ಅಡುಗೆ ಮಾಡುವ ಸಂದರ್ಭದಲ್ಲಿ ಪೌಷ್ಟಿಕಾಂಶ ನಷ್ಟ ತಡೆಯುವುದು ಹೇಗೆ?


Team Udayavani, Mar 10, 2019, 12:30 AM IST

cooking.jpg

ಮುಂದುವರಿದುದು– 5. ಕೊಬ್ಬನ್ನು ಅಡುಗೆ ಮಾಧ್ಯಮವಾಗಿ ಉಪಯೋಗಿಸುವುದು
ಬೇಯಿಸಲು, ಹುರಿಯಲು, ಕಾಯಿಸಲು ಕೊಬ್ಬನ್ನು ಮಾಧ್ಯಮವಾಗಿ ಉಪಯೋಗಿಸುವುದು ಒಂದು ಆರೋಗ್ಯಕರ ಆಹಾರ ತಯಾರಿ ವಿಧಾನವಾಗಿದೆ. ನೀರಿಲ್ಲದೆ ಕಿರು ಅವಧಿಯಲ್ಲಿ ಅಡುಗೆ ತಯಾರಿಸುವುದರಿಂದ ಬಿ ಮತ್ತು ಸಿ ವಿಟಮಿನ್‌ಗಳು ನಷ್ಟವಾಗುವುದು ತಪ್ಪುತ್ತದೆ. ಕೊಬ್ಬನ್ನು ಸೇರಿಸುವುದರಿಂದ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್‌ಗಳು ಮತ್ತು ಆ್ಯಂಟಿಓಕ್ಸಿಡೆಂಟ್‌ಗಳ ಹೀರುವಿಕೆ ಸುಲಭವಾಗುತ್ತದೆ.

ಹೇಗೆ: ಅಡುಗೆಯಲ್ಲಿ ಉಪಯೋಗಿಸುವ ಕೊಬ್ಬು/ಎಣ್ಣೆಯ ಆಯ್ಕೆಯಲ್ಲಿ ಎಚ್ಚರವಿರಲಿ. ತಮ್ಮ ಧೂಮಬಿಂದುವಿಗಿಂತ ಅಧಿಕ ಉಷ್ಣತೆಗೆ ಬಿಸಿಯಾದ ಎಣ್ಣೆಗಳು ರ್ಯಾನ್ಸಿಡ್‌ ಆಗಿ ಪರಿವರ್ತನೆಗೊಂಡು ಅಪಾಯಕಾರಿಯಾಗುತ್ತವೆ. ಒಮ್ಮೆ ಉಪಯೋಗಿಸಿದ ಎಣ್ಣೆಯನ್ನು ಪದೇ ಪದೇ ಮರಳಿ ಬಳಸಬೇಡಿ. ಕಡಿಮೆ ಧೂಮಬಿಂದು ಹೊಂದಿರುವ ಬೆಣ್ಣೆ, ಆಲಿವ್‌ ಎಣ್ಣೆಯಂತಹವು ಕಡಿಮೆ ಉಷ್ಣತೆಯಲ್ಲಿ ಅಡುಗೆ ಮಾಡುವ ವಿಧಾನಗಳಿಗೆ ಹೇಳಿ ಮಾಡಿಸಿದಂಥವಾಗಿವೆ.

ಸರಿ ಅಥವಾ ತಪ್ಪು?
ಒಂದೆರಡು ತರಕಾರಿಗಳ ಎರಡು ಅಡುಗೆ ವಿಧಾನಗಳನ್ನು ಹೋಲಿಸಿ ನೋಡೋಣ.

