ರಂಜಿಸಿದ ಮುಂಬಯಿ ಪತ್ರಕರ್ತರ ಮಹಿಷ ಮರ್ದಿನಿ 


Team Udayavani, Aug 31, 2018, 6:00 AM IST

8.jpg

ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಸದಸ್ಯರು ಮುಂಬಯಿಯ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಆ. 22 ರಂದು ಮಹಿಷಾಸುರ ಮರ್ದಿನಿ ಪ್ರಸಂಗವನ್ನು ಪ್ರದರ್ಶಿಸಿ ಶಹಬ್ಟಾಸ್‌ಗಿರಿ ಪಡೆದರು.  ಪತ್ರಕರ್ತರ ಪೈಕಿ ಹೆಚ್ಚಿನವರು ಮೊದಲ ಬಾರಿಗೆ ರಂಗಸ್ಥಳಕ್ಕೆ ಇಳಿದವರು. ಇವರನ್ನೆಲ್ಲ ರೂಪುಗೊಳಿಸಿರುವುದು ಯಕ್ಷಗುರು ಬಾಲಕೃಷ್ಣ ಶೆಟ್ಟಿ ಅಜೆಕಾರು. ಪ್ರೇಕ್ಷಕರಿಗೆ ಎಲ್ಲೂ ನಿರಾಸೆ ಮಾಡಬಾರದು ಎಂದು ಎಲ್ಲಾ ಪಾತ್ರಧಾರಿಗಳು ಹಠ ತೊಟ್ಟಿದ್ದರೋ ಎಂಬಂತೆ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದು ಅಂದಿನ ವಿಶೇಷತೆ. ಅವರು ಮಹಿಷಾಸುರನಾಗಿ ರಂಗದುದ್ದಕ್ಕೂ ತನ್ನ ಹಾವಭಾವ ಅರ್ಥಗಳಿಂದ ಪ್ರೇಕ್ಷಕರಲ್ಲಿ ಬಯಲಾಟ ಮೇಳಗಳ ಪಾತ್ರಧಾರಿಗಳನ್ನು ನೆನಪಿಸುವಂತೆ ರಂಜಿಸಿದರು. ಶ್ರೀದೇವಿಯಾಗಿ ದಿನೇಶ್‌ ಶೆಟ್ಟಿ ರೆಂಜಾಳ ಗಂಭೀರ ವರ್ಚಸ್ಸಿನ ಅಭಿನಯದ ಮೂಲಕ ಗಮನ ಸೆಳೆದರು. 

 ದೇವೇಂದ್ರನಾಗಿ ಅಭಿನಯಿಸಿದ ಮುಂಬಯಿಯ ಬಡಗಿನ ಹವ್ಯಾಸಿ ಕಲಾವಿದ ರಮೇಶ್‌ ಬಿರ್ತಿಯವರು ಚೊಕ್ಕವಾಗಿ ಸಂಭಾಷಿಸಿ ಹಿರಿತನವನ್ನು ಮೆರೆದಿದ್ದಾರೆ.  ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ಎಲ್ಲರೂ ಹುಬ್ಬೇರಿಸುವಂತೆ ವಾಹ್‌… ವಾಹ್‌… ಎಂದು ಶ್ಲಾ ಸುವ ಅಭಿನಯ ನೀಡಿದವರೆಂದರೆ “ಮಾಲಿನಿ’ಯಾಗಿ ಅಭಿನಯಿಸಿದವರು ಹರೀಶ್‌ ಕಾರ್ನಾಡ್‌. “ವಿದ್ಯುನ್ಮಾಲಿ’ಯಾಗಿ ಅಭಿನಯಿಸಿದ ಏಳಿಂಜೆ ನಾಗೇಶ್‌ ಅಚ್ಚುಕಟ್ಟಾಗಿ ತನ್ನ ಪಾತ್ರ ನಿರ್ವಹಿಸಿದ್ದು ಏರು ಪದ್ಯಗಳಲ್ಲಿ ಮಿಂಚಿದರು. ಅದೇ ರೀತಿ ಯಕ್ಷನ ಪಾತ್ರಧಾರಿ ಜಯಂತ್‌ ಕಿಲೆಂಜೂರು, ಸುಪಾರ್ಶ್ವಕನಾಗಿ ನವೀನ್‌ ಶೆಟ್ಟಿ ಇನ್ನ ಬಾಳಿಕೆ ತಮ್ಮ ಪಾತ್ರಗಳಲ್ಲಿನ “ರೋಷ’ವನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.

