ ಹೊಸ ತೊಡಕುಗಳುಂಟಾಗುತ್ತಿವೆ. ಇವುಗಳಲ್ಲದೆ, ಕೆಲವು ಹಳೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳಿದ್ದರೂ ಅವುಗಳನ್ನು ಜಾರಿಗೆ ತರಲು/ಅಳವಡಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಯಾಕೆಂದರೆ, ಈ ಸಮಸ್ಯೆಗಳಿಗೆ ವ್ಯಕ್ತಿಯ ನಡವಳಿಕೆಗಳು ಮುಖ್ಯ ಕಾರಣ. 

ಕಾಯಿಲೆಗೆ ಕೇವಲ ಜೈವಿಕ ಕಾರಣಗಳಾಗಿದ್ದರೆ, ಅವುಗಳನ್ನು ಗುರುತಿಸಿ ಬಗೆಹರಿಸಬಹುದು. ಆದರೆ ನಡವಳಿಕೆ ವ್ಯಕ್ತಿಯ ಆತ್ಮಸಮ್ಮಾನದೊಟ್ಟಿಗೆ ಬೆರೆತುಕೊಂಡಿದ್ದು, ಅದನ್ನು ತಿದ್ದುವುದು ಜಟಿಲವಾದ ಒಗಟೆಂದು ಹೇಳಬಹುದು. ಈ ರೀತಿ ನಡವಳಿಕೆಯಿಂದ ಉಂಟಾಗುವ ತೊಂದರೆಗಳು ಮುಖ್ಯವಾಗಿ ಕಂಡುಬರುವುದು ಮಾದಕ ವಸ್ತುಗಳ ವ್ಯಸನದಲ್ಲಿ. 

ಹೊಸ ಮಾದಕ ವಸ್ತುಗಳ ತಯಾರಿ; ಹೊಸ ಬಳಕೆ ವಿಧಾನ 
ಅನಾದಿ ಕಾಲದಿಂದಲೂ, ಮಾದಕ ವಸ್ತುಗಳನ್ನು ಜನರು ಬಳಸುತ್ತಿರುವುದನ್ನು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖೀಸಲಾಗಿದೆ. ಆದರೆ, ಅವು ಕೇವಲ ಮೋಜು ಅಥವಾ ಸಾಮಾಜಿಕ ಸಮಾರಂಭಗಳಲ್ಲಿ ಬಳಕೆಯಾಗುತ್ತಿದ್ದವು ಮತ್ತು ಅವುಗಳು ಮದ್ಯ, ಹೊಗೆಸೊಪ್ಪು, ಗಾಂಜಾ, ಇತ್ಯಾದಿಗಳಿಗೆ ಸೀಮಿತವಾಗಿದ್ದವು. ಸಮಯ ಕಳೆದಂತೆ ಹೊಸ-ಹೊಸ ರಾಸಾಯನಿಕ ಮಾದಕ ವಸ್ತುಗಳನ್ನು ತಯಾರಿಸಲಾಯಿತಲ್ಲದೇ, ಅವುಗಳನ್ನು ಉಪಯೋಗಿಸಲೂ ಹೊಸ ವಿಧಾನಗಳನ್ನೂ ಜನ ಅನ್ವೇಶಿಸತೊಡಗಿದರು. 

ಬಾಪು ಜನ್ಮದಿಂದನದಂದು 
ವ್ಯವಸನ ಮುಕ್ತ ಸಂಕಲ್ಪ

ವಿಶ್ವದಾದ್ಯಾಂತ ಮಾದಕ ವ್ಯವಸನ ಸಮಸ್ಯೆಯ ಉಗಮವನ್ನು ತಡೆಗಟ್ಟಲು, ಜನರಲ್ಲಿ ಜಾಗೃತಿ ಮೂಡಿಸಲು ಮಾದಕ ವಸ್ತುಗಳ ವ್ಯಸನ ವಿರೋಧ ದಿನ ಆಚರಿಸಲಾಗುತ್ತದೆ. ಅನೇಕ ರಾಷ್ಟ್ರಗಳು ಈ ದಿನವನ್ನು ಜೂನ್‌ 26ರಂದು ಆಚರಿಸುತ್ತವೆ. ಭಾರತದಲ್ಲಿ ಈ ದಿನವನ್ನು ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್‌ 2ರಂದು ಆಚರಿಸಲಾಗುತ್ತದೆ. ಈ ದಿನದಂದು ವ್ಯವಸನ ಮುಕ್ತವಾಗುವ ಸಂಕಲ್ಪ ಮಾಡಲಾಗುತ್ತದೆ.

