ವಿಶ್ವಕಪ್‌ ಹಾಕಿ ಸೆಮಿ:ಆಸೀಸ್‌ಗೆ ನೆದರ್ಲೆಂಡ್‌,ಬೆಲ್ಜಿಯಂಗೆ ಆಂಗ್ಲರು


Team Udayavani, Dec 15, 2018, 9:53 AM IST

9.jpg

ಭುವನೇಶ್ವರ: ಆತಿಥೇಯ ಭಾರತದ ಹೋರಾಟ ಕ್ವಾರ್ಟರ್‌ ಫೈನಲ್‌ನಲ್ಲೇ ಕೊನೆಗೊಂಡಿದ್ದರಿಂದ ಸಹಜವಾಗಿಯೇ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಜೋಶ್‌ ಒಮ್ಮೆಲೇ ಕಡಿಮೆಯಾಗಿದೆ. ಇಂಥ ಸನ್ನಿವೇಶದಲ್ಲೇ ಕಣದಲ್ಲಿ ಉಳಿದಿರುವ 4 ತಂಡಗಳು ಶನಿವಾರ ಸೆಮಿಫೈನಲ್‌ ಸೆಣಸಾಟಕ್ಕೆ ಅಣಿಯಾಗುತ್ತಿವೆ.

ಹ್ಯಾಟ್ರಿಕ್‌ ಪ್ರಶಸ್ತಿಯ ಹಾದಿಯಲ್ಲಿರುವ ವಿಶ್ವದ ನಂ.1 ತಂಡವಾಗಿರುವ ಆಸ್ಟ್ರೇಲಿಯಕ್ಕೆ ನೆದರ್ಲೆಂಡ್‌ ಸವಾಲು ಎದುರಾಗಲಿದೆ. ಇನ್ನೊಂದು ಉಪಾಂತ್ಯದಲ್ಲಿ ಬೆಲ್ಜಿಯಂ-ಇಂಗ್ಲೆಂಡ್‌ ಮುಖಾಮುಖೀಯಾಗಲಿವೆ. 

3 ಬಾರಿಯ ಚಾಂಪಿಯನ್‌ ನೆದರ್ಲೆಂಡ್‌ ಗುರುವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಆತಿಥೇಯ ಭಾರತವನ್ನು ಉರುಳಿಸಿದ ಹುಮ್ಮಸ್ಸಿನಲ್ಲಿದೆ. 20 ವರ್ಷಗಳ ಬಳಿಕ ಪ್ರಶಸ್ತಿಗೆ ಮುತ್ತಿಕ್ಕಲು ಹವಣಿಸುತ್ತಿದೆ. 

2013ರ ಬಳಿಕ ಆಸ್ಟ್ರೇಲಿಯ-ನೆದರ್ಲೆಂಡ್‌ 11 ಸಲ ಪರಸ್ಪರ ಎದುರಾಗಿದ್ದು, ಕಾಂಗರೂ ಪಡೆ ಐದರಲ್ಲಿ ಗೆದ್ದಿದೆ. ಡಚ್ಚರು 4 ಸಲ ಜಯಿಸಿದ್ದಾರೆ. 2 ಪಂದ್ಯಗಳು ಡ್ರಾಗೊಂಡಿವೆ. ಕೂಟದಲ್ಲಿ ನಿಧಾನ ಗತಿಯ ಆರಂಭ ಪಡೆದ ಆಸ್ಟ್ರೇಲಿಯ, ಬಳಿಕ ತುಂಬು ವಿಶ್ವಾಸದಲ್ಲಿ ಹೋರಾಡುತ್ತಲೇ ಬಂದಿದೆ. ಐರ್ಲೆಂಡ್‌ ವಿರುದ್ಧ 2-1 ಗೆಲುವು ಒಲಿಸಿಕೊಂಡ ಅನಂತರ ಇಂಗ್ಲೆಂಡ್‌ (3-0) ಮತ್ತು ಚೀನ (11-0) ವಿರುದ್ಧ ಭರ್ಜರಿ ಮೇಲುಗೈ ಸಾಧಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ಗೆ 3-0 ಗೋಲುಗಳಿಂದ ಆಘಾತವಿಕ್ಕಿತು.

