ಸ್ಮಾರ್ಟ್‌ಫೋನ್‌ ನಮ್ಮ ಮಕ್ಕಳನ್ನು ಸ್ಮಾರ್ಟ್‌ ಆಗಿಸುತ್ತಿವೆಯೇ?


Team Udayavani, Nov 25, 2018, 6:00 AM IST

kid-smartphone.jpg

ಮೊಬೈಲ್‌ ಫೋನು, ಲ್ಯಾಪ್‌ಟಾಪ್‌, ಐಪ್ಯಾಡ್‌ ಇತ್ಯಾದಿ ಡಿಜಿಟಲ್‌ ಡಿವೈಸ್‌ಗಳು ಇವತ್ತು ನಮ್ಮ ದೈನಿಕ ಬದುಕಿನ ಅವಿಭಾಜ್ಯ ಅಂಗವಾಗಿವೆ. ಮಕ್ಕಳು ಆಟವಾಡಲು ಅಥವಾ ಓಡಲು ಕಲಿಯುವುದಕ್ಕೆ ಮುನ್ನವೇ ಇಂಟರ್‌ನೆಟ್‌ ಉಪಯೋಗಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅವರು ಇವತ್ತು ಆಡುವ ಆಟ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಇಂಟರ್‌ನೆಟ್‌ಗೆ ಸೀಮಿತವಾಗಿದೆ. 

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳು ಆಟಿಕೆಗಳ ಸ್ಥಾನವನ್ನು ಆಕ್ರಮಿಸಿದ್ದು, ಮನೋರಂಜನೆಗಾಗಿ ಬಳಕೆಯಾಗುತ್ತಿವೆ. ಮಕ್ಕಳಿಗೆ ಈಗ ಹೊರಗೆ ಹೋಗಿ ಆಟವಾಡುವುದರಲ್ಲಿ ಆಸಕ್ತಿ ಉಳಿದಿಲ್ಲ; ಈ ಸ್ಮಾರ್ಟ್‌ ಡಿಜಿಟಲ್‌ ಡಿವೈಸ್‌ಗಳಿಗೆ ಅಂಟಿಕೊಂಡು ತಾಸುಗಟ್ಟಲೆ ಬೇಕಾದರೆ ಕಳೆಯುತ್ತಾರೆ. 

ತಮ್ಮ ಕೆಲಸಕಾರ್ಯ, ಕರ್ತವ್ಯಗಳನ್ನು ಮಕ್ಕಳ ರಗಳೆ ಇಲ್ಲದೆ ನಿಭಾಯಿಸುವುದಕ್ಕಾಗಿ ಬಾಲ್ಯದಲ್ಲಿಯೇ ಅವರ ಕೈಗೆ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳನ್ನು ನೀಡುವುದು ಹೆತ್ತವರು ಮಾಡುವ ಗಂಭೀರ ಪ್ರಮಾದಗಳಲ್ಲಿ ಒಂದು. ತಮ್ಮ ಆರೆಂಟು ತಿಂಗಳ ಶಿಶು ಸ್ಮಾರ್ಟ್‌ಫೋನ್‌ ಉಪಯೋಗಿಸುವುದಕ್ಕೆ ತಿಳಿದುಕೊಂಡಿದೆ ಎಂಬುದಾಗಿ ಅವರು ಹೆಮ್ಮೆ ಪಡುತ್ತಾರೆ. ಎಳೆಯ ಮಕ್ಕಳ ಪ್ರಗತಿ, ಬೆಳವಣಿಗೆಯ ಮೇಲೆ ಇದರಿಂದ ಎಂತಹ ದುಷ್ಪರಿಣಾಮ ಉಂಟಾಗುತ್ತದೆ   ಎಂಬುದನ್ನು ಅವರು ತಿಳಿದುಕೊಂಡಿಲ್ಲ. ಒಂದು ಸ್ಪರ್ಶದ ಮೂಲಕ ಅಗಾಧ ಮಾಹಿತಿಯನ್ನು ತೆಗೆದುಕೊಡಬಲ್ಲ ಈ ಸ್ಮಾರ್ಟ್‌ ಡಿವೈಸ್‌ಗಳಿಂದ ಅಪಾರ ಪ್ರಯೋಜನ ಇದ್ದೇ ಇದೆ. ಶೈಕ್ಷಣಿಕ ಉದ್ದೇಶದ ಅಹಿಂಸಾತ್ಮಕ ವಿಷಯಗಳುಳ್ಳ ಕಾಟೂìನ್‌ಗಳು ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪ್ರಭಾವ ಬೀರುವುದಿಲ್ಲ ಎಂಬುದಾಗಿ ಅಧ್ಯಯನಗಳು ಹೇಳಿವೆ. ಆದರೆ ಯಾವುದೇ ಅಡೆತಡೆ, ನಿರ್ಬಂಧ ಇಲ್ಲದೆ ಸ್ಮಾರ್ಟ್‌ ಡಿವೈಸ್‌ಗಳು ಮಕ್ಕಳ ಕೈಗೆಟಕುವುದು ಅವರನ್ನು ನಿಜಕ್ಕೂ “ಸ್ಮಾರ್ಟ್‌’ ಆಗಿಸುತ್ತಿವೆಯೇ ಎಂಬುದು ಮೂಲ ಪ್ರಶ್ನೆ. 

