ಬಿಸಿಲು ಮರೆಸಲು ತಂಪು ಪಾನೀಯ
Team Udayavani, Aug 8, 2017, 9:02 AM IST
ಲಿಂಬೆ, ಮಾವು, ಬಾಳೆಹಣ್ಣು , ಸೇಬು, ಬೆಲ್ಲ ಸೇವಿಸುವುದರಿಂದ ಬೇಸಿಗೆಯಲ್ಲಿ ದೈಹಿಕ, ಮಾನಸಿಕ ಶಕ್ತಿ ಸಿಗುವುದು. ವಿಟಾಮಿನ್ “ಎ’, “ಸಿ’, “ಡಿ’ ಕೊರತೆ ನೀಗುವುದು.
ಕಾಮಕಸ್ತೂರಿ ಬೀಜ (ತಂಪಿನ ಬೀಜ)ದ ಪಾನಕ
ಬೇಕಾಗುವ ಸಾಮಗ್ರಿ:
ಕಾಮಕಸ್ತೂರಿ ಬೀಜ- 4 ಚಮಚ, ಪುದೀನಾ ಎಲೆ/ತುಳಸಿ ಎಲೆ- 5-6, ನಿಂಬೆರಸ-2 ಚಮಚ, ಬೆಲ್ಲ ಅಥವಾ ಸಕ್ಕರೆ ಸ್ವಲ್ಪ , ನೀರು- 4 ಕಪ್.
ತಯಾರಿಸುವ ವಿಧಾನ:
ಕಾಮಕಸ್ತೂರಿ ಬೀಜವನ್ನು ನೀರಿಗೆ ಹಾಕಿ ಬೆಲ್ಲ/ಸಕ್ಕರೆ ಹಾಕಿ ಕದಡಿ. ಲಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಪುದೀನಾ ಎಲೆ ಅಥವಾ ತುಳಸಿ ಎಲೆ ಹಾಕಿ ಕುಡಿಯಿರಿ. ಆಗಾಗ ಸ್ವಲ್ಪ ಸ್ವಲ್ಪ ಕುಡಿದರೆ ಹೊಟ್ಟೆ ತಂಪಾಗುವುದು.
ಒಣ ಶುಂಠಿ, ಮಜ್ಜಿಗೆ ಸೊಪ್ಪಿನ ಪಾನಕ
ಬೇಕಾಗುವ ಸಾಮಗ್ರಿ:
ಕಾಳುಮೆಣಸು 7-8, ಶುಂಠಿ-1 ಇಂಚು, ಮಜ್ಜಿಗೆಸೊಪ್ಪು 4-5, ಬೆಲ್ಲ- 50 ಗ್ರಾಂ, ಲಿಂಬೆ-1/2 ಹೋಳು, ನೀರು 5-6 ಕಪ್.
ತಯಾರಿಸುವ ವಿಧಾನ:
ನೀರಿಗೆ ಬೆಲ್ಲ ಹಾಕಿ ಕುದಿಸಿರಿ. ಒಣ ಶುಂಠಿ, ಕಾಳುಮೆಣಸು ಚೆನ್ನಾಗಿ ಹುಡಿಮಾಡಿ ಕುದಿಸಿದ ನೀರಿಗೆ ಹಾಕಿ ಮಜ್ಜಿಗೆಸೊಪ್ಪು ಹಾಕಿ ಕುದಿಸಿ ತಣಿಸಿ, ಲಿಂಬೆರಸ ಹಾಕಿ ಮುಚ್ಚಿಡಿ. ಈ ಪಾನಕವನ್ನು ಬಿಸಿಯಾಗಿಯೂ ಸೇವಿಸಬಹುದು. ತಣಿದ ಮೇಲೂ ಸೇವಿಸಿದರೆ ಆರೋಗ್ಯದಾಯಕವಾಗುತ್ತದೆ.
ಒಣಶುಂಠಿಯ ಬದಲು ಹಸಿ ಶುಂಠಿ ಉಪಯೋಗಿಸಬಹುದು.
ಎಸ್. ಜಯಶ್ರೀ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