ಇನ್ನೊಂದೆಡೆ ನೆದರ್ಲೆಂಡ್‌ನ‌ದ್ದು ಅಬ್ಬರದ ಆರಂಭವಾಗಿತ್ತು. ಮಲೇಶ್ಯವನ್ನು 7-0 ಅಂತರದಿಂದ ಮಣಿಸಿದ ಬಳಿಕ ಜರ್ಮನಿಗೆ 1-4ರಿಂದ ಶರಣಾಯಿತು. ಬಳಿಕ ಪಾಕಿಸ್ಥಾನವನ್ನು 5-1 ಗೋಲುಗಳಿಂದ ಹಿಮ್ಮೆಟ್ಟಿಸಿ ಲಯ ಕಂಡುಕೊಂಡಿತು. ಇವೆಲ್ಲಕ್ಕಿಂತ ಮಿಗಿಲಾದದ್ದು ಭಾರತದ ವಿರುದ್ಧ ಮೊಳಗಿಸಿದ ಜಯಭೇರಿ.

ಡಚ್ಚರಿಗೆ ಸೇಡಿನ ಪಂದ್ಯ

ನೆದರ್ಲೆಂಡ್‌ ಪಾಲಿಗೆ ಇದು ಸೇಡಿನ ಪಂದ್ಯ. 4 ವರ್ಷಗಳ ಹಿಂದೆ ತವರಿನ ಹೇಗ್‌ನಲ್ಲಿ ನಡೆದ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ 1-6 ಅಂತರದಿಂದ ಶರಣಾಗಿ ಕಪ್‌ ಕಳೆದುಕೊಂಡ ನೋವು ಡಚ್ಚರನ್ನು ಈಗಲೂ ಕಾಡುತ್ತಿದೆ. ಅನಂತರದ 4 ವರ್ಷಗಳಲ್ಲಿ ನೆದರ್ಲೆಂಡ್‌ ಆಟದಲ್ಲಿ ಬಹಳಷ್ಟು ಪ್ರಗತಿಯಾಗಿದೆ. ಬಿಲ್ಲಿ ಬೆಕರ್‌, ರಾಬರ್ಟ್‌ ಕೆಂಪರ್‌ಮ್ಯಾನ್‌, ವೆಲಂಟೈನ್‌ ವೆರ್ಗ ಮೊದಲಾದ ಕ್ವಾಲಿಟಿ ಆಟಗಾರರನ್ನು ಹೊಂದಿದೆ. ಹೀಗಾಗಿ ಇದು ಆಸ್ಟ್ರೇಲಿಯ ಪಾಲಿಗೆ ಭಾರೀ ಸವಾಲಿನ ಪಂದ್ಯ ಎಂಬುದರಲ್ಲಿ ಅನುಮಾನವಿಲ್ಲ.

ಬೆಲ್ಜಿಯಂ-ಇಂಗ್ಲೆಂಡ್‌ ಮೇಲಾಟ
ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ತಂಡವಾದ ಬೆಲ್ಜಿಯಂ ಮೊದಲ ಸಲ ವಿಶ್ವಕಪ್‌ ಎತ್ತಿ ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ. ಇಂಗ್ಲೆಂಡ್‌ ಕೂಡ ಈವರೆಗೆ ವಿಶ್ವ ಚಾಂಪಿಯನ್‌ ಹೆಗ್ಗಳಿಕೆಯಿಂದ ದೂರವೇ ಉಳಿದಿದೆ. 1986ರ ತವರಿನ ಲಂಡನ್‌ ಕೂಟದಲ್ಲಿ ಫೈನಲ್‌ ಪ್ರವೇಶಿಸಿತಾದರೂ ಅಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿತ್ತು.

ಟಾಪ್ ನ್ಯೂಸ್

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.