ಪುರಾತನ ಕಾಯಿಲೆ ಮಲೇರಿಯ 


Team Udayavani, Nov 18, 2018, 6:00 AM IST

malaria-aad.jpg

ಹಿಂದಿನ ವಾರದಿಂದ– ಈ ಸೊಳ್ಳೆ ಯಾವುದೇ ವ್ಯಕ್ತಿಗೆ ಆಹಾರಕ್ಕಾಗಿ ರಕ್ತ ಹೀರಲು ಕಡಿದಾಗ, ರೋಗಾಣುಗಳು ಸೊಳ್ಳೆ ಕಡಿದ ವ್ಯಕ್ತಿಯ ರಕ್ತಕ್ಕೆ ಸೇರುತ್ತದೆ. ಸಾಕಷ್ಟು Sporozoites  ಸೊಳ್ಳೆ ಕಡಿತದ ಮೂಲಕ ಮನುಷ್ಯನ ದೇಹಕ್ಕೆ ಸೇರಿದರೆ ಅಂದಿನಿಂದ 10 -15 ದಿನಗಳಲ್ಲಿ ಅ ವ್ಯಕ್ತಿಯಲ್ಲಿ ಮಲೇರಿಯಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. 

ಅಂದರೆ ಜನ ಸಮುದಾಯದಲ್ಲಿ ಮಲೇರಿಯಾ ರೋಗಿಗಳಿದ್ದರೆ, ಅಲ್ಲಿ ಕೆಲವೇ ಅನಾಫಿಲಿಸ್‌ ಸೊಳ್ಳೆಗಳಿದ್ದರೆ, ಮಳೆ ನಿಂತ 40-45 ದಿನಗಳಲ್ಲಿ  ಸಂಖ್ಯೆ ತೀವ್ರವಾಗಿ ಹೆಚ್ಚಬಹುದು. ಆದರೆ ಮಳೆ ಬರುತ್ತಿರುವಾಗ ಸಹ ಪರಿಸರದಲ್ಲಿ ಎಲ್ಲಿಯಾದರೂ ಮಳೆ ನೀರಿಗೆ ನೇರ ಸಂಪರ್ಕವಿಲ್ಲದೆ ನಿಂತ ನೀರಿದ್ದರೆ, ಆಗ ಮಳೆಗಾಲದಾದ್ಯಂತ ಸೊಳ್ಳೆಗಳು, ಮಲೇರಿಯಾ ಕಾಯಿಲೆ ಇರಬಹುದಾಗಿದೆ. ಈ ಸೊಳ್ಳೆಗಳು 30-45 ದಿನಗಳವರೆಗೆ ಬದುಕಬಲ್ಲವು. ಆದ್ದರಿಂದ ಪರಿಸರದಲ್ಲಿನ ಹಳ್ಳ ಕೊಳ್ಳಗಳಲ್ಲಿನ ನೀರು ಸಂಪೂರ್ಣ ಆವಿಯಾದ ಮೇಲೆ ಸಹ 45 ದಿನಗಳ ಕಾಲ ರೋಗ ಹರಡಬಲ್ಲವು. ಅಲ್ಲದೆ ನೀರಿನ ಮೂಲದಿಂದ 3 ರಿಂದ 5 ಕಿ.ಮಿ. ದೂರ ಹಾರಬಲ್ಲ ವಾದರಿಂದ ಅಷ್ಟು ದೂರ ವ್ಯಾಪ್ತಿಯಲ್ಲಿ ರೋಗ ಹರಡಬಹುದು. 