“ಮೊದಲು ಆಲಿಸಿ’ ಧ್ಯೇಯ 
ಪ್ರತೀ ವರ್ಷ ಒಂದು ಧ್ಯೇಯ ವಾಕ್ಯವನ್ನು ಮಂಡಿಸಿ, ಆ ಧ್ಯೇಯ ವಾಕ್ಯದ ಮಾರ್ಗದಲ್ಲಿ ಎಲ್ಲ ರಾಷ್ಟ್ರಗಳು ಹಲವಾರು ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಈ ವರ್ಷದ ಧ್ಯೇಯವಾಕ್ಯ ವೆಂದರೆ “ಮೊದಲು ಆಲಿಸಿ’. ಮಕ್ಕಳು ಮತ್ತು ತರುಣರು (ಹದಿಹರೆಯ ದವರು) ಆರೋಗ್ಯವಂತರಾಗಿ ಮತ್ತು ಸುರಕ್ಷಿತರಾಗಿ ಬೆಳೆಯಲು ಸಹಾಯ ಮಾಡಲು ಬೇಕಾಗಿರುವ ಮೊದಲ ಹೆಜ್ಜೆಯೆಂದರೆ ಅವರನ್ನು ಆಲಿಸಿ/ಅವರು ಹೇಳುವುದನ್ನು ಕೇಳಿ. 

ವಿಶ್ವದಾದ್ಯಂತ ವೈಜ್ಞಾನಿಕವಾಗಿ ನಡೆಸಿದ ವಿವಿಧ ಅಧ್ಯಯನಗಳಲ್ಲಿ ಕಂಡುಬಂದಿರುವ ಮುಖ್ಯ ಅಂಶವೆಂದರೆ ಹೆಚ್ಚಾಗಿ ಮಾದಕ ವಸ್ತುಗಳ ಮೊದಲ ಉಪಯೋಗ ಪ್ರಾರಂಭವಾಗುವುದು ಹದಿಹರೆಯದ ಅಥವಾ ತಾರುಣ್ಯದ ಹಂತದಲ್ಲಿ. ಇದು ಈ ವಯಸ್ಸಿನಲ್ಲಿ ಆರಂಭವಾಗಲು ಹಲವಾರು ಕಾರಣಗಳಿವೆ. 

ಆದರೆ ಈ ಹಂತದಲ್ಲಿ ಅವರಿಗೆ ಮುಖ್ಯವಾಗಿ ಕುಟುಂಬದ ಪ್ರೀತಿ, ಸಹಕಾರ, ನಂಬಿಕೆ/ ವಿಶ್ವಾಸ ನಿರಂತರವಾಗಿ ದೊರಕುತ್ತಿದ್ದರೆ, ಅವರು ಬೇಡವಾದ ಅನ್ಯ ಮಾರ್ಗಗಳನ್ನು ಹಿಡಿಯುವುದನ್ನು ತಪ್ಪಿಸಬಹುದು. ಅವರಿಗೆ ತಮ್ಮ ತೊಂದರೆಗಳ ಬಗ್ಗೆ ಮಾತಾಡಲು ಪೋಷಕರು ಅಗತ್ಯವಿದ್ದಾಗ ಲಭ್ಯವಿದ್ದರೆ/ ಅಥವಾ ದಿನಾ ಅವರನ್ನು ಆಲಿಸುತ್ತಾ/ ಮಾತಾಡುತ್ತಾ ಇದ್ದರೆ, ಅವರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸುವ ದಾರಿ ಹುಡುಕುತ್ತಾರೆಯೇ ಹೊರತು ಮಾದಕವಸ್ತುಗಳ ಉಪಯೋಗದ ದಾರಿಯನ್ನಲ್ಲ. 