ಬ್ರಹ್ಮನಾಗಿ ಸಾ. ದಯಾ ಅಭಿನಯದ ಗತ್ತುಗಾರಿಕೆಯನ್ನು ಅಭಿವ್ಯ ಕ್ತಿಸಿದರೆ, ವಿಶ್ವನಾಥ್‌ ಅವಿೂನ್‌ ನಿಡ್ಡೋಡಿ ಅವರು ವಿಷ್ಣು ಪಾತ್ರ ದಲ್ಲಿ ನಿರರ್ಗಳವಾದ ಮಾತಿನ ವೈಖರಿ, ಅದನ್ನು ಅಭಿವ್ಯಕ್ತಿಸಿದ ಪರಿ ಆಕರ್ಷ ಕವಾಗಿತ್ತು. ಈಶ್ವರನ ಪಾತ್ರಧಾರಿ ಸುರೇಶ್‌ ಶೆಟ್ಟಿ ಯೆಯ್ನಾಡಿ ಮಾತಿಗಿಂತ ಅಭಿನಯವೇ ಲೇಸು ಎಂಬಂತೆ ಪಾತ್ರ ನಿರ್ವಹಿಸಿದಂತೆ ಕಂಡಿತು.

ಶಂಕಾಸುರನಾಗಿ  ಪ್ರೀತಮ್‌ ದೇವಾಡಿಗ, ಬಿಡಲಾಸುರನಾಗಿ ಭಾರತಿ ಉಮೇಶ್‌ ಕೋಟ್ಯಾನ್‌, ಚಕ್ಷಾಸುರನಾಗಿ ಗಣಪತಿ ಮೊಗವೀರ, ದುರ್ಗಾಸುರನಾಗಿ ಜಯರಾಮ್‌ ನಾಯಕ್‌ ಪಾತ್ರಗಳ ಔಚಿತ್ಯ ವಿೂರದಂತೆ ಚೊಕ್ಕವಾಗಿ ಅಭಿನಯಿಸಿದರು.

ಮಾಲಿನಿಯ ದೂತನಾಗಿ  ಕರುಣಾಕರ್‌ ಶೆಟ್ಟಿ ಎದ್ದು ಕಾಣುವ ಮುಖವರ್ಣಿಕೆಯಲ್ಲದೆ, ಕುಣಿತ – ಹಾಸ್ಯ ಮಿಶ್ರಿತ ಸಂಭಾಷಣೆಯಿಂದಲೂ ಛಾಪು ಒತ್ತಿದರು.ದೇವೇಂದ್ರನ ಬಲಗಳಲ್ಲಿ ದೀಪಾ ಪಾಲೆತ್ತಾಡಿ, ಶ್ರಾವ್ಯ, ಶ್ರೇಯಸ್‌Õ, ತ್ರಿಶಾ ಈ ಪುಟಾಣಿಗಳು ತಮ್ಮ ವಯಸ್ಸಿಗೂ ಮೀರಿದ ಕುಣಿತ ಮತ್ತು ಸಂಭಾಷಣೆಯಿಂದ ಮನಗೆದ್ದರು. ಹವ್ಯಾಸಿ ಭಾಗವತ ಮೋಹನ್‌ದಾಸ್‌ ರೈ, ಕಟೀಲು ಮೇಳದ ದೇವಿಪ್ರ ಸಾದ್‌ ಆಳ್ವ ತಲಪಾಡಿ, ಮದ್ದಳೆಯಲ್ಲಿ ಮುಂಬಯಿಯ ಆನಂದ್‌ ಶೆಟ್ಟಿ ಇನ್ನ, ಚೆಂಡೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು ಮತ್ತು ಚಕ್ರತಾಳದಲ್ಲಿ ಅವಕಾಶ್‌ ಕೆರ್ವಾಸೆ ಇವರ ಸಹಕಾರವೂ ಮರೆಯುವಂಥದ್ದಲ್ಲ.

ಈ ಪ್ರದರ್ಶನದಲ್ಲಿ ಕೆಲವು ವಿಶೇಷತೆಗಳನ್ನು ಗುರುತಿಸಬಹುದಿತ್ತು. ಬಡಗುತಿಟ್ಟಿನ ಹವ್ಯಾಸಿ ರಮೇಶ್‌ ಬಿರ್ತಿ ಅಂದು ತೆಂಕು ತಿಟ್ಟಿನ ಹೆಜ್ಜೆ ಗಾರಿಕೆ ಕಾಣಿಸಿದರು. ಸಮಕಾಲೀನ ಅರ್ಥದಾರಿಗಳನ್ನು ನೆನಪಿ ಸುವಂತೆ ನಿರರ್ಗಳವಾಗಿ ಅಭಿನಯಿಸಿದವರಲ್ಲಿ ಅಶೋಕ್‌ ಪಕ್ಕಳ, ರಮೇಶ್‌ ಬಿರ್ತಿ ಮತ್ತು ಮಾಲಿನಿ ಹರೀಶ್‌ ಕಾರ್ನಾಡ್‌ ಎದ್ದು ಕಂಡರು.

ಶ್ರೀನಿವಾಸ ಜೆ. 

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.