ಫೋಟೋಗ್ರಫಿಗೆ ಹೇಳಿ ಮಾಡಿಸಿದ ಎರಡು ತಾಣಗಳು


Team Udayavani, Jan 14, 2017, 4:52 PM IST

39.jpg

ಒಂದು ದಿನವನ್ನು ಅಸಾಮಾನ್ಯವಾಗಿ ಕಳೆಯಬೇಕು ಅಂತ ಫ್ರೆಂಡ್ಸ್‌ ಮಾತಾಡಿ ಕೊಳ್ಳುವುದು ಇದ್ದಿದ್ದೇ. ಒಂದು ಚೆಂದದೂರಿಗೆ ಹೋಗಿ ಬರಬೇಕು ಅನ್ನೋದು ಎಲ್ಲರದೂ ಸಾಮಾನ್ಯ ಆಸೆ. ಹಾಗಾಗಿಯೇ ವಾರಾಂತ್ಯಕ್ಕೆ ನಾಲ್ಕೈದು ಜನ ಸೇರಿಕೊಂಡರೆ ಸಾಕು ಯಾವುದೋ ಒಂದು ಬೆಟ್ಟ, ಯಾವುದೋ ಒಂದು ನದಿ ದಂಡೆ, ಯಾವುದೋ ಒಂದು ಊರು ನೋಡಿ ಬಂದರೇನೇ ಸಮಾಧಾನ. ಬೈಕರ್‌ಗಳಿಗಂತೂ ವಾರಕ್ಕೊಂದು ಲಾಂಗ್‌ ರೈಡ್‌ ಹೋಗದಿದ್ದರೆ ನೆಮ್ಮದಿ ಇರಲ್ಲ. ಫೋಟೋಗ್ರಾಫ‌ರ್‌ಗಳಿಗೆ ಒಂದು ದಿನವಾದರೂ ಕ್ಯಾಮೆರಾ ಹಿಡ್ಕೊಂಡ್‌ ಒಂದೇ ಒಂದು ಚೆಂದದ ಫೋಟೋ ತೆಗೆದರಷ್ಟೇ ವಾರವಿಡೀ ಉತ್ಸಾಹದಲ್ಲಿರಲು ಸಾಧ್ಯ. ಇಂಥಾ ಅಡ್ವೆಂಚರ್‌ ಮನಸ್ಸಿರೋರಿಗೆ ಎರಡು ಆಯ್ಕೆಗಳು.

ಮೈದನಹಳ್ಳಿ
ತುಮಕೂರು ಜಿಲ್ಲೆಯಲ್ಲಿರುವ ಮೈದನಹಳ್ಳಿ ಇನ್ನೊಂದ್‌ ಹೆಸರಿದೆ ಜಯಮಂಗಲಿ ಬ್ಲಾಕ್‌ಬಕ್‌ ಸ್ಯಾಂಕುcರಿ. ಯಾರಿಗೆಲ್ಲಾ ಫೋಟೋಗ್ರಫಿ ಮೋಹ ಇದೆಯೋ ಅವರೆಲ್ಲಾ ಯಾವತ್ತಾದರೊಂದು ಇಲ್ಲಿಗೆ ಹೋಗಿ ಬರಬೇಕು. ಇಲ್ಲೊಂದು ವಿಶಾಲವಾದ ಹುಲ್ಲುಗಾವಲು. ಅಲ್ಲಿ ನೂರಾರು ಬಗೆಯ ಪಕ್ಷಿಗಳು. ಇದು ಕೃಷ್ಣ ಮೃಗ ಸಂರಕ್ಷಣಾ ವನ್ಯಧಾಮ. ಹಾಗಾಗಿ ಕೃಷ್ಣ ಮೃಗ ಅತ್ತಕಡೆಯಿಂದ ಬಂದು ಇತ್ತಕಡೆಗೆ ಓಡಿ ಹೋಗುತ್ತದೆ. ಅದೃಷ್ಟವಿದ್ದರೆ ಮತ್ತು ಕ್ಯಾಮೆರಾ ರೆಡಿ ಇದ್ದರೆ ಒಂದು ಫೋಟೋ. ಇಲ್ಲದಿದ್ದರೆ ಕಣ್ಣೇ ಸಾಕು, ಖುಷಿ ಪಡಲು. ಸಾಧ್ಯವಾದರೆ ಇಲ್ಲಿ ನಿಂತು ಸಂಜೆ ಸೂರ್ಯ ಮುಳುಗೋದನ್ನು ನೋಡಬೇಕು. ಆ ಸೂರ್ಯ ಮುಳುಗೋ ದೃಶ್ಯ ನೋಡಲೆಂದೇ ಬಹುತೇಕರು ಅಲ್ಲಿಗೆ ಹೋಗುವುದಿದ್ದೆ. ನಿಧಾನಕ್ಕೆ ಸೂರ್ಯ ನಿರ್ಗಮಿಸುವ ಆ ಚೆಂದ ಹಾಗೇ ಕಣ್ಣಲ್ಲಿ ಉಳಿದುಹೋಗುತ್ತದೆ. ಮಧುಗಿರಿಯಲ್ಲಿ ಯಾರಾದರೂ ಫ್ರೆಂಡ್ಸ್‌ ಇದ್ದರೆ ವಿಚಾರಿಸಿ ಹೋಗಿಬನ್ನಿ. ಅರಣ್ಯ ಇಲಾಖೆಯಲ್ಲಿ ಮಾತಾಡಿದರೆ ಇನ್ನೂ ಒಳ್ಳೆಯದು.