ಸನ್ನಿವೇಶವೇ ಉದ್ಭವವಾಗದಂತೆ 
ನೋಡಿಕೊಳ್ಳಿ 

ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಪೋಷಕರಿಗೆ ಮಕ್ಕಳ ಹತ್ತಿರ ಮಾತಾಡಲು, ಸಮಯ ಕಳೆಯಲು ಅಥವಾ ಮಕ್ಕಳಿಗೆ ಪೋಷಕರ ಹತ್ತಿರ ಮಾತಾಡಲು ಸಮಯದ ಕೊರತೆಯಿದೆ ಹಾಗೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಷ್ಟು ಕಾಲಾವಕಾಶ ದೊರಕುತ್ತಿಲ್ಲ. ಇವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಹದಿಹರೆಯ ಹಾಗೂ ತರುಣಾವಸ್ಥೆಯವರು ಮಾದಕ ವಸ್ತುಗಳಿಗೆ ಮೊರೆ ಹೋಗಲು ಕಾರಣೀಭೂತರಾಗಿವೆ. ಹಾಗಾಗಿ, ವಸ್ತುಗಳ ತೊಂದರೆಯ ಚಿಕಿತ್ಸೆಗಿಂತ ಮುಖ್ಯವಾಗಿ ಮಾದಕ ವಸ್ತುಗಳ ಉಪಯೋಗದ ಸನ್ನಿವೇಶಗಳೇ ಉದ್ಭವವಾಗದಿರುವ ಹಾಗೆ ಕ್ರಮಗಳನ್ನು ಕೈಗೊಳ್ಳಲು ಈ ಧ್ಯೇಯವಾಕ್ಯ ಸೂಚಿಸುತ್ತದೆ. ಈ ಲೇಖನದಲ್ಲಿ ಮಾದಕವಸ್ತುಗಳ ವ್ಯಸನದ ಬಗ್ಗೆ ಒಂದು ಪಕ್ಷಿ ನೋಟ ನೀಡಲಾಗಿದೆ.

ಶೇ. 0.6 ವಯಸ್ಕರು ಮಾದಕ ವಸ್ತುಗಳ ಕಾಯಿಲೆಯಿಂದ ಬಳಲುತ್ತಿದ್ದಾರೆ 
ವಿಶ್ವ ಆರೋಗ್ಯ ಸಂಸ್ಥೆಯ ಮಾದಕ ವಸ್ತುಗಳ 2017ರ ವರದಿಯ ಪ್ರಕಾರ 2015ರಲ್ಲಿ ವಿಶ್ವದ ಶೇಕಡ 5ರಷ್ಟು (25 ಕೋಟಿ) ವಯಸ್ಕರು ಕನಿಷ್ಟ ಒಮ್ಮೆಯಾದರೂ ಮಾದಕ ವಸ್ತುಗಳನ್ನು ಬಳಸಿದ್ದಾರೆ. ಇನ್ನೂ ಗಂಭೀರ ವಿಷಯವೆಂದರೆ, ಈ ಮಾದಕ ವಸ್ತುಗಳ ಉಪಯೋಗಿಗಳಲ್ಲಿ ಸುಮಾರು 3 ಕೋಟಿ ಜನ, ಅಂದರೆ ಶೇಕಡಾ 0.6 ವಯಸ್ಕರು ಮಾದಕ ವಸ್ತುಗಳ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲಲ್ಲದೆ, ಅವರ ಜೀವನದ ವಿವಿಧ ಆಯಾಮಗಳಲ್ಲಿಯೂ ಕೂಡ ಗಂಭೀರ ತೊಂದರೆಗಳುಂಟಾಗುತ್ತಿವೆ. ಅಂದರೆ, ಅವರೆಲ್ಲ ಮಾದಕ ವಸ್ತುಗಳ ಅವಲಂಬನೆಯ ಮಟ್ಟಿಗೆ ತಲುಪಿದ್ದು ಅವರಿಗೆ ಚಿಕಿತ್ಸೆ ಅತ್ಯಗತ್ಯವಾಗಿದೆ. 