ಒಟ್ಟಿನಲ್ಲಿ ಮಲೇರಿಯಾ ಹರಡುವಿಕೆಗೆ ಮುಖ್ಯವಾಗಿ  3 ಅಂಶಗಳು ಅವಶ್ಯವಾಗಿರಬೇಕು. 
1. ಮಲೇರಿಯಾ  ರೋಗಿಯ ರಕ್ತದಲ್ಲಿ ಸಾಕಷ್ಟು ಗಂಡು ಮತ್ತು ಹೆಣ್ಣು ಪ್ಲಾಸೊ¾ಡಿಯಂ ಪರೋಪ ಜೀವಿಯ ಲೈಂಗಿಕ ಕಣಗಳಿರಬೇಕು. 
2. ವಾಹಕ ಅನಾಫಿಲಿಸ್‌ ಹೆಣ್ಣು ಸೊಳ್ಳೆ  ಈ ಸೊಳ್ಳೆ ಮಲೇರಿಯಾ ರೋಗಿ ರಕ್ತ ಅದರ ಆಹಾರಕ್ಕಾಗಿ ಹೀರುವಾಗ ರೋಗಿಯ ರಕ್ತದಲ್ಲಿರುವ ಸಾಕಷ್ಟು gametes ಗಳನ್ನು ಹೀರಿಕೊಂಡು ಅನಂತರ ಕನಿಷ್ಠ 15 ದಿನ ಬದುಕಿರಬೇಕು ಹಾಗೂ ಮತ್ತೂಬ್ಬ ಆರೋಗ್ಯವಂತ ವ್ಯಕ್ತಿಯ ರಕ್ತ ಹೀರುವಾಗ ಸಾಕಷ್ಟು ಸಂಖ್ಯೆಯಲ್ಲಿ ಅವನ ದೇಹಕ್ಕೆ ರೋಗ ಕಣಗಳನ್ನು ಸಾಗಿಸಬೇಕು.
3. ಸೋಂಕಿಗೀಡಾಗುವ ಮನುಷ್ಯರು – ಸಮುದಾಯದಲ್ಲಿ ಮಲೇರಿಯಾ ರೋಗವಿರುವಾಗ , ಸೋಂಕಿರುವ ಸೊಳ್ಳೆಗಳಿರುವಾಗ ಸೊಳ್ಳೆ ಕಚ್ಚುವುದನ್ನು ತಪ್ಪಿಸಿಕೊಳ್ಳಲಾಗದ ಆರೋಗ್ಯವಂತ ಜನರು. ಈ ಜೋಡಣೆಯ ಯಾವುದೇ ಕೊಂಡಿ ಕಳಚಿ ಬಿದ್ದಾಗ ಮಾತ್ರ ಮಲೇರಿಯಾ ಹರಡುವುದನ್ನು ತಡೆಗಟ್ಟಬಹುದು.

ರೋಗ ವಿಧಗಳು
ಮಲೇರಿಯಾಕ್ಕೆ ಕಾರಣವಾದ ಪರೋಪಜೀವಿ ಪ್ಲಾಸೊ¾ಡಿಯಂ ನಾಲ್ಕು ಪ್ರಭೇದಗಳನ್ನು ಹೊಂದಿದೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವುದು ಪ್ಲಾಸೊ¾ಡಿಯಂ ವೈವ್ಯಾಕ್ಸ್‌ ಹಾಗೂ ಪ್ಲಾಸೊ¾ಡಿಯಂ ಫಾಲ್ಸಿಪಾರಮ್‌. ಕೆಲವು ಸಂದರ್ಭದಲ್ಲಿ ಒಂದೇ ರೋಗಿಯಲ್ಲಿ ವೈರಾಕ್ಸ್‌ ಮತ್ತು ಫಾಲ್ಸಿಪಾರಮ್‌ ಬೆರಕೆ ಸೋಂಕು ಸಹ ಬರಬಹುದು.