1. ಕಾಲಿಫ್ಲವರ್‌ ಅಡುಗೆ
ಯಾವುದು ತಪ್ಪು?:
ನೀವು ಆರಿಸಿಕೊಂಡ ಕಾಲಿಫ್ಲವರ್‌ನಲ್ಲಿ ಒಂದೆರಡು ಹುಳಗಳಾಡುತ್ತಿದ್ದರೆ ಏನು ಮಾಡುತ್ತೀರಿ? ಇಡೀ ಕಾಲಿಫ್ಲವರನ್ನು ಕುದಿಯುವ ನೀರಿಗೆ ಹಾಕುವುದೇ? ಅಲ್ಲ; ಹಾಗೆ ಮಾಡುವುದರಿಂದ ಕಾಲಿಫ್ಲವರ್‌ನಲ್ಲಿ ಇರುವ ವಿಟಮಿನ್‌ ಸಿ ಮತ್ತು ಆ್ಯಂಟಿ ಓಕ್ಸಿಡೆಂಟ್‌ಗಳು ಕೂಡ ಹುಳಗಳ ಜತೆಗೆ ನಾಶವಾಗುತ್ತವೆ. ಕಾಲಿಫ್ಲವರನ್ನು ಮೈಕ್ರೊವೇವ್‌ ಮಾಡುವುದರಿಂದಲೂ ಪೌಷ್ಟಿಕಾಂಶ ನಷ್ಟವಾಗುತ್ತದೆ.
ಯಾವುದು ಸರಿ?: ಬದಲಾಗಿ ಹಬೆಯಲ್ಲಿ ಬೇಯಿಸಿ. ಉಗಿಯಲ್ಲಿ ಬೇಯಿಸುವುದರಿಂದ ಕಾಲಿಫ್ಲವರ್‌ನಲ್ಲಿರುವ ವಿಟಮಿನ್‌ ಸಿ ಉಳಿಯುತ್ತದೆ ಮತ್ತು ಅದು ತಾಜಾ ಆಗಿರುತ್ತದೆ. ಹುಳಗಳನ್ನು ನಿವಾರಿಸಲು ಸಾದಾ ನಳ್ಳಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ ಅಥವಾ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ತೊಳೆಯಿರಿ.

2. ಟೊಮ್ಯಾಟೊ ಅಡುಗೆ
ಯಾವುದು ತಪ್ಪು:
ಹೃದ್ರೋಗವನ್ನು ತಡೆಯುವ ಲೈಕೊಪೇನ್‌ ಟೊಮ್ಯಾಟೊಗಳಲ್ಲಿರುತ್ತದೆ. ಟೊಮ್ಯಾಟೊವನ್ನು ಹಸಿಯಾಗಿ ತಿನ್ನುವುದು ಅಥವಾ ಉಗಿಯಲ್ಲಿ ಬೇಯಿಸಿ ಸೇವಿಸುವುದು ಒಳ್ಳೆಯ ವಿಧಾನ ಎಂದು ನೀವು ಭಾವಿಸಿದ್ದರೆ ಅದು ತಪ್ಪು. 
ಯಾವುದು ಸರಿ?: ಟೊಮ್ಯಾಟೊಗಳಲ್ಲಿ ಇರುವ ಲೈಕೊಪೇನ್‌ನ ಗರಿಷ್ಠ ಉಪಯೋಗವನ್ನು ಪಡೆಯಲು ಅವುಗಳನ್ನು ಕತ್ತರಿಸಿ ಬಳಿಕ ಪದಾರ್ಥ ಅಥವಾ ಸಾರಿಗೆ ಸೇರಿಸಿ. ಆಗ ಅದರ ಹುಳಿ ರುಚಿ ಬಾಯಿ ನೀರೂರಿಸುತ್ತದೆಯಲ್ಲದೆ ಪೌಷ್ಟಿಕಾಂಶಗಳ ಉತ್ತಮ ನಿರ್ವಹಣೆಯೂ ಆಗುತ್ತದೆ.

ಹೀಗೆ, ಅಡುಗೆ ಮಾಡುವಾಗ ಸ್ವಲ್ಪ ಹೆಚ್ಚುವರಿ ಕಾಳಜಿ ವಹಿಸಿದರೆ ಅಮೂಲ್ಯ ಪೌಷ್ಟಿಕಾಂಶಗಳು ನಷ್ಟವಾಗದಂತೆ ಸಂರಕ್ಷಿಸಿ ಅವು ನಮ್ಮ ದೇಹ ಸೇರುವಂತೆ ಮಾಡುವುದು ಸಾಧ್ಯ. ರುಚಿ ಮತ್ತು ಸ್ವಾದಕ್ಕಾಗಿ ಮಾತ್ರವೇ ಅಲ್ಲದೆ ಆಹಾರ ವಸ್ತುಗಳ ಪೌಷ್ಟಿಕಾಂಶವೂ ನಮ್ಮ ದೇಹ ಸೇರುವುದು ಮುಖ್ಯ. ಯಾವುದೇ ಅಡುಗೆ ವಿಧಾನ ನೂರಕ್ಕೆ ನೂರು ಪೌಷ್ಟಿಕಾಂಶಗಳನ್ನು ಸಂರಕ್ಷಿಸದು. ಈ ಸಲಹೆಗಳನ್ನು ಅನುಸರಿಸಿ ಗರಿಷ್ಠ ಪೌಷ್ಟಿಕಾಂಶ ಸಿಗುವಂತೆ ಮಾಡಿ. ಯಾವುದೇ ಒಂದು ಅಡುಗೆ ವಿಧಾನಕ್ಕೆ ಸೀಮಿತವಾಗದಿರಿ.

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.