6 ರೋಗಿಗಳಲ್ಲಿ ಚಿಕಿತ್ಸೆ 
ಪಡೆಯುತವುದು ಒಬ್ಬ ಮಾತ್ರ 

ಮಾದಕ ವಸ್ತುಗಳ ವ್ಯವಸನ ಕಾಯಿಲೆಗೆ ತುತ್ತಾದ ಆರು ರೋಗಿಗಳಲ್ಲಿ ಕೇವಲ ಒಬ್ಬ ಮಾತ್ರ ಚಿಕಿತ್ಸೆ ಪಡೆಯುತ್ತಾನೆ. ಅಂದರೆ ಶೇ. 80ರಷ್ಟು ಮಾದಕ ವಸ್ತುಗಳ ರೋಗಿಗಳು ತೊಂದರೆಗಳನ್ನನುಭವಿಸುತ್ತಾ ಬದುಕುತ್ತಿದ್ದಾರೆ. ಈ ರೀತಿ ಚಿಕಿತ್ಸೆ ಪಡೆಯದೇ ಇರುವುದಕ್ಕೆ ಹಲವಾರು ಕಾರಣಗಳಿರಬಹುದು. ಒಂದು ಮುಖ್ಯ ಕೊರತೆಯೆಂದರೆ, ಮಾದಕ ವಸ್ತುಗಳ ಅವಲಂಬನೆ ಮತ್ತು ಅವುಗಳಿಂದುಂಟಾಗುವ ವಿವಿಧ ತೊಂದರೆಗಳನ್ನು ಸರಿಪಡಿಸಲು ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಚಿಕಿತ್ಸಾ ಸೌಲಭ್ಯಗಳ ಕೊರತೆ. ಈ ಸೌಲಭ್ಯಗಳು ಕೆಲವು ಪಟ್ಟಣಗಳಲ್ಲಿ ಅಥವಾ ಕೆಲವು ಆಸ್ಪತ್ರೆಗಳಲ್ಲಷ್ಟೇ ಲಭ್ಯವಾಗಿರಬಹುದು ಆದರೆ ಮಾದಕ ವಸ್ತುಗಳಿಂದ ಬಳಲುತ್ತಿರುವವರು ಪ್ರಪಂಚದ ಎಲ್ಲಾ ಮೂಲೆಗಳಲ್ಲಿದ್ದಾರೆ.

ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳು: ಮದ್ಯ, ತಂಬಾಕು, ಗಾಂಜಾ, ಕೋಕೇನ್‌, ಓಪಿಯಮ್‌, ಆಂಫಿಟಮೈನ್‌, ಹಿರಾಯಿನ್‌ , ಎಲ್‌. ಎಸ್‌.ಡಿ., ಪಿ.ಸಿ.ಪಿ., ನಿದ್ದೆ ಮಾತ್ರೆಗಳು, ಅನಿಲಗಳು (ವೈಟ್‌ನರ್‌, ಪೆಟ್ರೋಲಿಯಮ್‌ ಉತ್ಪನ್ನಗಳು), ಇತ್ಯಾದಿ. 

ಅಡಿಕ್ಷನ್‌ ಎಂದರೇನು?  
ಅಡಿಕ್ಷನ್‌ ಎನ್ನುವುದು ಲ್ಯಾಟಿನ್‌ ಭಾಷೆಯಿಂದ ಬಂದ ಪದ. ಇದರ ಅರ್ಥ ಗುಲಾಮನಾಗಿರುವುದು ಅಥವಾ ಅಧೀನನಾಗಿರುವುದು. ಮಾದಕ ವಸ್ತುಗಳ ಚಟಕ್ಕೊಳಗಾದವರು ಇದರಿಂದ ಹೊರಬರಲು ಪ್ರಯತ್ನಿಸುವಾಗ ಆಗುವ ಕಷ್ಟಗಳನ್ನು ಅವರು ನೆನೆದುಕೊಂಡರೆ ಇದಕ್ಕೆ ಗುಲಾಮನಾಗಿರುವುದೆಂದು ಯಾಕೆ  ಹೇಳಲಾಗಿದೆ ಎಂದು ಪ್ರಶ್ನೆ ಉದ್ಭವಾಗುವುದು ಸಹಜ. ಅಡಿಕ್ಷನ್‌ ಪದವನ್ನು ಕನ್ನಡದಲ್ಲಿ ಅನುವಾದಿಸುವುದಾದರೆ ಇದನ್ನು ಈ ಪದಗಳಲ್ಲಿ ವಿವಿಧ ಸನ್ನಿವೇಶಗಳಲ್ಲಿ ಉಪಯೋಗಿಸಲಾಗುತ್ತದೆ: ಚಟ/ವ್ಯಸನ/ ಹವ್ಯಾಸ/ದುರಭ್ಯಾಸ, ಇತ್ಯಾದಿ.

ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ‌ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ, ಈ ಪರಿಣಾಮಗಳೆಂದರೆ: ಮಾದಕ ವಸ್ತುಗಳ ಸೇವನೆಯ ತವಕ/ಹಪಹಪಿಸುವಿಕೆ, ಮಾದಕ ವಸ್ತುಗಳ ಸೇವನೆ/ಉಪಯೋಗದ ಮೇಲೆ ನಿಯಂತ್ರಣ ತಪ್ಪಿ ಹೆಚಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಮಾದಕ ವಸ್ತುಗಳ ದುಷ್ಪರಿಣಾಮಗಳಾಗುತ್ತಿದ್ದರೂ ಅದರ ಸೇವನೆ/ಉಪಯೋಗ ಮುಂದುವರಿಸುವುದು.

ಮಾದಕ ವಸ್ತುಗಳ ದುರುಪಯೋಗ/ಚಟ
ಕೆಲವು ಜನ ಮಾದಕ ವಸ್ತುಗಳನ್ನು ಮೋಜಿಗಾಗಿ ಕೆಲವೊಮ್ಮೆ ಉಪಯೋಗಿಸುತ್ತಾರೆ ಮತ್ತು ಅವರು ಯಾವುದೇ ದೈಹಿಕ ಅಥವಾ ಮಾನಸಿಕ ತೊಂದರೆಗಳಿಗೊಳಗಾಗುವುದಿಲ್ಲ. ಆದರೆ ಹೆಚ್ಚಿನ ಜನರ ಜೀವನದಲ್ಲಿ ಇದು ಕೆಲಸ, ಕುಟುಂಬ, ಹಣಕಾಸು, ಸಮಾಜದಲ್ಲಿ ತೊಂದರೆಗಳನ್ನುಂಟುಮಾಡುತ್ತದೆ.

ಆರಂಭಿಸುವುದೇ ಏಕೆ?
ಜನರು ಈ ಮಾದಕ ವಸ್ತುಗಳ ಉಪಯೋಗ ಆರಂಭಿಸುವುದೇಕೆ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಹೆಚ್ಚಿನ ಜನ ಇದನ್ನು ಮೊದಲನೇ ಸಲ ಮೋಜಿಗಾಗಿಯೋ, ಸ್ನೇಹಿತರ ಒತ್ತಾಯದಿಂದಲೋ, ನಿದ್ದೆಗಾಗಿಯೋ, ಟೆಂಷನ್‌ ಕಡಿಮೆ ಮಾಡಿಕೊಳ್ಳಲೋ ಪ್ರಾರಂಭಿಸುತ್ತಾರೆ. ಆದರೆ ಉಪಯೋಗವು ದುರುಪಯೋಗವಾಗಿ ನಂತರ ಚಟವಾಗಿ ಪರಿವರ್ತನೆಗೊಳ್ಳುತ್ತದೆ. ಹಾಗೂ ಈ ರೀತಿ ಎಲ್ಲಾ ಜನರಲ್ಲಾಗುವುದಿಲ್ಲ.
 
ಚಟಕ್ಕೆ ತಿರುಗುವ ದುರುಪಯೋಗ 
ಕೆಲವರು ಕೇವಲ ದುರುಪಯೋಗದ ಮಟ್ಟಿಗೆ ನಿಲ್ಲುತ್ತಾರೆ, ಕೆಲವರು ಚಟ (ಅಡಿಕ್ಷನ್‌) ಕ್ಕೊಳಗಾಗುತ್ತಾರೆ. ಆದರೆ ಈ ದುರುಪಯೋಗದಿಂದ ಚಟವನ್ನು ವಿಭಜಿಸಿ ಹೇಳುವುದು ಕಷ್ಟಕರ ವಿಷಯ. ಸಾಧಾರಣವಾಗಿ ಇದು ವ್ಯಕ್ತಿಯ ಜೀವನದ ವಿವಿಧ ಭಾಗಗಳಲ್ಲಿ ತೊಂದರೆಯನ್ನುಂಟುಮಾಡುತ್ತಿದ್ದರೆ, ಇದಕ್ಕೆ ಚಿಕಿತ್ಸೆ ಬೇಕಾಗಿದೆಯೆಂದು ಅರ್ಥೈಸಿಕೊಳ್ಳಬೇಕು. ಇದಲ್ಲದೇ ಇದು ವ್ಯಕ್ತಿಯು ಉಪಯೋಗಿಸುವ ಮಾದಕ ವಸ್ತುವಿನ ಪ್ರಮಾಣದ ಮೇಲೆ ನಿರ್ಭರವಾಗಿರದೇ ಅದರಿಂದಾಗುವ ಪರಿಣಾಮಗಳ ಮೇಲೆ ನಿರ್ಭರವಾಗಿರುತ್ತದೆ; ಅಂದರೆ, ವ್ಯಕ್ತಿಯೋರ್ವ ಅಲ್ಪಪ್ರಮಾಣದಲ್ಲಿ ಮಾತ್ರ ಮಾದಕ ವಸ್ತು ಸೇವಿಸುತ್ತಿದ್ದರೂ ಇದರಿಂದಾಗಿ ಆತನ ಜೀವನದಲ್ಲಿ ತೊಂದರೆಯುಂಟಾಗುತ್ತಿದ್ದರೆ, ಆತನಿಗೆ ಮಾದಕ ವಸ್ತುವಿನ ಚಟದ ತೊಂದರೆಯಿದೆಯೆಂದು ಪರಿಗಣಿಸಬೇಕಾಗುತ್ತದೆ. 