ರೋಗ ಲಕ್ಷಣಗಳು
ಮನುಷ್ಯ ಮಲೇರಿಯಾ ಸೋಂಕಿರುವ ಸೊಳ್ಳೆಯಿಂದ ಕಡಿಸಿಕೊಂಡ 10-14 ದಿನಗಳಲ್ಲಿ ಬಿಟ್ಟು ಬಿಟ್ಟು ಬರುವ ಚಳಿ ಜ್ವರ ಕಾಣಿಸಿಕೊಳ್ಳಬಹುದು. ಹಲವು ಬಾರಿ ವಾಂತಿ ಸಹ ಆಗಬಹುದು. ಕೆಲವು ವರ್ಷಗಳ ಮೊದಲು ಕೇವಲ ಈ ಲಕ್ಷಣಗಳಿಂದಲೇ ಮಲೇರಿಯಾವನ್ನು ಗುರುತಿಸಿ ಚಿಕಿತ್ಸೆ ನೀಡಲು ಸಾಧ್ಯವಿದ್ದಿತ್ತಾದರೂ ಈಗ ಸಮುದಾಯದಲ್ಲಿ ಮಲೇರಿಯಾದೊಂದಿಗೆ, ಇಲಿ ಜ್ವರ, ಡೆಂಗ್ಯೂ, ಎಚ್‌1ಎನ್‌1, ಚಿಕೂನ್‌ಗುನ್ಯ, ಟೈಫಾಯ್ಡ ಇತರ ಗಂಭೀರ ಕಾಯಿಲೆಗಳು ಜ್ವರ ಬಾಧೆಯ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುವುದರಿಂದ ಹಾಗೂ ಒಂದೇ ವ್ಯಕ್ತಿಯಲ್ಲಿ ಏಕಕಾಲಕ್ಕೆ 2 ಅಥವಾ ಮೂರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗ ಪತ್ತೆ ಮಾಡದೆ ಚಿಕಿತ್ಸೆ ನೀಡುವುದು ಸಮಂಜಸವಲ್ಲ.  ಮಲೇರಿಯಾದಲ್ಲಿ ರೋಗಾಣುಗಳು ಕೆಂಪು ರಕ್ತ ಕಣಗಳನ್ನು ನಾಶಪಡಿಸುವುದರಿಂದ ಅನೀಮಿಯಾ, ಜಾಂಡೀಸ್‌ ಲಕ್ಷಣಗಳು ಕೂಡ ಕಾಣಿಸಿಕೊಳ್ಳಬಹುದು. ರಕ್ತ ಕಣಗಳ ಕ್ರೋಡೀಕರಣದಿಂದ ಸಣ್ಣ ಸಣ್ಣ ರಕ್ತ ಕಣಗಳು ಮುಚ್ಚಿ ಹೋಗಿ ಅಂಗಾಂಗ ವೈಫ‌ಲ್ಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ರೋಗ ಪತ್ತೆ 
ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ರಕ್ತ ಲೇಪನ ಪರೀಕ್ಷೆ (Blood smear) ಮಲೇರಿಯಾ ಪತ್ತೆಗೆ ಬಳಸುವ  ಪರೀಕ್ಷೆ ವಿಧಾನ. ಚಳಿ ಜ್ವರ ಬಂದಾಗ ರೋಗಿಯ ಒಂದೆರಡು ಹನಿ ರಕ್ತವನ್ನು , ಚೂರು ಗಾಜಿನಲ್ಲಿ ತೆಗೆದುಕೊಂಡು ತೆಳು ಪದರದಂತೆ ಹರಡಿ ಒಣಗಿಸಿ ವಿವಿಧ ಬಣ್ಣಗಳನ್ನು ಹಾಕಿ ಸೂಕ್ಷ್ಮದರ್ಶಿಕದಡಿಯಲ್ಲಿ ಪರೀಕ್ಷಿಸುವುದರಿಂದ ರೋಗಾಣುಗಳನ್ನು ಕೌಶಲತೆ ಹಾಗೂ ಅನುಭವ ಹೊಂದಿದ ಟೆಕ್ನಿಶಿಯನ್‌ಗಳು ಪತ್ತೆ ಹಚ್ಚಬಲ್ಲರು. ಆದರೆ ಕೇವಲ ಒಂದು ರಕ್ತ ಲೇಪನ ಪರೀಕ್ಷೆಯಲ್ಲಿ ಮಲೇರಿಯಾ ರೋಗಾಣುಗಳು ಕಂಡು ಬಾರದಿದ್ದರೆ ವ್ಯಕ್ತಿಗೆ ಮಲೇರಿಯವಿಲ್ಲವೆಂದು ಖಚಿತವಾಗಿ ಹೇಳಲಾಗದು. 

ಶಿಫಾರಸಿನ ಪ್ರಕಾರ 6 ರಿಂದ 12 ಗಂಟೆಗಳ ಅಂತರದಲ್ಲಿ 2 ದಿನಗಳೊಳಗೆ ಪದೇ ಪದೆ ರಕ್ತ ಲೇಪನ ಪರೀಕ್ಷೆ ಮಾಡಿ, ಕನಿಷ್ಠ ಮೂರು ಬಾರಿ ಲೇಪನ ಪರೀಕ್ಷೆಗಳಲ್ಲಿ ರೋಗಾಣುಗಳು ಕಂಡು ಬಾರದೆ ಇರಬೇಕು.