ಮಗುವಿನ 0ಯಿಂದ 7ರ ತನಕದ ವಯೋಮಾನ ಅತ್ಯಂತ ನಿರ್ಣಾಯಕವಾದದ್ದು ಎಂಬುದಾಗಿ ಹೇಳಲಾಗುತ್ತದೆ. ಯಾಕೆಂದರೆ, ಮಗು ತನ್ನ ಬಹುತೇಕ ಭಾಷಿಕ, ಸಾಮಾಜಿಕ, ಗ್ರಹಣಾತ್ಮಕ, ಸಂವೇದನಾತ್ಮಕ, ದೈಹಿಕ ಮತ್ತು ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದು ಇದೇ ಅವಧಿಯಲ್ಲಿ. ಈ ಬೆಳವಣಿಗೆಗಳು ಪರಿಸರದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ನಡೆಯುತ್ತಾ ಹೋಗುತ್ತವೆ. ಮಕ್ಕಳು ಸ್ಮಾರ್ಟ್‌ ಡಿವೈಸ್‌ಗಳ ಪರದೆಗೆ ಅಂಟಿಕೊಂಡು ಹೆಚ್ಚು ಕಾಲ ಕಳೆಯುವುದು ಭವಿಷ್ಯದಲ್ಲಿ ಅವರಲ್ಲಿ ಏಕಾಗ್ರತೆಯ ಕೊರತೆ, ವರ್ತನಾತ್ಮಕ ಸಮಸ್ಯೆ, ಸಾಮಾಜಿಕ ಸಂವಹನ ಕೌಶಲದ ಕೊರತೆ, ಭಾಷೆ ಬೆಳವಣಿಗೆ ವಿಳಂಬವಾಗುವುದು ಹಾಗೂ ಆಟಿಸಂನಂತಹ ಲಕ್ಷಣಗಳು ಉಂಟಾಗಲು ಕಾರಣವಾಗಬಲ್ಲುದು ಎಂಬುದಾಗಿ ಅಧ್ಯಯನಗಳು ತೋರಿಸಿಕೊಟ್ಟಿವೆ. ಮಗು ಸ್ಮಾರ್ಟ್‌ ಡಿವೈಸ್‌ಗಳ ಪರದೆಯಲ್ಲಿ ಕಣ್ಣು ಕೀಲಿಸಿರುವ ಸಂದರ್ಭಗಳಲ್ಲಿ ಹೆತ್ತವರ ಜತೆಗಿನ ಸಂವಹನ ಸಂಪೂರ್ಣ ಶೂನ್ಯವಾಗಿರುವುದು ಮೇಲ್ಕಂಡ ಸನ್ನಿವೇಶಗಳು ತಲೆದೋರಲು ಕಾರಣವಾಗುತ್ತದೆ. ಸ್ಮಾರ್ಟ್‌ ಡಿವೈಸ್‌ಗಳಿಗೆ ಅಂಟಿದ್ದಾಗ ಮಕ್ಕಳು ಯಾವುದೇ ಸಕ್ರಿಯ ಸಂಭಾಷಣೆಗೆ ತೆರೆದುಕೊಳ್ಳುವುದಿಲ್ಲ; ಬದಲಾಗಿ ತಮ್ಮ ಇಷ್ಟದ ಕಾಟೂìನ್‌ ಪಾತ್ರಗಳು ಆಡುವ, ಯಾವತ್ತೋ ಬರೆಯಲಾದ ಸಂಭಾಷಣೆಗಳನ್ನು ಕೇಳುತ್ತಾರೆ.