ಆದರೆ ಕೆಲವರು ಚಟಕ್ಕೊಳಗಾಗುತ್ತಾರೆ, ಹಲವರು ಮಾದಕ ವಸ್ತುಗಳ ಚಟಕ್ಕೊಳಗಾಗದೆ ಹಾಗೆಯೇ ಉಳಿದುಬಿಡುತ್ತಾರೆ. ಹೀಗಾಗಲು ಕಾರಣಗಳೇನು? ಬೇರೆ ದೈಹಿಕ ಕಾಯಿಲೆಗಳ ತರಹ ವ್ಯಕ್ತಿಯೋರ್ವನಲ್ಲಿ  ಚಟ ಬೆಳೆಯುವುದಕ್ಕೆ ವಿವಿಧ ಅಂಶಗಳು ಪೂರಕವಾಗಿರುತ್ತವೆ: ಜೀನ್‌ ಅಥವಾ ವರ್ಣತಂತುಗಳು, ಅನುವಂಶೀಯತೆ, ಕೌಟುಂಬಿಕ ಅಥವಾ ಸಾಮಾಜಿಕ ಕಾರಣಗಳು.
 
ಮಾದಕ ವಸ್ತುಗಳ ಚಟಕ್ಕೊಳಗಾಗುವ ಸಂಭಾವ್ಯತೆ ಹೆಚ್ಚಾಗಿಸುವ ಪೂರಕ ಅಂಶಗಳೆಂದರೆ: ಕುಟುಂಬದವರಲ್ಲಿ ಮಾದಕ ವಸ್ತುಗಳ ಚಟ, ಬಾಲ್ಯದಲ್ಲಿ ಋಣಾತ್ಮಕ ಅನುಭವಗಳು, ಮಾನಸಿಕ ಕಾಯಿಲೆಗಳು: ಖನ್ನತೆ, ಆತಂಕ, ಮಾದಕ ವಸ್ತುಗಳ ಉಪಯೋಗವನ್ನು ಬೇಗ/ಹದಿಹರೆಯ ವಯಸ್ಸಿನಲ್ಲಿಯೇ ಆರಂಭಿಸುವುದು, ಮಾದಕ ವಸ್ತುಗಳನ್ನು ನಿರಂತರವಾಗಿ ಉಪಯೋಗಿಸುವ ಸ್ನೇಹಿತರ/ ಸಹೋದ್ಯೋಗಿಗಳ ಗುಂಪು, ಸುಲಭವಾಗಿ ಮಾದಕ ವಸ್ತುಗಳು ಲಭ್ಯವಾಗುವುದು, ಇತ್ಯಾದಿ.