ಎಷ್ಟು ದೂರ: ಸುಮಾರು 150 ಕಿಮೀ
ದಾರಿ: ಬೆಂಗಳೂರು ತುಮ
ಕೂರು ರಸ್ತೆಯಲ್ಲಿ ಸಾಗಿ ದಾಬಸ್‌ಪೇಟೆ ಫ್ಲೈ ಓವರ್‌ ಹತ್ತಿರ ಬಲಕ್ಕೆ ತಿರುಗಿ ಮಧು ಗಿರಿ ತಲುಪಿ ಅಲ್ಲಿಂದ ಎಡಕ್ಕೆ
ಹೋಗಿರುವ ಕೊಡೀಗೇನ ಹಳ್ಳಿ ರಸ್ತೆಯಲ್ಲಿ ಸಾಗಬೇಕು. ಸಿದ್ದನಹಳ್ಳಿ ಹತ್ತಿರ ಮತ್ತೆ ಎಡಕ್ಕೆ ದಾರಿ.

 ಹೊರಗಿನ ಬೆಟ್ಟ


ಅಷ್ಟೇನೂ ಪ್ರಸಿದ್ಧವಲ್ಲದಿದ್ದರೂ ಟ್ರೆಕ್ಕಿಂಗ್‌ ಮಾಡೋರಿಗೆ ಮಾತ್ರ ಈ ಬೆಟ್ಟ ಅಚ್ಚುಮೆಚ್ಚು. ಕೆಲವರು ಹಗಲಲ್ಲಿ ಟ್ರೆಕ್ಕಿಂಗ್‌ ಮಾಡಿದರೆ ಇನ್ನು ಕೆಲವರು ನೈಟ್‌ ಟ್ರೆಕ್‌ ಹೋಗಿ ಖುಷಿ ಪಡುವುದಿದೆ. ಅಂದಹಾಗೆ ಈ ಬೆಟ್ಟಕ್ಕೂ ನಂದಿ 
ಬೆಟ್ಟಕ್ಕೂ ತುಂಬಾ ಹತ್ತಿರದ ಸಂಬಂಧ. ಹೊರಗಿನ 
ಬೆಟ್ಟದಿಂದ ನಂದಿಬೆಟ್ಟಕ್ಕೆ ಕೆಲವೇ ಕಿಮೀಗಳ ಅಂತರವಿದೆಯಷ್ಟೇ.
ಹಾಗಾಗಿ ಬೆಟ್ಟ ನೋಡಲು ಹೋಗುವವರಾದರೆ ಒಂದೇ ದಿನ ಎರಡು ಬೆಟ್ಟ ನೋಡಿ ಖುಷಿ ಪಡಬಹುದು. ಟ್ರೆಕ್ಕಿಂಗ್‌ ಮಾಡೋರಾದರೆ ಒಂದು ಬೆಟ್ಟವನ್ನು ಮಣಿಸಿದರೆ ಸಾಕು. ಬೆಟ್ಟ ಎಷ್ಟು ಚೆಂದ ಇದೆಯೆಂದರೆ ಫೋಟೋಗ್ರಫಿ ಮಾಡೋರಿಗಂತೂ ಹಬ್ಬ. ಇಲ್ಲಿಗೆ ಹೋದರೆ ನೂರಾರು ಬಗೆಯ ಹಕ್ಕಿಗಳು ಕಾಣಸಿಗುತ್ತವೆ. ಹಕ್ಕಿಗಳ 
ಫೋಟೋ ತೆಗೆಯೋರು ಕಾದರೆ ಸಾಕಷ್ಟು ಒಳ್ಳೆಯ 
ಫೋಟೋಗಳು ಸಿಗುವುದರಲ್ಲಿ ಅನುಮಾನವಿಲ್ಲ. ಟ್ರೆಕ್ಕಿಂಗ್‌ ಹೋಗುವವರು ಸಾಕಷ್ಟು ನೀರು ಹಿಡಿದುಕೊಂಡು ಹೋಗುವುದು ಒಳ್ಳೆಯದು.

ಎಷ್ಟು ದೂರ: ಸುಮಾರು 65 ಕಿಮೀ.
ದಾರಿ: ಬೆಂಗಳೂರು ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹೋಗಬೇಕು. ನಂದಿ ಬೆಟ್ಟ ಕ್ರಾಸ್‌ ಸಿಗುತ್ತದಲ್ಲ ಅಲ್ಲಿಂದ ನಂದಿಬೆಟ್ಟ ಕಡೆಗೆ ಸಾಗುವಾಗ ನಿಮಗೆ ಈ ಹೊರಗಿನ ಬೆಟ್ಟ ಸಿಗುತ್ತದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.