ರೋಗ ಚಿಕೆತ್ಸೆ  
ಪ್ಲಾ ವೈವ್ಯಾಕ್ಸ್‌ ಮಲೇರಿಯಾ ಸಾಮಾನ್ಯ ತೆರನಾದ್ದು ಎಂದು ಭಾವಿಸಿದ್ದರೂ ಕೂಡ ಕೆಲವು ಬಾರಿ ಭಯಾನಕ ಸ್ವರೂಪ ಪಡೆದುಕೊಳ್ಳಬಹುದು. ಈ ಮಲೇರಿಯಾ ಒಮ್ಮೆ ಬಂದರೆ ರೋಗಾಣುಗಳು ರೋಗಿಯ ಪಿತ್ತಕೋಶದಲ್ಲಿ ಅಡಗಿ ಕುಳಿತು ಪುನಃ ಪುನಃ ಮರು ಕಳಿಸುವ (Relapse) ಸಾಧ್ಯತೆಗಳು ಹೆಚ್ಚು. ಅದಕ್ಕಾಗಿ ರೋಗಿಗಳು 3 ಡೋಸ್‌ Chloroquine   ಮಾತ್ರೆಗಳೊಂದಿಗೆ 14 ದಿನ ತಪ್ಪದೇ Primaquine  ಮಾತ್ರೆಗಳನ್ನು ತೆಗೆದುಕೊಳ್ಳುವುದು  ಅಗತ್ಯ. ಈ 14 ದಿನದ Primaquine  ಮಾತ್ರೆಗಳು ರೋಗ ಮರುಕಳಿಸುವುದನ್ನು ತಡೆಯುತ್ತದೆ.

ಪಿ. ಫಾಲ್ಸಿಪಾರಮ್‌- ಸ್ವಲ್ಪ ತೀವ್ರ ತರನಾದದ್ದು. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಇದ್ದಲ್ಲಿ (  Cerebral malaria, Renal failure, circulatory collapse)  ತೀವ್ರ ಸ್ವರೂಪ ಪಡೆಯಬಹುದು ಹಾಗೂ  ಜೀವ ಹಾನಿ ಸಹ ಉಂಟಾಗ ಬಹುದು. ಇದಕ್ಕೆ 3 ದಿನಗಳ ಅಇಖ CT Combination  ಮಾತ್ರೆಗಳು, ಒಂದು ಡೋಸ್‌  Primaquine ಸಾಮಾನ್ಯವಾಗಿ ನೀಡಲಾಗುತ್ತದೆ. ಈ ಎಲ್ಲ ಮಲೇರಿಯಾ ಮಾತ್ರೆಗಳನ್ನು ಜ್ವರದ ಮಾತ್ರೆಗಳಿಂದ ಜ್ವರ ಕಡಿಮೆಯಾದ ಅನಂತರ, ವಾಂತಿ ಇದ್ದರೆ ವಾಂತಿ ಮಾತ್ರೆಗಳಿಂದ , ವಾಂತಿ ಕಡಿಮೆಯಾದ ಅನಂತರ ಹೊಟ್ಟೆ ಉರಿ ತಡೆಯುವ (Antacid) ದೊಂದಿಗೆ ನೀಡುವುದು ಸಹ ಮುಖ್ಯವಾಗುತ್ತದೆ. ಮಲೇರಿಯಾ ಮಾತ್ರೆಗಳನ್ನು ತೆಗೆದುಕೊಂಡ ಕೂಡಲೆ ವಾಂತಿಯಾದರೆ ಚಿಕಿತ್ಸೆ ಪ್ರಯೋಜನಕಾರಿಯಾಗುವುದಿಲ್ಲ. ಅಲ್ಲದೆ ಮಲೇರಿಯಾ ರೋಗ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳಿಗೆ ರೋಗಾಣುಗಳು ಪ್ರತಿರೋಧಕತೆ (resistance) ಬೆಳೆಸಿಕೊಂಡಿವೆಯೋ ಎನ್ನುವುದನ್ನು ಸಹ ನಿರಂತರವಾಗಿ ಆರೋಗ್ಯ ಇಲಾಖೆ, ಸಂಶೋಧನಾ ಸಂಸ್ಥೆಗಳು ಪರಿಶೀಲಿಸುತ್ತಿರುವುದು, ಅದರಂತೆಯೇ ವೈದ್ಯರಿಗೆ ಚಿಕಿತ್ಸಾ ಮಾರ್ಗದರ್ಶನ ಕಾಲ ಕಾಲಕ್ಕೆ ನೀಡಬೇಕಿರುತ್ತದೆ. 