ಮಾದಕ ವಸ್ತುಗಳ ದುರುಪಯೋಗ ಮತ್ತು ಚಟ ಬೆಳೆಯುವುದು ಹೇಗೆ?
ಮೋಜಿಗಾಗಿ ಮಾದಕ ವಸ್ತುವನ್ನು ಆರಂಭಿಸಿದ ವ್ಯಕ್ತಿ ಅದನ್ನು ಪದೇ-ಪದೇ ಉಪಯೋಗಿಸುತ್ತಾನ ಯಾಕೆಂದರೆ, ಅದು ಆತನಿಗೆ ಸಂತೋಷವನ್ನುಂಟುಮಾಡುತ್ತದೆಯಲ್ಲದೇ, ಅಹಿತಕರ ಅನುಭವಗಳನ್ನುಂಟುಮಾಡುತ್ತದೆ. ಆದರೆ ಇವುಗಳು ತಾತ್ಕಾಲಿಕ ಅನುಭವಗಳು ಮಾತ್ರ. ಸಮಯ ಕಳೆದಂತೆ, ಈ ಉಪಯೋಗ, ದುರುಪಯೋಗ ಮತ್ತು ಚಟಕ್ಕೆ ತಿರುಗಿಬಿಡುತ್ತದೆ. ಆದರೆ, ವ್ಯಕ್ತಿಗೆ ಈ ಪರಿವರ್ತನೆಯ ಅರಿವಿರುವುದಿಲ್ಲ. ಅದಕ್ಕಾಗಿ ಈ ಪರಿವರ್ತನೆಯಾಗುವ ಕೆಲವು ಸೂಚನೆಗಳನ್ನು ಮೊದಲೇ ಅರಿತುಕೊಂಡರೆ ವ್ಯಕ್ತಿ ಚಟಕ್ಕೊಳಗಾಗುವುದನ್ನು ತಡೆಗಟ್ಟಬಹುದು. ಗುರುತಿಸಬಹುದಾದ ಈ ಕೆಲವು ಸೂಚಕಗಳೆಂದರೆ:
– ಮೋಜಿಗಾಗಿ ಯಾವಾಗಲೋ ಒಮ್ಮೆ ಬಳಸುವ ಮಾದಕ ವಸ್ತುವನ್ನು ಸಮಯ ಕಳೆದಂತೆ ಹೆಚ್ಚು ಸಲ ಬಳಸಬೇಕೆಂಬ ತವಕವುಂಟಾಗುವುದು. ನಂತರ ಮಾದಕ ವಸ್ತುವನ್ನು ವಾರಕ್ಕೆರಡು ಸಲ, ಮೂರು ಸಲ ಬಳಸುತ್ತಾ ಬಂದು, ಅದು ದಿನ ಬೇಕೇ-ಬೇಕು ಅನ್ನುವಂತಹ ಪರಿಸ್ಥಿತಿಯುಂಟಾಗಿ, ಜೀವನದಲ್ಲಿ ಎಲ್ಲಾ ವಿಷಯಗಳಿಗಿಂತ ಮಾದಕ ವಸ್ತುವಿನ ಉಪಯೋಗವೇ ಪ್ರಾಮುಖ್ಯತೆ ಪಡೆಯಲಾರಂಭಿಸುತ್ತದೆ.
– ವ್ಯಕ್ತಿಯ ಯಾವುದೋ ಒಂದು ತೊಂದರೆಯನ್ನು ಮಾದಕ ವಸ್ತು ತಾತ್ಕಾಲಿಕವಾಗಿ ಬಗೆಹರಿಸಲಾರಂಭಿಸಿದಾಗ ವ್ಯಕ್ತಿಯು ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕದೇ ಅದರ ತಾತ್ಕಾಲಿಕ ಪರಿಹಾರವಾದ ಮಾದಕ ವಸ್ತುವಿನ ಮೇಲೆಯೇ ಯಾವಾಗಲೂ ನಿರ್ಭರವಾಗಿರಲಾರಂಭಿಸುತ್ತಾನೆ.
– ವ್ಯಕ್ತಿಯು ಜೀವನದ ಯಾವುದೋ ಒಂದು ಕೊರತೆಯನ್ನು ಮಾದಕ ವಸ್ತುವಿಗೆ ಮೊರೆ ಹೋಗಿ, ಜೀವನದಲ್ಲಿ ಸಂತೋಷ/ಸಮಾಧಾನವನ್ನುಂಟುಮಾಡುವ ವಸ್ತು ಕೇವಲ ಮಾದಕ ವಸ್ತುವಾಗತೊಡಗುತ್ತದೆ.
– ಸಮಯ ಕಳೆದಂತೆ, ವ್ಯಕ್ತಿಯ ಕೆಲಸ, ಜವಾಬ್ದಾರಿಗಳು ಪ್ರಾಮುಖ್ಯತೆ ಕಳೆದುಕೊಂಡು ಅವುಗಳಲ್ಲಿ ತೊಂದರೆಗಳು ಕಂಡುಬರಲಾರಂಭಿಸುತ್ತವೆ.