ತಮ್ಮ ಮಕ್ಕಳು ಅವರ ಸಮಕಾಲೀನರು, ಗೆಳೆಯ ಗೆಳತಿಯರಿಗೆ ಹೋಲಿಸಿದಾಗ ಮಾತನಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದರಲ್ಲಿ ಹಿಂದೆ ಇದ್ದಾರೆ ಎಂಬುದು ಎಷ್ಟೋ ಬಾರಿ ಹೆತ್ತವರ ಗಮನಕ್ಕೆ ಬರುವುದೇ ಇಲ್ಲ. ಮಾತನಾಡಲು ಆರಂಭಿಸುವಾಗ ಸ್ವಲ್ಪ ವಿಳಂಬವಾಗುವುದು ಸಹಜ, ಮಗು ದೊಡ್ಡದಾದಾಗ ಸರಿಹೋಗುತ್ತದೆ ಎಂಬುದಾಗಿ ಹೆತ್ತವರು ತಪ್ಪಾಗಿ ನಂಬಿಬಿಡುತ್ತಾರೆ. ಸ್ಮಾರ್ಟ್‌ ಡಿವೈಸ್‌ಗಳು, ಗ್ಯಾಜೆಟ್‌ಗಳನ್ನು ಸಣ್ಣ ವಯಸ್ಸಿನಲ್ಲೇ ಉಪಯೋಗಿಸಲು ತೊಡಗುವುದರಿಂದ ಭವಿಷ್ಯದಲ್ಲಿ ಅವರ ಮೇಲೆ ಎಂತಹ ದುಷ್ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ಹೆತ್ತವರಿಗೆ ಅರಿವು ಇಲ್ಲದೆ ಇರುವುದೇ ಇದಕ್ಕೆ ಪ್ರಧಾನವಾದ ಕಾರಣ. ಸ್ಮಾರ್ಟ್‌ ಡಿಜಿಟಲ್‌ ಡಿವೈಸ್‌ಗಳು ಕೆಟ್ಟವಲ್ಲ; ಆದರೆ ಅವುಗಳನ್ನು ಚಿಕ್ಕ ಮಕ್ಕಳು ಎಷ್ಟು ಕಾಲ, ಎಷ್ಟು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ ಎಂಬುದರ ಮೇಲೆ ಒಳಿತು-ಕೆಡುಕು ನಿಂತಿದೆ. 

ನಿಮ್ಮ ಮಗು ಈ ಕೆಳಗಿನ ಯಾವುದಾದರೂ ವರ್ತನೆ, ಲಕ್ಷಣಗಳನ್ನು ಹೊಂದಿದ್ದರೆ, ದಯವಿಟ್ಟು ಆದಷ್ಟು ಬೇಗನೆ ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿ ತಜ್ಞರನ್ನು ಸಂಪರ್ಕಿಸಿ.
1. ವಯಸ್ಸಿಗೆ ಸರಿಯಾಗಿ ಮಾತನಾಡದಿರುವುದು.
2.ಕೆಲವೇ ಕೆಲವು ಸದ್ದುಗಳನ್ನು  ಮಾಡುವುದು ಅಥವಾ ಹಾವಭಾವಗಳನ್ನು ಪ್ರದರ್ಶಿಸುವುದು.
3.ಸಾಮಾಜಿಕ ಚಟುವಟಿಕೆ ಕಡಿಮೆಯಾಗಿರುವುದು; ಉದಾಹರಣೆಗೆ, ಆಟವಾಡಲು ಕಷ್ಟವಾಗುವುದು, ಇತರರ ಜತೆಗೆ ಒಡಗೂಡುವುದರಲ್ಲಿ ತೊಂದರೆ.
4.ಯಾವುದೇ ವಸ್ತು/ ಚಟುವಟಿಕೆ/ ಶಿಕ್ಷಣದತ್ತ ಏಕಾಗ್ರತೆ ಸಾಧಿಸಲು ಕಷ್ಟಪಡುವುದು.
5.ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
6.ಹೆಸರು ಹೇಳಿ ಕರೆದರೆ ಅಥವಾ ಪರಿಸರದ ಇನ್ನಿತರ ಯಾವುದೇ ಸದ್ದುಗಳಿಗೆ ಮಗು ಪ್ರತಿಕ್ರಿಯಿಸದಿರುವಂತೆ ತೋರುವುದು.
7.ಓದುವ ಮತ್ತು ಬರೆಯುವ ಸಾಮರ್ಥ್ಯಗಳಲ್ಲಿ ತೊಡಕು.

– ಮೇಘಾ ಮೋಹನ್‌, 
ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ,
ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಂಗಳೂರು.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.