ಮಲೇರಿಯಾ ರೋಗಿಯನ್ನು ಶೀಘ್ರವಾಗಿ ಪತ್ತೆ ಹಚ್ಚಿ ಅವರಿಗೆ ಸೂಕ್ತ ಸಂಪೂರ್ಣ ಚಿಕಿತ್ಸೆ ನೀಡುವುದು, ಆ ಮೂಲಕ  ಸೊಳ್ಳೆಗಳು ರೋಗ ವಾಹಕವಾಗದಂತೆ ತಡೆಯುವುದು, ಅಲ್ಲದೆ ಪರಿಸರದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯುವುದು ಹಾಗೂ ಮನುಷ್ಯ ಸೊಳ್ಳೆಗಳಿಂದ ರಕ್ಷಣೆ ಪಡೆಯುವ ವಿಧಾನಗಳನ್ನು ಅನುಸರಿಸುವುದು ರೋಗ ನಿಯಂತ್ರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ.
ಪರಿಸರದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಅನಗತ್ಯ ನೀರು ನಿಲ್ಲುವುದನ್ನು ತಡೆಯಲು ಅಥವಾ ಕನಿಷ್ಠ ವಾರಕ್ಕೆ 1 ದಿನ ಪರಿಸರದಲ್ಲಿರುವ ನೀರೆಲ್ಲ ಬರಿದು ಮಾಡಿ ಒಣದಿನ (Dry Day  ) ಮಾಡಿದರೆ ಆ ನೀರಿನಲ್ಲಿ ಬೆಳೆಯುತ್ತಿರುವ ಸೊಳ್ಳೆಗಳ ಮರಿಗಳನ್ನು ನಾಶ ಮಾಡಬಹುದು. ಆದರೆ ಕೃಷಿಗಾಗಿ ಮಳೆಯನ್ನು ನಂಬಿದ ಪ್ರದೇಶಗಳಲ್ಲಿ ವಾರಕ್ಕೊಂದು ದಿನವೂ ಕ್ರಷಿ ಭೂಮಿಯಲ್ಲಿ ನೀರು ನಿಲ್ಲದೆ ಇರುವಂತೆ ಮಾಡಿದರೆ ಮುಂದೆ ಬೆಳೆಹಾನಿಯಾಗಬಹುದು. ಭೂಮಿಯ ಅಂತರ್ಜಲ ಕುಸಿಯುತ್ತಿರುವ ಈ ಕಾಲದಲ್ಲಿ ಪ್ರತೀ ಊರಿನಲ್ಲಿ , ಕೃಷಿಕರ ಜಾಗಗಳಲ್ಲಿ  ಕೃಷಿ ಹೊಂಡ (Infliltration pond) ನಿರ್ಮಿಸುವ ಅಂದೋಲನ ಕೃಷಿ – ಭೂಗರ್ಭ ಇಲಾಖೆ ಹಮ್ಮಿಕೊಂಡಿದೆ. ಯಾವುದೇ ಹೊಂಡಗಳಲ್ಲಿ 15-20 ದಿನಗಳಿಗಿಂತ ಹೆಚ್ಚು ದಿನ ನೀರು ನಿಂತಾಗ ಸೊಳ್ಳೆ ಉತ್ಪಾದನೆಯಾಗುವ ಸಂಭವವಿದೆ. 

ಆ ತರಹದ ನಿಂತ ನೀರಿನಲ್ಲಿ ಸೊಳ್ಳೆ ಮರಿಗಳನ್ನು ತಿಂದು ಬದುಕುವ ಪ್ರಾಣಿಗಳಾದ ಮೀನುಗಳು, ಕಪ್ಪೆ ಮರಿಗಳು, ಕೀಟಗಳು, ಆಮೆಗಳು, ಹಕ್ಕಿಗಳು ಇರುವಂತೆ ನೋಡಿಕೊಂಡು ಪ್ರಾಕೃತಿಕ ಸಮತೋಲನ ಕಾಯ್ದುಕೊಂಡು (Eco system) ಸೊಳ್ಳೆಗಳನ್ನು ನಿಯಂತ್ರಿಸುವುದು ಪರಿಸರಕ್ಕೆ ಸಹ ಆರೋಗ್ಯಕರ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.