ಈ ಹಂತದಲ್ಲೇ ವ್ಯಕ್ತಿಯು ತಾನು ಚಟಕ್ಕೊಳಗಾಗುತ್ತಿದ್ದೇನೆಂದು ಅರಿತುಕೊಂಡು ಅಥವಾ ಮನೆಯವರು/ಸ್ನೇಹಿತರು ಅರಿತುಕೊಂಡು ವ್ಯಕ್ತಿಯನ್ನು ಮಾನಸಿಕ ರೋಗ ತಜ್ಞರನ್ನು ಸಂಪರ್ಕಿಸಿದಾಗ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ತೊಂದರೆ ಮುಂದುವರೆಯದಂತೆ ಮಾರ್ಗದರ್ಶನ ನೀಡಲಾಗುತ್ತದೆ.

ಮಾದಕ ವಸ್ತುಗಳ ಚಟದ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಘಟಕವನ್ನು ಮಾಡಲಾಗಿದೆ. ಪ್ರತೀ ಬುಧುವಾರ ಮತ್ತು ಶನಿವಾರ (ಮೂರನೆ ಶನಿವಾರ ಹೊರತುಪಡಿಸಿ), ಮನೋರೋಗ ಚಿಕಿತ್ಸಾ ವಿಭಾಗದ ಓ.ಪಿ.ಡಿ.ಯಲ್ಲಿ ನುರಿತ ತಜ° ಮನೋವೈದ್ಯರು ಲಭ್ಯರಿರುತ್ತಾರೆ ಹಾಗೂ ಅಡ್ಮಿಶನ್‌ ಸೌಲಭ್ಯ ಕೂಡ ಇರುತ್ತದೆ.

ಒಳಗಿಂದಲೇ ಕೊರೆಯುತ್ತವೆ!
ಮಾದಕ ವಸ್ತುಗಳು ಇಂದು ಬೃಹತ್‌ ಮಾರುಕಟ್ಟೆಯಾಗಿ (ಮುಖ್ಯವಾಗಿ ಭೂಗತ ಮಾರುಕಟ್ಟೆ) ಬೆಳೆದುನಿಂತು ಜನರ ದೈಹಿಕ, ಮಾನಸಿಕ ಆರೋಗ್ಯ ಹದಗೆಟ್ಟಿಸಿರುವುದಲ್ಲದೇ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ತೊಡಕುಂಟುಮಾಡಿದೆ. ಇದನ್ನರಿತು ಹಲವು ದೇಶಗಳು ಇವುಗಳನ್ನು ಕಾನೂನು ಬಾಹಿರವೆಂದು ಪರಿಗಣಿಸಿದವು ಮತ್ತು ಇವುಗಳನ್ನು ಉತ್ಪಾದಿಸುವುದನ್ನು, ಶೇಖರಿಸುವುದನ್ನು ಅಥವಾ ಉಪಯೋಗಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಕಾನೂನು ಜಾರಿಗೊಳಿಸಿದವು. ಇಷ್ಟೆಲ್ಲ ಜಟಿಲ ನಿಯಮಗಳಿದ್ದರೂ ಮಾದಕ ವಸ್ತುಗಳ ಉಪಯೋಗ ಒಂದು ಪೆಡಂಭೂತವಾಗಿ ಬೆಳೆದು ಎಲ್ಲ ಸಮಾಜಗಳನ್ನು ಒಳಗಡೆಯಿಂದಲೇ ಕೊರೆಯುತ್ತಿದೆ. ಇವುಗಳಿಗೆ ಸೂಕ್ತ ಪರಿಹಾರಗಳಿದ್ದರೂ ಜನ ಅವುಗಳ ಉಪಯೋಗ ಪಡೆಯುವುದಿಲ್ಲ ಯಾಕೆಂದರೆ, ಮಾದಕ ವಸ್ತುಗಳ ವ್ಯಸನಿಗಳ ಪ್ರಕಾರ ಇದು ಸಮಸ್ಯೆಯೇ ಅಲ್ಲ!!! 

– ಮುಂದುವರಿಯಲಿದೆ 

– ಡಾ| ರವೀಂದ್ರ ಮುನೋಳಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.